ತಿ.ನರಸೀಪುರ, ಮೇ 5(ಎಸ್ಕೆ)- ತಾಲೂಕಿ ನಲ್ಲಿ ಕೊರೊನಾ ಸೋಂಕು ಹೆಚ್ಚು ತ್ತಿದ್ದು, ಪುರಸಭಾ ವ್ಯಾಪ್ತಿಯ ಮುದ್ದುಬೀರನಹುಂಡಿ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿ, ಸೀಲ್ಡೌನ್ ಮಾಡಲಾಗಿದೆ. ಇತ್ತೀಚಿಗೆ ತಾಲೂಕಿನಲ್ಲಿ ಪ್ರತಿದಿನ 100 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಜನರಿಗೆ ಎಷ್ಟೇ ಜಾಗೃತಿ ಮೂಡಿಸುವ ಪ್ರಯತ್ನ ನಡೆದರೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸು ತ್ತಿದೆ. ತಾಲೂಕಿನ ಹಲವಾರು ಗ್ರಾಮ ಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗು ತ್ತಿದ್ದು. ಸೋಂಕಿತರಿಗೆ ನಿಗದಿತ ಸಮಯ…
ಹನಗೂಡು ಸುತ್ತಮುತ್ತ ಹುಲಿ ಉಪಟಳ
May 6, 2021ಹುಣಸೂರು, ಮೇ 5 (ಕೆಕೆ)-ತಾಲೂಕಿನ ಹನಗೂಡು ಸುತ್ತಮುತ್ತ ಸಂಚರಿಸುತ್ತಿರುವ ಹುಲಿಯೊಂದು ಕಳೆದ ಐದಾರು ದಿನಗಳಿಂದ ಐದು ಹಸುಗಳನ್ನು ಬಲಿ ಪಡೆದುಕೊಂಡಿದ್ದು, ಹುಲಿಯ ಸೆರೆಗೆ ಸುತ್ತ ಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಸೋಮವಾರ ರಾತ್ರಿ ನಾಗರಹೊಳೆ ಉದ್ಯಾ ನವನದ ಅಂಚಿನಲ್ಲಿ ದೊಡ್ದಹೆಜ್ಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನ ಪುರ ಗ್ರಾಮದ ಪುಟ್ಟೇಗೌಡರ ಮಗ ದೇವ ರಾಜ್ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವನ್ನು ಕೊಂದು, ಸುಮಾರು 150 ಅಡಿ ದೂರ ಎಳೆದೊಯ್ದು ಭಾಗಶಃ ತಿಂದು ಹಾಕಿದೆ….
ಭೇರ್ಯದಲ್ಲಿ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಚಾಲನೆ
May 6, 2021ಭೇರ್ಯ, ಮೇ 5 (ಮಹೇಶ್)- ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆಡಳಿತದ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ತಾಪಂ ಇಓ ರಘುನಾಥ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ನೆಗಡಿ, ಕೆಮ್ಮು, ಶೀತಕ್ಕೆ ಕೋವಿಡ್ ಪರೀಕ್ಷೆಗೆ ಹೆಚ್ಚು ಹೆಚ್ಚು ಜನರು ಬರುತ್ತಿದ್ದಾರೆ. ಸಣ್ಣ-ಪುಟ್ಟ ಪ್ರಮಾಣದ ಖಾಯಿಲೆಗಳಿಗೆ ಆರ್ಟಿಪಿಸಿಆರ್ ಟೆಸ್ಟ್ಗೆ ಒಳಾಗುತ್ತಿದ್ದಾರೆ. ಜನರಿಗೆ ವೈದ್ಯ ರಿಂದ ಕೌನ್ಸಿಲಿಂಗ್ ಅಗತ್ಯವಿದ್ದು, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ…
ಕೊರೊನಾ ಸೋಂಕಿತರ ಹೆಚ್ಚಳ ಹಿನ್ನೆಲೆ ಧನಗಹಳ್ಳಿ ಗ್ರಾಮ ಸೀಲ್ಡೌನ್
