ಮೈಸೂರು: ತಾಂತ್ರಿಕವಾಗಿ ಮುಂದಿದ್ದರೂ ಮೂಲ ಭೂತವಾದ ಸಂಸ್ಕøತಿಯನ್ನು ಬೆಳೆಸುವಲ್ಲಿ ಹಿಂದೆ ಬಿದ್ದಿz್ದÉೀವೆ ಎಂದು ಮೈಸೂರು ವಿವಿ ಪ್ರಾಧ್ಯಾಪಕ ಡಾ.ಸಿ.ಬಸವರಾಜು ಅಭಿಪ್ರಾಯಪಟ್ಟರು. ನಗರದ ಜೆಎಲ್ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ತನುಮನ ಸಂಸ್ಥೆಯ ವತಿಯಿಂದ ಗಾಯಕ ಲಕ್ಷ್ಮಿರಾಮ್ ಸಾರಥ್ಯದಲ್ಲಿ ‘ ಪದವ ಹೇಳೋ ನಾಲಿಗೆಗೆ ಒಲಿದು ಬಾಪ್ಪ ದರ್ಮಾ ಗುರುವೆ’ ಜನಪದ ಪದಪಯಣ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ನಾವು ಸಾಹಿತ್ಯ ಕ್ಷೇತ್ರವನ್ನು ಕಡೆಗಣಿಸುತ್ತಿz್ದÉೀವೆ. ಮನುಷ್ಯ ತನ್ನ ದುರಾಸೆಯಿಂದ ಎಲ್ಲವನ್ನೂ ಮರೆಯುತ್ತಿದ್ದಾನೆ….
ನಾಳೆ ‘ಸುಳಿ’ ವಿಮರ್ಶಾ ಸಂಕಲನ ಬಿಡುಗಡೆ
September 21, 2018ಮೈಸೂರು: ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಸೆ.22ರಂದು ಸಂಜೆ 5 ಗಂಟೆಗೆ ಕಲಾಮಂದಿರದ ಮನೆಯಂಗಳದಲ್ಲಿ ಹುಣಸೂರು ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬಿ.ನಂಜುಂಡಸ್ವಾಮಿ ಹರದನಹಳ್ಳಿ ಅವರ ‘ಸುಳಿ’ ವಿಮರ್ಶಾ ಸಂಕಲನ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ. ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್ಗೌಡ ಸಮಾರಂಭವನ್ನು ಉದ್ಘಾಟಿ ಸಲಿದ್ದು, ಸ್ಪಂದನ ಸಾಂಸ್ಕೃತಿಕ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅಧ್ಯಕ್ಷತೆ ವಹಿಸುವರು. ಮೈಸೂರು ವಿವಿ ಕುವೆಂಪು ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ನೀಲಗಿರಿ ತಳವಾರ ಪುಸ್ತಕ ಬಿಡುಗಡೆ ಮಾಡುವರು. ಮುಕ್ತ…
ದಸರಾ ಆಹಾರ ಮೇಳದಲ್ಲಿ ಈ ಬಾರಿ ವಿದೇಶಿಗರಿಗೂ ಅವಕಾಶ ಕಲ್ಪಿಸಲು ನಿರ್ಧಾರ
September 21, 2018ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಏರ್ಪಡಿಸಲಾಗುವ ಬಾಯಲ್ಲಿ ನೀರೂರಿಸುವ ಆಹಾರ ಮೇಳದಲ್ಲಿ ಈ ಬಾರಿ ಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಖಾದ್ಯಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಹಾರ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ದೇಶೀಯ, ಖಂಡಾಂತರ ಆಹಾರ ಪದ್ಧತಿ ಮತ್ತು ಪ್ರಾದೇಶಿಕ ವೈವಿಧ್ಯದ ಊಟೋಪಚಾರಗಳನ್ನು ಕಳೆದ ವರ್ಷದಂತೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಮತ್ತು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಸಮೀಪದ ಮುಡಾ ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು…
ಬ್ಯಾಂಕ್ ನೋಟ್ ಪೇಪರ್ ಮಿಲ್ನಿಂದ ಅಗ್ನಿಶಾಮಕ ಸೇವೆಗೆ ವಾಹನ ಕೊಡುಗೆ
September 21, 2018ಮೈಸೂರು: ಮೆ|| ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ. ನಿಂದ ಸಿಎಸ್ಆರ್ ಯೋಜನೆಯಡಿ ಕ್ಷಿಪ್ರ ಸ್ಪಂದನಾ ತಂಡದ ನಿರ್ವಹಣೆಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಒಂದು ಬೊಲೆರೋ ವಾಹನವನ್ನು ನೀಡಿದೆ. ಮೈಸೂರಿನ ಹೆಬ್ಬಾಳಿನಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಮೆ: ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ. ಚೀಫ್ ಮ್ಯಾನೇಜಿಂಗ್ ಡೈರೆಕ್ಟರ್ ಜಗನ್ಮೋಹನ್ರಾವ್ ಅವರು ಮೈಸೂರು ಪ್ರಾಂತದ ಮುಖ್ಯ ಅಗ್ನಿಶಾಮಕ ಅಧಿಕಾರಿ ಯೂನಸ್ ಅಲಿ ಕೌಸರ್ ಅವರಿಗೆ ವಾಹನದ ಕೀಲಿಯನ್ನು…
ರಸ್ತೆ ಬದಿ ಗೋಡೆ, ಕಾಂಪೌಂಡ್ಗಳ ಮೇಲೆ ರಾರಾಜಿಸುತ್ತಿದೆ ನಾಡಿನ ಕಲೆ, ಸಂಸ್ಕೃತಿ…!
