ಮೈಸೂರು: ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಆದರೆ ಎಲ್ಲಾ ಸಮಯದಲ್ಲೂ ಸಾಂಪ್ರದಾಯಿಕ ಶಿಕ್ಷಣ ಎನ್ನುವುದು ಸಿಗುವುದಿಲ್ಲವಾದ್ದರಿಂದ ನಿಮ್ಮ ಭವಿಷ್ಯ ನಿರ್ಧರಿಸುವ ಪದವಿ ಹಂತದ ವಿದ್ಯಾಭ್ಯಾಸವನ್ನು ಸಂತೋಷದಿಂದ ಕಲಿಯುವಂತೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ಸಿಂಹ ಇಂದಿಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜಿನಲ್ಲಿರುವಾಗ ಜೀವನದ ಜೊತೆ ಆಟವಾಡುತ್ತಾರೆ. ಆದರೆ ಕಾಲೇಜಿನ ಅಧ್ಯಯನದ ನಂತರ ಜೀವನ ಎನ್ನುವುದು ನಮ್ಮ ಜೊತೆ…
ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟಶೈಲಿಯಲ್ಲಿ ‘ಅಪ್ಪಂದಿರ ದಿನ’ ಆಚರಣೆ
June 19, 2018ಮೈಸೂರು: ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಅಪ್ಪಂದಿರ ದಿನಾಚರಣೆಯನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಲಾಯಿತು. ಕಾಲೇಜು ಪ್ರಾಂಶುಪಾಲ ಶ್ರೀಧರ್ ಮಕ್ಕಳೆಲ್ಲರಿಗೂ `ಮಾತೃ ದೇವೋ ಭವ, ಪಿತೃ ದೇವೋ ಭವ ಆಚಾರ್ಯ ದೇವೋ ಭವ’ ಎಂದು ಶ್ಲೋಕದ ಮೂಲಕ ಮಕ್ಕಳಿಗೆ ತಂದೆ-ತಾಯಿಗೆ ಜೀವನದಲ್ಲಿರುವ ಪ್ರಾಮುಖ್ಯತೆ ಮತ್ತು ಗುರುಗಳಿಂದ ನಮಗೆ ಇರುವ ಆಧಾರಗಳು ಬಹಳ ಮುಖ್ಯ ಎಂದು ತಿಳಿಸಿಕೊಟ್ಟರು. ಶಾಲಾ ಆಡಳಿತ ಸಂಯೋಜನಾಧಿಕಾರಿ ಶ್ರೀಮತಿ ಕಾಂತಿನಾಯಕ್ ತಮ್ಮ ಜೀವನದಲ್ಲಿ ತಮ್ಮ ತಂದೆಯೊಡನೆ ಇದ್ದ ಮತ್ತು ಕಳೆದ ದಿನಗಳ ಬಗ್ಗೆ…
ರೈತರ ಸಾಲ ಮನ್ನಾಕ್ಕೆ ವಿಳಂಬ ಧೋರಣೆ ಖಂಡಿಸಿ ಮೈಸೂರಲ್ಲಿ ರೈತರ ಪ್ರತಿಭಟನೆ
June 19, 2018ಮೈಸೂರು: ರೈತರ ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಾಲ ಮನ್ನಾ ವಿಚಾರವಾಗಿ ರೈತ ಸಂಘಟನೆಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ 15 ದಿನಗಳ ಕಾಲಾವಕಾಶವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಡೆದಿದ್ದರು. ಆದರೆ ಇಂದಿಗೂ ಸಾಲ ಮನ್ನಾ ನಿರ್ಧಾರ ಕೈಗೊಳ್ಳದೇ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ…
ಸಾವಯವ ಮಾವು ಮೇಳದಲ್ಲಿ ಒಂದೇ ಮಳಿಗೆ: ನೂಕು ನುಗ್ಗಲು
June 19, 2018ಮೈಸೂರು: ಕೃಷಿ ಮಾರಾಟ ಅಧ್ಯಯನ ಕೇಂದ್ರದ ಆವರಣದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ಸಾವಯವ ಕೃಷಿ ಪದ್ಧತಿಯಡಿ ಬೆಳೆದಿರುವ ಮಾವಿನ ಹಣ್ಣಿನ ಮಾರಾಟ ಮೇಳದಲ್ಲಿ ಏಕೈಕ ಮಳಿಗೆಯಲ್ಲಿದ್ದ ಮಾವು ಖರೀದಿಸಲು ಜನ ಮುಗಿಬಿದ್ದರು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ಮಾರಾಟ ಅಧ್ಯಯನ ಸಂಸ್ಥೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಈ ಮೇಳದಲ್ಲಿ ಕೇವಲ ಒಂದೇ ಒಂದು ಮಳಿಗೆ ಮಾತ್ರ ತೆರೆಯಲಾಗಿತ್ತು….
