ಮೈಸೂರು,ಜು.22-ಪರಿಸರಪ್ರೇಮಿ ಹಾಗೂ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್ ಅವರ 61ನೇ ಹುಟ್ಟುಹಬ್ಬದ ಅಂಗವಾಗಿ ಪರಿಸರ ಸ್ನೇಹಿ ತಂಡದಿಂದ ಜ್ಯೋತಿ ನಗರದಲ್ಲಿರುವ ಪೆÇಲೀಸ್ ಕ್ವಾಟ್ರ್ರಸ್ನ ಉದ್ಯಾನವನದಲ್ಲಿ `ಹಸಿರು ಉಸಿರು’ ಕಾರ್ಯ ಕ್ರಮದಡಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಗೌರವ ಸಲ್ಲಿಸಲಾಯಿತು. ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ಯುವಕರು ವಿದ್ಯಾವಂತರಾಗಬೇಕು. ಸಸಿಗಳು ಮರಗಳಾಗಿ ಬೆಳೆದು ನಿಂತರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಈ ಸಂದೇಶ…
ಡಾ.ಅಂಬೇಡ್ಕರ್ ನಿವಾಸದ ಮೇಲಿನ ದಾಳಿ ಖಂಡಿಸಿ `ಸಮತಾ’ ಪ್ರತಿಭಟನೆ
July 23, 2020ಮೈಸೂರು,ಜು.22(ಪಿಎಂ)-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈ ನಿವಾಸ `ರಾಜಗೃಹ’ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾ ಯಿಸಿ ಸಮತಾ ಸೈನಿಕ ದಳದ ಮೈಸೂರು ನಗರ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮಹಾರಾಷ್ಟ್ರ ಸರ್ಕಾರದ ಭದ್ರತಾ ವೈಫ ಲ್ಯವೇ ಈ ದಾಳಿಗೆ ಕಾರಣ. `ರಾಜಗೃಹ’ ವನ್ನು `ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ ದರು. ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳ ಅದೆಷ್ಟೊ ಸಿಬ್ಬಂದಿ ಕೆಲಸ…
ತರಗತಿ ಪುನಾರಂಭ, ಪರೀಕ್ಷೆ ನಡೆಸುವ ಸಂಬಂಧ ಮೈಸೂರು ವಿವಿಯ ತರಾತುರಿ ನಿರ್ಧಾರಕ್ಕೆ ಎಐಡಿಎಸ್ಓ ವಿರೋಧ
July 23, 2020ಮೈಸೂರು,ಜು.22-ದೇಶದಲ್ಲಿ ಕೊರೊನಾದ ಭೀಕರತೆ ಹೆಚ್ಚುತ್ತಿದ್ದು, ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರು ತ್ತಲೇ ಇವೆ. ಇದಕ್ಕೆ ಕರ್ನಾಟಕವು ಹೊರತಾಗಿಲ್ಲ. ದಿನೇ ದಿನೆ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುವುದರ ಜೊತೆಗೆ ಸೊಂಕಿತರ ಸಾವಿನ ಪ್ರಮಾಣವು ಹೆಚ್ಚಾಗುತ್ತಲೇ ಇದೆ. ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿಯೂ ಸೂಕ್ತ ಚಿಕಿತ್ಸೆ, ಹಾಸಿಗೆಗಳು ಕೂಡ ದೊರೆಯದಂತಹ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೈಸೂರು ವಿವಿ ತರಾತುರಿಯಲ್ಲಿ ತರಗತಿ ಪುನರಾರಂಭ ಮತ್ತು ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದು ಸೂಕ್ತವಲ್ಲ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್…
ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಸದ್ಯಕ್ಕಿಲ್ಲ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ
July 22, 2020ಮೈಸೂರು, ಜು. 21(ಆರ್ಕೆ)-ಗಾಳಿ-ಬೆಳಕು ಹಾಗೂ ಇನ್ನಿತರ ಮೂಲ ಸೌಕರ್ಯ ಗಳ ಕೊರತೆಯಿಂದಾಗಿ ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣ ದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡು ವುದನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಒಳಾಂಗಣ ಕ್ರೀಡಾಂಗಣ ವಿಶಾಲವಾಗಿದ್ದು, ಡಾರ್ಮೆಟ್ರಿ ಸೇರಿದಂತೆ ಒಟ್ಟು ಸುಮಾರು 1,000 ಹಾಸಿಗೆಗಳನ್ನು ಹಾಕಲು ಅವಕಾಶ ವಿದೆಯಾದರೂ, ಕಟ್ಟಡದಲ್ಲಿ ಕಿಟಕಿಗಳಿಲ್ಲದಿರು ವುದರಿಂದ ಸಾಕಷ್ಟು ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲ. ಏರ್ ಬ್ಲೋವರ್ ಇದೆಯಾದರೂ ಹವಾ ನಿಯಂತ್ರಿತ ಉಪಕರಣಗಳಿಲ್ಲ. ಅಗತ್ಯ ಗಾಳಿ-ಬೆಳಕಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಕೊರೊನಾ ವೈರಸ್ ಸೋಂಕಿತರನ್ನು ಒಂದೆಡೆ…
ಮರಳಿ ಕಾಡು ಸೇರಿದ `ಬಾವಿ’ ಚಿರತೆ
July 22, 2020ಮೈಸೂರು, ಜು.21(ಎಂಟಿವೈ)- ಆಹಾರ ಅರಸಿ ಬಂದು ಕಾಡಂಚಿನ ಗ್ರಾಮದ 100 ಅಡಿ ಆಳದ ಬಾವಿಗೆ ಬಿದ್ದಿದ್ದ 3 ವರ್ಷದ ಹೆಣ್ಣು ಚಿರತೆಯನ್ನು ರಕ್ಷಿಸಿದ್ದ ಅರಣ್ಯ ಸಿಬ್ಬಂದಿ, ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳವಾರ ಬೆಳಗ್ಗೆ ಮರಳಿ ಕಾಡಿಗೆ ಬಿಟ್ಟಿದ್ದಾರೆ. ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮ, ಹೆಚ್.ಡಿ. ಕೋಟೆ ತಾಲೂಕಿನ ಕಾರಾಪುರದಲ್ಲಿ 100 ಅಡಿ ಆಳದ ಬಾವಿಗೆ ಬಿದ್ದಿತ್ತು. ಸತತ 3 ದಿನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ…
ಕೋವಿಡ್ ನಿರ್ವಹಣೆಯಲ್ಲಿ ನಿರತರಾಗಿರುವ ಪೊಲೀಸರು ಮೈಸೂರಲ್ಲಿ ಅಪರಾಧ ಪ್ರಕರಣದ ತನಿಖೆ ಕುಂಠಿತ
July 22, 2020ಮೈಸೂರು, ಜು.21(ಆರ್ಕೆ)-ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿ ಜಿಲ್ಲಾಡಳಿತ ದೊಂದಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮೈಸೂರಿನ ಎಲ್ಲಾ ಠಾಣೆಗಳಲ್ಲಿ ಅಪರಾಧ ಪ್ರಕರಣಗಳ ತನಿಖಾ ಪ್ರಕ್ರಿಯೆಗೆ ಹಿನ್ನೆಡೆಯಾಗಿದೆ. ಕೋವಿಡ್-19 ಲಾಕ್ಡೌನ್, ಅದು ಸಡಿಲಗೊಂಡ ಬಳಿಕವೂ ಜನರ ಚಲನ-ವಲನದ ಮೇಲೆ ನಿರ್ಬಂಧ, ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಕಾರ್ಯೋನ್ಮುಖ ರಾಗಿದ್ದರು. ಈ ಮಧ್ಯೆ ಮೈಸೂರಲ್ಲಿ ಅಪ ರಾಧ ಪ್ರಕರಣಗಳ ಸಂಖ್ಯೆಯೂ ಕಡಿಮೆ ಯಾಗಿ, ತನಿಖೆ ಕುಂಠಿತವಾಗಿರುವುದು ಕಂಡು ಬರುತ್ತಿಲ್ಲವಾದರೂ, ಪೊಲೀಸ್ ತನಿಖಾ ಪ್ರಕ್ರಿಯೆಗೆ ಮಾತ್ರ…
ಕೊರೊನಾ ನಿಯಂತ್ರಣಕ್ಕೆ `ಮನೆ ಮದ್ದು’
July 22, 2020ಮೈಸೂರು, ಜು.21(ಆರ್ಕೆಬಿ)- ಮೈಸೂ ರಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಮತ್ತು ಸಾವುಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಜಂಟಿಯಾಗಿ `ಮನೆಮದ್ದು’ ಅಭಿಯಾನಕ್ಕೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದವು. ಗೋಮೂತ್ರ, ಸಗಣಿ, ಬೇವಿನಸೊಪ್ಪು, ಅಡುಗೆ ಅರಿಶಿನದ ಮಿಶ್ರಣದ ಸ್ಯಾನಿಟೈಸರ್ ನಿಂದ ಮನೆ ಅಂಗಳವನ್ನು ಸಾರಿಸಿದರೆ ಮನೆ ಯತ್ತ ಯಾವುದೇ ವೈರಸ್ ಸುಳಿಯದಂತೆ ತಡೆಯಬಹುದು. ಈ ಕ್ರಮ ಬಹಳ…
