ಮೈಸೂರು, ಜು.19(ಎಂಟಿವೈ)-ಮೈಸೂರಿನಲ್ಲಿ ಭಾನುವಾರ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 70ಕ್ಕೆ ಏರಿಕೆ ಯಾಗಿದೆ. ಹೊಸದಾಗಿ 110 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1624ಕ್ಕೆ ಏರಿದೆ. ಹೊಸದಾಗಿ 110 ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್ ಗಳಾಗಿ ಘೋಷಿಸಲಾಗಿದೆ. ಮೈಸೂರಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಕಳೆದ 10 ದಿನಗಳಿಂದ ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿಯಲ್ಲಿ…
ಮೈಸೂರಲ್ಲಿ `ಕೋವಿಡ್ ಕಾರ್ಯಪಡೆ’ ರಚನೆ
July 20, 2020ಮೈಸೂರು, ಜು.19(ಆರ್ಕೆಬಿ)- ಕೋವಿಡ್-19 ಹರಡುವಿಕೆ ನಿಯಂ ತ್ರಣಕ್ಕಾಗಿ ಮೈಸೂರಿನಲ್ಲಿ `ಕೋವಿಡ್ ಕಾರ್ಯಪಡೆ’ ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕೋವಿಡ್-19 ಪರಿಶೀಲನಾ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಕೋವಿಡ್ ಕಾರ್ಯಪಡೆ ರಚನೆಗೆ ನಿರ್ಧರಿಸಲಾಗಿದೆ. ನರಸಿಂಹರಾಜ ಕ್ಷೇತ್ರದ ಶಾಸಕರು ಅನಾರೋಗ್ಯದಿಂದಿರುವ ಕಾರಣ ಅಲ್ಲಿ ಸಂಸದ ಪ್ರತಾಪ್ ಸಿಂಹ ಕಾರ್ಯಪಡೆ ನೇತೃತ್ವ ವಹಿಸಲಿದ್ದಾರೆ. ಇದರಲ್ಲಿ…
ರಾಜ್ಯದಲ್ಲಿ ಹೊಸದಾಗಿ 4120 ಮಂದಿಗೆ ಕೊರೊನಾ
July 20, 2020ಬೆಂಗಳೂರು, ಜು.19-ರಾಜ್ಯದಲ್ಲಿ ಭಾನುವಾರ ಹೊಸದಾಗಿ 4120 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 63,772ಕ್ಕೆ ಏರಿಕೆಯಾಗಿದೆ.91 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 1331ಕ್ಕೆ ಏರಿಕೆಯಾಗಿದೆ. ಇಂದು 1290 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದು, ಈವರೆಗೆ 23,065 ಮಂದಿ ಗುಣಮುಖರಾದಂತಾಗಿದೆ. 39,370 ಸಕ್ರಿಯ ಸೋಂಕಿತರ ಪೈಕಿ 579 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಥಮ ಸಂಪರ್ಕದ 60,385 ಮತ್ತು ದ್ವಿತೀಯ ಸಂಪರ್ಕದ 55,380 ಮಂದಿ ಸೇರಿದಂತೆ ಒಟ್ಟು…
ಆಗಸ್ಟ್ನಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಶಿಲಾನ್ಯಾಸ
July 20, 2020ಉಡುಪಿ, ಜು. 19- ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ ಮೊದಲ ವಾರದ ಮೂರು ಅಥವಾ ಐದನೇ ತಾರೀಖಿನಂದು ಮುಹೂರ್ತ ನಿಗದಿಯಾಗಿದ್ದು ಅಂದೇ ನಿರ್ಮಾಣ ಕಾರ್ಯ ಸಹ ಆರಂಭಗೊಳ್ಳಲಿದೆ. ರಾಮ ಮಂದಿರ ನಿರ್ಮಾಣ ಸಂಬಂಧ ಟ್ರಸ್ಟಿ ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಉಡುಪಿ ಪೇಜಾ ವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದರು. ನಂತರ ಉಡುಪಿ ಯಲ್ಲಿ ಮಾಧ್ಯಮಗಳ ಜೊತೆ ಮಾತ ನಾಡಿದ ಅವರು, ಮಂದಿರ ನಿರ್ಮಾಣ ಮೊತ್ತದ ಕ್ರೋಢೀಕರಣದ ಬಗ್ಗೆ…
