ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ = ನನ್ನ 10 ವರ್ಷದ ಸೇವಾವಧಿಯಲ್ಲಿ ಎಂದೂ ಇಂಥ ಆರೋಪ ಎದುರಿಸಿರಲಿಲ್ಲ: ಗದ್ಗದಿತರಾದ ಡಿಸಿ ರೋಹಿಣಿ ಸಿಂಧೂರಿ ಅವರೇ ಸರಿಯಾಗಿ ನಿರ್ವಹಣೆ ಮಾಡದೇ ನಮ್ಮ ಮೇಲೆ ಆರೋಪ ಮಾಡುವುದು ಸರಿಯೆ? ಮೈಸೂರು, ಮೇ 5(ಆರ್ಕೆ)- ಕಡೇ ಘಳಿಗೆಯಲ್ಲಿ ಅವರ ಕೋರಿಕೆ ಯಂತೆ ನಾವು ಚಾಮರಾಜ ನಗರಕ್ಕೆ 251 ಆಮ್ಲಜನಕ ಸಿಲಿಂ ಡರ್ಗಳನ್ನು ಪೂರೈಸಿದ್ದೇವೆ ಎಂದು ಮೈಸೂರು ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ಅವರು ಇಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಜಲ…
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಗುರಿಯಾಗಿಸಿ ಹಿಂಸಾಚಾರ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
May 6, 2021ಮೈಸೂರು,ಮೇ 5(ಪಿಎಂ)- ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಗುರಿಯಾಗಿಸಿ ಹಿಂಸಾಚಾರ ನಡೆಸಲಾಗು ತ್ತಿದೆ ಎಂದು ಆರೋಪಿಸಿ ಮೈಸೂರಿನ ಬಿಜೆಪಿ ಕಚೇರಿ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ಬುಧವಾರ ಸಾಂಕೇತಿಕ ಹಾಗೂ ಮೌನ ಪ್ರತಿಭಟನೆ ನಡೆಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪಶ್ಚಿಮ ಬಂಗಾಳದಲ್ಲಿ ಮೊನ್ನೆ ತಾನೆ ಅಧಿ ಕಾರಕ್ಕೆ ಬಂದ ಟಿಎಂಸಿ ಕಾರ್ಯಕರ್ತರ ಪಡೆ ಗೂಂಡಾಗಳ ರೀತಿಯಲ್ಲಿ ವರ್ತನೆ ಮಾಡುತ್ತಿದೆ. 9 ಮಂದಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿದರು….
ಚಾಮರಾಜನಗರ ದುರಂತ: ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ
May 6, 2021ಎಷ್ಟೇ ದೊಡ್ಡವರಿರಲಿ, ತಪ್ಪಿತಸ್ಥರ ಶಿಕ್ಷಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಿದೆ: ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು, ಮೇ 5(ಆರ್ಕೆಬಿ)- ಚಾಮರಾಜನಗ ರದ ಸರ್ಕಾರಿ ಆಸ್ಪತ್ರೆ ದುರಂತಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಸರ್ಕಾರ ಕ್ಕಿಲ್ಲ. ಯಾರು ಎಷ್ಟೇ ದೊಡ್ಡವÀರಿರಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಸಚಿವ ಸಂಪುಟದ ಸಭೆಯಲ್ಲೂ ನಿರ್ಧಾರವಾಗಿದೆ. ಹಾಗಾಗಿ ಸತ್ಯಾಂಶವೇನೆಂಬು ದನ್ನು ರಾಜ್ಯದ ಜನರಿಗೆ ತಿಳಿಸಬೇಕಿದೆ. ಮುಂದೆ ಇಂತಹ ಅನಾಹುತ ಎಲ್ಲೂ ಆಗಬಾರದು ಎಂಬುದು ಸರ್ಕಾರದ ದೃಷ್ಟಿ ಎಂದು ಸಹಕಾರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ…
ಕೆಆರ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆ ಇಲ್ಲ!
