ಮೈಸೂರು: ಮೈಸೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚಾಗಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಇವರು, ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017-18ನೇ ದ್ವಿಚಕ್ರ ವಾಹನಗಳ ಕಳ್ಳತನ ಕಡಿಮೆಯಾಗಿದೆ. 2013ರಲ್ಲಿ 378, 2014ರಲ್ಲಿ 334, 2015ರಲ್ಲಿ 340, 2016ರಲ್ಲಿ 414, 2017ರಲ್ಲಿ 305 ಪ್ರಕರಣಗಳು ದಾಖಲಾಗಿದ್ದರೆ, ಪ್ರಸಕ್ತ ವರ್ಷದ ಜನವರಿಯಲ್ಲಿ 17, ಫೆಬ್ರವರಿಯಲ್ಲಿ 14, ಮಾರ್ಚ್ನಲ್ಲಿ 17,…
ಕನಸೆಂಬ ಬೀಜದ ಬೆಳೆ ಫಸಲಾಗಿ ಪರಿವರ್ತನೆಯಾಗಲಿ: ವಸ್ತು ಪ್ರದರ್ಶನ ಪ್ರಾಧಿಕಾರದ ಇಓ ಶಶಿಕುಮಾರ್ ಹಾರೈಕೆ
June 27, 2018ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ ವಿದ್ಯಾಥಿಗಳೇ ನಿಮ್ಮ ಕನಸೆಂಬ ಬೀಜದ ಬೆಳೆ ಫಸಲಾಗಿ ಪರಿವರ್ತನೆಯಾಗಲಿ ಎಂದು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಕಾರ್ಯನಿರ್ವಣಾಧಿಕಾರಿ ಶಶಿಕುಮಾರ್ ಹಾರೈಸಿದರು. ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಕೊಠಡಿಯಲ್ಲಿ ಜ್ಞಾನಬುತ್ತಿ ಸಾಹಿತ್ಯ ಸಂಸ್ಕøತಿ ಸಂಸ್ಥೆ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೆಎಎಸ್ ಮತ್ತು ಐಎಎಸ್ ಪರೀಕ್ಷೆ ಬರೆಯುವ ಕನಸು ಒತ್ತು ಬಂದಿರುವವರು ಮೊದಲು ದೃಡ ಮನಸ್ಸು ಮಾಡಬೇಕು. ಎಲ್ಲದಕ್ಕೂ ಮುಖ್ಯವಾಗಿ ಸರಿಯಾದ ಬದ್ಧತೆ ಇರಬೇಕು. ಐಎಎಸ್ ಮತ್ತು ಕೆಎಎಸ್…
ಜೂ.29ರಂದು ಮೈಸೂರಲ್ಲಿ ಉದ್ಯೋಗ ಮೇಳ
June 27, 2018ಮೈಸೂರು: ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂ.29 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಮೈಸೂ ರಿನ ಸುರಂಭಿ ಪ್ಲಾನ್ಟೆಕ್, ಬಿ.ಎಸ್.ಗೌಡ ಎಂಟರ್ ಪ್ರೈಸಸ್, ಯುರೇಕಾಫೋಬ್ರ್ಸ್, ತೇಜಸ್ವಿನಿ ಎಂಟರ್ ಪ್ರೈಸಸ್, ಹಿಂದೂಜಾ ಗ್ಲೋಬಲ್ ಸಲ್ಯೂಷನ್, ರಾಜಾ ಬಯೋಟಿಕ್, ಗ್ರಾಸ್ ರೋಡ್, ಉಡ್ಲ್ಯಾಂಡ್, ರಾಣಿಮದ್ರಾಸ್ ಪ್ರೈವೇಟ್ ಲಿ., ಬೆಂಗಳೂರಿನ ರೀಟೇಲ್ ವಕ್ರ್ಸ್ ಇಂಡಿಯಾ ಇನ್ನಿತರೆ ಖಾಸಗಿ ನಿಯೋಜಕರು ಭಾಗವಹಿಸಲಿ ದ್ದಾರೆ. ಈ ಆಯ್ಕೆ ಪ್ರಕ್ರಿಯೆ…
ವಾಹನ ಚಾಲಕರ ಅನುಕೂಲಕ್ಕಾಗಿ ಹೆದ್ದಾರಿಯ ಪ್ರತಿ 25 ಕಿಮೀಗೊಂದರಂತೆ ತಂಗುದಾಣ
June 27, 2018ಶಾಸಕ ಎಸ್.ಎ. ರಾಮದಾಸ್ ಪ್ರಕಟ ಪ್ರಧಾನಿ ಮೋದಿಯವರ ಸದುದ್ದೇಶ ವಿವರಣೆ ಮೈಸೂರು: ವಾಹನ ಚಾಲಕರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿಯ ಪ್ರತಿ 25 ಕೀ.ಮಿ ಅಂತರದಲ್ಲಿ ಒಂದೊಂದು ತಂಗುದಾಣ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು. ಮೈಸೂರಿನ ವೀಣೆ ಶೇಷಣ್ಣ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘದ 7ನೇ ವಾರ್ಷಿಕ ಸರ್ವಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಷನಲ್…
