ಮೈಸೂರು: ನಗರದ ವಿವಿ ಪುರಂನ ನಿವಾಸಿ ಎಲ್.ಮೋಹನ್ಕುಮಾರ್ ಅವರ ತಂದೆ ಜೆ.ಲಕ್ಷ್ಮೀ ನಾರಾಯಣ(64) ಅವರು ಜು.3 ರಂದು ನಗರದ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ ಎಂದು ಮೋಹನ್ ಕುಮಾರ್ ಅವರು ವಿವಿ ಪುರಂನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದರವರ ಚಹರೆ: ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಮಿಶ್ರಿತ ಕಪ್ಪು ಕೂದಲು, ದಪ್ಪ ಮೂಗು ಮೀಸೆ ಬಿಟ್ಟಿರುತ್ತಾರೆ. ಕನ್ನಡ, ತಮಿಳು ಭಾಷೆ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ…
ನಾಲ್ವರಿಗೆ ‘ನಮನ’ ಜೀವದಾನ
July 8, 2018ಗ್ರೀನ್ ಕಾರಿಡಾರ್ ನಲ್ಲಿ ಮೈಸೂರಿಂದ ಬೆಂಗಳೂರಿಗೆ ಬಹು ಅಂಗಾಂಗ ಹೊತ್ತು ಶರವೇಗದಲ್ಲಿ ಸಾಗಿದ ಆಂಬುಲೆನ್ಸ್ ಮೈಸೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯುವತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆಕೆಯ ಕುಟುಂಬದವರು ನೋವಿನಲ್ಲೂ ತ್ಯಾಗ ಮೆರೆದಿದ್ದಾರೆ. ಇದರೊಂದಿಗೆ ಆಕೆಯ ಸಾವಿಗೂ ಸಾರ್ಥಕತೆ ದಕ್ಕಿದಂತಾಗಿದೆ. ಎರಡು ದಿನಗಳ ಹಿಂದಷ್ಟೇ ಚಾಮುಂಡಿಬೆಟ್ಟದ ಮೇಲೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಬಿಬಿಎಂ ವಿದ್ಯಾರ್ಥಿನಿ ಎಂ.ಸಿ.ನಮನ ಅವರ ಹೃದಯ ಕವಾಟ, ಕಿಡ್ನಿ ಹಾಗೂ ಶ್ವಾಸ ಕೋಶವನ್ನು,…
ಹೃದಯ ರವಾನೆಯ ಸಾರಥಿ ಬಸವರಾಜು
July 8, 2018ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲೀಗ ಹೃದಯ ಸೇರಿದಂತೆ ಅಂಗಾಂಗ ರವಾನೆ ಆಗಾಗ್ಗೆ ನಡೆಯುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲಿ ತಜ್ಞವೈದ್ಯರ ಪಾತ್ರದೊಂದಿಗೆ ಹೃದಯವನ್ನು ಹೊತ್ತೊ ಯ್ಯುವ ವಾಹನದ ಚಾಲಕರ ಪಾತ್ರವೂ ಮಹತ್ವದ್ದಾಗಿರುತ್ತದೆ. ಹೌದು, ಇಂತಹ ಅಂಗಾಂಗಗಳ ರವಾನೆಯಂತಹ ಸಾಹಸಕ್ಕೆ ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆ ಹೆಸರುವಾಸಿ ಯಾಗಿದೆ. ಅಪಘಾತದಿಂದ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯಗೊಂಡು ಜೀವಂತ ಶವವಾಗಿದ್ದ ಎರಡು ಯುವ ಹೃದಯಗಳನ್ನು ರವಾನಿಸಿದ ಆ ಹೃದಯ ರವಾನೆಯ ಸಾರಥಿ ತುಮಕೂರು ಮೂಲದ ಬಸವರಾಜು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಮನ…
ಸಂಪೂರ್ಣ ಸಾಲ ಮನ್ನಾಕ್ಕಾಗಿ ನಾಳೆ ಬೆಂಗಳೂರಲ್ಲಿ ರೈತರ ಪ್ರತಿಭಟನೆ