ಮಾರ್ಗದರ್ಶಕರ ನೇಮಿಸದ ಸಂಗೀತ ವಿವಿ ವಿರುದ್ಧ ಪಿಹೆಚ್ಡಿಗೆ ದಾಖಲಾದ ವಿದ್ಯಾರ್ಥಿಗಳ ಪ್ರತಿಭಟನೆ
June 19, 2018ಮೈಸೂರು: ಕರ್ನಾಟಕ ಸಂಗೀತ ವಿವಿಯಲ್ಲಿ 2010-11ನೇ ಸಾಲಿನಲ್ಲಿ ಪಿಹೆಚ್ಡಿಗೆ ದಾಖಲು ಮಾಡಿಕೊಂಡಿದ್ದರೂ ಈವರೆಗೂ ಮಾರ್ಗದರ್ಶಕರನ್ನು ನೇಮಕ ಮಾಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿವಿಯಲ್ಲಿ ಪಿಹೆಚ್ಡಿಗೆ ದಾಖಲಾಗಿರುವ ಅಭ್ಯರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ವಿವಿಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಎಸ್ಜಿಹೆಚ್ ಸಂಗೀತ ವಿವಿಯಲ್ಲಿ 2010-11ರ ಸಾಲಿನಲ್ಲಿ ನಮ್ಮನ್ನು ಪಿಹೆಚ್ಡಿಗೆ ದಾಖಲು ಮಾಡಿಕೊಳ್ಳಲಾಗಿದೆ. ನಿಯಮದಂತೆ ದಾಖಲಾತಿಗೆ ಶುಲ್ಕ ಕಟ್ಟಿಸಿಕೊಂಡು ಪ್ರವೇಶ ಪರೀಕ್ಷೆ ಸಹ ನಡೆಸಲಾಯಿತು. ಆದರೆ ವರ್ಷಗಳು ಕಳೆಯುತ್ತಿದ್ದರೂ ಈವರೆಗೂ ಮಾರ್ಗದರ್ಶಕರನ್ನು ನೇಮಕ ಮಾಡಿಲ್ಲ ಎಂದು…
ಜೆ.ಇ.ಇ.ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಆಯ್ಕೆ
June 19, 2018ಮೈಸೂರು: ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಾದ ಶ್ರೀನಿಧಿ ಟಿ.ಎಸ್. ಮತ್ತು ಶಶಾಂಕ್ ಹೊಳ್ಳ ಮೇ 2018ರಲ್ಲಿ ನಡೆದ ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಶ್ರೀನಿಧಿ ಟಿ.ಎಸ್. 14382 ರ್ಯಾಂಕ್ ಮತ್ತು ಶಶಾಂಕ್ ಹೊಳ್ಳ 15749 ರ್ಯಾಂಕ್ ಪಡೆದಿದ್ದಾರೆ. ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕರು ಮತ್ತು ಅರ್ಜುನ್ ಅಕಾಡೆಮಿಯ ಸಿ.ಇ.ಓ ಆಗಿರುವ ಪಿ.ಕೆ.ಹರೀಶ್ ಅಭಿನಂದಿಸಿದ್ದಾರೆ.