ಕಾವೇರಿ ನಿರ್ವಹಣಾ ಮಂಡಳಿ ರಚನೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ
June 27, 2018ಮೈಸೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯನ್ನು ವಿರೋಧಿಸಿ ಹಾಗೂ ಮಂಡಳಿಗೆ ನೇಮಕವಾಗಿರುವ ಸದಸ್ಯರನ್ನು ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧೀ ಪುತ್ಥಳಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮೊದಲಿನಿಂದಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದೀಗ ಮಂಡಳಿ ರಚನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಡಳಿ ರಚನೆಯಿಂದ ರಾಜ್ಯ…
ಸ್ಪರ್ಧೆಗಿಳಿದವರಿಗೆ ಸ್ವಸಾಮಥ್ರ್ಯದಲ್ಲಿ ನಂಬಿಕೆ ಇರಬೇಕು
June 27, 2018ಮೈಸೂರು: ಸ್ಪರ್ಧೆಯನ್ನು ಎದುರಿಸಲು ಹೊರಟವರಿಗೆ ಮೊದಲು ಸ್ವಸಾಮಥ್ರ್ಯದ ಮೇಲೆ ನಂಬಿಕೆ ಇರಬೇಕು ಎಂದು ಮೈಸೂರು ವಿವಿಯ ಎಮರಿಟಸ್ ಪ್ರಾಧ್ಯಾಪಕ ಪ್ರೊ ಹೆಚ್.ಎಂ.ರಾಜಶೇಖರ್ ಹೇಳಿದರು. ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಐಎಎಸ್,ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ದಿನಗಳೆದಂತೆ ಸ್ಪರ್ಧಾತ್ಮಕ ಮನೋಭಾವ ಹೆಚ್ಚುತ್ತಿದ್ದು, ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಂದು ದಕ್ಷ ಸರ್ಕಾರಿ ಅಧಿಕಾರಿಗಳಾಗಿ ಆಡಳಿತ ನಡೆಸುತ್ತಿರುವುದು ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಹೀಗಾಗಿ ಪ್ರಯತ್ನ ತೀವ್ರವಾಗಬೇಕು, ಆತ್ಮವಿಶ್ವಾಸವನ್ನು ಬಲಗೊಳ್ಳಿಸಿಕೊಳ್ಳಬೇಕು. ಚಂಚಲ ಸ್ವಭಾವವೇ ವಿದ್ಯಾರ್ಥಿಗಳ…
ಕಲಿಯುವ ಆಸಕ್ತಿ ಇದ್ದರೆ ವ್ಯವಸ್ಥೆ ತಾನಾಗೆ ಲಭ್ಯವಾಗುತ್ತದೆ
June 27, 2018ಮೈಸೂರು: ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಸ್ನೇಹ ಸಿಂಚನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಚಿದಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್.ಎ.ರಾಮದಾಸ್ ಮಾತನಾಡುತ್ತಾ, ಪಾಶ್ಚಿಮಾತ್ಯ ಸಂಸ್ಕøತಿಯನ್ನು ಅಳವಡಿಸಿಕೊಳ್ಳುವ ಈ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಜ್ಞಾನದ ಜ್ಯೋತಿಯನ್ನು ಹಚ್ಚುವುದರ ಮೂಲಕ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರನ್ನು ಸ್ವಾಗತಿಸಿದ್ದು ವಿಶೇಷವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ಆಹ್ಲಾದಕರವಾಗಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ…