ಕೋವಿಡ್-19 ಲಸಿಕೆಗಾಗಿ ಭಾರತದ 7 ಫಾರ್ಮಾ ಸಂಸ್ಥೆಗಳ ನಡುವೆ ಪೈಪೋಟಿ
July 20, 2020ನವದೆಹಲಿ, ಜು. 19- ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸಲು ಜಾಗತಿಕ ವಾಗಿ ಫಾರ್ಮಾ ಸಂಸ್ಥೆಗಳು ಯತ್ನಿಸು ತ್ತಿದ್ದು, ಭಾರತದ 7 ಫಾರ್ಮಾ ಸಂಸ್ಥೆ ಗಳೂ ಸಹ ಪೈಪೆÇೀಟಿಯಲ್ಲಿವೆ. ಜಾಗತಿಕ ಮಟ್ಟದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಭಾರತ್ ಬಯೋ ಟೆಕ್, ಸೆರಮ್ ಇನ್ಸ್ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪ್ಯಾನೇಸಿಯಾ ಬಯೋ ಟೆಕ್, ಇಂಡಿಯನ್ ಇಮ್ಯುನೊಲಾಜಿ ಕಲ್ಸ್, ಮೈನ್ವಾಕ್ಸ್ ಹಾಗೂ ಬಯೋಲಾ ಜಿಕಲ್ ಈ ಮುಂತಾದ ಭಾರತೀಯ ಫಾರ್ಮಾ ಸಂಸ್ಥೆಗಳು ಕೊರೊನಾ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಸಾಮಾನ್ಯವಾಗಿ ಯಾವುದೇ ಲಸಿಕೆಯ ಪರೀಕ್ಷೆಗೆ…
ಕೊರೊನಾ ಎಫೆಕ್ಟ್: ಚಾಮುಂಡೇಶ್ವರಿ ದೇವಾಲಯಕ್ಕೆ ಮೂರೇ ತಿಂಗಳಲ್ಲಿ 8.36 ಕೋಟಿ ರೂ.ನಷ್ಟ
July 20, 2020ಮೈಸೂರು, ಜು.19- ಜಗತ್ತಿನ ಹಲವು ರಾಷ್ಟ್ರಗಳನ್ನು ತಲ್ಲಣಗೊಳಿಸಿ ಆರ್ಥಿಕ ಕ್ಷೇತ್ರ ವನ್ನು ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಧಾರ್ಮಿಕ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರಿದೆ. ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಮುಂಚೂಣಿ ಸ್ಥಾನ ಪಡೆದಿರುವ ಚಾಮುಂಡಿಬೆಟ್ಟ ದೇವಾ ಲಯದ ಆದಾಯ ಗಳಿಕೆಯಲ್ಲಿ ಮೂರೇ ತಿಂಗಳಲ್ಲಿ 8.36 ಕೋಟಿ ರೂ. ಕುಸಿತ ಕಂಡಿದೆ. ದೇಶ, ವಿದೇಶದ ಪ್ರವಾಸಿಗರು ಹಾಗೂ ಭಕ್ತರನ್ನು ಸೂಜಿಗಲ್ಲಂತೆ ಸೆಳೆಯುವ ಮೈಸೂ ರಿನ ಚಾಮುಂಡಿಬೆಟ್ಟ ಶಕ್ತಿ ದೇವಿಯ ಆರಾ ಧನೆಯ ಧಾರ್ಮಿಕ ಕೇಂದ್ರವಾಗಿಯೂ ಹಾಗೂ ಪ್ರವಾಸಿ…
ಮೈಸೂರಲ್ಲಿ ಬಳಸಿದ ಪಿಪಿಇ ಕಿಟ್ ರಸ್ತೆಬದಿ ಪತ್ತೆ
July 20, 2020ಬಳಿಕ ಬೆಂಕಿಯಲ್ಲಿ ದಹಿಸಿ ನಾಶಪಡಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಮೈಸೂರು, ಜು.19(ಪಿಎಂ)- ಮೈಸೂರಿನಲ್ಲಿ ಕೊರೊನಾ ಸೋಂಕು ದಿನೇ ದಿನೆ ವ್ಯಾಪಿಸುತ್ತಿದೆ. ಇದರ ನಡುವೆ ಬಳಸಿ ಬಿಸಾಡಿದ ಪಿಪಿಇ ಕಿಟ್ಗಳು ನಗರದ ರಮಾಬಾಯಿನಗರದ ಮುಖ್ಯ ರಸ್ತೆಬದಿ ಭಾನುವಾರ ಗೋಚರಿಸಿದ್ದು, ಕೆಲಕಾಲ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಕೊರೊನಾ ಸೋಂಕಿತರ ಸೇವೆಗಾಗಿ ಅವರ ಸಮೀಪ ತೆರಳ ಬೇಕಾದ ಆರೋಗ್ಯ ಸಿಬ್ಬಂದಿಗಳಷ್ಟೇ ಹೆಚ್ಚಾಗಿ ಈ ಪಿಪಿಇ ಕಿಟ್ಗಳನ್ನು ಬಳಸುತ್ತಾರೆ. ಸೋಂಕು ಇರುವ ಶಂಕೆಯ ವ್ಯಕ್ತಿಗಳನ್ನು ತಪಾಸಣೆ ಮಾಡಬೇಕಾದ ಸಂದರ್ಭದಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ಇಂಥ…