July 8, 2018ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು 34 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಘೋಷಿಸಿದ್ದರೂ, ರೈತರ ಮುಖದಲ್ಲಿ ಮಂದಹಾಸ ಮೂಡಿಸಿಲ್ಲ. ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಜುಲೈ 9 ರಂದು ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾಗ ರಾಜ್ಯದ ರೈತರ ಸುಮಾರು 1.2 ಲಕ್ಷ ಕೋಟಿ ರೂ. ಮೊತ್ತದ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ರಾಜ್ಯದ…
ಮೋದಿ ಮತ್ತಷ್ಟು ಕಾಲ ಪ್ರಧಾನಿಯಾಗಿರಬೇಕು
July 8, 2018ಮೈಸೂರು: ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇನ್ನಷ್ಟು ಕಾಲ ಪ್ರಧಾನಿಯಾಗಿರಬೇಕು ಎಂದು ಮೈಸೂರು ರಾಜವಂಶದ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದಿಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರಿಂದ ಕೇಂದ್ರ ಸರ್ಕಾರದ ಸಾಧನಾ ವಿವರವುಳ್ಳ ಕೈಪಿಡಿ ಸ್ವೀಕರಿಸಿದ ಅವರು, ಮೈಸೂರು ಅರಮನೆ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈಗಷ್ಟೇ ಪ್ರತಾಪ್ ಸಿಂಹ ಅವರು ಕಳೆದ ನಾಲ್ಕೂವರೆ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು…
ಕಾವೇರಿ ಕಣಿವೆಯ ಹಾರಂಗಿ ಜಲಾಶಯ ಭರ್ತಿ
July 8, 2018ಕುಶಾಲನಗರ: ಕೊಡಗಿನಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನಲೆ ಯಲ್ಲಿ ಹಾರಂಗಿ ಜಲಾಶಯ ಭರ್ತಿಯಾ ಗಿದ್ದು, ಶನಿವಾರ ಸಂಜೆ ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್ಗಳಿಂದ ನದಿಗೆ 1200 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾ ಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿ ಇದ್ದು, ಜಲಾ ಶಯದ ಇಂದಿನ ನೀರಿನ ಮಟ್ಟ 2856 ಅಡಿ (ಸಂಜೆ 5 ಗಂಟೆಗೆ) ಇತ್ತು. ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ನೀರಿನ ಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ಜಲಾಶಯಕ್ಕೆ 24450 ಕ್ಯೂಸೆಕ್…
ಮೈಸೂರಲ್ಲಿ ಜಿಟಿ-ಜಿಟಿ ಮಳೆ: ಜನಜೀವನ ಅಸ್ತವ್ಯಸ್ತ
July 8, 2018ಮೈಸೂರು: ಇಂದು ಮುಂಜಾನೆಯಿಂದ ರಾತ್ರಿವರೆಗೂ ಎಡೆಬಿಡದೇ ಸುರಿದ ಜಿಟಿ-ಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮೋಡ ಮುಸುಕಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಆರಂಭವಾಯಿತು. ಇದರಿಂದ ಜನರ ಕಾರ್ಯಚಟುವಟಿಕೆಗೆ ತೊಂದರೆ ಉಂಟುಮಾಡಿತು. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಾದ್ಯಂತ ಭಾರೀ ಮಳೆಯಾಗಿದೆ. ಶಾಲಾ-ಕಾಲೇಜು, ಕಚೇರಿ, ಅಂಗಡಿ ಮುಂಗಟ್ಟು, ಪ್ರವಾಸಿಗರು ಮಳೆಯಿಂದ ಪರದಾಡಬೇಕಾಯಿತು. ದೇವರಾಜ ಮಾರುಕಟ್ಟೆ, ಕೆಆರ್, ಮಂಡಿ ಮಾರುಕಟ್ಟೆ, ಮಕ್ಕಾಜಿ ಚೌಕ, ಕೆ.ಆರ್.ಸರ್ಕಲ್, ಗಾಂಧಿಚೌಕ, ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಜನರಿಲ್ಲದ…