May 6, 2021ಜಯಪುರ, ಮೇ 5 (ಬಿಳಿಗಿರಿ)- ಜಯಪುರ ಹೋಬಳಿಯ ಧನಗಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ 6 ಮಂದಿ ಕೊರೊನಾ ಸೊಂಕಿತರು ಮೃತಪಟ್ಟಿದ್ದರು. ಇನ್ನು ಹಲವರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಧನಗಹಳ್ಳಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದ್ದು, ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಗ್ರಾಮದ ಜನರಲ್ಲಿ ಕೊರೊನಾ ಲಕ್ಷಣ ಗಳು ಕಾಣಿಸಿಕೊಂಡವರಿಗೆ ಆರೋಗ್ಯ ಸಿಬ್ಬಂದಿ ಆರ್ಟಿಪಿಸಿಆರ್ ಪರೀಕ್ಷೆ ಮಾಡು ತ್ತಿದ್ದಾರೆ. ಅನಗತ್ಯವಾಗಿ ಜನರು ಮನೆ ಯಿಂದ ಹೊರಬರದೆ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಮೈಸೂರು ತಾಲೂಕು ತಹಸೀಲ್ದಾರ್…
ಸರಗೂರಿನಲ್ಲಿ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರ ಸ್ಥಾಪನೆ
May 6, 2021ಸರಗೂರು, ಮೇ 5(ನಾಗೇಶ್)-ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ತಾಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ದಿನೇದಿನೆ ಕೊರೊನಾ ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಸಾವು-ನೋವು ಸಂಭವಿಸುವ ಮುನ್ನ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರ(ದೂ.08228-297240) ತೆರೆಯಲಾಗಿದೆ. ಉಸಿರಾಟ ಸಮಸ್ಯೆ ಅಥವಾ ಜ್ವರ ಸೇರಿದಂತೆ ಕೊರೊನಾ ಲಕ್ಷಣಗಳು ಕಂಡು ಬಂದು, ಆಸ್ಪತ್ರೆಗೆ ಬರಲು ಸಾಧ್ಯವಿಲ್ಲದಿದ್ದಾಗ ಸಹಾಯವಾಣಿಗೆ ಕರೆ ಮಾಡಿ…
ಪತ್ರಕರ್ತರೂ ಕೋವಿಡ್ ಫ್ರಂಟ್ಲೈನ್ ವಾರಿಯರ್ಸ್
May 6, 2021ಕೆ.ಆರ್.ನಗರ, ಮೇ 5(ಕೆಟಿಆರ್)-ಪತ್ರ ಕರ್ತರು ಕೋವಿಡ್ ಫ್ರಂಟ್ಲೈನ್ ವಾರಿಯರ್ಸ್ ಎಂದು ಘೋಷಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇದಕ್ಕೆ ಕಾರಣಕರ್ತರಾದ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ತಾಲೂಕು ಪತ್ರಕರ್ತರ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಂಘÀದ ಉಪಾಧ್ಯಕ್ಷ ವಿನಯ್ ದೊಡ್ಡಕೊಪ್ಪಲು ತಿಳಿಸಿದರು. ಪಟ್ಟಣದ ಪತ್ರಕರ್ತರ ಸಂಘದಿಂದ ಸಂಘದ ಸದಸ್ಯರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪತ್ರಕರ್ತರು ಕೂಡ ಕೋವಿಡ್ ಫ್ರಂಟ್ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿರುವುದು ಪತ್ರಕರ್ತರಿಗೆ ಕೋವಿಡ್ ಸಮಯದಲ್ಲಿ ಮಾನಸಿಕ ಸ್ಥೈರ್ಯ…
ಹುಣಸೂರಿನಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ಆರಂಭ
May 6, 2021ಹುಣಸೂರು, ಮೇ 5(ಕೆಕೆ)-ಹುಣಸೂರಿನಲ್ಲಿ ದಿನೇದಿನೆ ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದ ಬಳಲುತ್ತಿರು ವವರ ಚಿಕಿತ್ಸೆಗಾಗಿ ತಾಲೂಕಿನಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ತಾಲೂಕಿನ ಉಮ್ಮತ್ತೂರು ಗ್ರಾಮದ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಬಾಚಳ್ಳಿ ರಸ್ತೆಯಲ್ಲಿರುವ ಆದರ್ಶ ವಿದ್ಯಾ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಉಮ್ಮತ್ತೂರು(ನೆಲ್ಲೂರುಪಾಲ) ವಸತಿ ಶಾಲೆಯಲ್ಲಿ 75 ಹಾಸಿಗೆ ಹಾಗೂ ಬಿಳಿಕೆರೆ…