September 21, 2018ಮೈಸೂರು: ದಸರಾ ಮಹೋತ್ಸವಕ್ಕೆ ಮೈಸೂರು ಸಜ್ಜುಗೊಳ್ಳುತ್ತಿದ್ದು, ಪ್ರಮುಖ ರಸ್ತೆಗಳ ಗೋಡೆ, ಕಾಂಪೌಂಡ್ಗಳ ಮೇಲೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಗಳು ಮೈದಳೆಯುತ್ತಿವೆ. ಕೆ.ಆರ್ಎಸ್ ರಸ್ತೆ, ರೈಲ್ವೇ ಬ್ರಿಡ್ಜ್ನ ಬೃಹತ್ ಗೋಡೆಯ ಮೇಲೆ ಈಗಾಗಲೇ ಚಿತ್ರ ಬಿಡಿಸಲಾಗಿತ್ತು. ಆದರೆ ಬಣ್ಣ ಮಾಸಿದ್ದರಿಂದ ಹೊಸದಾಗಿ ಬಣ್ಣ ತುಂಬಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಹಾಗೆಯೇ ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು, ವಿದ್ಯಾರ್ಥಿನಿಲಯದ ಕಾಂಪೌಂಡ್ಗಳ ಮೇಲೂ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಹುಣಸೂರು ರಸ್ತೆಯಲ್ಲಿ ಮಹಾರಾಣಿ ಕಾಲೇಜು ಕಾಂಪೌಂಡ್ಗೆ ಹೊಂದಿಕೊಂಡಂತಿರುವ ಪ್ರಯಾಣಿಕರ ತಂಗುದಾಣ, ಪಾಳು…
ಸೆ.23ರಂದು ರಾಜಶೇಖರ ಕೋಟಿಯವರ ನೆನಪಿನಲಿ ಸಂವಾದ ಕಾರ್ಯಕ್ರಮ
September 21, 2018ಮೈಸೂರು: ಮೈಸೂರಿನ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಸೆ.23ರಂದು ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದ ಮನೆ ಯಂಗಳ ವೇದಿಕೆಯಲ್ಲಿ ಹಿರಿಯ ಪತ್ರಕರ್ತ, ಸಮಾಜವಾದಿ ಚಿಂತಕರೂ ಆದ ರಾಜಶೇಖರ ಕೋಟಿಯವರ ನೆನಪಿನಲಿ… ಒಂದು ದಿನದ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿದೆ. `ಪತ್ರಿಕೋದ್ಯಮದಲ್ಲಿ ಸಾಮಾ ಜಿಕ ಬದ್ಧತೆ ಮತ್ತು ಕಳಕಳಿ’ ವಿಚಾರ ಕುರಿತು ಅಧ್ಯಯನ ಶಿಬಿರವಿದ್ದು, ಶಿಬಿರವನ್ನು ಹಿರಿಯ ಪತ್ರಕರ್ತ ಹಾಗೂ ಔಟ್ಲುಕ್ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಕೃಷ್ಣಪ್ರಸಾದ್ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ…
ವಿವೇಕಾನಂದರ ಆದರ್ಶ ನನ್ನ ಬದುಕೇ ಬದಲಿಸಿತು
September 21, 2018ಮೈಸೂರು: ಸ್ವಾಮಿ ವಿವೇಕಾನಂದರ ಆದರ್ಶಗಳು ನನ್ನ ಬದು ಕಿನ ದಿಕ್ಕನ್ನೇ ಬದಲಿಸಿತು ಎಂದು ವಿಶ್ವ ಸಂಸ್ಥೆಯ ಬ್ರೌನ್ ಯುವ ಸಾಧಕ ಪ್ರಶಸ್ತಿ ಪುರ ಸ್ಕøತೆ ಹಾಗೂ ಬೆಳಕು ಅಕಾಡೆಮಿ ಸಂಸ್ಥಾ ಪಕಿ ಅಶ್ವಿನಿ ಅಂಗಡಿ ಅಭಿಪ್ರಾಯಪಟ್ಟರು. ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತಾ ಸಭಾ ಭವನದಲ್ಲಿ ಯುವ ಬ್ರಿಗೇಡ್ ಮೈಸೂರು ಘಟಕದ ವತಿಯಿಂದ ಆಯೋ ಜಿಸಿದ್ದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸ್ಮರಣಾ ರ್ಥವಾಗಿ `ಮತ್ತೊಮ್ಮೆ ದಿಗ್ವಿಜಯ ರಥ ಯಾತ್ರೆ’ಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ…