ಬೆಂಗಳೂರು ಟೋಲ್ ಸಿಬ್ಬಂದಿಗೆ ಕೊರೊನಾ ಸೋಂಕು: ಮೈಸೂರಲ್ಲೂ ಶುಲ್ಕ ಸಂಗ್ರಹ ಸ್ಥಗಿತ
July 20, 2020ಮೈಸೂರು, ಜು.19(ಎಂಟಿವೈ)- ಬೆಂಗ ಳೂರು ಸೇರಿದಂತೆ ವಿವಿಧೆಡೆ ಟೋಲ್ ಸಂಗ್ರಹ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮೈಸೂರು-ನಂಜನ ಗೂಡು ಹಾಗೂ ಮೈಸೂರು-ಕೊಳ್ಳೇಗಾಲ ರಸ್ತೆಯ ಟೋಲ್ ಸಂಗ್ರಹ ಸ್ಥಗಿತಗೊಳಿಸ ಲಾಗಿದೆ. ವಾಹನಗಳು ಶುಲ್ಕ ಪಾವತಿಸುವ ಗೋಜಿಲ್ಲದೇ ಸರಾಗ ಸಂಚರಿಸುತ್ತಿವೆ. ಸೋಂಕಿತ ವ್ಯಕ್ತಿಗಳಿಂದ ಶುಲ್ಕ ಪಡೆದಿ ದ್ದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪಾಯಿಂಟ್ಗಳ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766 (212)ರಲ್ಲಿ ಮೈಸೂರು-ನಂಜನಗೂಡು ರಸ್ತೆ, ತಿ.ನರಸೀಪುರ, ಕೊಳ್ಳೇಗಾಲದಲ್ಲಿ…
ಕನ್ನಡದ ಹಿರಿಯ ನಟಿ ಬಿ.ಶಾಂತಮ್ಮ ವಿಧಿವಶ
July 20, 2020ಮೈಸೂರು, ಜು. 19- ಚಿನ್ನಾರಿ ಮುತ್ತ, ಚಂದವಳ್ಳಿ ತೋಟ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಬಿ.ಶಾಂತಮ್ಮ ಭಾನುವಾರ ವಿಧಿವಶರಾಗಿದ್ದಾರೆ. 95 ವರ್ಷದ ಬಿ. ಶಾಂತಮ್ಮ ಅವರು ಭಾನು ವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡ, ತೆಲುಗು, ತಮಿಳು, ಮಲ ಯಾಳಂ ಮತ್ತು ಹಿಂದಿ ಭಾಷೆಯ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಶಾಂತಮ್ಮ ಅವರು ಪೋಷಕ ಪಾತ್ರ ನಿರ್ವಹಣೆಯಲ್ಲಿ ತಮ್ಮದೇ ಆದ…
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್ಗೆ ಆಗ್ರಹಿಸಿ ನಾಳೆ ಪ್ರತಿಭಟನೆ
July 20, 2020ಮೈಸೂರು, ಜು.19(ಪಿಎಂ)- ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್ಗೆ ಆಗ್ರಹಿಸಿ `ರೈತ ಹುತಾತ್ಮ ದಿನ’(ಜು.21) ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಲಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಟಿ.ರಾಮೇಗೌಡ ತಿಳಿಸಿದರು. ಮೈಸೂರಿನ ವಾಲ್ಮೀಕಿ ರಸ್ತೆಯ ಲೀಲಾ ಚೆನ್ನಯ್ಯ ಸಮುದಾಯ ಭವನದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿ ನಡೆಸಿದ ಅವರು, ನವಲಗುಂದ-ನರಗುಂದ ರೈತರ ಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿ ಯಾದ ರೈತರ ಸ್ಮರಣಾರ್ಥ…