ಮಾದಕ ವಸ್ತುಗಳ ಸೇವನೆ ಪರಿಣಾಮದ ಬಗ್ಗೆ ಜಾಗೃತಿ
June 27, 2018ಮೈಸೂರು: ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ… ಆರೋಗ್ಯ ಕಾಪಾಡಿಕೊಳ್ಳಿ… ಎಂಬುದು ಸೇರಿದಂತೆ ಮಾದಕ ವಸ್ತುಗಳ ಮುಕ್ತ ಸಮಾಜಕ್ಕೆ ಅಗತ್ಯವಾದ ಹತ್ತು ಹಲವು ಘೋಷ ವಾಕ್ಯಗಳನ್ನು ಒಳಗೊಂಡ ಫಲಕಗಳು ವ್ಯಸನ ಮುಕ್ತರಾಗಿ ಎಂಬ ಸಂದೇಶ ರವಾನಿಸಿದವು. ದೇವರಾಜ ಪೊಲೀಸ್ ಠಾಣೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ಪದಾರ್ಥ ಸೇವನೆ ಮತ್ತು ಅಕ್ರಮ ಸಾಗಾಣೆ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಈ ರೀತಿಯ ಸಂದೇಶಗಳ ಫಲಕಗಳನ್ನಿಡಿದು ಜಾಗೃತಿ ಮೂಡಿಸಿದರು. ಅವಿಲಾ ಕಾನ್ವೆಂಟ್ ಶಾಲಾ ಆವರಣದಿಂದ…
ಜೈನ ಮಿಲನ ಜೂನ್ ತಿಂಗಳ ಮಾಸಿಕ ಸಭೆ
June 27, 2018ಮೈಸೂರು: ಜೈನ ಮಿಲನ, ಮೈಸೂರು ಮುಖ್ಯ ಶಾಖೆಯ ಜೂನ್ ತಿಂಗಳ ಮಾಸಿಕ ಸಭೆಯು ಅಧ್ಯಕ್ಷರಾದ ವೀರಾಂಗನಾ ಅಂಜನಾ ಸುದರ್ಶನ್ ಅವರ ಅಧ್ಯಕ್ಷತೆಯಲ್ಲಿ ನಿರ್ದೇಶಕ ವೀರ್ ನಿಟ್ಟೂರು ದೇವೇಂದ್ರ ಕುಮಾರ್ ನಿವಾಸದಲ್ಲಿ ನಡೆಯಿತು. ಮಹಾವೀರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ಶ್ರೀಮತಿ ಜ್ಯೋತಿ ಆದರ್ಶ್ ಸ್ವಾಗತಿಸಿದರು. ಕಾರ್ಯದರ್ಶಿ ವೀರ್ ಬಿ.ಕೆ. ದೀಪಕ್ ಕುಮಾರ್ ಜೈನ್ ಹಿಂದಿನ ಸಭೆಯ ವರದಿ ಓದಿದರು. ಎನ್.ಎಂ.ಪಿ. ಅಕಾಡೆಮಿಯ ಅಧ್ಯಕ್ಷರೂ ಆದ ಉಪ ನ್ಯಾಸಕಿ ಶ್ರೀಮತಿ ಡಾ. ಸಿ.ತೇಜೋವತಿ, ಜೈನ ಧರ್ಮದ ತತ್ವಗಳ ಬಗ್ಗೆ ತಮ್ಮ…
ಇಬ್ಬರ ಸಾಹಸಗಾಥೆಯ ಚಿತ್ರ`ವೀ..ಟು’ ಜೂ.29ಕ್ಕೆ ಬಿಡುಗಡೆ
June 27, 2018ಮೈಸೂರು: ಒಂದು ಲೋ ಬಜೆಟ್ ಸಿನಿಮಾವಾದರೂ ಪಾತ್ರಧಾರಿಗಳು, ತಾಂತ್ರಿಕ ವರ್ಗ ಸೇರಿದಂತೆ ಒಂದಿಷ್ಟು ಮಾನವ ಸಂಪನ್ಮೂಲ ಬೇಕುಬೇಕು. ಚಿತ್ರವೊಂದು ಸಿದ್ಧಗೊಳ್ಳಲು ಆಯಾಯ ಕೆಲಸ-ಕಾರ್ಯಗಳಿಗೆ ಪರಿಣಿತರು ತಂಡ ಅಗತ್ಯವಾಗಿ ಇರಲೇಬೇಕು ಎಂಬ ಸಿದ್ಧ ಸೂತ್ರಕ್ಕೆ ಸೆಡ್ಡು ಹೊಡೆದಿರುವ ಮೈಸೂರಿನ ಇಬ್ಬರು ನಟರು ಎಲ್ಲವನ್ನೂ ತಾವೇ ಮಾಡಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಕಥೆ-ಚಿತ್ರಕಥೆ, ಅಭಿನಯ, ಛಾಯಾಗ್ರಾಹಣ, ಸಂಗೀತ, ಸಂಕಲನ ಎಲ್ಲವನ್ನೂ ಇಬ್ಬರೇ ಮಾಡಿರುವ ಕನ್ನಡ ಸಿನಿಮಾ `ವೀ..ಟು’. ಜೂ.29ರಂದು ಮೈಸೂರು, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ…