ಮೈಸೂರು: ಮೈಸೂರು ಬಿಬಿ ಗಾರ್ಡನ್ನಲ್ಲಿರುವ ಶ್ರೀಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳು ತ್ತಿದೆ. ಇದರ ಅಂಗವಾಗಿ ಶಾಲಾವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಯನ್ನು ಸ್ಥಾಪಿಸ ಲಾಗುತ್ತಿದ್ದು, ಡಿ.9ರಂದು ಪುತ್ಥಳಿಯ ಮೆರವಣಿಗೆ ಏರ್ಪಡಿಸಲಾಗಿದೆ. ಡಿ.9ರಂದು ಬೆಳಿಗ್ಗೆ 9ಗಂಟೆಗೆ ಜೆಎಸ್ಎಸ್ ವಿದ್ಯಾಪೀಠದ ಬಳಿಯಿರುವ ಶ್ರೀ ಬಸವೇಶ್ವರ ಪುತ್ಥಳಿ ಬಳಿಯಿಂದ ಮೆರವಣಿಗೆ ಆರಂಭ ವಾಗಲಿದ್ದು, ಪ್ರಮುಖ ಬೀದಿಗಳಲ್ಲಿ ಸಾಗಿ ಶಾಲಾ ವರಣದಲ್ಲಿ ಸಮಾವೇಶಗೊಳಲಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಆಗಮಿಸುವಂತೆ…
ಜನಸೇವೆ ಮಾಡಬೇಕಾದ ಜನಪ್ರತಿನಿಧಿಗಳು ಹೋಮ-ಹವನ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ…
December 7, 2018ಮೈಸೂರು: ಜನಪ್ರತಿನಿಧಿಗಳು ಜನರ ಸೇವೆ ಮಾಡದೇ ಮಠ, ಮಂದಿರಗಳಲ್ಲಿ ಹೋಮ-ಹವನ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಇಂಜಿನಿ ಯರುಗಳ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ವಿಕಾಸ ವಾಹಿನಿ ಸಹಯೋಗದಲ್ಲಿ ಮೈಸೂರು ರತ್ನ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾ ಚರಣೆ ಅಂಗವಾಗಿ ‘ಸಂವಿಧಾನದ ಆಶಯಗಳು ಮತ್ತು ಭಾರತ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತ ನಾಡಿದ ಅವರು,…
ಸಂಗೀತ ಸಾಧಕ ಡಾ.ಕೆ.ವಾಗೀಶ್ರಿಗೆ `ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ
December 7, 2018ಮೈಸೂರು: ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಗೀತ ಸಾಧಕ ಡಾ.ಕೆ.ವಾಗೀಶ್ ಅವರಿಗೆ `ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಲಾಯಿತು. ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ 25ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ವಾಗೀಶ್ ಅವರಿಗೆ ಗುರು ವಾರ ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಕಲಾಶ್ರೀ, ಸಂಗೀತ ಸರಸ್ವತಿ, ನಾದ ವಿದ್ಯಾ ಭೂಪತಿ, ಗಾಯಕ ರತ್ನ ಹೀಗೆ ವಿವಿಧ ಸಂಗೀತ…
ನಗರಾಭಿವೃದ್ಧಿ ಇಲಾಖೆ `ಏಕಗವಾಕ್ಷಿ’ ಯೋಜನೆಗೆ ಡಿ.15ರಂದು ಸಿಎಂ ಚಾಲನೆ: ಯು.ಟಿ.ಖಾದರ್
December 7, 2018ಮೈಸೂರು: ನಗರಾಭಿವೃದ್ಧಿ ಇಲಾಖೆಯಲ್ಲಿ ಹಲವು ಸುಧಾರಣೆ ಗಳನ್ನು ತರಲಾಗಿದ್ದು, ಏಕಗವಾಕ್ಷಿ ವ್ಯವಸ್ಥೆ ಮೂಲಕ ಸಾರ್ವಜನಿಕ ರಿಗೆ ಸೌಲಭ್ಯ ಒದಗಿಸುವ ಯೋಜನೆಯನ್ನು ಡಿ.15ರಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಕ್ರೆಡಾಯ್ ಸಂಸ್ಥೆ ವತಿಯಿಂದ ಗುರುವಾರ ನಡೆದ ನವಭಾರತ ಸಮ್ಮೇಳನ ದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ನಗರಾಭಿವೃದ್ಧಿ ಇಲಾಖೆಯಿಂದ ವಿವಿಧ ಸೇವೆ ಪಡೆಯಲು ಪರದಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿತ್ತು….
ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನೀರಿನ ಪೈಪ್ಲೈನ್ ಕಾಮಗಾರಿ: ಸದ್ಯದಲ್ಲೇ ರಸ್ತೆ ರಿಪೇರಿ
December 7, 2018ಮೈಸೂರು: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಪೈಪ್ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಒಳಚರಂಡಿ ಪೈಪ್ಲೈನ್ ಬದಲಿಸುವ ಕಾಮಗಾರಿ ಬಳಿಕ ಸಮರ್ಪಕವಾಗಿ ಮಣ್ಣು ಮುಚ್ಚಿರಲಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿತ್ತು. ಈ ಸಂಬಂಧ `ಮೈಸೂರು ಮಿತ್ರ’ ಡಿ.2ರ ಸಂಚಿಕೆಯಲ್ಲಿ `ನಾರಾಯಣ ಶಾಸ್ತ್ರಿ ರಸ್ತೆ ಅವ್ಯವಸ್ಥೆಗೆ ಜನರ ಆಕ್ರೋಶ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಥಳೀಯ ಕಾರ್ಪೊರೇಟರ್(23ನೇ ವಾರ್ಡ್) ಪ್ರಮೀಳಾ ಎಂ.ಭರತ್ ಅವರು, ಯುಜಿಡಿ ಮೇನ್ ಪೈಪ್ಲೈನ್ ಬದಲಿಸುವ ಸಂದರ್ಭದಲ್ಲಿ…
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಪ್ರತಿಜ್ಞೆ ಸ್ವೀಕಾರ, ಉಪನ್ಯಾಸ
December 7, 2018ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪರಿನಿರ್ವಾಣ ದಿನದ ಅಂಗವಾಗಿ ಮೈಸೂರಿನಲ್ಲಿ ಗುರುವಾರ ಜಿಲ್ಲಾಡಳಿತ ಸೇರಿ ದಂತೆ ವಿವಿಧ ಸಂಘಟನೆಗಳು ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಅವರ ಬದುಕು ಮತ್ತು ಹೋರಾಟವನ್ನು ಸ್ಮರಿಸಿದರು. ಸಚಿವ ಜಿ.ಟಿ.ದೇವೇಗೌಡರಿಂದ ಮಾಲಾರ್ಪಣೆ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಮೈಸೂರು ಪುರ ಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭ ದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಆರ್.ಧ್ರುವನಾರಾಯಣ್,…
ಶಾಸಕರಿಂದ ಸಾರ್ವಜನಿಕ ಶೌಚಾಲಯಕ್ಕೆ ಚಾಲನೆ
December 7, 2018ಮೈಸೂರು: ಮೈಸೂರಿನ 49ನೇ ವಾರ್ಡ್ನ ಲಕ್ಷ್ಮೀಪುರಂ ಪೊಲೀಸ್ ಠಾಣೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆರ್ಟಿಓ ಕಚೇರಿ ಸೇರಿದಂತೆ ಹೆಚ್ಚು ಜನಸಂದಣಿ ಇರುವ ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ಅಗತ್ಯತೆ ಬಗ್ಗೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಈ ಶೌಚಾಲಯ ನಿರ್ಮಾಣಗೊಂಡಿದೆ. ಶೌಚಾಲಯಕ್ಕೆ ಅಗತ್ಯ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿತ್ತು. ಈ ಭಾಗದ ಪಾಲಿಕೆ ಸದಸ್ಯೆ ಸೌಮ್ಯ ಉಮೇಶ್ ಅವರ ಆಸಕ್ತಿಯಿಂದ ಕಾಮಗಾರಿ ತ್ವರಿತವಾಗಿ ನಡೆದಿದೆ ಎಂದು…
