ಮೈಸೂರು,ಅ.23-ಕೊರೊನಾ ಹಿನ್ನೆಲೆ ಯಲ್ಲಿ ಎರಡು ವರ್ಷದ ನಂತರ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿವರ್ಷ ದೀಪಾವಳಿ ಹಬ್ಬಕ್ಕಾಗಿ ಮಣ್ಣಿನ ದೀಪ ಮಾಡುತ್ತಿದ್ದ ಕುಂಬಾರರ ಕುಲಕಸು ಬಿಗೆ ಹೊರ ರಾಜ್ಯಗಳ ಮೌಲ್ಡ್ ದೀಪಗಳ ಪೈಪೋಟಿ ಭಾರೀ ಹೊಡೆತ ನೀಡಿದೆ. ಕಳೆದ ಎರಡು ದಶಕಗಳಿಂದ ಮೈಸೂರು, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ದೀಪಾ ವಳಿ ಹಬ್ಬಕ್ಕಾಗಿ ಮಣ್ಣಿನ ದೀಪ ತಯಾರಿಸಿ ಸರಬರಾಜು ಮಾಡುತ್ತಿದ್ದ ಮೈಸೂರು ತಾಲೂಕಿನ ಜಯಪುರ ಹೋಬಳಿ ದೂರ ಗ್ರಾಮದ ಕುಂಬಾರ ಕುಶಲ ಕೈಗಾರಿಕಾ ಸಂಘದ…
ಭಣಗುಡುತ್ತಿರುವ ಮಾರುಕಟ್ಟೆಗಳು!
October 24, 2022ಮೈಸೂರು, ಅ.23(ಜಿಎ)-ವ್ಯಾಪಾರ ಪರವಾಗಿಲ್ಲ. ಈ ಬಾರಿಯ ದೀಪಾವಳಿ ಹಬ್ಬಕ್ಕೆ ಹೂ, ಹಣ್ಣು ಖರೀದಿ ಮಾಡುವವರ ಸಂಖ್ಯೆ ಕಡಿಮೆ ಇದೆ ಎನ್ನುತ್ತಿರುವ ಮೈಸೂರು ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳು ನಾಳೆ ಹೆಚ್ಚಿನ ಜನರು ಬರುವ ನಿರೀಕ್ಷೆಯಲ್ಲಿದ್ದಾರೆ. ದೀಪಾವಳಿ ಹಬ್ಬಕ್ಕೆ ಪ್ರತಿ ವರ್ಷ ಹೂ, ಹಣ್ಣು ಖರೀದಿಗಾಗಿ ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ ಮತ್ತು ಮಂಡಿ ಮಾರುಕಟ್ಟೆಗೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದ ಜನತೆ ಈ ಬಾರಿ ಯಾಕೋ ಹೇಳಿಕೊಳ್ಳುವಷ್ಟು ಜನತೆ ಖರೀದಿಗೆ ಮುಂದಾಗಿಲ್ಲ. ಸೋಮವಾರ ಮಾರುಕಟ್ಟೆಗಳಿಗೆ ಬರುವ ಎಂಬ ವಿಶ್ವಾಸದಲ್ಲಿದ್ದಾರೆ….
ಸಿಎಸ್ಐಆರ್-ಸಿಎಫ್ಟಿಆರ್ಐ ಸಂಸ್ಥಾಪನಾ ದಿನಾಚರಣೆ ಭವಿಷ್ಯದಲ್ಲಿ ಸುಸ್ಥಿರ ಆಹಾರ ಭದ್ರತೆ ಸಾಧಿಸುವುದು ಅತ್ಯಗತ್ಯ
October 22, 2022ಮೈಸೂರು, ಅ.21(ಆರ್ಕೆಬಿ)- ದೇಶದ ಸಮಸ್ತ ಜನತೆಗೆ ಸುಸ್ಥಿರ ಆಹಾರ ಭದ್ರತೆಯನ್ನು ಸಾಧಿಸು ವುದು ಅತ್ಯಗತ್ಯ, sಆಹಾರದ ಮುಂದಿನ ಸವಾಲು ಗಳನ್ನು ಎದುರಿಸಿ, ಆಹಾರ ಪೂರೈಸಲು ಸಿಎಸ್ಐಆರ್ – ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋ ಧನಾಲಯ (ಸಿಎಫ್ಟಿಆರ್ಐ) ಸಜ್ಜಾಗಬೇಕು ಎಂದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಪದ್ಮಭೂಷಣ ಡಾ.ಟಿ.ರಾಮಸ್ವಾಮಿ ಇಂದಿಲ್ಲಿ ತಿಳಿಸಿದರು. ಮೈಸೂರಿನ ಸಿಎಸ್ಐಆರ್-ಸಿಎಫ್ಟಿಆರ್ಐ ಐಎಫ್ಟಿಟಿಸಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿ ಸಿದ್ದ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ…
ಕೆ.ಆರ್.ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಶಾಸಕ ರಾಮದಾಸ್ ಚಾಲನೆ
October 22, 2022ಮೈಸೂರು, ಅ.21(ಎಸ್ಪಿಎನ್)-ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಹೈಟೆಕ್ ಬಸ್ ನಿಲ್ದಾಣ ಕಾಮ ಗಾರಿ ಸೇರಿದಂತೆ ಒಟ್ಟು 12 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಸ್.ಎ. ರಾಮದಾಸ್ ಚಾಲನೆ ನೀಡಿದರು. ಮೈಸೂರು ನಗರ ಪಾಲಿಕೆ ವಾರ್ಡ್ ವಾರ್ಡ್ ನಂ- 47, 57, 59 ಮತ್ತು 64 ರಲ್ಲಿ ಒಟ್ಟು ರೂ. 12 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಅಪೆÇೀಲೋ ಆಸ್ಪತ್ರೆಯಿಂದ ಆದಿ ಚುಂಚನಗಿರಿ ಮುಖ್ಯರಸ್ತೆ ಮಾರ್ಗವಾಗಿ ಜಯಮ್ಮ ಗೋವಿಂದೇಗೌಡ…
ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡದ ರಸಾಯನಶಾಸ್ತ್ರ ಲ್ಯಾಬ್ ಭಾಗ ಕುಸಿತ
October 22, 2022ಮೈಸೂರು,ಅ.21(ಎಂಟಿವೈ)-ಕುಸಿದ ಮೈಸೂರಿನ ಪಾರಂಪ ರಿಕ ಕಟ್ಟಡಗಳ ಸಾಲಿಗೆ ಶತಮಾನದ ಇತಿಹಾಸವಿರುವ ಮಹಾ ರಾಣಿ ವಿಜ್ಞಾನ ಕಾಲೇಜು ಕಟ್ಟಡವೂ ಸೇರ್ಪಡೆಗೊಂಡಿದೆ. ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡದ ಒಂದು ಭಾಗ ಈಗಾಗಲೇ ಶಿಥಿಲಾವಸ್ಥೆ ತಲುಪಿದ್ದು, ನಿರಂತರ ಮಳೆಯಿಂದ ಕಾಲೇಜಿನ ಪ್ರಯೋಗಾಲಯ ಇರುವ ಕೊಠಡಿ ಭಾಗ(ಜೆಎಲ್ಬಿ ರಸ್ತೆ-ಡಿಸಿ ಕಚೇರಿ ರಸ್ತೆ ) ಶುಕ್ರವಾರ ಬೆಳಗ್ಗೆ ಸುಮಾರು 10.42ರ ಸಮಯದಲ್ಲಿ ಕುಸಿದಿದೆ. ತರಗತಿ ಆರಂಭವಾಗಬೇಕಿದ್ದ ಕೆಲವೇ ನಿಮಿಷಗಳ ಮುನ್ನ ಕಟ್ಟಡದ ಮೊದಲ ಹಂತದಲ್ಲಿರುವ ರಸಾಯನಶಾಸ್ತ್ರ ವಿಭಾಗದ ಪ್ರಯೋಗಾಲಯದ ಮೇಲ್ಛಾವಣಿ…
ಚಾಮುಂಡಿಬೆಟ್ಟದಲ್ಲಿ ಮತ್ತೆ ಭೂಕುಸಿತ
October 22, 2022ಮೈಸೂರು, ಅ. 21 (ಆರ್ಕೆ)- ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈಸೂರಿನ ಚಾಮುಂಡಿಬೆಟ್ಟದ ನಂದಿ ಪ್ರತಿಮೆ ರಸ್ತೆಯಲ್ಲಿ ವ್ಯೂ ಪಾಯಿಂಟ್ ಬಳಿ ಕಳೆದ ರಾತ್ರಿ ಮತ್ತೆ ಭೂ ಕುಸಿತ ಉಂಟಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಘು, ಸಿಬ್ಬಂದಿಗಳೊಂದಿಗೆ ಇಂದು ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದರು. ಈ ಹಿಂದೆಯೂ ಚಾಮುಂಡಿಬೆಟ್ಟದ ನಂದಿ ಪ್ರತಿಮೆ ರಸ್ತೆಯಲ್ಲಿ ಹಲವು ಕಡೆ ಭೂಕುಸಿತವಾಗಿತ್ತು. ಅದಕ್ಕೆ ಹೊಂದಿಕೊಂಡಂತೆ ವ್ಯೂ ಪಾಯಿಂಟ್ಗೆ ಅನತಿ ದೂರದಲ್ಲಿ ಕಳೆದ…
ಪ್ರಾಂಶುಪಾಲ ಡಾ. ರವಿ, ವಿಭಾಗದ ಮುಖ್ಯಸ್ಥರಾದ ಡಾ.ಪದ್ಮನಾಭರ ಸಮಯಪ್ರಜ್ಞೆ, ಎಚ್ಚರಿಕಾ ಕ್ರಮದಿಂದ ತಪ್ಪಿದ ಭಾರೀ ಅನಾಹುತ
October 22, 2022ಮೈಸೂರು, ಅ.21(ಎಂಟಿವೈ)- ಪ್ರಾಂಶುಪಾಲರ ಎಚ್ಚರಿಕಾ ಕ್ರಮ ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರ ಸಮಯ ಪ್ರಜ್ಞೆಯಿಂದ ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ದೊಡ್ಡ ಗಂಡಾಂತ ರದಿಂದ ಪಾರಾಗಿದ್ದಾರೆ. ಗುರುವಾರದವರೆಗೂ ಈಗ ಕುಸಿದಿ ರುವ ಭಾಗದಲ್ಲಿನ ಕಟ್ಟಡದಲ್ಲಿ ಪ್ರಯೋ ಗಾಲಯ ಹಾಗೂ ತರಗತಿಗಳಲ್ಲಿ ವಿದ್ಯಾರ್ಥಿನಿಯರು ಪಾಠ ಆಲಿಸಿದ್ದರು. ಇಂದು ಎಂದಿನಂತೆ ಪ್ರಯೋಗಾಲ ಯದಲ್ಲಿ ಶೈಕ್ಷಣಿಕ ಚಟುವಟಿಕೆಗೆ ಬಾಗಿಲು ತೆರೆಯಲಾಗಿತ್ತು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ.ಪದ್ಮನಾಭ ಅವರು ಸಿಬ್ಬಂದಿ ಗಳೊಂದಿಗೆ ಬೆಳಗ್ಗೆ 10.15ಕ್ಕೆ ಬಂದು, ಪ್ರಯೋಗಾಲಯ ಒಂದು ಸುತ್ತು ಹಾಕಿದ್ದಾರೆ. ಈ…
ಪಾರಂಪರಿಕ ಕಟ್ಟಡಗಳ ಕಾಪಾಡದೇ ಇದ್ದ ಮೇಲೆ ಕುಸಿಯದೇ ಇರುತ್ತವೆಯೇ…!
October 22, 2022ಮೈಸೂರು, ಅ.21(ಎಸ್ಬಿಡಿ)- ಮೈಸೂರಿನ ಪಾರಂಪರಿಕ ಕಟ್ಟಡಗಳು ಒಂದರ ಹಿಂದೊಂದರಂತೆ ಕುಸಿಯುತ್ತಿದ್ದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ. ಸರ್ಕಾರಿ ಹಾಗೂ ಖಾಸಗಿ ಕಟ್ಟಡ ಸೇರಿ ಮೈಸೂರಿನಲ್ಲಿ 130ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ ಎಂದು ಪಟ್ಟಿ ಮಾಡಲಾಗಿದೆ. ಇದರಲ್ಲಿ 25 ಕಟ್ಟಡಗಳಿಗೆ ತುರ್ತು ದುರಸ್ತಿ ಅಗತ್ಯವಿದೆ ಎಂದು ಪಾರಂಪರಿಕ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ. ಜಿಲ್ಲಾಧಿಕಾರಿ ಕಚೇರಿ, ನಗರಪಾಲಿಕೆ, ಕಾಡಾ, ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳ ದುಃಸ್ಥಿತಿ ಬಗ್ಗೆಯೂ ತಿಳಿಸಲಾಗಿದೆ. ಆದರೆ ಈ ಬಗ್ಗೆ…
ದಸರಾ ವಸ್ತುಪ್ರದರ್ಶನದಲ್ಲಿ ರೋಬೋ ಮಂಜೇಗೌಡರ ಜನೋಪಯೋಗಿ ರೋಬೋ ಜೋನ್ ಮಳಿಗೆ ಉದ್ಘಾಟನೆ
October 21, 2022ಮೈಸೂರು, ಅ.20 (ಎಸ್ಬಿಡಿ)- ರೋಬೋ ಮಂಜೇಗೌಡರು ಸಾರ್ವಜನಿಕ ಉಪಯೋಗಕ್ಕಾಗಿ ಸಿದ್ಧಪಡಿಸಿರುವ ವಿವಿಧ ಯಂತ್ರೋಪಕರಣಗಳ `ರೋಬೋ ಜೋನ್’ ಮಳಿಗೆ ದಸರಾ ವಸ್ತುಪ್ರದರ್ಶನದಲ್ಲಿ ಉದ್ಘಾಟನೆಗೊಂಡಿದೆ. ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕು ಕೋಮನಹಳ್ಳಿಯ ರೋಬೋ ಮಂಜೇ ಗೌಡರು ಅನ್ವೇಷಿಸಿರುವ `ಜೀವ ರಕ್ಷಕ ರೋಬೋ’, `ಸೈನಿಕ ರೋಬೋ’, `ವಾಹನ ಗಳ ಚಲನೆಯಿಂದ ವಿದ್ಯುತ್ ಉತ್ಪಾದನೆ’ ವ್ಯವಸ್ಥೆ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಯನ್ನೊಳಗೊಂಡ ವಿಶೇಷ ಮಳಿಗೆಯನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜನ ಜೀವನದಲ್ಲಿ…
ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮೈಸೂರು ಕಾಂಗ್ರೆಸ್ ಅಭಿನಂದನಾ ನಿರ್ಣಯ
October 21, 2022ಮೈಸೂರು,ಅ.20(ಎಂಟಿವೈ)- ರಾಜ್ಯದಲ್ಲಿ ಲೀಡರ್ ಬೇಸ್ ರಾಜಕಾರಣವಿದ್ದು, ಅದನ್ನು ಕೇಡರ್ ಬೇಸ್ ಆಗಿ ಪರಿವರ್ತಿಸಬೇಕಾಗಿದೆ. ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಲ್ಲರೂ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಎಐಸಿಸಿ ನೂತನ ಸಾರಥಿಯಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಜಂಟಿ ಯಾಗಿ ಆಯೋಜಿಸಿದ್ದ ಅಭಿನಂದನಾ ನಿರ್ಣಯ ಕೈಗೊಳ್ಳುವ ಸಭೆಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಕಾಂಗ್ರೆಸ್…