ಕೇವಲ ಅಧಿಕಾರಿಗಳ ವರದಿ ಮಂಡನೆಗೆ ಸೀಮಿತವಾದ ತಾಪಂ ಕೆಡಿಪಿ ಸಭೆ
June 19, 2018ಮೈಸೂರು: ಮೈಸೂರಿನ ಮಿನಿ ವಿಧಾನಸೌಧದ ತಾ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ಕೇವಲ ಅನುಪಾಲನಾ ವರದಿ ಮಂಡನೆಗೆ ಮಾತ್ರ ಸೀಮಿತವಾಯಿತು. ಬಹು ದಿನಗಳ ನಂತರ ಸಭೆಯಲ್ಲಿ ತಾಲೂಕಿನ ಯಾವುದೇ ಪ್ರಮುಖ ಸಮಸ್ಯೆಗಳ ಚರ್ಚೆಗೆ ಸದಸ್ಯರು ಮೌನಕ್ಕೆ ಶರಣಾಗುವ ಮೂಲಕ ನಿರು ತ್ಸಾಹ ಪ್ರದರ್ಶಿಸಿದರು. ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಾತ್ರ ತಮ್ಮ ಇಲಾಖೆಯ ಅನುಪಾಲನಾ ವರದಿಯನ್ನು ಓದಿ ಕೈತೊಳೆದುಕೊಂಡು ಸುಮ್ಮನಾದರು. ಯಾವುದೇ…
ಕರ್ನಾಟಕ ಕೇಂದ್ರೀಯ ವಿವಿ ದಿ ಸೆಕೆಂಡ್ ಕೋರ್ಟ್ನ ಸದಸ್ಯರಾಗಿ ಪ್ರೊ. ಆರ್.ಇಂದಿರಾ ನಾಮನಿರ್ದೇಶನ
June 19, 2018ಮೈಸೂರು: ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯ ಕ್ಷರೂ, ಮೈಸೂರು ವಿಶ್ವವಿದ್ಯಾನಿಲಯದ ಹಿಂದಿನ ಪ್ರಾಧ್ಯಾ ಪಕರು ಮತ್ತು ಅಧ್ಯ ಕ್ಷರು ಹಾಗೂ ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಪ್ರೊ. ಆರ್. ಇಂದಿರಾ ಅವರನ್ನು ಮೂರು ವರ್ಷಗಳ ಅವಧಿಗೆ ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ `ದಿ ಸೆಕೆಂಡ್ ಕೋರ್ಟ್’ನ ಸದಸ್ಯರಾಗಿ ನಾಮನಿರ್ದೇ ಶನ ಮಾಡಲಾಗಿದೆ. ಕೇಂದ್ರೀಯ ವಿವಿಧ ಮೂರು ಪ್ರಾಧಿಕಾರಗಳ ಲ್ಲೊಂದಾದ `ದಿ ಕೋರ್ಟ್’ನ ಕಾರ್ಯವ್ಯಾಪ್ತಿಯಲ್ಲಿ ವಿಶ್ವವಿದ್ಯಾಲಯದ ನೀತಿಗಳು ಹಾಗೂ ಕಾರ್ಯಕ್ರಮ ಗಳನ್ನು ಕಾಲದಿಂದ ಕಾಲಕ್ಕೆ ಪರಿ ಶೀಲನೆ…
ಪಿಯು ಕಾಲೇಜುಗಳ ವ್ಯವಹಾರ, ಅಧ್ಯಯನ, ಲೆಕ್ಕಶಾಸ್ತ್ರ ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮ
June 19, 2018ಮೈಸೂರು: ಪ್ರಸ್ತಕ ಸಾಲಿನ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯವಹಾರ ಅಧ್ಯಯನ/ಲೆಕ್ಕಶಾಸ್ತ್ರ ಬೋಧಿಸುವ ವಾಣಿಜ್ಯಶಾಸ್ತ್ರ ಉಪನ್ಯಾಸಕರಿಗೆ ವಿಭಾಗ ಮಟ್ಟದ ವಿಷಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ಇಂದು ಆರಂಭಿಸಲಾಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ದಯಾನಂದ್ ವಹಿಸಿದ್ದರು. ನಂಜನಗೂಡಿನ ಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ನಾಗೇಂದ್ರ ಕುಮಾರ್, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್ವರು, ಕಾರ್ಯಾಗಾರದ…
ರೈತರಿಗೆ ಬೆಳೆ ಪರಿಹಾರ ನೀಡುವಾಗ ಮಾನವೀಯತೆ ಮೆರೆಯಿರಿ
June 19, 2018ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಲಹೆ ಮೈಸೂರು, ಮಂಡ್ಯ, ಚಾ.ನಗರ ಜಿಲ್ಲೆಯ ಮಳೆ ಬೆಳೆ ಪರಿಸ್ಥಿತಿ ಅವಲೋಕನ ಮೈಸೂರು: ರೈತರಿಗೆ ಬೆಳೆ ಪರಿಹಾರ ನೀಡುವ ವಿಷಯದಲ್ಲಿ ಅಧಿಕಾರಿಗಳು ಜಿಗುಟುತನ ತೋರಬೇಡಿ. ಬದಲಾಗಿ ಸ್ವಲ್ಪ ಉದಾರತೆ, ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಮತ್ತು ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ `ಮಳೆ-ಬೆಳೆ ಪರಿಸ್ಥಿತಿ, ಮಳೆ ಹಾನಿ ಹಾಗೂ ಕೈಗೊಂಡ…