ಮೈಸೂರು, ಆ. 5(ಆರ್ಕೆ)- ಮೈಸೂರಿನ ಎಸ್ಜೆಸಿಇ ಕ್ಯಾಂಪಸ್ನಲ್ಲಿ ಇಂದಿನಿಂದ 3 ದಿನಗಳ ಮೆಗಾ ಮೈಸೂರು ಸ್ಟಾರ್ಟ್ಅಪ್ ಪೆವಿಲಿ ಯನ್ ಮತ್ತು ಕಾನ್ಕ್ಲೇವ್ ಆರಂಭವಾಯಿತು. ಎಸ್ಜೆಸಿಇ-ಸ್ಟೆಪ್, ಟೈ ಮೈಸೂರು, ಸಿಐಐಎಲ್, ವೈಐ, ಮೈಸೂರು ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾರ್ಟ್ಅಪ್ ಕರ್ನಾ ಟಕ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಎಕ್ಸೆಲ್ಸಾಫ್ಟ್, ಜೆಎಸ್ಎಸ್ ಮಹಾವಿದ್ಯಾಪೀಠ ಇವರ ಸಂಯುಕ್ತಾ ಶ್ರಯದಲ್ಲಿ ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿರುವ ಸ್ಟಾರ್ಟ್ ಅಪ್ ಸಮಿಟ್ ಅನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ರಾಜವಂಶಸ್ಥ…
ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶಿಕ್ಷಕಿ ಹತ್ಯೆ ನಂಜನಗೂಡು ನಗರಸಭೆ ಸದಸ್ಯ ಸೇರಿ ನಾಲ್ವರ ಬಂದನ
August 5, 2022ಮೈಸೂರು, ಆ.4(ಆರ್ಕೆ)- ಕಳೆದ 5 ತಿಂಗಳ ಹಿಂದೆ ನಡೆದಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕಿ ಸುಲೋಚನಾ ಹತ್ಯೆ ಪ್ರಕರಣವನ್ನು ಭೇದಿಸಿರುವ ನಂಜನಗೂಡು ಪೊಲೀಸರು ನಗರ ಸಭಾ ಸದಸ್ಯೆ ಸೇರಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂಜನಗೂಡು ನಗರಸಭೆ ಸದಸ್ಯೆ ಗಾಯತ್ರಿ ಮುರುಗೇಶ್, ಆಕೆಯ ಸಂಬಂಧಿಕರಾದ ಸೌಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಗುರುವಾರ ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ…
ಸಿದ್ದರಾಮೋತ್ಸವದಿಂದ ವಾಪಸ್ಸಾಗುತ್ತಿದ್ದ ವಾಹನ ಅಪಘಾತ: ಓರ್ವ ಸಾವು
August 5, 2022ಪಿರಿಯಾಪಟ್ಟಣ, ಆ.4- ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ರಸ್ತೆ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿ ಣಾಮ ಬುಧವಾರ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ ಮುಗಿಸಿ ಕೊಂಡು ವಾಪಸ್ಸಾಗುತ್ತಿದ್ದವರಲ್ಲಿ ಒಬ್ಬರು ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಅರಕಲ ಗೂಡು ತಾಲೂಕಿನ ಗಂಗೂರು ಹ್ಯಾಂಡ್ಪೆÇೀಸ್ಟ್ ಬಳಿ ಗುರುವಾರ ಮುಂಜಾನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ನಿವಾಸಿ ಹಾಗೂ ಕಾಂಗ್ರೆಸ್ ಮುಖಂಡ ಫಸಿಯೂದ್ದೀನ್ (53) ಮೃತಪಟ್ಟವರು. ಇವರು ಹಲಗನಹಳ್ಳಿಯಿಂದ ದಾವಣಗೆರೆಯಲ್ಲಿ…
ಲಂಚ ಪಡೆಯುತ್ತಿದ್ದ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ಎಸಿಬಿ ಬಲೆಗೆ
August 5, 2022ಮೈಸೂರು, ಆ.4(ಆರ್ಕೆ)-ಆಸ್ತಿಯೊಂದರ ಖಾತೆ ಮಾಡಿಕೊಡುವ ಸಂಬಂಧ ವ್ಯಕ್ತಿ ಯಿಂದ 15,000 ರೂ. ಲಂಚ ಪಡೆ ಯುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ ರೆವಿನ್ಯೂ ಇನ್ಸ್ಪೆಕ್ಟರ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರಿಗೆ ಗುರುವಾರ ಸಿಕ್ಕಿಬಿದ್ದಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 7ರ ರೆವಿನ್ಯೂ ಇನ್ಸ್ಪೆಕ್ಟರ್ ಬಿ.ಸಿದ್ದರಾಜು ಎಸಿಬಿ ಬಲೆಗೆ ಬಿದ್ದವರು. ಗಾಯತ್ರಿಪುರಂ ನಿವಾಸಿಯೊಬ್ಬರು ಖರೀದಿಸಿದ್ದ ಎನ್.ಆರ್.ಮೊಹಲ್ಲಾದ ಆಸ್ತಿಯ ಖಾತೆ ಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡುವಂತೆ ಕೋರಿ ಪಾಲಿಕೆ ವಲಯ ಕಚೇರಿ-8ಕ್ಕೆ ಅವರು ಅರ್ಜಿ…
ಬೇಟೆಗಾರರ ಬೇಟೆಗಾರ ಪ್ರಖ್ಯಾತಿಯಬಂಡೀಪುರ `ರಾಣಾ’ ಇನ್ನಿಲ್ಲ
August 3, 2022ಗುಂಡ್ಲುಪೇಟೆ, ಆ.2-ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬೇಟೆಗಾರರ ಬೇಟೆಗಾರ ಎಂದೇ ಪ್ರಖ್ಯಾತಿ ಪಡೆದಿದ್ದ ಸಾಹಸಿ ಶ್ವಾನ ರಾಣಾ(9) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕಳ್ಳ ಬೇಟೆಯೂ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು, ವನ್ಯಜೀವಿ ಬೇಟೆಗಾರರನ್ನು ನಿಗ್ರಹಿಸಲು ಹಾಗೂ ನಾನಾ ಅರಣ್ಯ ಅಪರಾಧಗಳನ್ನು ಭೇದಿಸುವುದಕ್ಕಾಗಿ ಸದಾ ಸಜ್ಜಾಗಿರುತ್ತಿದ್ದ ಶ್ವಾನ ದಳದ ಜರ್ಮನ್ ಶಫರ್ಡ್ ತಳಿಯ ರಾಣಾ 2013ರ ಡಿ.28ರಂದು ಜನಿಸಿತ್ತು. ರಾಣಾನಿಗೆ ಭೂಪಾಲ್ನ ವಿಶೇಷ ಸಶಸ್ತ್ರ ಪಡೆಯಲ್ಲಿ ತರಬೇತಿ ನೀಡಿ,…
ಭಾರತೀಯರೆಲ್ಲರೂ ಒಂದೇ ಡಿಎನ್ಎ
August 2, 2022ಮೈಸೂರು, ಆ.1(ಆರ್ಕೆ)- ಭಾರತೀ ಯರೆಲ್ಲರೂ ಒಂದೇ ಡಿಎನ್ಎಯೊಂದಿಗೆ ಒಂದೇ ಆಗಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿದ್ದಾರೆ. ಮೈಸೂರಿನ ಪ್ರಾದೇ ಶಿಕ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ 60ನೇ ಸಂಸ್ಥಾಪನಾ ದಿನಾಚ ರಣೆ ಸಮಾರಂಭ ಉದ್ಘಾಟಿಸಿದ ಅವರು, ಸರ್ದಾರ್ ಪಣಿಕ್ಕರ್ ಸ್ಮಾರಕ ಉಪನ್ಯಾಸ ಮಾಡಿದರು. ಭಾರತೀಯರೆಲ್ಲರೂ ಒಂದೇ. ಅವರೆಲ್ಲರಿಗೂ ಇರುವುದು ಒಂದೇ ಡಿಎನ್ಎ. ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯ ತಾತ-ಮುತ್ತಾತಂದಿರು ಹಿಂದೂ ಗಳೇ ಆಗಿದ್ದರು ಎಂಬುದು ದೃಢ ಎಂದರು. ನಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ…
ಮೈಸೂರಲ್ಲಿ ಭಾರೀ ಮಳೆ: ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ
August 2, 2022ಮೈಸೂರು, ಆ.1(ಎಂಕೆ, ಎಸ್ಪಿಎನ್)- ಸೋಮವಾರ ರಾತ್ರಿ ಗುಡುಗು-ಮಿಂಚು ಸಹಿತ ಸುರಿದ ಭಾರೀ ಮಳೆ ಯಿಂದಾಗಿ ಮೈಸೂರಿನಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆ 6.30ರ ಸುಮಾರಿಗೆ ಶುರುವಾಗಿ ತಡರಾತ್ರಿಯವರೆಗೂ ಧಾರಾಕಾರವಾಗಿ ಸುರಿಯಿತು. ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆ 6.30ರ ಸುಮಾರಿಗೆ ಶುರುವಾಗಿ ತಡರಾತ್ರಿಯವರೆಗೂ ಧಾರಾಕಾರವಾಗಿ ಸುರಿಯಿತು. ಪರಿಣಾಮ ಜನತಾನಗರ ಸಾಹುಕಾರ್ ಚೆನ್ನಯ್ಯ ಮುಖ್ಯ ರಸ್ತೆಯ 7ನೇ ಅಡ್ಡರಸ್ತೆಯ 5 ರಿಂದ 10 ಮನೆಗಳು ಹಾಗೂ ರಾಜರಾಜೇಶ್ವರಿ ನಗರದ…
ಸಿಇಟಿ ಫಲಿತಾಂಶ ಪ್ರಕಟರ್ಯಾಂಕ್ಗಳೆಲ್ಲಾ ಸಿಬಿಎಸ್ಇ ವಿದ್ಯಾರ್ಥಿಗಳ ಪಾಲು
July 31, 2022ಬೆಂಗಳೂರು ವಿದ್ಯಾರ್ಥಿಗಳ ಪಾರುಪತ್ಯ ಮೈಸೂರಿಗಿಲ್ಲ ಈ ಬಾರಿ ರ್ಯಾಂಕ್ ಸೆ.೧ರಿAದ ದಾಖಲಾತಿ ಪರಿಶೀಲನೆ ಬೆಂಗಳೂರು, ಜು.೩೦(ಕೆಎಂಶಿ)- ವೃತ್ತಿಪರ ಕೋರ್ಸ್ಗಳ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬಾಲಕರೇ ಮೇಲುಗೈ ಸಾಧಿ ಸಿದ್ದಾರೆ. ಕೇಂದ್ರ ಸ್ವಾಮ್ಯದ ಸಿಬಿಎಸ್ಇ ವಿದ್ಯಾರ್ಥಿಗಳು ಐದು ವಿಭಾಗಗಳಲ್ಲೂ ರ್ಯಾಂಕ್ಗಳನ್ನು ದೋಚಿಕೊಂಡಿದ್ದಾರೆ. ಐದು ವಿಭಾಗಗಳಲ್ಲಿ ಮೊದಲ ಹತ್ತು ರ್ಯಾಂಕ್ಗಳ ಸಿಂಹ ಪಾಲು ಬೆಂಗಳೂರಿನ ವಿದ್ಯಾರ್ಥಿಗಳ ಪಾಲಾಗಿದ್ದರೆ, ನಂತರದ ಸ್ಥಾನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂದಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ….
ದಸರಾ ಗೋಲ್ಡನ್ ಪಾಸ್ನಲ್ಲಿಪ್ಯಾಕೇಜ್ ಟೂರ್ಗೆ ಅವಕಾಶ
July 31, 2022ಪ್ರವಾಸೋದ್ಯಮ ನಿಗಮ ನಿರ್ಧಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಬೆಂಗಳೂರು, ಜು.೩೦-ನಾಡಹಬ್ಬ ಮೈಸೂರು ದಸರಾ ವೇಳೆಯಲ್ಲಿ ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಪ್ರವಾಸಿಗರನ್ನು ಸೆಳೆಯಲು ಪ್ಯಾಕೇಜ್ ಟೂರುಗಳ ಏರ್ಪಡಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಅಲ್ಲದೆ ಮೈಸೂರು ದಸರಾಕ್ಕಾಗಿ ೧,೦೦೦ ಗೋಲ್ಡನ್ ಪಾಸ್ಗೆ ಅನುಮೋದನೆ ನೀಡುವಂತೆ ರಾಜ್ಯ ಪ್ರವಾಸೋದ್ಯಮ ನಿಗಮ, ಸರ್ಕಾರವನ್ನು ಕೋರಿದೆ. ಈ ಪಾಸ್ನಿಂದ ಜಂಬೂ ಸವಾರಿ ವೀಕ್ಷಣೆ ಮಾತ್ರವಲ್ಲದೇ, ಚಿಕ್ಕಮಗಳೂರು, ಮಡಿಕೇರಿ, ಮೇಲುಕೋಟೆ, ಬೇಲೂರು ಮತ್ತು ಹಳೇಬೀಡುಗಳಂತಹ ಪ್ರವಾಸಿ ತಾಣಗಳಿಗೆ ತೆರಳಲು ಬಳಸಿಕೊಳ್ಳಬಹುದಾಗಿದೆ. ನಾಡಹಬ್ಬ ನೋಡಲು ಆಗಮಿಸುವ ಪ್ರವಾಸಿಗರಿಗೆ…
ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕತೆಯ ಜೀವಾಳ: ಜಿಟಿಡಿ
July 31, 2022ದೇಶದಲ್ಲಿದ್ದಾರೆ ೩೦ ಕೋಟಿ ಸಹಕಾರಿ ಸದಸ್ಯ ಬಳಗ ೮.೫ ಲಕ್ಷ ಸಹಕಾರಿ ಸಂಸ್ಥೆಗಳು ೪ ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಸಹಕಾರ ಕ್ಷೇತ್ರ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಾಗೃತಿ ಯಿಂದ, ಬದ್ಧತೆಯಿಂದ, ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಮಧ್ಯಪ್ರವೇಶ ಇರ ಬಾರದು. ಸಹಕಾರಿಗಳು ಬದ್ಧತೆಯಿಂದ ಸಂಸ್ಥೆಗಳನ್ನು ಕಟ್ಟಿ, ಬೆಳೆಸಿ, ಪೋಷಿಸಬೇಕು. ಇದರಿಂದ ಸಹಕಾರ ಚಳವಳಿ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. – ಜಿ.ಟಿ.ದೇವೇಗೌಡ, ಸಹಕಾರಿ ಧುರೀಣ. ಹುಣಸೂರು, ಜು.೩೦- ಭಾರತ ಸಹಕಾರ ಕ್ಷೇತ್ರ ೩೦ ಕೋಟಿಗೂ ಅಧಿಕ ಸದಸ್ಯ…