May 6, 2021ಆಮ್ಲಜನಕ ನೀಡಿದರೆ ಸಾಕು, ನೆಲದಲ್ಲೇ ಮಲಗಿ ಚಿಕಿತ್ಸೆ ಪಡೆಯುತ್ತೇವೆ ಎನ್ನುವ ರೋಗಿಗಳು `ದೊಡ್ಡಾಸ್ಪತ್ರೆ’ಯ ಸ್ಥಿತಿ ಸೋಂಕಿತರು, ಕುಟುಂಬದವರನ್ನು ತೀವ್ರ ಆತಂಕಕ್ಕೆ ಗುರಿ ಮಾಡಿದೆ ಮೈಸೂರು, ಮೇ 5(ಎಂಕೆ)- ಮೈಸೂ ರಿನಲ್ಲಿ ಕೊರೋನಾ ಸೋಂಕಿನ ಪ್ರಕರಣ ಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೊಂ ದೆಡೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಗಳೇ ದೊರಕದಂತಾಗಿದ್ದು, ಆಕ್ಸಿಜನ್ ನೀಡಿದರೆ ಸಾಕು ನೆಲದಲ್ಲಿಯೇ ಮಲಗಿ ಚಿಕಿತ್ಸೆ ಪಡೆಯಬೇಕಾದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬೆಂಗ ಳೂರು ಹೊರತುಪಡಿಸಿ 600ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ…
ಕೊರೊನಾ ನಿರ್ವಹಣೆಗೆ ಶಾಸಕರು, ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚನೆ
May 6, 2021ಮೈಸೂರು, ಮೇ 5(ಆರ್ಕೆ)-ಕೊರೊನಾ ಮಹಾಮಾರಿ ಸಂಕಷ್ಟ ಪರಿಸ್ಥಿತಿ ನಿಭಾಯಿಸಲು ಶಾಸಕರ ನೇತೃತ್ವದಲ್ಲಿ ವಿಧಾನಸಭಾ ಕ್ಷೇತ್ರವಾರು ಹಾಗೂ ಕಾರ್ಪೊರೇಟರ್ಗಳ ನೇತೃತ್ವದಲ್ಲಿ ವಾರ್ಡ್ ವಾರು ಟಾಸ್ಕ್ಫೋರ್ಸ್ ಸಮಿತಿ ರಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣದಲ್ಲಿ ಬೆಳಗ್ಗೆ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪಾಸಿಟಿವ್ ಇರುವವರನ್ನು ಗುರುತಿಸುವುದು, ರೋಗ ಲಕ್ಷಣಗಳಿಲ್ಲ ದಿರುವವರನ್ನು ಹೋಂ ಐಸೋಲೇಷನ್ನಲ್ಲಿರಿಸಿ ಮಾನಿಟರ್ ಮಾಡುವುದು, ರೋಗ ಲಕ್ಷಣಗಳಿರುವುದು,…
ರಾಜ್ಯದಲ್ಲಿ 50 ಸಾವಿರದ ಗಡಿ ದಾಟಿದ ಕೊರೊನಾ
May 6, 2021ಬೆಂಗಳೂರೊಂದರಲ್ಲಿಯೇ 23,106 ಪಾಸಿಟಿವ್ ಪ್ರಕರಣ; ರಾಜ್ಯದಲ್ಲಿ 346 ಸೋಂಕಿತರ ಮರ ಮೈಸೂರು ಜಿಲ್ಲೆಯಲ್ಲಿ 2790 ಮಂದಿಗೆ ಸೋಂಕು, 2,075 ಸೋಂಕಿತರು ಗುಣಮುಖ, ಸಾವು 10 ಮೈಸೂರು,ಮೇ5 (ವೈಡಿಎಸ್)-ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಜೊತೆಗೇ ಸಾವಿನ ಸಂಖ್ಯೆಯೂ ಹೆಚ್ಚುತ್ತಾ ಜನರಲ್ಲಿ ಆತಂಕ ಸೃಷ್ಟಿಸಿದೆ. ಬುಧ ವಾರ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಮೈಸೂರು ಜಿಲ್ಲೆಯಲ್ಲೂ ಸೋಂಕು ನಿಯಂ ತ್ರಣ ಮೀರಿ ಹರಡುತ್ತಿದ್ದು, ಇಂದು 2,790 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರವೊಂದರಲ್ಲೇ…
ಸೋಂಕಿತರ ಸೇವೆಗಾಗಿ ಬಿಜೆಪಿ ಮೈಸೂರು ಘಟಕದಿಂದ 2 ಆಂಬ್ಯುಲೆನ್ಸ್ ಸೇವೆ ಆರಂಭ
May 6, 2021ಮೈಸೂರು, ಮೇ 5 (ಎಸ್ಪಿಎನ್)- ಬಿಜೆಪಿ ಮೈಸೂರು ನಗರ ಘಟಕದ ವೈದ್ಯ ಕೀಯ ಪ್ರಕೋಷ್ಠದಿಂದ ನಗರದಲ್ಲಿ ಕೊರೊನಾ ಸೋಂಕಿತರಿಗೆ ತುರ್ತು ಸಂದರ್ಭ ದಲ್ಲಿ ಸಹಾಯವಾಗಲೆಂದು ಆರಂಭಿಸಿದ 2 ಉಚಿತ ಆ್ಯಂಬುಲೆನ್ಸ್ಗಳ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಚಾಲನೆ ನೀಡಿದರು. ಮೈಸೂರಿನ ಚಾಮರಾಜಪುರಂನಲ್ಲಿ ರುವ ಬಿಜೆಪಿ ಕಾರ್ಯಾಲಯದ ಮುಂಭಾಗ ಬುಧವಾರ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಸೋಂಕು ತಡೆಗಾಗಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವ ಜನಿಕರ ಸಹಕಾರದಿಂದಲೂ…