ದಿನದಿಂದ ದಿನಕ್ಕೆ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳ: ಮುಕ್ತಿಧಾಮ ಚಿತಾಗಾರದಲ್ಲಿ ಒತ್ತಡ
May 5, 2021ಮೈಸೂರು, ಮೇ4(ಆರ್ಕೆ)-ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದಂತೆಯೇ ಮೈಸೂರಿನಲ್ಲಿ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆ, ಕೆಆರ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಮೃತದೇಹಗಳನ್ನು ಮೈಸೂರಿನ ವಿಜಯನಗರ 4ನೇ ಹಂತದ ಯಶಸ್ವಿನಿ ಕಲ್ಯಾಣ ಮಂಟಪದ ಹಿಂಭಾಗವಿರುವ ಮುಕ್ತಿಧಾಮ ಹೈಟೆಕ್ ಚಿತಾಗಾರದಲ್ಲೇ ಗ್ಯಾಸ್ ಮತ್ತು ವಿದ್ಯುತ್ ಚಿತಾಗಾರ ಘಟಕಗಳಲ್ಲಿ ಭಸ್ಮ ಮಾಡುವ ಮೂಲಕ ಕೋವಿಡ್-19 ಮಾರ್ಗಸೂಚಿಗಳನ್ವಯ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಪ್ರತೀದಿನ 8ರಿಂದ 10 ಮೃತದೇಹಗಳು ಈವರೆಗೆ ಬರುತ್ತಿದ್ದವು. ಕಳೆದ 2 ದಿನಗಳಿಂದ 10ರಿಂದ…
ರೈಲ್ವೆಯಿಂದ ಮಾಸ್ಕ್ ಧರಿಸುವ ಬಗ್ಗೆ ಜನ ಜಾಗೃತಿ
May 5, 2021ಮೈಸೂರು, ಮೇ 4(ಆರ್ಕೆ)-ಡೆಡ್ಲಿ ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿರುವ ಇಂದಿನ ಸ್ಥಿತಿಯಲ್ಲಿ ಈ ಮಾರಣಾಂತಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದೊಂದೇ ಪರಿಹಾರವಾಗಿದೆ. ಪ್ರತಿ ಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆಗಿಂದಾಗ್ಗೆ ಸ್ಯಾನಿಟೈಸರ್ನಿಂದ ಕೈ ಸ್ವಚ್ಛ ಮಾಡಿಕೊಳ್ಳಬೇಕೆಂದು ಸರ್ಕಾರ, ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸುತ್ತಿವೆ. ಅದಕ್ಕೆ ಪೂರಕವಾಗಿ ನೈರುತ್ಯ ರೈಲ್ವೆ ವಿಭಾಗವು ಮೈಸೂರಿನ ರೈಲು ನಿಲ್ದಾಣದಲ್ಲಿ ಸ್ಥಾಪಿಸಿರುವ ಪ್ರಯಾ ಣಿಕರನ್ನು ಬಿಂಬಿಸುವ ಆರು ಪ್ರತಿಮೆಗಳ ಬಾಯಿ, ಮೂಗು ಮುಚ್ಚಿ ಕೊಳ್ಳುವಂತೆ ಮಾಸ್ಕ್ಗಳನ್ನು ಹಾಕುವ…
ಮನೆ ಬಾಗಿಲಿಗೆ ಔಷಧಿ ಪೂರೈಕೆಗೆ ಬದ್ಧ: ಮೈಸೂರು ಜಿಲ್ಲೆ ಔಷಧಿ ವ್ಯಾಪಾರಿಗಳ ಸಂಘ
May 5, 2021ಮೈಸೂರು,ಮೇ4(ಎಂಟಿವೈ)-ಕೊರೊನಾ ಸೋಂಕಿನಿಂದಾಗಿ `ಹೋಂ ಐಸೋ ಲೇಷನ್’(ಮನೆಯಲ್ಲೇ ಏಕಾಂತ ವಾಸ) ಆಗಿರುವವರಿಗೆ ಹಾಗೂ ಹಿರಿಯ ನಾಗರಿಕರು ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿ ರುವವರಿಗೆ ಮುನ್ನೆಚ್ಚರಿಕೆ ಕ್ರಮ ಗಳೊಂದಿಗೆ ಔಷಧಿ ಪೂರೈಸಲು ಮೈಸೂರು ಜಿಲ್ಲೆಯ ಔಷಧಿ ವ್ಯಾಪಾರಿಗಳು ಬದ್ಧ ಎಂದು ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘ ಹೇಳಿದೆ. ಕೊರೊನಾ 1ನೇ ಅಲೆಗಿಂತ 2ನೇ ಅಲೆ ಹೆಚ್ಚು ತೀವ್ರವಾಗಿದೆ. ದೇಶದ ಜನತೆ ಅಕ್ಷರಶಃ ತತ್ತರಿಸಿದ್ದಾರೆ. ಸೋಂಕು ಹರಡುವಿಕೆ ನಿಯಂತ್ರಿಸಲು ಸರ್ಕಾರ 14 ದಿನಗಳ ಕೋವಿಡ್…