ಶಿಕ್ಷಕರು ಮಕ್ಕಳ ಮಟ್ಟಕ್ಕಿಳಿದು ಬೋಧನೆ ಮಾಡಬೇಕು
September 21, 2018ಮೈಸೂರು: ಶಿಕ್ಷಕರು ಆಧುನಿಕ ತಂತ್ರಜ್ಞಾನಕ್ಕೆ ತಮ್ಮನ್ನು ಅರ್ಪಿಸಿ ಕೊಂಡು ಮಕ್ಕಳ ಮನೋಸ್ಥಿತಿಗೆ ತಕ್ಕಂತೆ ಬೋಧನೆ ಮಾಡಬೇಕು ಎಂದು ಮೈಸೂರು ಉತ್ತರ ವಲಯ ಬಿಇಒ ಎಂ.ಆರ್. ಶಿವರಾಮ್ ಇಂದಿಲ್ಲಿ ಹೇಳಿದರು. ನಗರದ ಮೈಸೂರು-ಬೆಂಗಳೂರು ರಸ್ತೆ ಯಲ್ಲಿರುವ ಸೆಂಟ್ ಫಿಲೋಮಿನಾ ಶಾಲೆ ಯಲ್ಲಿ ಇನ್ನರ್ ವಿಲ್ಸ್ ಆಫ್ ಸೌತ್ ಈಸ್ಟ್ ವತಿಯಿಂದ ನಡೆದ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗಿದ್ದು, ಎಲ್ಲಾ ರೀತಿಯ ಒತ್ತಡಗಳನ್ನು…
ನಾಳೆ ನಾಡಪ್ರಭು ಕೆಂಪೇಗೌಡ, ಕೆ.ಹೆಚ್.ರಾಮಯ್ಯ ಜನ್ಮ ದಿನಾಚರಣೆ
September 21, 2018ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಸೆ.22ರಂದು ನಾಡಪ್ರಭು ಕೆಂಪೇಗೌಡ ಮತ್ತು ಕೆ.ಹೆಚ್.ರಾಮಯ್ಯ ಜನ್ಮ ದಿನಾಚರಣೆ ಹಾಗೂ ವಿಕಾಸಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷೆ ಹೆಚ್.ಎಲ್.ಯಮುನಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಪುರಭವನದಲ್ಲಿ ಏರ್ಪಡಿಸಿರುವ ಸಮಾರಂಭ ವನ್ನು ಅಂದು ಮಧ್ಯಾಹ್ನ 3.30ಕ್ಕೆ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಕುಮಾರಚಂದ್ರಶೇಖರನಾಥ ಸ್ವಾಮೀಜಿ ಹಾಗೂ ಕುಣಿಗಲ್ ತಾಲೂಕಿನ ಶ್ರೀ ಅರೇಶಂಕರ…
ಮಹಿಳಾ ದಸರಾ: ಸ್ತ್ರೀ ಶಕ್ತಿ ಗುಂಪುಗಳಿಂದ ಅರ್ಜಿ ಆಹ್ವಾನ
September 21, 2018ಮೈಸೂರು: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅ.11ರಿಂದ 15ರವರೆಗೆ ಮಹಿಳಾ ದಸರಾ-2018ರ ಪ್ರಯುಕ್ತ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜೆ.ಕೆ ಮೈದಾನದ ಆವರಣದಲ್ಲಿ ಏರ್ಪಡಿಸಲಾಗಿದೆ. ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳು/ಸದಸ್ಯರು/ ಸ್ತ್ರೀಶಕ್ತಿ ಒಕ್ಕೂಟಗಳು/ ಮಹಿಳಾ ಉದ್ಯಮಿಗಳಿಂದ ತಯಾರಿಸಿದ ವಿಶೇಷ ಗೃಹೋಪಯೋಗಿ ಕರಕುಶಲ ವಸ್ತುಗಳು, ಗುಣಮಟ್ಟದ ಪೇಯಿಂಟಿಂಗ್ಸ್ಗಳು, ವಿಶೇಷ ಕೈಕಸೂತಿ/ಕೈಮಗ್ಗ ಉತ್ಪನ್ನಗಳನ್ನು ವಸ್ತು ಪ್ರದರ್ಶನ ಮತ್ತು ಮಾರಾಟ…