ಮಾ.23ರಿಂದಲೂ ಸದ್ದಿಲ್ಲದೆ ಮೂಕ ಪ್ರಾಣಿಗಳ ಸೇವೆಯಲ್ಲಿ ನಿರತ ಮೈಸೂರು,ಏ.9(ಎಂಟಿವೈ)- ಲಾಕ್ಡೌನ್ ಜನರನ್ನು ತತ್ತರಿಸುವಂತೆ ಮಾಡಿರುವುದ ಲ್ಲದೆ ಬೀದಿನಾಯಿಗಳನ್ನು ಕಂಗೆಡಿಸಿದೆ. ಮೈಸೂರಿನಲ್ಲಿಯೂ ದೇಶಿತಳಿ ಬೀದಿ ನಾಯಿಗಳು ಆಹಾರ ಅರಸಿ ಒಂದೆಡೆ ಯಿಂದ ಮತ್ತೊಂದೆಡೆಗೆ ಅಲೆಯುತ್ತಿವೆ. ಮೈಸೂರಿನಲ್ಲಿರುವ ಮೇಘಾಲಯದ ವಿದ್ಯಾರ್ಥಿನಿಯೊಬ್ಬರು 50ಕ್ಕೂ ಬೀದಿ ಶ್ವಾನಗಳ ಹಸಿವನ್ನು ಪ್ರತಿದಿನವೂ ತಣಿ ಸುವ ಕಾಯಕ ಮಾಡುತ್ತಿದ್ದಾರೆ. ಮೈಸೂರಿನ ದತ್ತ ನಗರದಲ್ಲಿ ವಾಸವಿದ್ದು, ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಎಸ್ ಡಬ್ಲ್ಯು ವ್ಯಾಸಂಗ ಮಾಡುತ್ತಿರುವ ಮೇಘಾ ಲಯದ ಮೊನಿಕಾ ಖರ್ಸಂಚೈ,…
ರಾಗಿ ಆಹಾರದಿಂದಷ್ಟೇ ರೋಗ ನಿರೋಧಕ ಶಕ್ತಿ ವೃದ್ಧಿಸದು; ವೈವಿಧ್ಯಮಯ ನಿಸರ್ಗದತ್ತ ಆಹಾರದಿಂದ ಆರೋಗ್ಯ ಭಾಗ್ಯ
April 10, 2020ಮೈಸೂರು, ಏ.9(ಪಿಎಂ)- `ರಾಗಿ’ ಧಾನ್ಯದಿಂದ ತಯಾರಾಗುವ ಆಹಾರಗಳ ಸೇವನೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಾಗೆಂದು ಇದೊಂದೇ ಆಹಾರ ಸೇವನೆಗೆ ಮಾತ್ರವೇ ಕಟ್ಟು ಬಿದ್ದರೆ ಪ್ರಯೋಜನ ವಿಲ್ಲ ಎಂಬ ಅಭಿಪ್ರಾಯ ಆಹಾರ ತಜ್ಞರಿಂದ ವ್ಯಕ್ತ ವಾಗಿದೆ. ಆಹಾರ ಕ್ರಮದಲ್ಲಿ ಹಿಂದಿನ ಸ್ಥಳೀಯ ವೈವಿಧ್ಯ ಇರಬೇಕು ಎಂದೂ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇದೀಗ ಕೊರೊನಾ ವೈರಾಣು ತಗುಲದಂತೆ, ಒಂದು ವೇಳೆ ತಗುಲಿದರೂ ರೋಗ ನಿರೋಧಕ ಶಕ್ತಿ ಇದ್ದರೆ ಅದನ್ನು ಮೆಟ್ಟಿ ಜಯಿಸಿಕೊಳ್ಳಬಹುದು ಎಂಬ ನಂಬಿಕೆ…
ಸಿಕ್ಕಿದ 50,000 ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಾನ್ಸ್ಟೇಬಲ್!
