ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ ಮತ್ತು ದೊಡ್ಡಮ್ಮ ದೇವರ 101ನೇ ವರ್ಷದ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಥವನ್ನು ಶೃಂಗರಿಸಿ ಗ್ರಾಮದ ಮಹಿಳೆ ಯರು ತಮ್ಮ ತಮ್ಮ ಮನೆಯನ್ನು ಶೃಂಗಾರ ಮಾಡಿದ್ದರು. ಮದುವೆಯಾಗಿ ಹೋಗಿದ್ದ ಹೆಣ್ಣು ಮಕ್ಕಳು ಮತ್ತು ಬಂಧು-ಬಳಗ ಊರಿಗೆ ಬಂದು ದೇವರನ್ನು ಸ್ಮರಿಸುವ ಒಂದು ವಿಶೇಷ ವಾಡಿಕೆಯಾಗಿದೆ. ಇಲ್ಲಿ ದೊಡ್ಡಮ್ಮತಾಯಿ ದೇವರು ಗ್ರಾಮದ ವೀರಶೈವ ಲಿಂಗಾಯಿತರ ಪೂಜಿತ ದೇವರಾದರೆ, ಚಿಕ್ಕಮ್ಮ ದೇವರು ದಲಿತರ ಪೂಜಿತ ದೇವರಾಗಿದ್ದು,…
ಜೀವನದಲ್ಲಿ ತೃಪ್ತಿ, ಮಾನವೀಯತೆ ಮೌಲ್ಯ ಅಳವಡಿಸಿಕೊಳ್ಳಿ :ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
June 11, 2018ಮೈಸೂರು: ತೃಪ್ತಿ ಹಾಗೂ ಮಾನವೀಯತೆ ಮೌಲ್ಯ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ ಅವರು ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು. ಮೈಸೂರಿನ ಕಲಾಮಂದಿರದಲ್ಲಿ ಭಾನು ವಾರ ಹಲವು ಸಂಘ ಸಂಸ್ಥೆಗಳ ಸಹಯೋಗ ದಲ್ಲಿ ಶಿವಮೊಗ್ಗದ ನಾಟ್ಯಶ್ರೀ ಯಕ್ಷಗಾನ ಕಲಾ ತಂಡ ಆಯೋಜಿಸಿದ್ದ `ಶ್ರೀಕೃಷ್ಣ ಕಥಾ-ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ತೃಪ್ತಿ ಗುಣವಿಲ್ಲದಿದ್ದರೆ ದುರಾಸೆಯ ರೋಗ ಅಂಟಿಕೊಂಡು ಪ್ರಾಮಾಣಿಕತೆ ಯನ್ನು ಬಲಿಪಡೆಯುತ್ತದೆ. ಮಾನವೀಯತೆ ಇಲ್ಲದಿದ್ದರೆ ಅನರ್ಥ…
ಸಾಹಿತಿಗಳು ಬರವಣಿಗೆ ಮೂಲಕ ಸಮಾಜವನ್ನು ಎಚ್ಚರಿಸಬೇಕು
June 11, 2018ಮೈಸೂರು: ಸಾಹಿತಿಗಳು, ಬರವಣಿಗೆ ಮೂಲಕ ಸಮಾಜ ವನ್ನು ಎಚ್ಚರಿಸುವ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕೆಂದು ಕವಿ ಡಾ.ಜಯಪ್ಪ ಹೊನ್ನಾಳಿ ಹೇಳಿದರು. ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ವಿಜಯಧ್ವನಿ ಪ್ರತಿಷ್ಠಾನದ ಸಾಂಸ್ಕøತಿಕ ಸಂಸ್ಥೆ ವಾರ್ಷಿಕೋತ್ಸವ, ಕಾವ್ಯ ಮಿತ್ರ ಪ್ರಕಾಶನ ಹುಬ್ಬಳ್ಳಿ ಸಂಸ್ಥೆಯ ಉದ್ಘಾಟನೆ ಹಾಗೂ ಯುವಕವಿ ನಿತೀನ್ ನೀಲಕಂಠ ಅವರ `ಕೂಲಿಂಗ್ ಗ್ಲಾಸ್ ಕನಸುಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ರಾಜಕೀಯದ ಸ್ಥಿತಿಗತಿಯನ್ನು ಗಮನಿಸಿದರೆ ಕವಿಗಳ, ಕಲಾವಿದರ ಸಾಮಾಜಿಕ ಜವಾಬ್ದಾರಿ ಮತ್ತಷ್ಟು…
ನಂಜನಗೂಡಿನಲ್ಲಿ ಕೆ.ಎಸ್.ಈಶ್ವರಪ್ಪ ಹುಟ್ಟು ಹಬ್ಬ ಆಚರಣೆ