ತರಕಾರಿ ಸಗಟು ಮಾರುಕಟ್ಟೆ `ಮುಂಜಾನೆ 4ಕ್ಕೇ ಬಂದ್’
May 6, 2021ಮೈಸೂರು, ಮೇ 5(ಎಂಟಿವೈ)- ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಮೈದಾನದಲ್ಲಿ ರೈತರು ನಡೆಸುತ್ತಿರುವ ತರಕಾರಿ ಸಗಟು ಮಾರುಕಟ್ಟೆ ಯನ್ನು ಕೊರೊನಾ ಕಫ್ರ್ಯೂ ಹಿನ್ನೆಲೆಯಲ್ಲಿ ಮುಂಜಾನೆ 4 ಗಂಟೆಗೇ ಬಂದ್ ಮಾಡಿಸಲಾಗುತ್ತಿದೆ. ಕೊರೊನಾ 2ನೇ ಅಲೆ ಬಿರುಸುಗೊಂಡಿದ್ದು, ಸೋಂಕಿತರಾಗುವ ಹಾಗೂ ಸೋಂಕಿಗೆ ಬಲಿ ಯಾಗುವ ಜನರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮೇ 2ರಿಂದ ರಾಜ್ಯಾದ್ಯಂತ ಜಾತ್ರೆ, ಸಂತೆ ನಿಷೇಧಿಸಿದೆ. ಸಂತೆ ಮಾದರಿ ಜನಜಂಗಳಿಯಲ್ಲಿ ನಡೆಯುವ ದೇವರಾಜ, ಮಂಡಿ, ವಾಣಿ ವಿಲಾಸ ಹಾಗೂ ಎಂಜಿ ರಸ್ತೆಯ ಮಾರುಕಟ್ಟೆಗಳನ್ನು…
ಹುಣಸೂರು ತಾಲೂಕಿನಲ್ಲಿ 17 ಗ್ರಾಮ ಸೀಲ್ಡೌನ್
May 6, 2021ಹುಣಸೂರು, ಮೇ 5(ಕೆಕೆ)-ಹುಣ ಸೂರು ತಾಲೂಕಿನಲ್ಲಿ ಕೊರೊನಾ ದಿನೇ ದಿನೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವರೆವಿಗೆ ತಾಲೂಕಿನಲ್ಲಿ ಸುಮಾರು 17 ಗ್ರಾಮಗಳನ್ನು ಸೀಲ್ಡೌನ್ ಮಾಡ ಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಿಳಿಸಿದ್ದಾರೆ. ಕೊರೊನಾ ಪ್ರಕರಣಗಳು ಅತಿ ಹೆಚ್ಚಾಗಿರುವ ಗ್ರಾಮಗಳಾದ ಕಲ್ಲಹಳ್ಳಿ, ಗುರುಪುರ, ಕೆಂಪಮ್ಮನಹೊಸೂರು, ತಮ್ಮಡಹಳ್ಳಿ, ಹಳೇಪುರ, ವಡ್ಡಂಬಾಳು, ಕಾಮೆಗೌಡನಹಳ್ಳಿ, ಹಂದನಹಳ್ಲಿ, ಕೆರೆಯುರು, ಹರವೆಕಲ್ಲಹಳ್ಳಿ, ಮೂಳ್ಳೂರು, ವಿನೋಬಾ ಕಾಲೋನಿ, ಮನುಗನಹಳ್ಳಿ, ಗಾವಡಗೆರೆ, ಕಳ್ಳಬೆಟ್ಟ ಕಾಲೋನಿ, ರತ್ನಪುರಿ ಹಾಗೂ ರಾಯನಹಳ್ಳಿ ಗ್ರಾಮಗಳನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್ಡೌನ್ ಮಾಡಲಾಗಿದೆ ಎಂದರು….
ಸಾಲ ಮರುಪಾವತಿಗೆ ಕಾಲಾವಕಾಶ ನೀಡುವಂತೆ ಮನವಿ
May 6, 2021ಸರಗೂರು, ಮೇ 5 (ನಾಗೇಶ್)- ಕಫ್ರ್ಯೂ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂ ಲಾತಿಗಾಗಿ ಜನರನ್ನು ಪೀಡಿಸುತ್ತಿದ್ದು, ಸರಿಯಾದ ಕೂಲಿ ಇಲ್ಲದೆ ಜನರು ಸಾಲ ಮರುಪಾವತಿಸಲಾದೆ ಕಂಗಾಲಾಗಿದ್ದಾರೆ. ಆದ್ದರಿಂದ ತಾಲೂಕು ಆಡಳಿತ ಸಾಲ ಮರುಪಾವತಿಗೆ ಸಂಸ್ಥೆಗಳಿಂದ 6 ತಿಂಗಳ ಗಡುವು ಕೊಡಿಸುವಂತೆ ಕೋರಿ ಪಟ್ಟಣ ಪಂಚಾಯಿತಿ ಸದಸ್ಯರು ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪೋಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು. ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಲ್.ರಾಜಣ್ಣ ಮಾತನಾಡಿ,…










