ಮೈಸೂರು: ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸಿ ವಿಶ್ವ ಆದಿವಾಸಿ ದಿನವೂ ಆದ ಗುರುವಾರ ಹೆಚ್.ಡಿ.ಕೋಟೆ ತಾಲೂಕಿನ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಗಾಂಧೀ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು, ಕೃಷ್ಣರಾಜ-ಬುಲೇವಾರ್ಡ್ ರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿದರು. ವೈಯಕ್ತಿಕ ಭೂಮಿ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿ ನಮೂನೆ(ಎ) ಕುರಿತು ಪುನರ್ ಸರ್ವೇ ನಡೆಸಿ 1ರಿಂದ 3 ಎಕರೆವರೆಗೆ ಭೂಮಿ ಸ್ವಾಧೀನ ಹೊಂದಿರುವ…
ಶ್ರೀಶೈಲಂನಲ್ಲಿ ಮೈಸೂರಿನ ನಿವೃತ್ತ ಮುಖ್ಯ ಶಿಕ್ಷಕ ಆತ್ಮಹತ್ಯೆ
August 10, 2018ಮೈಸೂರು: ಮೈಸೂರಿನ ನಿವೃತ್ತ ಮುಖ್ಯ ಶಿಕ್ಷಕನೋರ್ವ ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮೈಸೂರಿನ ನಾಡನಹಳ್ಳಿ ಸರ್ದಾರ್ ವಲ್ಲಬಾಯ್ಪಟೇಲ್ ನಗರ ನಿವಾಸಿ ಪರಶಿವಮೂರ್ತಿ (61) ಆತ್ಮಹತ್ಯೆಗೆ ಶರಣಾದವರು. ಆಗಸ್ಟ್ 4ರಂದು ಕರ್ನೂಲ್ ಜಿಲ್ಲೆಯ ಶ್ರೀಶೈಲಂನ ಬಸ್ ನಿಲ್ದಾಣದ ಬಳಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಬಸ್ ಚಾಲಕ ಸಾಯಿ ಬಾಬಾ ಮಚ ರಿಯಾ ಎಂಬುವರು ಶ್ರೀಶೈಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ ಸ್ಥಳೀಯ ಪೊಲೀಸರು, ಮೃತದೇಹವನ್ನು…
ಡಾ. ರಾಜ್ಕುಮಾರ್ ರಸ್ತೆಯಲ್ಲಿ ಎರಡು ಅಂಗಡಿಗಳಲ್ಲಿ ಕಳವು
August 10, 2018ಮೈಸೂರು: ಒಂದೇ ರಾತ್ರಿ ಅಂಗಡಿಗಳ ಸರಣಿ ಕಳ್ಳತನ ನಡೆದ ಬೆನ್ನಲ್ಲೇ ಮೈಸೂರಿನ ಡಾ|| ರಾಜ್ಕುಮಾರ್ ರಸ್ತೆಯ ಎರಡು ಅಂಗಡಿಗಳಲ್ಲಿ ಖದೀಮರು ಕಳೆದ ರಾತ್ರಿ ಕೈಚಳಕ ತೋರಿದ್ದಾರೆ. ಶ್ರೀಕಂಠೇಶ್ವರ ಟಿವಿ ಶೋ ರೂಂ ಮತ್ತು ಜಿಯೋ ಮೊಬೈಲ್ ಫೋನ್ ಶೋರೂಂನಲ್ಲಿ ಕಳ್ಳತನ ಮಾಡಲಾಗಿದ್ದು, ರೋಲಿಂಗ್ ಶೆಟರ್ ಮೀಟಿ ಎಂದಿನಂತೆ ನಗದು ದೋಚಿ ಪರಾರಿಯಾಗಿದ್ದಾರೆ. ಶ್ರೀಕಂಠೇ ಶ್ವರ ಟಿವಿ ಶೋರೂಂನಲ್ಲಿ 1.3 ಲಕ್ಷ ರೂ. ನಗದು, ಡಿವಿಆರ್ ಅನ್ನು ಕಳವು ಮಾಡ ಲಾಗಿದೆ. ನಂತರ ಅದೇ ರಸ್ತೆಯ ಜಿಯೋ ಶೋರೂಂನಲ್ಲಿ…
ನಾಳೆ ಎಲ್ಐಸಿ ಪ್ರತಿನಿಧಿಗಳ ಒಕ್ಕೂಟದ ಸಮ್ಮೇಳನ
August 10, 2018ಮೈಸೂರು: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ 5ನೇ ಮಹಾ ಸಮ್ಮೇಳನ ಆ.11ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಸಾ.ರಾ. ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನವನ್ನು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಎಸ್.ಬಿ.ಶ್ರೀನಿವಾಸಚಾರಿ ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೇಯರ್ ಭಾಗ್ಯವತಿ, ಎಲ್ಐಸಿ ವಲಯ ಪ್ರಬಂಧಕ ಟಿ.ಸಿ.ಸುನೀಲ್ ಕುಮಾರ್, ಮೈಸೂರು ವಿಭಾಗಾಧಿಕಾರಿ ಕೆ.ಅನಂತ ಪದ್ಮನಾಭ, ಸಂಸದರಾದ ಪ್ರತಾಪ್…
ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ
August 10, 2018ಮೈಸೂರು: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ, ಮೂಲಸೌಕರ್ಯ, ಬೋಧಕರ ನೇಮಕಾತಿ ಮತ್ತು ಉದ್ಯೋಗಾವಕಾಶಗಳಿಗಾಗಿ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆಶ್ರಯದಲ್ಲಿ ಗುರುವಾರ ಮೈಸೂರು ವಿವಿ ಮಾನಸಗಂಗೋತ್ರಿ ಕ್ಲಾಕ್ ಟವರ್ ಬಳಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಉನ್ನತ ಶಿಕ್ಷಣದಲ್ಲಿ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಮುಖ್ಯವಾಗಿ ಬೋಧಕರ ನೇಮಕಾತಿ ಆಗಬೇಕು. ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕಾಗಿ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಬೇಕು. ಬಲಿಷ್ಠ ಆಧುನಿಕ ರಾಷ್ಟ್ರ ನಿರ್ಮಾಣಕ್ಕೆ ಪಡೆದ ಶಿಕ್ಷಣಕ್ಕೆ ತಕ್ಕ ಸುಭದ್ರ…
ಕೆಪಿಎಲ್ ಟಿ-20 ಏಳನೇ ಆವೃತ್ತಿ ಮೈಸೂರು ವಾರಿಯರ್ಸ್ ತಂಡ ಪ್ರಕಟ
August 10, 2018ವೆಂಕಟೇಶ್ಪ್ರಸಾದ್ ಮೆಂಟರ್ ಜೆ.ಸುಚಿತ್ ತಂಡದ ನಾಯಕ ಮೈಸೂರು: `ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20′ ಏಳನೇ ಆವೃತ್ತಿಗೆ ಮೈಸೂರು ವಾರಿಯರ್ಸ್ ತಂಡದ ಫ್ರಾಂಚೈಸಿಯಾಗಿರುವ ಸೈಕಲ್ ಪ್ಯೂರ್ ಅಗರಬತ್ತೀಸ್ ಸಂಸ್ಥೆ ಬುಧವಾರ ತನ್ನ ತಂಡ ಪ್ರಕಟಿಸಿದೆ. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಗುರುವಾರ ವರ್ಣರಂಚಿತ ಕಾರ್ಯಕ್ರಮದಲ್ಲಿ ತಂಡದ 18 ಆಟಗಾರರನ್ನು ತಂಡದ ಮ್ಯಾನೇಜರ್ ಎಂ.ಆರ್.ಸುರೇಶ್ ಪರಿಚಯಿಸಿದರು. ಇದೇ ವೇಳೆ ತಂಡದ ನಾಯಕನಾಗಿ ಜೆ.ಸುಚಿತ್ ಹಾಗೂ ಅಂತಾರಾಷ್ಟ್ರೀಯ ಆಟಗಾರ ವೆಂಕಟೇಶ್ ಪ್ರಸಾದ್ ಅವರನ್ನು ತಂಡದ ಮೆಂಟರ್ ಆಗಿ ಪ್ರಕಟಿಸಲಾಯಿತು. ಬಳಿಕ ಮಾತನಾಡಿದ ಅವರು,…
ಎಂಸಿಡಿಸಿಸಿ ಬ್ಯಾಂಕ್ಗೆ 6.45 ಕೋಟಿ ಲಾಭ
August 10, 2018ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) 2018ರ ಮಾರ್ಚ್ 31ಕ್ಕೆ 6.45 ಕೋಟಿ ತಾತ್ಕಾಲಿಕ ಲಾಭಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್.ಚಂದ್ರಶೇಖರ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ ಅವರು, 2017ರ ಮಾರ್ಚ್ 31ಕ್ಕೆ ಬ್ಯಾಂಕ್ 2.79 ಕೋಟಿ ಲಾಭ ಗಳಿಸಿತ್ತು ಎಂದಿದ್ದಾರೆ. ರಾಜ್ಯ ಸರ್ಕಾರ ಈ ಹಿಂದೆ 50 ಸಾವಿರವರೆಗಿನ ಸಾಲ ಮನ್ನಾ ಘೋಷಿಸಿದಾಗ 68,069 ಸದಸ್ಯರಿಗೆ 275.25 ಕೋಟಿ ರೂ. ಸಾಲ ಮನ್ನಾ ಆಗಿತ್ತು. ಹಾಲಿ ಮುಖ್ಯಮಂತ್ರಿಗಳು…
ಮೈವಿವಿ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ
August 10, 2018ಮೈಸೂರು: ಮೈವಿವಿ ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಮೈವಿವಿ ಕುಲಪತಿ ಡಾ.ಟಿ.ಕೆ.ಉಮೇಶ್ ಭರವಸೆ ನೀಡಿದರು. ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಮೈಸೂರು ವಿವಿ ಸಂಜೆ ಕಾಲೇಜು ಗುರುವಾರ ಆಯೋಜಿಸಿದ್ದ `2018-19ನೇ ಸಾಲಿನ ಪಠ್ಯೇತರ ಮತ್ತು ಸಾಂಸ್ಕøತಿಕ ಚಟು ವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಕೆಲವು ವಿದ್ಯಾರ್ಥಿಗಳು ಬೆಳಗಿನ ವೇಳೆ ಕೆಲಸಕ್ಕೆ ಹೋಗಿ ಸಂಜೆ ಕಾಲೇಜಿಗೆ ಬರುತ್ತಾರೆ ಎಂಬ ಆರೋಪವಿದೆ. ಜತೆಗೆ ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನೀಡ ಬಾರದೆಂಬ ನಿಯಮ…
ಕೃಷಿ ಮಾಹಿತಿಗೆ ಡ್ರೋನ್ ಬಳಕೆಕೃಷಿ ಮಾಹಿತಿಗೆ ಡ್ರೋನ್ ಬಳಕೆ
August 9, 2018ಬೆಂಗಳೂರು: ಕೃಷಿ ಚಟುವಟಿಕೆ, ಬೆಳೆ ವಿಸ್ತೀರ್ಣದ ನಿಖರ ಮಾಹಿತಿ ಪಡೆಯಲು ಡ್ರೋನ್ ಬಳಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಹಿಡುವಳಿ ಬಗ್ಗೆ ಸಮರ್ಪಕ ಮಾಹಿತಿ ದೊರೆಯದ ಕಾರಣ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಈ ಪ್ರಯೋಗವನ್ನು ಜಾರಿಗೆ ತರಲಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಇಂದಿಲ್ಲಿ ಪ್ರಕಟಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯಲ್ಲಿ ಡ್ರೋನ್ ತನ್ನ ಕಾರ್ಯ ಆರಂಭಿಸಿದ್ದು, ಒಂದು ಡ್ರೋನ್ ಪ್ರತಿನಿತ್ಯ ಒಂದು ಸಾವಿರ ಎಕರೆ ಭೂ ವ್ಯಾಪ್ತಿಯಲ್ಲಿರುವ ಬೆಳೆ ಮಾಹಿತಿ ಹಾಗೂ…
ಆಷಾಢ ಶುಕ್ರವಾರಗಳಲ್ಲಿ ಚಾಮುಂಡಿಬೆಟ್ಟದಲ್ಲಿ ವಿವಿಐಪಿಗಳ ಹಾವಳಿ: ಭಕ್ತರ ಫಜೀತಿ
August 9, 2018ಮೈಸೂರು: ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಶುಕ್ರವಾರ ನಡೆಯುವ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಣ್ಯರು ಹಾಗೂ ಅಧಿಕಾರಿಗಳ ತಂಡ ಲಗ್ಗೆ ಇಡುವುದರಿಂದ ಲಕ್ಷಾಂತರ ಭಕ್ತರು ನೆಮ್ಮದಿಯಾಗಿ ದೇವರ ದರ್ಶನ ಪಡೆಯಲಾಗದೇ ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಷಾಢ ಶುಕ್ರವಾರದಂದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ರಾಜ್ಯದ ವಿವಿಧೆಡೆ ಯಿಂದ ಲಕ್ಷಾಂತರ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ. ಹಲವು ಭಕ್ತರು ಮುಂಜಾನೆಯೇ ಮೆಟ್ಟಿಲುಗಳ ಮೂಲಕ ಬೆಟ್ಟವೇರಿದರೆ, ಮತ್ತೆ ಹಲವರು ಗುರುವಾರ…