June 11, 2018ಮೈಸೂರು: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಭಾನುವಾರ ನಂಜನಗೂಡಿನ ದತ್ತಾತ್ರೇಯ ದೇವಾಲಯದಲ್ಲಿ ವಿಶೇಷ ಹೋಮ ನಡೆಸಿ, ಶ್ರೀಕಂಠೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ 70ನೇ ಜನ್ಮ ದಿನವನ್ನು ಸಾರ್ವಜನಿಕರು ಹಾಗೂ ಬೆಂಬಲಿಗರೊಂದಿಗೆ ಆಚರಿಸಿಕೊಂಡರು. ಜನ್ಮ ದಿನದ ಹಿನ್ನೆಲೆಯಲ್ಲಿ ಶನಿವಾರವೇ ಕುಟುಂಬದ ಸದಸ್ಯರೊಂದಿಗೆ ಮೈಸೂರಿಗೆ ಆಗಮಿಸಿ ನಂಜನಗೂಡು ರಸ್ತೆಯಲ್ಲಿರುವ ವಸತಿ ಸಮುಚ್ಛಯವೊಂದರಲ್ಲಿ ವಾಸ್ತವ್ಯ ಹೂಡಿದ್ದ ಕೆ.ಎಸ್.ಈಶ್ವರಪ್ಪ ಅವರು, ಇಂದು ಬೆಳಿಗ್ಗೆ ನಂಜನಗೂಡಿನಲ್ಲಿರುವ ದತ್ತಾತ್ರೇಯ ದೇವಾಲಯದಲ್ಲಿ ಆಧ್ಯಾತ್ಮಿಕ ಚಿಂತಕ ದ್ವಾರಕಾನಾಥ್ ಅವರ ನೇತೃತ್ವದಲ್ಲಿ ಚಂಡಿಕಾ ಯಾಗ ಸೇರಿದಂತೆ ವಿವಿಧ ಹೋಮ-ಹವನ…
ಮೈಸೂರು ಗ್ರಾಹಕರ ಪರಿಷತ್ನಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ: ಮೈಸೂರಿನ ಬಹುತೇಕರು ನೀಲನಕ್ಷೆಯಂತೆ ಕಟ್ಟಡ ನಿರ್ಮಿಸುತ್ತಿಲ್ಲ
June 11, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ನಿವಾಸಿಗಳು ನೀಲನಕ್ಷೆ ಪ್ರಕಾರ ಕಟ್ಟಡ ನಿರ್ಮಾಣ ಮಾಡಿಲ್ಲ. ಇದರಿಂ ದಾಗಿ `ಸಿಆರ್’ ಪಡೆಯಲು ಸಾಕಷ್ಟು ಗೊಂದಲಕ್ಕಿಡಾಗುತ್ತಿ ದ್ದಾರೆ ಎಂದು ವಲಯ ಕಚೇರಿ-2ರ ಆರ್ಓ ಅರಸು ಕುಮಾರಿ ಹಾಗೂ ವಲಯ ಕಛೇರಿ-4ರ ಎಆರ್ಓ ಪ್ರಸಾದ್ ಮೈಗ್ರಾಪ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ನಗರ ಪಾಲಿಕೆಯ ಪ್ರಾಪರ್ಟಿ ಬೈಲಾ ಪ್ರಕಾರ ಬಹುತೇಕರು ಕಟ್ಟಡಗಳನ್ನು ನಿರ್ಮಾಣ ಮಾಡುವುದಿಲ್ಲ….
ಸಾಲ ಮನ್ನಾಗೆ ಆಗ್ರಹಿಸಿ ರೈತರ ಪ್ರತಿಭಟನೆ
June 11, 2018ಮೈಸೂರು: ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ಹಾಗೂ ರೈತರ ಸಾಲಮನ್ನಾ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮೈಸೂರಿನ ಎಪಿಎಂಸಿ ವೃತ್ತದಲ್ಲಿ ಒಂದು ಗಂಟೆ ಕಾಲ ಭಾನುವಾರ ರೈತರು ರಸ್ತೆತಡೆ ನಡೆಸಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರಸ್ತೆತಡೆ ನಡೆಸಿದ ನೂರಾರು ರೈತರು, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿಗೊಳಿಸಲು ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಹಾಗೂ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ದೇಶದ 176 ರೈತ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಕಿಸಾನ್…
ಉಕ್ಕಿ ಹರಿಯುತ್ತಿರುವ ಮ್ಯಾನ್ಹೋಲ್
June 11, 2018ಮೈಸೂರು: ಮೈಸೂರಿನ ಗಾಂಧಿ ನಗರದ ನಾಲ್ಕನೇ ಕ್ರಾಸ್ನಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಾಲಯದ ಬಳಿ ಕಳೆದ ಎರಡು ತಿಂಗಳಿಂದಲೂ ಮ್ಯಾನ್ಹೋಲ್ ಉಕ್ಕಿ ಹರಿಯುತ್ತಿದ್ದು, ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮುಖಂಡ ಎಸ್.ರಾಜು ಆರೋಪಿಸಿದ್ದಾರೆ. ಉಕ್ಕಿ ಹರಿಯುತ್ತಿರುವ ಮ್ಯಾನ್ಹೋಲ್ ಅನ್ನು ದುರಸ್ತಿ ಮಾಡಿ ಸ್ಥಳೀಯ ಜನರಿಗೆ ನೆರವಾಗುವಂತೆ ಕಳೆದ ಎರಡು ತಿಂಗಳಿಂದ ಗಾಂಧಿ ನಗರದ ಜ್ಞಾನ ಜ್ಯೋತಿ ಮಹಿಳಾ ಸ್ವಸಹಾಯ ಸಂಘ ಹಾಗೂ ಸ್ಥಳೀಯ ನಿವಾಸಿಗಳು ಹಲವು ಬಾರಿ ಒಳ ಚರಂಡಿ ಮಂಡಳಿ ಮತ್ತು ನಗರ ಪಾಲಿಕೆಗೆ…