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಗೆಜೆಟ್ ಪ್ರತಿ ಸುಟ್ಟು ರೈತ ಸಂಘಟನೆಗಳ ಆಕ್ರೋಶ
July 22, 2020ಮೈಸೂರು, ಜು.21(ಎಂಟಿವೈ)- ರಾಜ್ಯ ಸರ್ಕಾರ ಜಾರಿ ಗೊಳಿಸಿದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋ ಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಸಾಮೂಹಿಕ ನಾಯಕತ್ವದಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ವೇಳೆ ಗೆಜೆಟ್ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ ಟಿ.ರಾಮೇ ಗೌಡ ಮಾತನಾಡಿ, ಪ್ರತಿವರ್ಷ ಜುಲೈ 21ರಂದು ರೈತ ಹುತಾತ್ಮ ದಿನ ಆಚರಿಸುತ್ತಿದ್ದೆವು. ಆದರೆ ಈ ಬಾರಿ ರಾಜ್ಯ ಸರ್ಕಾರದ ನಡೆ…
ಶ್ರಾವಣ ಶನಿವಾರಗಳಂದು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧ
July 22, 2020ಮೈಸೂರು, ಜು.21(ಆರ್ಕೆ)-ಕೊರೊನಾ ವೈರಸ್ ಹರಡು ವುದನ್ನು ನಿಯಂತ್ರಿಸುವ ಸಲುವಾಗಿ ಮೈಸೂರಿನ ಒಂಟಿ ಕೊಪ್ಪಲು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಶನಿವಾರಗಳಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಸಂಬಂಧ ಇಂದು ಆದೇಶ ಹೊರಡಿಸಿ ರುವ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಶ್ರಾವಣ ಶನಿವಾರಗಳಾದ ಜು.24ರ ಸಂಜೆ 6ರಿಂದ ಜು.26ರ ಮುಂಜಾನೆ 5 ಗಂಟೆವರೆಗೆ, ಜು.31ರ ಸಂಜೆ 6ರಿಂದ ಆ.2ರ ಮುಂಜಾನೆ 5 ಗಂಟೆವರೆಗೆ, ಆ.7ರ ಸಂಜೆ 6ರಿಂದ ಆ.9ರ ಮುಂಜಾನೆ 5 ಗಂಟೆವರೆಗೆ ಹಾಗೂ ಆ.14ರ…
ಕೃಷ್ಣರಾಜ ಕ್ಷೇತ್ರ `ಕೋವಿಡ್-19 ಸಾವಿಲ್ಲದ ಕ್ಷೇತ್ರ’ವಾಗಿಸಲು ಸಂಕಲ್ಪ
July 22, 2020ಮೈಸೂರು, ಜು.21(ಆರ್ಕೆಬಿ)- ಕಾಡಾ ಕಚೇರಿ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಕೋವಿಡ್ ಟಾಸ್ಕ್ಫೋರ್ಸ್ ಸಭೆ ನಡೆಸಿದ ಶಾಸಕ ಎಸ್.ಎ.ರಾಮದಾಸ್, ಕೃಷ್ಣರಾಜ ಕ್ಷೇತ್ರವನ್ನು `ಕೋವಿಡ್-19 ಸಾವಿಲ್ಲದ ಕ್ಷೇತ್ರ’ವಾಗಿಸಲು ಶ್ರಮಿ ಸುವ ನಿರ್ಣಯ ಕೈಗೊಂಡರು. ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಲಯ ಕಚೇರಿ ಗಳ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಅಧಿಕಾರಿ ಗಳು, ಸಹಾಯಕ ಇಂಜಿನಿಯರ್ಗಳನ್ನು ಪಟ್ಟಿ ಮಾಡಿ ಕಾರ್ಯ ನಿರ್ವಹಿಸಲಾಗುವುದು. ಪ್ರತಿ ವಲಯಕ್ಕೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಕೋವಿಡ್ ನಿರ್ವಹಣೆಗೆ ಮೀಸಲಿಡುವುದು, ಸದ್ಯದ ಪರಿಸ್ಥಿತಿ ಯಲ್ಲಿ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿರುವ…










