ಮೈಸೂರು, ಜ.18(ಎಸ್ಬಿಡಿ)- ಮೈಸೂರು ನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಮುಂದುವರೆಯಲಿದೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂ ದಿಗೆ ಮಾತನಾಡಿದ ಅವರು, 5 ವರ್ಷದ ಆಡಳಿತಕ್ಕೆ ಕಾಂಗ್ರೆಸ್-ಜೆಡಿಎಸ್ ನಡುವೆ ಒಪ್ಪಂದವಾಗಿದ್ದು, ಈಗ 2 ವರ್ಷ ಪೂರೈಸಿದೆ. ಮೈತ್ರಿ ಮುಂದುವರಿಕೆ ನಿಟ್ಟಿನಲ್ಲಿ ನನಗೆ ಪಕ್ಷ ಜವಾಬ್ದಾರಿ ನೀಡಿರುವುದರಿಂದ ಜೆಡಿಎಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಈಗಾಗಲೇ ಶಾಸಕರಾದ ಜಿ.ಟಿ.ದೇವೇಗೌಡರು ಹಾಗೂ ಸಾ.ರಾ.ಮಹೇಶ್ ಅವರೊಂದಿಗೆ ಮಾತ ನಾಡಿದ್ದೇನೆ ಎಂದು ತಿಳಿಸಿದರು. ಜನರಿಗೆ ನೀಡಿರುವ…
ಆಯುರ್ವೇದ ಸಮರ್ಥ ಬಳಕೆಯಿಂದ ರೋಗ-ರುಜಿನದಿಂದ ಮುಕ್ತ
January 19, 2021ಆಯುಷ್ ಸೇವಾ ಗ್ರಾಮ ಯೋಜನೆಯಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಮತ ಜಯಪುರ ಹೋಬಳಿಯ ಸೋಲಿಗರ ಕಾಲೋನಿಯಲ್ಲಿ ಆಯುರ್ವೇದ ಅರಿವು ಕಾರ್ಯಕ್ರಮ ಮೈಸೂರು,ಜ.18(ಪಿಎಂ)- ಆಯು ರ್ವೇದದ ಸಮರ್ಥ ಬಳಕೆಯಿಂದ ಕೊರೊನಾ ರೀತಿಯ ಸಾಂಕ್ರಾಮಿಕ ರೋಗ ಸೇರಿದಂತೆ ಅನೇಕ ರೋಗ-ರುಜಿನಗಳಿಂದ ಮುಕ್ತರಾಗಬಹುದು ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು. 2020-21ನೇ ಸಾಲಿನ ಟಿಎಸ್ಪಿ ಹಾಗೂ ಆಯುಷ್ ಸೇವಾ ಗ್ರಾಮ ಯೋಜನೆ ಯಡಿ ಆಯುಷ್ ಇಲಾಖೆ ದತ್ತು ಪಡೆದಿ ರುವ ಚಾಮುಂಡೇಶ್ವರಿ…
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಹೇಳಿಕೆ ಉದ್ಧಟತನದ ಪರಮಾವಧಿ
January 19, 2021ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿ ನುಡಿ ಸಿಎಂ ನಿಲುವಿಗೆ ಸಾಥ್ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಬೆಂಗಳೂರು, ಜ.18(ಕೆಎಂಶಿ)- ಮರಾಠಿ ಭಾಷೆ ಮತ್ತು ಸಂಸ್ಕøತಿ ಪ್ರಧಾನ ಪ್ರದೇಶ ಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವುದಾಗಿ ಆ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಉದ್ಧಟತನದ ಪ್ರದರ್ಶನ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ಠಾಕ್ರೆ ಹೇಳಿಕೆ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧದ ನಿಲುವಾಗಿದೆ, ಗಡಿ ವಿಚಾರದಲ್ಲಿ…
ಇಂದು ಮೈಸೂರು ನಗರದ ವಿವಿಧ ಬಡಾವಣೆಗಳಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಭೇಟಿ
January 19, 2021ಮೈಸೂರು, ಜ.18(ಪಿಎಂ)- ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ಮೈಸೂರು ನಗರದಲ್ಲಿ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ನಾಗರಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 9ಕ್ಕೆ ವಿಜಯನಗರ ಬಡಾವಣೆಯಲ್ಲಿ ವಾಟರ್ ಟ್ಯಾಂಕ್ಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ, ಬಡಾವಣೆ ವೀಕ್ಷಣೆ ಮಾಡುವರು. ಬೆಳಗ್ಗೆ 10ಕ್ಕೆ ವಿಜಯ ನಗರ ಬಡಾವಣೆ ನಿವಾಸಿಗಳೊಂದಿಗೆ ಸಂವಾದ ನಡೆಸುವರು. ಬೆಳಗ್ಗೆ 10.30ಕ್ಕೆ ಆರ್.ಟಿ.ನಗರ ಬಡಾವಣೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಬೆಳಗ್ಗೆ 11.30ಕ್ಕೆ ಇಲ್ಲಿನ ನಾಗರಿಕರೊಂದಿಗೆ ಸಂವಾದ…
ಹಲಗೆ ವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣ ತನಿಖೆಗೆ ತಡೆ ನೀಡಲು ಸುಪ್ರೀಂ ನಕಾರ ಕುಮಾರಸ್ವಾಮಿಗೆ ಎದುರಾಯ್ತು ಸಂಕಷ್ಟ..!
