ಮೈಸೂರು, ನ.12(ಪಿಎಂ)- ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ರಾದ ಮೈಸೂರು ಮೂಲದ ನಾಲ್ವರು ಮಹನೀಯರನ್ನು ಕರ್ನಾಟಕ ರಾಜ್ಯ ಹಿಂದು ಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕರ್ನಾಟಕ ಘಟಕದ ಜಂಟಿ ಆಶ್ರಯದಲ್ಲಿ ಗುರುವಾರ ಸನ್ಮಾನಿಸಲಾಯಿತು. ಮೈಸೂರಿನ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ದಂಡಿ ಯಾತ್ರೆ ಸ್ಮಾರಕದ ಆವರಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ. ಪುಟ್ಟಸಿದ್ದಯ್ಯ, ಡಾ.ಎ.ಎಸ್.ಚಂದ್ರಶೇಖರ್, ಎನ್.ಎಸ್.ಜನಾರ್ಧನಮೂರ್ತಿ, ಸಿ.ಮಹೇ ಶ್ವರನ್ ಅವರನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಪಿ.ಮಹೇಶ್ ಚಂದ್ರಗುರು ಸನ್ಮಾನಿಸಿದರು….
ಬಿಎಸ್ವೈ ಆಡಳಿತದಲ್ಲಿ ನಾನೇ ಪವರ್ ಪಾಯಿಂಟ್
November 13, 2020ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಘೋಷಣೆ ಬೆಂಗಳೂರು, ನ.12(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತದಲ್ಲಿ ನಾನೇ ಕೇಂದ್ರ ಬಿಂದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಯಲ್ಲಿ ಪಕ್ಷದ ವತಿಯಿಂದ ಆಯ್ಕೆಗೊಂಡ ಮುನಿರತ್ನ ನಾಯ್ಡು, ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ನಂತರ ಅವರ ಕಾರ್ಯಾ ಲಯ ನೀಡಿರುವ ಪತ್ರಿಕಾ ಹೇಳಿಕೆಯಲ್ಲೇ ಇಂತಹ ಪದ ಪ್ರಯೋಗ ವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಪತನಗೊಂಡು ಯಡಿ…
ನಾಳೆಯಿಂದ ನ.20ರವರೆಗೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹ
November 13, 2020ಮೈಸೂರು,ನ.12(ಎಂಟಿವೈ)- `ಕೊರೊನಾ ಸೋಂಕು-ಆತ್ಮನಿರ್ಭರ ಭಾರತ -ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯ ದೊಂದಿಗೆ ನ.14ರಿಂದ 20ರವರೆಗೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಮುಡಾ ಅಧ್ಯಕ್ಷರೂ ಆದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ ಸಭಾಂಗಣದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ವನ್ನು ಆಯೋಜಿಸಲಾಗಿದೆ. ಪ್ರತಿವರ್ಷ ನ.14ರಿಂದ 20ರವರೆಗೆ ರಾಷ್ಟ್ರಾದ್ಯಂತ ಅಖಿಲ ಭಾರತ…
ಹೋಟೆಲ್ ಉದ್ಯಮದಲ್ಲಿ ವಹಿವಾಟು ಭಾರೀ ಇಳಿಮುಖ ವಿದ್ಯುತ್ ಶುಲ್ಕ ಪಾವತಿಗೆ ಕಾಲಾವಕಾಶ ನೀಡಿ
November 13, 2020ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮೈಸೂರು, ನ.12(ಪಿಎಂ)- ಕೊರೊನಾ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದ್ದು, ಉದ್ಯಮ ಯಥಾಸ್ಥಿತಿಗೆ ಮರಳಿದ ನಂತರದಲ್ಲಿ ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಕಂತಿನ ರೂಪದಲ್ಲಿ ಪಾವತಿಸಲು ಅವಕಾಶ ನೀಡಬೇಕು ಹಾಗೂ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದಂತೆ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಮನೋಹರ ಎಂ.ಬೇವಿನಮರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ಸೆಸ್ಕ್ ಕಾರ್ಯಾಲಯದಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು…
ಮೈಸೂರಲ್ಲಿ `ಹಸಿರು’ ಪಟಾಕಿಯೇ ಮಾರುತ್ತಿದ್ದೇವೆ: ಪಟಾಕಿ ಮಾರಾಟಗಾರರ ಸ್ಪಷ್ಟನೆ
November 13, 2020ಮೈಸೂರು,ನ.12(ಎಂಟಿವೈ)- ಬೆಳಕಿನ ಹಬ್ಬ ದೀಪಾವಳಿಗಾಗಿ ಮೈಸೂರಲ್ಲಿ ಈ ಬಾರಿ ಸಂಪೂರ್ಣವಾಗಿ ಪರಿಸರ ಸ್ನೇಹಿ `ಹಸಿರು’ ಪಟಾಕಿಯನ್ನೇ ಮಾರಾಟ ಮಾಡುತ್ತಿರುವು ದಾಗಿ ಹೆಬ್ಬಾಳು ಕೈಗಾರಿಕಾ ಪ್ರದೇಶದ ಪಟಾಕಿ ಮಾರಾಟಗಾರರ ಸಂಘ ಸ್ಪಷ್ಟಪಡಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೆಬ್ಬಾಳು ಕೈಗಾರಿಕಾ ಪ್ರದೇಶದ ಪಟಾಕಿ ಮಾರಾಟಗಾರರ ಸಂಘದ ಪದಾಧಿಕಾರಿ ಗಳಾದ ಮಣಿಕಾಂತ, ಹರೀಶ್, ರವಿ, ಆನಂದ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೊದಲು ಪಟಾಕಿ ನಿಷೇ ಧಿಸಿ ಆದೇಶ ಹೊರಡಿಸಿತ್ತು. ಬಳಿಕ ನ.16…
ತಮಿಳುನಾಡಿಗೆ ಸಾರಿಗೆ ಬಸ್ ಸಂಚಾರ ಆರಂಭ
November 13, 2020ಮೈಸೂರು,ನ.12(ಎಂಟಿವೈ)-ಕೋವಿಡ್-19 ಹಿನ್ನೆಲೆ ಯಲ್ಲಿ ಕರ್ನಾಟಕ-ತಮಿಳುನಾಡು ನಡುವೆ ಸ್ಥಗಿತ ಗೊಂಡಿದ್ದ ಕೆಎಸ್ಆರ್ಟಿಸಿ ಬಸ್ ಸಂಚಾರ 8 ತಿಂಗಳ ಬಳಿಕ ಗುರುವಾರದಿಂದ ಪುನರಾರಂಭಗೊಂಡಿದೆ. ಮೈಸೂರಿನಿಂದ ಇಂದು ಕೊಯಮತ್ತೂರಿಗೆ 9, ಊಟಿಗೆ 6 ಮತ್ತು ತಿರುಪ್ಪೂರಿಗೆ ಒಂದು ಬಸ್ ಸಂಚರಿಸಿದ್ದು, ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಇನ್ನೂ ಹೆಚ್ಚಿನ ಬಸ್ಗಳನ್ನು ಓಡಿಸಲು ಕೆಎಸ್ಆರ್ಟಿಸಿ ತೀರ್ಮಾನಿ ಸಿದೆ. ನಾಳೆ (ಶುಕ್ರವಾರ)ಯಿಂದ ಕೊಯಮತ್ತೂರು, ತಿರುಪ್ಪೂರು, ಈರೋಡ್, ಚೆನ್ನೈ, ಊಟಿಗೆ ಸುವರ್ಣ ಸಾರಿಗೆ, ಓಲ್ವೋ ಹಾಗೂ ರಾಜಹಂಸ ಬಸ್ಗಳು ಸಂಚರಿಸಲಿವೆ. ಈ ಹಿಂದೆ ಮೈಸೂರಿನಿಂದ ತಮಿಳು ನಾಡಿನ ವಿವಿಧ…
ಮೈಸೂರು ದೇವರಾಜ ಮಾರುಕಟ್ಟೆಯಲ್ಲಿ ಮಣ್ಣಿನ ವೈವಿಧ್ಯತೆ
November 13, 2020ಮೈಸೂರು, ನ.12(ಎಂಕೆ)- ಮೈಸೂ ರಿನ ಕೇಂದ್ರ ಭಾಗದಲ್ಲಿರುವ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಯ ಪುನರ್ ನಿರ್ಮಾಣ ಸಂಬಂಧ ಆ.21ರಂದು ಮಾರು ಕಟ್ಟೆಯ 3 ಕಡೆ ಗುಂಡಿ ತೆಗೆದು ನಡೆಸ ಲಾಗಿದ್ದ ಸಾಯಿಲ್ ಬೇರಿಂಗ್ ಕೆಪಾಸಿಟಿ (ಎಸ್ಬಿಸಿ) ಪರೀಕ್ಷೆಯ ವರದಿ ಬಂದಿದ್ದು, ಇದರ ಪ್ರಕಾರ ಮಣ್ಣಿನ ಪರೀಕ್ಷೆ ನಡೆಸಲಾದ ಜಾಗದಲ್ಲಿ ಮೃದು ಕಲ್ಲು(ಗಟ್ಟಿ ಮಣ್ಣು), ಸಡಿಲ ಮಣ್ಣು ಮತ್ತು ಹೇರಳವಾಗಿ ಅಂತ ರ್ಜಲ ಉಕ್ಕುತ್ತಿರುವುದಾಗಿ ವರದಿಯಾಗಿದೆ. ಸರ್ಕಾರದ ಸೂಚನೆ ಮೇರೆಗೆ ದೇವರಾಜ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಗುಂಡಿಗಳನ್ನು ತೆಗೆದು ಎಸ್ಬಿಸಿ…
ಗುರುವಾರ ಮೈಸೂರು ಜಿಲ್ಲೆಯಲ್ಲಿ 115 ಮಂದಿಗೆ ಸೋಂಕು
November 13, 2020ಮೈಸೂರು, ನ.12(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ದಿನ ದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗು ತ್ತಿದ್ದು, ಗುರುವಾರ 115 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 49,212ಕ್ಕೆ ಏರಿಕೆಯಾಗಿದೆ. ಇಂದು 174 ಮಂದಿ ಬಿಡುಗಡೆಯಾಗಿದ್ದು, ಇದುವರೆಗೆ 47,242 ಮಂದಿ ಬಿಡುಗಡೆಯಾದಂತಾಗಿದೆ. ಇನ್ನೂ 994 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಗುರುವಾರ ಜಿಲ್ಲೆಯಲ್ಲಿ ಸೋಂಕಿಗೆ ಓರ್ವ ಮೃತಪಟ್ಟಿದ್ದು, ಇದುವರೆಗೆ 976 ಮಂದಿ ಬಲಿಯಾದಂತಾಗಿದೆ. ರಾಜ್ಯದ ವಿವರ: ರಾಜ್ಯದಲ್ಲಿ ಗುರುವಾರ 2,116 ಜನರಿಗೆ ಸೋಂಕು ತಗುಲಿದ್ದು, ಆ ಮೂಲಕ…
ಡಿಪ್ಲೊಮಾ ಕೋರ್ಸ್ ಪಠ್ಯಕ್ರಮದಲ್ಲಿ ಕೈಬಿಟ್ಟಿರುವ ವಿಜ್ಞಾನ ವಿಷಯ ಮತ್ತೆ ಅಳವಡಿಸಿ
November 13, 2020ಮೈಸೂರು, ನ.12(ಪಿಎಂ)- ಡಿಪ್ಲೊಮಾ ಕೋರ್ಸ್ ಸಂಬಂಧ ಹೊಸದಾಗಿ ಸಿದ್ಧಪಡಿಸಿರುವ ಸಿ-20 ಪಠ್ಯಕ್ರಮದಲ್ಲಿ ಕೈಬಿಟ್ಟಿರುವ ಅನ್ವಯಿಕ ವಿಜ್ಞಾನ (ಅಪ್ಲೈಡ್ ಸೈನ್ಸ್) ಕುರಿತ ಪಠ್ಯ ಮತ್ತು ಪ್ರಯೋ ಗಾಲಯ ವಿಷಯಗಳನ್ನು ಕಡ್ಡಾಯವಾಗಿ ಅಳವಡಿಸ ಬೇಕೆಂದು ಉಪಮುಖ್ಯಮಂತ್ರಿಗಳೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ನಾರಾಯಣ್ ಅವರನ್ನು ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ ಒತ್ತಾಯಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿ-20 ಪಠ್ಯಕ್ರಮದಲ್ಲಿ ಅಪ್ಲೈಡ್ ಸೈನ್ಸ್ ಮತ್ತು ಅಪ್ಲೈಡ್ ಸೈನ್ಸ್ ಲ್ಯಾಬ್ ವಿಷಯಗಳನ್ನು ತೆಗೆದಿರುವ ಹಿನ್ನೆಲೆಯಲ್ಲಿ ಈ ವಿಷಯ…
ದೀಪಾವಳಿ ನಂತರ ಸಂಪುಟ ವಿಸ್ತರಣೆ
November 12, 2020ಬೆಂಗಳೂರು, ನ.11(ಕೆಎಂಶಿ)- ದೀಪಾವಳಿ ಕಳೆಯುತ್ತಿದ್ದಂತೆ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿ ಹೊಸದಾಗಿ ಆರು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ. ಒಂದು ವೇಳೆ ಪಕ್ಷದ ವರಿಷ್ಠರ ಅನುಮತಿ ದೊರೆತರೆ ನವೆಂಬರ್ 16ರ ದೀಪಾವಳಿ ದಿನದಂದು ಇಲ್ಲವೇ 18ರಂದು ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಕಾರಣ ರಾದ ವಲಸಿಗ ಶಾಸಕರು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರೇ ಸಂಪುಟ ವಿಸ್ತರಣೆ ದಿನಾಂಕವನ್ನು ಹೇಳಿದ್ದಾರೆ. ಕೇವಲ ವಿಸ್ತರಣೆಯಾದರೆ ಕಾಂಗ್ರೆಸ್ ನಿಂದ ಬಂದಿರುವ…










