ಮೈಸೂರು

ಇಂದು ಜಗತ್ತೇ ಬುದ್ಧರ ಕಡೆ ಮುಖ ಮಾಡುತ್ತಿದೆ; ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್
ಮೈಸೂರು

ಇಂದು ಜಗತ್ತೇ ಬುದ್ಧರ ಕಡೆ ಮುಖ ಮಾಡುತ್ತಿದೆ; ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್

May 27, 2021

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ ಬುದ್ಧರ ಚಿಂತನೆ ಐಚ್ಛಿಕ ವಿಷಯವಾಗಿ ಪ್ರಾರಂಭ ಮೈಸೂರು,ಮೇ 26(ಪಿಎಂ)- ಇಡೀ ಜಗತ್ತೇ ಇಂದು ಬುದ್ಧರ ಕಡೆ ಮುಖ ಮಾಡುತ್ತಿದ್ದು, ಮೈಸೂರು ವಿವಿಯು ಇಂತಹ ಮಹಾ ಪುರುಷನ ಅಧ್ಯಯನ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಅಲ್ಲದೆ, ಈ ವರ್ಷದ ಶೈಕ್ಷಣಿಕ ಸಾಲಿನಿಂದಲೇ ಬುದ್ಧರ ಚಿಂತನೆಯ ವಿಷಯವನ್ನು ಒಂದು ಐಚ್ಛಿಕ ವಿಷಯವಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಹಂತದಲ್ಲಿ ಪ್ರಾರಂಭಿಸ ಲಾಗುತ್ತಿದೆ ಎಂದು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದ…

ಲಸಿಕೆ ನೀಡಲು ಮೀನಾ-ಮೇಷ: ಅರಣ್ಯ ಸಿಬ್ಬಂದಿ ಆಕ್ರೋಶ
ಮೈಸೂರು

ಲಸಿಕೆ ನೀಡಲು ಮೀನಾ-ಮೇಷ: ಅರಣ್ಯ ಸಿಬ್ಬಂದಿ ಆಕ್ರೋಶ

May 27, 2021

22 ದಿನದಲ್ಲಿ 20 ಸಿಬ್ಬಂದಿ ಕೊರೊನಾಗೆ ಬಲಿ; ಲಸಿಕೆ ಆದ್ಯತೆಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಪರಿಗಣಿಸಲು ಒತ್ತಾಯ ವರ್ಕ್ ಫ್ರಂ ಹೋಮ್ ಸಾಧ್ಯವೇ? ಕೊರೊನಾ ಸಂಕಷ್ಟ ಸ್ಥಿತಿಯಲ್ಲಿ ಆಮ್ಲಜನಕಕ್ಕಾಗಿ ಪರದಾಡುವಾಗ ಅರಣ್ಯ ಸಂರಕ್ಷಣೆಯ ಮಹತ್ವ ಎಲ್ಲರಿಗೂ ಮನವರಿಕೆಯಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಹಿತಕಾಯಲು ಸರ್ಕಾರ ಹಿಂದೇಟು ಹಾಕುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಇಂಟರ್‍ನೆಟ್ ಬಳಸಿ `ವರ್ಕ್ ಫ್ರಮ್ ಹೋಮ್’ ಮಾಡಲು ಸಾಧ್ಯವೇ? ಕಳೆದ 22 ದಿನಗಳಲ್ಲಿ 28ರಿಂದ 48 ವರ್ಷದೊಳಗಿನ 20ಕ್ಕೂ ಹೆಚ್ಚು ಸಿಬ್ಬಂದಿ ಕೊರೊನಾಗೆ…

ನಿಯಮ ಉಲ್ಲಂಘನೆ: 278 ವಾಹನ ವಶ
ಮೈಸೂರು

ನಿಯಮ ಉಲ್ಲಂಘನೆ: 278 ವಾಹನ ವಶ

May 27, 2021

ಮೈಸೂರು, ಮೇ 26(ಆರ್‍ಕೆ)-ಕೋವಿಡ್-19 ಹರಡುವಿಕೆಯ 2ನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಹೊರಡಿಸಿರುವ ಲಾಕ್‍ಡೌನ್ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮೈಸೂರು ನಗರ ಪೊಲೀಸರು ಕಾರ್ಯಾ ಚರಣೆಯನ್ನು ತೀವ್ರಗೊಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸರು ಮೇ 25ರಂದು ವಿಶೇಷ ಕಾರ್ಯಾಚರಣೆ ನಡೆಸಿದರು. ಯಾವುದೇ ನಿರ್ದಿಷ್ಟ ಅಗತ್ಯ ಉದ್ದೇಶವಿಲ್ಲದೇ ಓಡಾಡುತ್ತಿದ್ದವರನ್ನು ತಡೆದು ವಿಚಾರಣೆಗೊಳಪಡಿಸಿದಾಗ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿರು ವುದು ಕಂಡುಬಂದ ಹಿನ್ನೆಲೆಯಲ್ಲಿ 265 ದ್ವಿಚಕ್ರ ವಾಹನಗಳು, 9 ಕಾರುಗಳು ಹಾಗೂ 4 ಆಟೋರಿಕ್ಷಾ ಸೇರಿದಂತೆ…

ಸೋಂಕಿತ ಗರ್ಭಿಣಿಯರಿಗಾಗಿ ಆಕ್ಸಿಜನ್‍ಯುಕ್ತ 50 ಹಾಸಿಗೆ ವಾರ್ಡ್
ಮೈಸೂರು

ಸೋಂಕಿತ ಗರ್ಭಿಣಿಯರಿಗಾಗಿ ಆಕ್ಸಿಜನ್‍ಯುಕ್ತ 50 ಹಾಸಿಗೆ ವಾರ್ಡ್

May 27, 2021

 ಮೈಸೂರಿನ ತುಳಸಿದಾಸ್ ಆಸ್ಪತ್ರೆ ಮೊದಲ ಮಹಡಿಯಲ್ಲಿ ಪ್ರತ್ಯೇಕ ವಾರ್ಡ್‍ಗಾಗಿ ಸಿದ್ಧತೆ  10 ದಿನದಲ್ಲಿ ವಾರ್ಡ್ ಸೇವೆಗೆ ಮುಕ್ತ; ಪೂರ್ವ ಸಿದ್ಧತೆ ಸಭೆ ನಡೆಸಿದ ಮುಡಾ ಅಧ್ಯಕ್ಷ ರಾಜೀವ್ ಕೊರೊನಾ ಮೊದಲ ಅಲೆ ಸಂದರ್ಭ 60 ವರ್ಷ ಮೇಲ್ಪಟ್ಟ ವರು, 2ನೇ ಅಲೆ ವೇಳೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ. ಈಗ 18 ವರ್ಷದವರಿಗೂ ಲಸಿಕೆ ನೀಡಲಾಗುತ್ತಿದೆ. ಉಳಿದವರು ಮಕ್ಕಳು. ಹಾಗಾಗಿ ಅವರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.-ಡಾ.ರಾಜೇಂದ್ರ ಕುಮಾರ್, ಚೆಲುವಾಂಬ ಆಸ್ಪತ್ರೆ…

ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ಶ್ರಮಿಕ ವರ್ಗ ಉಳಿಸಿ ಅಭಿಯಾನ
ಮೈಸೂರು

ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ಶ್ರಮಿಕ ವರ್ಗ ಉಳಿಸಿ ಅಭಿಯಾನ

May 27, 2021

ಮೈಸೂರು, ಮೇ 26(ಆರ್‍ಕೆಬಿ)- ಕೋವಿಡ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ಕಾರ್ಮಿಕ ವರ್ಗದವರಿಗೆ ತಲಾ 10 ಸಾವಿರ ರೂ. ನೀಡಬೇಕು. ಕೋವಿಡ್‍ಗೆ ಬಲಿಯಾದವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಮೈಸೂರು ಜಿಲ್ಲಾ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ಬುಧವಾರ ಮೈಸೂರಿನ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಲ್ಲಿ ಶ್ರಮಿಕ ವರ್ಗ ಉಳಿಸಿ ಅಭಿಯಾನ ನಡೆಸಲಾಯಿತು. ¸ Àಮಿತಿಯ ಅಧ್ಯಕ್ಷ ಹೆಚ್.ಕೆ.ಮಂಜುನಾಥ್, ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‍ಟಿಐ ಘಟಕದ…

ಮೈಸೂರಿಗೆ ಕೇಂದ್ರ ಸರ್ಕಾರದಿಂದ ಮತ್ತೆ 20 ಎಂಟಿ ಆಕ್ಸಿಜನ್ ಪೂರೈಕೆ
ಮೈಸೂರು

ಮೈಸೂರಿಗೆ ಕೇಂದ್ರ ಸರ್ಕಾರದಿಂದ ಮತ್ತೆ 20 ಎಂಟಿ ಆಕ್ಸಿಜನ್ ಪೂರೈಕೆ

May 27, 2021

ಮೈಸೂರು, ಮೇ 26(ಎಂಕೆ)- ಸಂಸದ ಪ್ರತಾಪ್ ಸಿಂಹ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರದಿಂದ ಮೈಸೂರಿಗೆ ಬುಧವಾರ ಮತ್ತೆ 20 ಎಂಟಿ(ಮೆಟ್ರಿಕ್ ಟನ್) ಎಲ್‍ಎಂಒ(ಲಿಕ್ವಿಡ್ ಮೆಡಿಕಲ್ ಆಕ್ಸಿಜನ್) ಆಕ್ಸಿಜನ್ ಪೂರೈಕೆ ಯಾಗಿದೆ. ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ಇಲ್ಲಿಯವರಗೆ 40 ಎಂಟಿ ಆಕ್ಸಿಜನ್ ಪೂರೈಕೆಯಾದಂತಾಗಿದೆ. ಈ ಮೊದಲು 20 ಎಂಟಿ ಆಕ್ಸಿಜನ್ ಒದಗಿಸಲಾಗಿತ್ತು. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಆಕ್ಸಿಜನ್ ಪೂರೈಕೆಯ ಜಿಲ್ಲಾ ನೋಡಲ್ ಅಧಿಕಾರಿ ಬಿ.ಮಂಜುನಾಥ್, ಮೈಸೂರಿನಲ್ಲಿ…

ಗಣಪತಿ ಸಚ್ಚಿದಾನಂದ ಶ್ರೀಗಳ ಹುಟ್ಟುಹಬ್ಬ: ಸಾರ್ವಜನಿಕರಿಗೆ ಊಟ, ಸಿಹಿ ವಿತರಣೆ
ಮೈಸೂರು

ಗಣಪತಿ ಸಚ್ಚಿದಾನಂದ ಶ್ರೀಗಳ ಹುಟ್ಟುಹಬ್ಬ: ಸಾರ್ವಜನಿಕರಿಗೆ ಊಟ, ಸಿಹಿ ವಿತರಣೆ

May 27, 2021

ಮೈಸೂರು, ಮೇ 26-ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 79ನೇ ಹುಟ್ಟುಹಬ್ಬದ ಅಂಗವಾಗಿ ವಾರ್ಡ್ ನಂಬರ್ 55ರ ಮೇದರಕೇರಿಯಲ್ಲಿ ದತ್ತ ಪೀಠದ ವತಿ ಯಿಂದ ಊಟ, ಸಿಹಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್ ಅವರು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರು ಮೈಸೂರಿಗೆ ಒಂದು ಶಕ್ತಿಯಾಗಿ ದ್ದಾರೆ ಆಶ್ರಮದ ವತಿಯಿಂದ ಲಾಕ್‍ಡೌನ್ ಆರಂಭವಾದ ದಿನದಿಂದ ನಿತ್ಯ 3 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗು ತ್ತಿದೆ. ಅಲ್ಲದೆ ಸ್ವಾಮೀಜಿಯವರು ಬಡವರ ಬಗ್ಗೆ…

ಆಂಬುಲೆನ್ಸ್ ಸೇವೆ ಇನ್ನಷ್ಟು ಚುರುಕಾಗಲಿ; ಡಿಸಿ ಸೂಚನೆ
ಮೈಸೂರು

ಆಂಬುಲೆನ್ಸ್ ಸೇವೆ ಇನ್ನಷ್ಟು ಚುರುಕಾಗಲಿ; ಡಿಸಿ ಸೂಚನೆ

May 27, 2021

ಮೈಸೂರು, ಮೇ 26(ಎಂಕೆ)- ಜಿಲ್ಲಾದ್ಯಂತ ಆಂಬುಲೆನ್ಸ್ ಸೇವೆ ಮತ್ತಷ್ಟು ಚುರುಕುಗೊಳಿಸಬೇಕೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಅವರು, ಆಂಬುಲೆನ್ಸ್ ಸೇವೆ ಬಗ್ಗೆ ದೂರು ಬರುತ್ತಿವೆ. ಈ ಸೇವೆಯನ್ನು ಮತ್ತಷ್ಟು ಬಲಪಡಿಸಲು ಆಂಬುಲೆನ್ಸ್ ವಿಭಾಗಕ್ಕೆ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಿಸ ಲಾಗಿದೆ. ಆಂಬುಲೆನ್ಸ್ ಸೇವೆಯನ್ನು ಪಡೆ ಯಲು ಜಿಲ್ಲಾ ಕೋವಿಡ್ ವಾರ್ ರೂಂ ಸಹಾಯವಾಣಿ 0821-2424111ಗೆ ಕರೆ ಮಾಡಿ, ಯಾವುದೇ ಸಮಯದಲ್ಲಾದರೂ ಸೇವೆ ಪಡೆಯ ಬಹುದು ಎಂದರು. ಜಿಲ್ಲಾದ್ಯಂತ…

ಮೇ 28 ರವರೆಗೆ 18 ರಿಂದ 44 ವರ್ಷ ವಯೋಮಾನದ ವಿಕಲಚೇತನರು, ಪೆÇೀಷಕರಿಗೆ ಲಸಿಕೆ
ಮೈಸೂರು

ಮೇ 28 ರವರೆಗೆ 18 ರಿಂದ 44 ವರ್ಷ ವಯೋಮಾನದ ವಿಕಲಚೇತನರು, ಪೆÇೀಷಕರಿಗೆ ಲಸಿಕೆ

May 27, 2021

ಮೈಸೂರು, ಮೇ 26- ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ಸರ್ಕಾರವು ಈಗಾಗಲೇ 18 ವರ್ಷ ವಯಸ್ಸಿಗೆ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿದ್ದು, ಮೇ 25 ರಿಂದ 28ರವರೆಗೆ 18 ರಿಂದ 44 ವರ್ಷ ವಯೋಮಾನದ ವಿಕಲಚೇತನರಿಗೆ ಹಾಗೂ ಪೆÇೀಷಕರಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರಿನ ತಿಲಕ ನಗರದಲ್ಲಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ18 ರಿಂದ 44 ವರ್ಷ ವಯೋಮಾನದ ವಿಕಲಚೇತನ ರಿಗೆ ಹಾಗೂ ಪೆÇೀಷಕರಿಗೆ ಮತ್ತು…

ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್, ರೆಮ್ಡಿಸಿವಿರ್ ನಿರ್ವಹಣೆಗೆ  ಸಂಸದ ಪ್ರತಾಪ ಸಿಂಹ ನೇತೃತ್ವದ ಟಾಸ್ಕ್‍ಫೋರ್ಸ್ ರಚನೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್, ರೆಮ್ಡಿಸಿವಿರ್ ನಿರ್ವಹಣೆಗೆ ಸಂಸದ ಪ್ರತಾಪ ಸಿಂಹ ನೇತೃತ್ವದ ಟಾಸ್ಕ್‍ಫೋರ್ಸ್ ರಚನೆ

May 6, 2021

ಮೈಸೂರು,ಮೇ5(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣ ಮತ್ತು ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಟಾಸ್ಕ್‍ಫೋರ್ಸ್ ಅಧ್ಯಕ್ಷರಾಗಿ ಸಂಸದ ಪ್ರತಾಪ್‍ಸಿಂಹ ಅವರನ್ನು ನಿಯೋಜನೆ ಮಾಡಲಾಗಿದ್ದು, ಆಕ್ಸಿಜನ್, ರೆಮ್ಡಿಸಿವಿರ್‍ನ ಸಂಪೂರ್ಣ ಉಸ್ತುವಾರಿ ವಹಿಸಲಾಗಿದೆ. ಇವರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಎಷ್ಟೆಷ್ಟು ಆಕ್ಸಿಜನ್, ರೆಮ್ಡಿಸಿವಿರ್ ಬೇಕೆಂದು ಮಾಹಿತಿ ಪಡೆದು…

1 234 235 236 237 238 1,611
Translate »