ವಿಳಾಸ ಕೇಳುವ ನೆಪದಲ್ಲಿ ಮಹಿಳೆ ಸರ ಅಪಹರಣ
December 7, 2018ಮೈಸೂರು: ದ್ವಿಚಕ್ರ ವಾಹನ ದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರಿಂದ ಹಿಂದಿ ನಿಂದ ಬೈಕಿನಲ್ಲಿ ಬಂದ ಯುವಕ, ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿ ಪರಾರಿಯಾಗಿ ರುವ ಘಟನೆ ಮೈಸೂರಿನ ಇಎಸ್ಐ ಆಸ್ಪತ್ರೆ ಬಳಿ ಕೆಆರ್ಎಸ್ ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.ಮೈಸೂರಿನ ಬೃಂದಾವನ ಬಡಾವಣೆ ನಿವಾಸಿ ಚಂದ್ರಕಲಾ, ತಮ್ಮ ಚಿನ್ನದ ಸರದ 11 ಗ್ರಾಂ ತುಣುಕು ಕಳೆದುಕೊಂಡವರು. ಬುಧವಾರ ಸಂಜೆ 7.30 ಗಂಟೆ ವೇಳೆಗೆ ಚಂದ್ರಕಲಾ ಅವರು ದ್ವಿಚಕ್ರ ವಾಹನದಲ್ಲಿ ಬೃಂದಾವನ ಬಡಾವಣೆ ಕಡೆಯಿಂದ ಕೆಆರ್ಎಸ್ ರಸ್ತೆಗೆ ಬಂದು…
`ರೇರಾ’ದಲ್ಲಿ ಮಾರ್ಪಾಡು ಅಗತ್ಯ: ಕ್ರೆಡಾಯ್ ಒತ್ತಾಯ
December 7, 2018ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉz್ದÉೀಶಿಸಿರುವ ರೇರಾ (ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯಿಂದ ಬಿಲ್ಡರ್ಸ್ಗಳಿಗೆ ತೊಂದರೆಯಾಗಲಿರುವ ಹಿನ್ನೆಲೆ ಯಲ್ಲಿ ಕೆಲವು ಮಾರ್ಪಾಡು ಅಗತ್ಯವಿದೆ ಎಂದು ಕ್ರೆಡಾಯ್ನ ರಾಷ್ಟ್ರೀಯ ಅಧ್ಯP್ಷÀ ಜP್ಷÀಯ್ ಶಾ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣ, ಜಿಎಸ್ಟಿ ಮತ್ತು ರೇರಾ ಕಾಯ್ದೆಯಿಂದ ಸಾಕಷ್ಟು ತೊಂದರೆ ಉಂಟಾಯಿತು. ಕೇವಲ ಬಿಲ್ಡರ್ಸ್ಗಳಿಗೆ ಮಾತ್ರವಲ್ಲದೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಬಹುದೊಡ್ಡ ಪರಿಣಾಮ ಬೀರಿತು. ಜಿಎಸ್ಟಿಯಿಂದ ಆರ್ಥಿಕ ಸುಧಾರಣೆ…
ನಕಲಿ ದಾಖಲೆ ಸೃಷ್ಟಿಸಿ 72 ಲಕ್ಷ ರೂ.ಗಳಿಗೆ ನಿವೇಶನ ಮಾರಾಟ ಮೂವರು ವಂಚಕರ ಸೆರೆ; 23,50,000 ರೂ. ನಗದು ವಶ
December 7, 2018ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವಿಜಯನಗರ 4ನೇ ಹಂತದ ನಿವೇಶನವನ್ನು 72 ಲಕ್ಷ ರೂ.ಗಳಿಗೆ ಮಾರಿ, ವಂಚಿಸಿದ್ದ ಮೂವರು ರಿಯಲ್ ಎಸ್ಟೇಟ್ ಬ್ರೋಕರ್ಗಳನ್ನು ಬಂಧಿಸಿರುವ ವಿಜಯನಗರ ಠಾಣೆ ಪೊಲೀಸರು, 23,50,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಅರವಿಂದನಗರ ನಿವಾಸಿ ನಾರಾಯಣಪ್ಪ ಅವರ ಮಗ ಸೋಮೇಶ (35), ಸಾತಗಳ್ಳಿಯ ಅಹಮದ್ ಜಾನ್ ಅವರ ಮಗ ಮಕ್ಬಲ್ ಅಲಿಯಾಸ್ ಮಕ್ಬಲ್ ಅಹಮದ್(47) ಹಾಗೂ ಸತ್ಯಪ್ಪ ಅವರ ಮಗ ಜಯರಾಮ್(48) ಬಂಧಿತರು. ಮೈಸೂರಿನ ವಿಜಯನಗರ 4ನೇ ಹಂತ, 3ನೇ ಘಟ್ಟದಲ್ಲಿರುವ 788ನೇ…