ನನ್ನೊಂದಿಗಿರುವವರು, ನನ್ನ ನಂಬಿದವರ ಹಿತದೃಷ್ಟಿಯಿಂದ 15 ದಿನದಲ್ಲಿ ಮುಂದಿನ ರಾಜಕೀಯ ನಡೆ ನಿರ್ಧಾರ
June 10, 2018ಮೈಸೂರು: ವಿಧಾನ ಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿ, ಪರಾಜಿತರಾದ ಕೆ.ಹರೀಶ್ ಗೌಡ, ಮುಂದಿನ ರಾಜಕೀಯ ನಡೆಯ ಬಗ್ಗೆ ಹಿತೈಷಿಗಳೊಂದಿಗೆ ಚರ್ಚಿಸಿ, ಇನ್ನು 15 ದಿನಗಳಲ್ಲಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿರುವ ಶಿವಮ್ಮ ಮಹದೇವಪ್ಪ ಕಲ್ಯಾಣ ಮಂಟಪ ದಲ್ಲಿ ಶನಿವಾರ ಕೃತಜ್ಞತಾ ಸಭೆಯಲ್ಲಿ ಮಾತ ನಾಡಿದ ಅವರು, ಜನರ ಒತ್ತಾಯದಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸಿದ್ದೆ. ಕ್ಷೇತ್ರದ 22 ವಾರ್ಡ್ಗಳ ಜನರೂ ನನಗೆ ಆತ್ಮಸ್ಥೈರ್ಯ ತುಂಬಿದರು. ಎಲ್ಲಾ 230…
ಮೊದಲು ಮಂತ್ರಿ ಸ್ಥಾನ, ನಂತರ ವಿಧಾನಸೌಧ 3ನೇ ಮಹಡಿ ಕಚೇರಿ, ಸರ್ಕಾರಿ ಮನೆ ಕೇಳುತ್ತಾರೆ…
June 10, 2018ಬೆಂಗಳೂರು: ಸಚಿವ ರಾಗಿ ಸೇವೆ ಸಲ್ಲಿಸಲು ಉನ್ನತ ಶಿಕ್ಷಣ, ನೀರಾವರಿಗಿಂತ ಉತ್ತಮ ಖಾತೆಗಳು ಬೇಕೇ ಎಂದು ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ತಮ್ಮ ಪಕ್ಷದ ಸಚಿವರನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಪ್ರಶ್ನಿಸಿದ್ದಾರೆ. ಜನರಿಗೆ ಸಮೀಪವಾಗಿರುವ ಇಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿ ತಮ್ಮ ಸಾಮಥ್ರ್ಯವನ್ನು ತೋರಿಸಬೇಕು, ಇಲ್ಲವೇ ತಮಗೆ ಹಣಕಾಸು, ಇಂಧನ, ಸಾರಿಗೆ ಯಂತಹ ಇಲಾಖೆಗಳೇಬೇಕೆಂದು ಕೇಳ ಬೇಕು. ಮೊದಲು ಮಂತ್ರಿ ಸ್ಥಾನ ಕೇಳು ತ್ತಾರೆ, ಆನಂತರ ವಿಧಾನ ಸೌಧದಲ್ಲಿ ಮೂರನೇ ಮಹಡಿಯ ಕಚೇರಿ ಕೇಳು ತ್ತಾರೆ. ಆನಂತರ…
ಡೆಂಗ್ಯೂ ಬಗ್ಗೆ ಎಚ್ಚರ ವಹಿಸಲು ಡಿಹೆಚ್ಓ ಸಲಹೆ ರೋಗ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರ ಸಂಪರ್ಕಿಸಲು ಸೂಚನೆ
June 10, 2018ಮೈಸೂರು: ಡೆಂಗ್ಯೂ ಜ್ವರದ ಲಕ್ಷಣಗಳು ಕಂಡಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇದಕ್ಕೂ ಮುಖ್ಯವಾಗಿ ಡೆಂಗ್ಯೂ ರೋಗಾಣು ತಗುಲದಂತೆ ಎಚ್ಚರ ವಹಿಸುವುದೇ ಸೂಕ್ತ. ಹೀಗಾಗಿ ಈ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ತಿಳಿಸಿದರು. ಡೆಂಗ್ಯೂ ಸಂಬಂಧ ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡಲು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗಾಗಲೇ…