ಬೈಲಕುಪ್ಪೆ, ಮೇ 4 (ರಾಜೇಶ್)-ಕೋವಿಡ್ ಮಹಾಮಾರಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಟಿ ರಂಗಸ್ವಾಮಿ ತಿಳಿಸಿದರು. ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಹುಣಸವಾಡಿ ಗ್ರಾಮ ಪಂಚಾಯಿತಿ ವತಿಯಿಂದ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿ ಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಆದೇಶದಂತೆ ರಾಜ್ಯ ವ್ಯಾಪಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದ್ದು,…
ಮೈಕ್ರೋ ಫೈನಾನ್ಸ್ ಸಾಲ ಪಾವತಿಗೆ ಕಾಲಾವಕಾಶ ಕೋರಿ ಮನವಿ
May 5, 2021ತಿ.ನರಸೀಪುರ, ಮೇ 4(ಎಸ್ಕೆ)- ಮೈಕ್ರೋ ಫೈನಾನ್ಸ್ಗಳಲ್ಲಿ ಸಾರ್ವಜನಿಕರು, ರೈತರು ಪಡೆದಿರುವ ಸಾಲ ಪಾವತಿಗೆ ಕಾಲಾ ವಕಾಶ ನೀಡುವಂತೆ ಹಾಗೂ ಕಾನೂನು ಬಾಹಿರವಾಗಿ ಕೋವಿಡ್ ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಗಾರ್ಮೆಂಟ್ಸ್ ಬಂದ್ ಮಾಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ತಹ ಶೀಲ್ದಾರ್ ಡಿ.ನಾಗೇಶ್ಗೆ ಮನವಿ ಪತ್ರ ಸಲ್ಲಿಸಿದ ರೈತ ಮುಖಂಡರು ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿದರು. ರೈತ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್…
ಶಾಸಕ ಹೆಚ್.ಪಿ. ಮಂಜುನಾಥ್ ವಿರುದ್ಧ ಯೋಗಾನಂದಕುಮಾರ್ ಆಕ್ರೋಶ
May 5, 2021ಹುಣಸೂರು, ಮೇ 4(ಕೆಕೆ)- ಕೊರೊನಾ ವೈರಸ್ 2ನೇ ಅಲೆಯು ವಿಶ್ವವ್ಯಾಪಿ ತತ್ತರಗೊಳಿಸಿರುವ ಈ ಕೆಟ್ಟ ಪರಿಸ್ಥಿತಿಯಲ್ಲಿ ಯಾವುದೇ ವ್ಯಕ್ತಿಗಳು ಸಾರ್ವಜನಿಕರನ್ನು ದಿಕ್ಕು ತಪ್ಪಿಸಬಾರದು ಹಾಗೂ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದೆ ಸರ್ಕಾರವು ಆದೇಶಿಸಿರುವ ಆರೋಗ್ಯ ತುರ್ತು ಪರಿಸ್ಥಿತಿಯ ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸು ವಂತೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾ ನಂದಕುಮಾರ್ ಮನವಿ ಮಾಡಿದ್ದಾರೆ. ನಗರದ ಪತ್ರಿಕಾ ಕಚೇರಿಯಲ್ಲಿ ಮಾತ ನಾಡಿದ ಅವರು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಮಂಜುನಾಥ್ ಅವರು ಸೋಷಿಯಲ್…
ಬಿಪಿಎಲ್ ಕಾರ್ಡ್ದಾರರಿಗೆ ತಲಾ 10 ಕೆಜಿ ಅಕ್ಕಿ ನೀಡುವಂತೆ ಕಾಂಗ್ರೆಸ್ ಪೋಸ್ಟ್ ಕಾರ್ಡ್ ಚಳುವಳಿ
May 4, 2021ಮೈಸೂರು,ಮೇ3(ಎಂಟಿವೈ)- ಕೊರೊನಾ ಕಫ್ರ್ಯೂನಿಂದಾಗಿ ಕೂಲಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಅಕ್ಕಿ ಪ್ರಮಾಣ ಕಡಿತಗೊಳಿಸದಂತೆ ಹಾಗೂ ತಲಾ 10ಕೆಜಿ ಅಕ್ಕಿ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟ್ ಕಾರ್ಡ್ ಚಳುವಳಿ ನಡೆಸಿದರು. ಮೈಸೂರಿನ ಕಾಂಗ್ರೆಸ್ ಕಚೇರಿ ಮುಂಭಾ ಗದಲ್ಲಿ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ವಿಳಾಸಕ್ಕೆ ಪೋಸ್ಟ್ ಕಾರ್ಡ್ ಕಳುಹಿಸುವ ಮೂಲಕ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ನೀಡಲೇಬೇಕೆಂದು ಆಗ್ರಹಿಸಿದರು. ಇದೇ ವೇಳೆ…
ಚಾ.ನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತರಾದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
May 4, 2021ಮೈಸೂರು,ಮೇ3-ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತ ರೋಗಿಗಳು ಆಕ್ಸಿಜನ್ ಕೊರತೆ ಯಿಂದ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಸೂರು ಜಿಲ್ಲಾಧಿಕಾರಿಗಳಿಂದ ಆಕ್ಸಿಜನ್ ಚಾಮರಾಜ ನಗರ ಜಿಲ್ಲೆಗೆ ಸರಬರಾಜಾಗುತ್ತಿತ್ತು. ನಿನ್ನೆ ಬೆಳಗಿನ ಜಾವ ಆಕ್ಸಿಜನ್ ಕೊಂಡೊಯ್ಯುವ ವಾಹನ ಮೈಸೂರಿ ನಲ್ಲಿ ಕಾಯುತ್ತಿತ್ತು. ಆದರೆ ಮೈಸೂರು ಜಿಲ್ಲಾಧಿಕಾರಿಗಳು ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಮಾಡಲು ಸಾಧ್ಯವಿಲ್ಲವೆಂದು ಆ ಘಳಿಗೆಯಲ್ಲಿ ತಿಳಿಸಿದ್ದಾರೆ….
ಮೈಸೂರಿನ ಪಿಕೆಟಿಬಿ ಆಸ್ಪತ್ರೆಗೆ 17 ಲಕ್ಷ ರೂ. ಮೌಲ್ಯದ ಔಷಧಿ ಕೊಡುಗೆ
May 4, 2021ಮೈಸೂರು,ಮೇ3(ಆರ್ಕೆ)-ಮೈಸೂರಿನ ಹೆಸರಾಂತ ಸೈಕಲ್ ಪ್ಯೂರ್ ಅಗರ್ಬತ್ತಿ(ರಂಗರಾವ್ ಅಂಡ್ ಸನ್ಸ್) ಮತ್ತು ರಘುಲಾಲ್ ಅಂಡ್ ಕಂಪನಿಯಿಂದ ಪಿಕೆಟಿಬಿ ಮತ್ತು ಎದೆ ರೋಗಗಳ ಆಸ್ಪತ್ರೆಗೆ 17 ಲಕ್ಷ ರೂ. ಮೌಲ್ಯದ ಔಷಧಿಗಳನ್ನು ಕೊಡುಗೆಯಾಗಿ ನೀಡಲಾಗಿದೆ. 100 ವರ್ಷಗಳ ಇತಿಹಾಸವಿರುವ ಪಿಕೆಟಿಬಿ ಆಸ್ಪತ್ರೆಯು ಮೈಸೂರು ನಗರ ಹಾಗೂ ಜಿಲ್ಲೆಯಲ್ಲದೇ ಸುತ್ತಲಿನ ಚಾಮರಾಜನಗರ, ಕೊಡಗು, ಮಂಡ್ಯ, ಹಾಸನವಷ್ಟೇ ಅಲ್ಲದೆ, ರಾಜ್ಯದ ಇನ್ನಿತರ ಜಿಲ್ಲೆಗಳ ಟಿಬಿ ರೋಗಿಗಳಿಗೆ ಚಿಕಿತ್ಸೆ, ಆರೈಕೆ ಮಾಡುತ್ತಾ ಬಂದಿರುವುದರಿಂದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹೆಚ್.ಎಂ. ವಿರೂಪಾಕ್ಷ ಅವರ ಕೋರಿಕೆ ಮೇರೆಗೆ…
ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಹೆಚ್ಚುವರಿ ರುದ್ರಭೂಮಿ
May 4, 2021ಎಂ.ಟಿ.ಯೋಗೇಶ್ಕುಮಾರ್ ಮೈಸೂರು, ಮೇ.3- ಕೊರೊನಾ ಎರಡನೇ ಅಲೆಯ ತೀವ್ರತೆಯಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲಾಡಳಿತ ಮೂರು ಧರ್ಮಕ್ಕೂ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ 9 ರುದ್ರಭೂಮಿಗಳಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದೆ. ಕೊರೊನಾ ಮೊದಲ ಅಲೆಯಲ್ಲಿ ಸತ್ತÀವರ ಅಂತ್ಯಕ್ರಿಯೆ ಮೂರು ರುದ್ರಭೂಮಿಗಳಲ್ಲಿ ನಡೆಯು ತ್ತಿತ್ತು. ಆದರೆ ಎರಡನೇ ಅಲೆಯ ಭೀಕ ರತೆಗೆ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದÀ ಅಂತ್ಯಕ್ರಿಯೆಗೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉದ್ಭವಿ ಸದಂತೆ ಹೆಚ್ಚುವರಿ ರುದ್ರಭೂಮಿ ಕಲ್ಪಿಸಲು ಪ್ರತ್ಯೇಕ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ. ಹಿಂದು,…
ಸಂಗೀತ ವಿದ್ವಾಂಸರನ್ನೂ ಬಿಡದ ಕ್ರೂರಿ ಕೊರೊನಾ
May 4, 2021ಮೈಸೂರು, ಮೇ 3(ಎಂಕೆ)- ಕರ್ನಾ ಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರ ಕಂಠಸಿರಿಯನ್ನೇ ಕಿತ್ತುಕೊಂಡ ಹೆಮ್ಮಾರಿ ಕೊರೊನಾ, ಸಾವಿರಾರು ವಿದ್ಯಾರ್ಥಿಗಳಿಗೆ ಗುರುವಿಲ್ಲದಂತೆ ಮಾಡಿದೆ…! ಕಳೆದ 50 ವರ್ಷಗಳಿಂದ ಸಂಗೀತ ಸಂಸ್ಥೆಯೊಂದನ್ನು ಕಟ್ಟಿ, ಮನೆಯನ್ನೇ ಸಂಗೀತ ಶಾಲೆಯನ್ನಾಗಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ದಾಸೋಹ ನೀಡಿದ್ದ ಸಂಗೀತ ವಿದ್ವಾನ್ ಅಂದಗ ಶ್ರೀನಿ ವಾಸ್(73) ಕೊರೊನಾ ಸೋಂಕಿಗೆ ಏ.23 ರಂದು ಬಲಿಯಾಗಿದ್ದು, ದೇಶ-ವಿದೇಶಗಳಲ್ಲಿರುವ ಅವರ ಅಪಾರ ಶಿಷ್ಯವೃಂದ ಹಾಗೂ ಕುಟುಂಬಸ್ಥರಿಗೆ ಅತೀವ ನೋವುಂಟು ಮಾಡಿದೆ. ಮೈಸೂರು ಹೆಬ್ಬಾಳಿನ ನಿವಾಸಿಯಾಗಿದ್ದ ಅವರು, ಪತ್ನಿ ವಿದುಷಿ…
ಕೊರೊನಾ ಕಷ್ಟದಲ್ಲೂ ನೈರುತ್ಯ ರೈಲ್ವೆ ಸರಕು ಸಾಗಣೆ ಆದಾಯ ಶೇ.903 ಹೆಚ್ಚಳ
May 4, 2021ಮೈಸೂರು, ಮೇ 3(ಎಂಕೆ)- ಕೊರೊನಾ ಸಂಕಷ್ಟದಲ್ಲಿಯೂ ಮೈಸೂರು ನೈರುತ್ಯ ರೈಲ್ವೆ ವಿಭಾಗ ದಾಖಲೆ ಪ್ರಮಾಣದಲ್ಲಿ ಸರಕು ಸಾಗಣೆ ಮಾಡಿ ಆದಾಯದಲ್ಲಿ ಶೇ.903 ರಷ್ಟು ಹೆಚ್ಚಳ ಕಂಡಿದೆ. ಮೈಸೂರು ನೈರುತ್ಯ ರೈಲ್ವೆ ವಿಭಾಗವೂ ದೇಶದ ವಿವಿಧ ಭಾಗಗಳಿಗೆ ಅಗತ್ಯ ಸರಕು ಸಾಗಣೆ ಮಾಡುತ್ತಿದೆ. 2020ರ ಏಪ್ರಿಲ್ನಲ್ಲಿ 0.094 ಮಿಲಿಯನ್ ಟನ್ ಸರಕು ಸಾಗಿಸಿದ್ದರೆ, ಈ ವರ್ಷದ ಏಪ್ರಿಲ್ನಲ್ಲಿ 0.703 ಮಿಲಿಯನ್ ಟನ್ ಸಾಗಣೆ ಮಾಡಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಸರಕು ಸಾಗಣೆಯಿಂದ 5.90 ಕೋಟಿ ರೂ. ಆದಾಯವಾಗಿದ್ದರೆ,…
ಮಾರುಕಟ್ಟೆಗಳ ಬಂದ್: ರಸ್ತೆಬದಿ ತರಕಾರಿ ಮಾರಾಟ
May 4, 2021ಮೈಸೂರು, ಮೇ 3(ಎಂಟಿವೈ)- ಜನಜಂಗುಳಿ ಹೆಚ್ಚಾಗಿ ಕೊರೊನಾ ಸೋಂಕು ಹರಡುವಿಕೆ ಆತಂಕದಿಂದ ಸರ್ಕಾರದ ಆದೇಶದ ಮೇರೆಗೆ ಮೈಸೂರಿನ ದೇವರಾಜ, ವಾಣಿವಿಲಾಸ, ಮಂಡಿ ಹಾಗೂ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿ ಗಳು ರಸ್ತೆ ಬದಿಯಲ್ಲಿ ವಹಿವಾಟು ನಡೆಸಿದರು. ದೇವರಾಜ, ಮಂಡಿ, ವಾಣಿವಿಲಾಸ ಹಾಗೂ ಎಂ.ಜಿ.ರಸ್ತೆಯ ಮಾರುಕಟ್ಟೆಯನ್ನು ಭಾನುವಾರದಿಂದಲೇ ಮುಚ್ಚಿಸಲಾಗಿದ್ದರಿಂದ, ಅಲ್ಲಿನ ವ್ಯಾಪಾರಿಗಳಿಗೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ನಾಲ್ಕು ಮಾರುಕಟ್ಟೆಗಳಲ್ಲೂ ಇಂದು ಮುಂಜಾನೆಯಿಂದ ವ್ಯಾಪಾರಿಗಳು ವ್ಯಾಪಾರ…