January 19, 2021ನವದೆಹಲಿ: ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ತಡೆ ನೀಡಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಹಿನ್ನಡೆಯಾಗಿದೆ. ಹಲಗೆ ವಡೇರ ಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ತನಿಖೆ ಮುಂದು ವರೆಸುವಂತೆ ಸೂಚಿಸಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಕೋರಿ ನ್ಯಾ. ಅಶೋಕ್ ಭೂಷಣ್ ನೇತೃತ್ವದ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಹಲಗೆ ವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿ ಗಳ…
ಚಾಮರಾಜ ಕ್ಷೇತ್ರದಲ್ಲಿ 96.50 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ
January 19, 2021ಮೈಸೂರು, ಜ.18(ಆರ್ಕೆಬಿ)- ಚಾಮರಾಜ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ನಗರಪಾಲಿಕೆ ಅನು ದಾನದಲ್ಲಿ ಒಟ್ಟು 96.50 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್. ನಾಗೇಂದ್ರ ಸೋಮವಾರ ಚಾಲನೆ ನೀಡಿದರು. 20ನೇ ವಾರ್ಡ್ ವ್ಯಾಪ್ತಿಯ ವಿಜಯನಗರ 1ನೇ ಹಂತದ 5ನೇ ಕ್ರಾಸ್ನಲ್ಲಿ ರೂ.19 ಲಕ್ಷ ರೂ. ವೆಚ್ಚದ ಒಳಚರಂಡಿ ಕಾಮಗಾರಿ, ವಿಜಯನಗರ 2ನೇ ಹಂತದ ಹೊಯ್ಸಳ ಸರ್ಕಲ್ ಬಳಿ ರೂ. 18.50 ಲಕ್ಷದ ಒಳಚರಂಡಿ ಕಾಮಗಾರಿ, 21ನೇ ವಾರ್ಡ್ನಲ್ಲಿ ಗಂಗೋತ್ರಿ ಬಡಾವಣೆಯ ಕುದುರೆಮಾಳದಲ್ಲಿ ಲೋಕೋಪಯೋಗಿ ಇಲಾಖೆಯ…
ಖಾಸಗೀಕರಣ ನೀತಿ ವಿರೋಧಿಸಿ ಬೆಮೆಲ್ ನೌಕರರಿಂದ ಪ್ರತಿಭಟನಾ ಸಭೆ
January 19, 2021ಮೈಸೂರು,ಜ.18(ಎಂಟಿವೈ)- ಕೇಂದ್ರ ಸರ್ಕಾರ ಬೆಮೆಲ್ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಉದ್ದೇಶಿಸಿರುವು ದನ್ನು ಖಂಡಿಸಿ ಭಾರತ್ ಅರ್ತ್ ಮೂವರ್ಸ್ ಎಂಪ್ಲಾ ಯೀಸ್(ಬೆಮೆಲ್) ಅಸೋಸಿಯೇಷನ್ ನೌಕರರು ಪ್ರತಿ ಭಟನಾ ಸಭೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಬೆಮೆಲ್ ಸಂಸ್ಥೆ ಮುಂದೆ ಸೋಮವಾರ ಬೆಮಲ್ ನೌಕ ರರ ಸಂಘದ ಪದಾಧಿಕಾರಿಗಳೊಂದಿಗೆ ನೌಕರರು ಪ್ರತಿ ಭಟನಾ ಸಭೆಯಲ್ಲಿ ಪಾಲ್ಗೊಂಡು, ಅತ್ಯುತ್ತಮ ಸ್ಥಿತಿಯಲ್ಲಿ ಸಾಗುತ್ತಿರುವ ಬೆಮೆಲ್ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸದಂತೆ ಒಕ್ಕೊ ರಲಿನಿಂದ ಆಗ್ರಹಿಸಿ, ಕೇಂದ್ರ…
ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ) ತರಬೇತಿ: ಇಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ
January 19, 2021ಮೈಸೂರು, ಜ.18(ಆರ್ಕೆಬಿ)- ಅಸಂಘಟಿತ ವಲಯ ದಲ್ಲಿರುವ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮ ಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ನೀಡುತ್ತಿರುವ ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ) ತರಬೇತಿ ಕಾರ್ಯಕ್ರಮಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಂಗಳ ವಾರ (ಜ.19) ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಸಿಎಫ್ಟಿಆರ್ಐ ಸಭಾಂ ಗಣದಲ್ಲಿ ಚಾಲನೆ ನೀಡಲಿದ್ದಾರೆ. ಆತ್ಮ ನಿರ್ಭರ್ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲ ಯವು ಪ್ರಧಾನಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಕ್ರಮಬದ್ಧ…
ಒಂದು ಜನಾಂಗಕ್ಕಷ್ಟೇ ಸೀಮಿತರಾಗದೇ ಎಲ್ಲಾ ಜನಾಂಗ, ಕ್ಷೇತ್ರಗಳ ಸಾಧಕ: ಹೆಚ್.ವಿ.ರಾಜೀವ್
January 19, 2021ಶ್ರೀ ಬಾಲಗಂಗಾಧರನಾಥ ಶ್ರೀಗಳ 76ನೇ ಜಯಂತಿ ಮಹೋತ್ಸವ ಮೈಸೂರು, ಜ.18(ಆರ್ಕೆಬಿ)- ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರು ಒಂದು ಜನಾಂಗ ಕ್ಕಷ್ಟೇ ಸೀಮಿತರಾಗದೇ ಎಲ್ಲಾ ಜನಾಂಗ ಹಾಗೂ ಕ್ಷೇತ್ರ್ರಗಳ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಸಾಧಕ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪುನಗರದ ಆದಿ ಚುಂಚನಗಿರಿ ರಸ್ತೆಯ ಶ್ರೀ ಬಾಲಗಂಗಾ ಧರನಾಥ ಸ್ವಾಮೀಜಿ ವೃತ್ತದಲ್ಲಿ ಅವರ ಭಕ್ತವೃಂದ ಸೋಮವಾರ ಆಯೋಜಿಸಿದ್ದ ಶ್ರೀಗಳ 76ನೇ ಜಯಂತಿ ಕಾರ್ಯಕ್ರಮಕ್ಕೆ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ…
ಏರ್ಕೂಲರ್ನಲ್ಲಿ ಅಡಗಿಕೊಂಡು ಮನೆ ಮಂದಿಯ ಬೆವರಿಳಿಸಿದ ನಾಗಪ್ಪ!
January 19, 2021ಮೈಸೂರು,ಜ.18(ಎಂಕೆ) ಏರ್ ಕೂಲರ್ನಿಂದ ಕೂಲ್ ಆಗುತ್ತಿದ್ದ ಮನೆ ಮಂದಿಯ ಬೆವರಿಳಿಸಿದ ನಾಗರಹಾವು…! ಹೌದು! ಮೈಸೂರಿನ ಸಿಲ್ಕ್ ಫ್ಯಾಕ್ಟರಿಯ ಕೆ.ಆರ್.ಪುರಂ ನಿವಾಸಿ ಸೂರ್ಯ ಪ್ರಕಾಶ್ ಎಂಬುವರ ಮನೆಯಲ್ಲಿದ್ದ ಏರ್ ಕೂಲರ್ ಒಳಹೊಕ್ಕಿದ ಸುಮಾರು 4 ಅಡಿ ಉದ್ದದ ನಾಗರಹಾವು ಮನೆ ಮಂದಿಯನ್ನು ಬೆಚ್ಚಿಬಿಳಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮನೆಯೊಳಗೆ ಹೋಗುತ್ತಿದ್ದ ನಾಗರಹಾವನ್ನು ನೋಡಿದ ಅಕ್ಕ-ಪಕ್ಕದ ನಿವಾಸಿ ಗಳು ಸೂರ್ಯ ಪ್ರಕಾಶ್ ಅವರಿಗೆ ತಿಳಿಸಿದ್ದಾರೆ. ಮನೆಯಲ್ಲಿದ್ದವರೆಲ್ಲಾ ಮನೆಯಿಂದ ಹೊರಬಂದ ನಂತರ ಕೆಲವರು ಮನೆಯೊಳಗೆ ಹುಡು ಕಾಡಿದರೂ ಪತ್ತೆಯಾಗಿಲ್ಲ. ಬಳಿಕ…