ಜಿಲ್ಲಾಧಿಕಾರಿಗಳು ವಾರದಲ್ಲೊಮ್ಮೆ ಸಾರ್ವಜನಿಕರ ಸಂಕಷ್ಟ ಆಲಿಸಿ
July 8, 2018ಬೆಂಗಳೂರು: ಜಿಲ್ಲಾಧಿಕಾರಿಗಳು ವಾರದಲ್ಲಿ ಒಮ್ಮೆ ಸಾರ್ವಜನಿಕರ ಸಂಕಷ್ಟಗಳನ್ನು ಆಲಿಸಿ ಪರಿಹಾರ ದೊರಕಿ ಸುವಂತೆ ಸರ್ಕಾರ ಕಟ್ಟಾದೇಶ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ. ಜಿಲ್ಲಾ ಅಧಿಕಾರಿಗಳಷ್ಟೇ ಅಲ್ಲದೆ, ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ತಮ್ಮ ಜಿಲ್ಲಾ ಕೇಂದ್ರಗಳಲ್ಲಿ ಜನರ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳಬೇಕು. ಸ್ಥಳೀಯವಾಗಿ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ, ನನ್ನ ಬಳಿಗೆ ಕಳು ಹಿಸಲಿ. ಜನರ ಕಷ್ಟಗಳ ಬಗ್ಗೆ ಆಲಿಸಲು ಅಸಡ್ಡೆ ತೋರಿದರೆ ಅಂತಹ ಅಧಿಕಾರಿಗಳಿಗೆ ಗ್ರಹಚಾರ ಬಿಡಿಸಬೇಕಾಗುತ್ತದೆ…
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ
July 8, 2018ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ಮೈಸೂರಿಗೆ ಭೇಟಿ ನೀಡಿದ್ದಾರೆ. ತಮ್ಮ ಆಪ್ತ ರಾದ ಮಾವಿನಹಳ್ಳಿ ಸಿದ್ದೇಗೌಡರ ಪತ್ನಿ ಶ್ರೀಮತಿ ನಾಗರತ್ನ ಅವರು ನಿಧನರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಮೀಪ ವಿರುವ ಮಾವಿನಹಳ್ಳಿ ಸಿದ್ದೇಗೌಡರ ನಿವಾಸಕ್ಕೆ ತೆರಳಿ ನಾಗರತ್ನ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದರು. ಚುನಾವಣೆ ಮುಗಿದು ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಬಳಿಕ ಮೈಸೂರಿಗೆ ಆಗಮಿಸಿದ ಅವರು, ನಂತರ ರಾಮಕೃಷ್ಣನಗರದ ತಮ್ಮ ನಿವಾಸಕ್ಕೆ ತೆರಳಿ, ವಿಶ್ರಾಂತಿ ಪಡೆದರು….
‘ಲಯನ್ಸ್ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನದ ಜೊತೆ ಮುಖಂಡತ್ವದ ಗುಣ ಹೊಂದಬಹುದು’
July 8, 2018ಲಯನ್ಸ್ ಕ್ಲಾಸಿಕ್ ಪದಗ್ರಹಣದಲ್ಲಿ ಜಿಲ್ಲಾ ಉಪ ರಾಜ್ಯಪಾಲ ನಾಗರಾಜ್ ವಿ.ಬೈರಿ ಅಭಿಮತ ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಶತಮಾನೋತ್ಸವವನ್ನು ಆಚರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ 1ನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ವಲಯ-3, ಕ್ಷೇತ್ರ-9, ಜಿಲ್ಲೆ 317-ಎ 2018-19ರ ನೂತನ ಅಧ್ಯಕ್ಷ ಲಯನ್ ಎ.ಕೆ.ಗಿರಿಜೇಶ್, ಕಾರ್ಯದರ್ಶಿ ಲಯನ್ ಎ.ಎಂ.ನಾಗಣ್ಣ, ಖಜಾಂಚಿ ಲಯನ್ ಮಂಜುನಾಥ್ ಹಾಗೂ ಪದಾಧಿಕಾರಿಗಳ ಪದಗ್ರಹಣ…