April 10, 2020ಮೈಸೂರು,ಏ.9(ಆರ್ಕೆ)-ಸಾರ್ವಜನಿಕ ಸ್ಥಳದಲ್ಲಿ ಸಿಕ್ಕಿದ 50,000 ರೂ. ನಗದನ್ನು ಠಾಣಾಧಿಕಾರಿಗಳ ಗಮನಕ್ಕೆ ತಂದು ವಾರಸುದಾರರಿಗೆ ಹಿಂದಿರು ಗಿಸಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಮೈಸೂರು ಜಿಲ್ಲೆ ತಿ.ನರಸೀಪುರ ಠಾಣೆ ಪೊಲೀಸ್ ಕಾನ್ ಸ್ಟೇಬಲ್ ಜಿ.ದಯಾನಂದ್ ಹಣ ಹಿಂದಿರುಗಿಸಿದವರು. ಸಬ್ಇನ್ ಸ್ಪೆಕ್ಟರ್ ಶಬ್ಬೀರ್ ಅವರ ಜೀಪ್ ಡ್ರೈವರ್ ಆಗಿ ಕಾರ್ಯನಿರ್ವ ಹಿಸುತ್ತಿರುವ ದಯಾನಂದ, ಮಾರ್ಚ್ 27ರಂದು ಮಧ್ಯಾಹ್ನ 12.30 ಗಂಟೆ ವೇಳೆಗೆ ತಿ.ನರಸೀಪುರದ ಸರ್ಕಾರಿ ಆಸ್ಪತ್ರೆ ರಸ್ತೆಯ ಪ್ರೈವೇಟ್ ಬಸ್ ಸ್ಟ್ಯಾಂಡ್ ಸರ್ಕಲ್ ಬಳಿ ಕೋವಿಡ್-19 ಲಾಕ್ ಡೌನ್…
ದೂರವಾಣಿ ಮೂಲಕವೇ ನಿಮ್ಮ ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಿ
April 10, 2020ಜೆಎಸ್ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಪ್ರಕಟಣೆ ಮೈಸೂರು,ಏ.9(ಆರ್ಕೆ)- ತುರ್ತು ಚಿಕಿತ್ಸೆಗಳನ್ನು ಹೊರತುಪಡಿಸಿ ನಿಮ್ಮ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಮೊಬೈಲ್ ದೂರವಾಣಿ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಣ್ಣ ಪುಟ್ಟ ಆರೋಗ್ಯ ತೊಂದರೆ ಹಾಗೂ ಮರು ತಪಾಸಣೆ(ಫಾಲೋಆಪ್)ಗಾಗಿ ಆಸ್ಪತ್ರೆಗೆ ಭೇಟಿ ನೀಡಲು ತೊಂದರೆಯಾಗಿ ರುವ ಕಾರಣ, ರೋಗಿಗಳು ತುರ್ತು ಹಾಗೂ ಗಂಭೀರ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದಂತೆ ಮನೆಯಿಂದಲೇ ಪ್ರತೀ ದಿನ ಬೆಳಿಗ್ಗೆ 10ರಿಂದ…
ಕೂಲಿಕಾರ್ಮಿಕರಿಗೆ ಮೇಯರ್ರಿಂದ ಪಡಿತರ ಕಿಟ್ ವಿತರಣೆ
April 10, 2020ಮೈಸೂರು, ಏ.9(ಆರ್ಕೆಬಿ)- ಕೊರೊನಾ ವೈರಸ್ ತಡೆಗಾಗಿ ಲಾಕ್ಡೌನ್ ಜಾರಿಯಾಗಿ ರುವ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ, ಕೂಲಿ ಹಣವೂ ಇಲ್ಲದೇ ಪರಿತಪಿಸುತ್ತಿರುವ ತಮ್ಮ ವಾರ್ಡ್ನ ಜನರಿಗೆ ನಗರಪಾಲಿಕೆ ಸದಸ್ಯ ಮಾ.ವಿ.ರಾಮ್ಪ್ರಸಾದ್ ಪಡಿತರ ಕಿಟ್ ವಿತರಿಸಿ ನೆರವಾಗಿದ್ದಾರೆ. ಬಡವರು, ಕೂಲಿ ಕಾರ್ಮಿಕರೇ ಹೆಚ್ಚು ಇರುವ 55ನೇ ವಾರ್ಡ್ನ ಜನರಿಗೆ ಅಕ್ಕಿ, ಬೇಳೆಕಾಳು, ರವೆ, ಸಕ್ಕರೆ ಇರುವ ಪಡಿತರ ಕಿಟ್ಗಳನ್ನು ಗುರುವಾರ ಮೇಯರ್ ತಸ್ನೀಂ ಜತೆಗೂಡಿ ವಿತರಿಸಿದ್ದಾರೆ. ಈ ವೇಳೆ ಮಾತನಾಡಿದ ಮೇಯರ್ ತಸ್ನೀಂ, ಕೋವಿಡ್-19 ವೈರಸ್ ಹಾವಳಿ ಯಿಂದಾಗಿ ಇಡೀ ದೇಶ…
ಪೌರಕಾರ್ಮಿಕರಿಗೆ ಸ್ವಚ್ಛತಾ ಪರಿಕರ ವಿತರಿಸಿದ ಪಿಜಿ ಜನಸ್ಪಂದನಾ ಫೌಂಡೇಷನ್
April 10, 2020ಮೈಸೂರು, ಏ.9(ಆರ್ಕೆಬಿ)- ಪೌರ ಕಾರ್ಮಿಕರಿಗೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಪಿಜಿ ಜನಸ್ಪಂದನಾ ಫೌಂಡೇಷನ್ ನಡೆಸಿತು. ಫೌಂಡೇಷನ್ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ಗೌಡ, ಪೌರಕಾರ್ಮಿಕ ರಿಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಅಗತ್ಯ ವಿರುವ ಮಾಸ್ಕ್, ಸ್ಯಾನಿಟೈಜûರ್, ನೀರು ತುಂಬುವ ಬಕೆಟ್, ಡೆಟಾಲ್ ಸೋಪ್, ನೀರಿನ ಬಾಟಲಿ, ತಿಂಡಿ ವಿತರಿಸಿದರು. ಪ್ರತಿದಿನ ಬೆಳಿಗ್ಗೆ 6.30 ಗಂಟೆಗೆ ಟೀ ಮತ್ತು ಸ್ವಚ್ಛ ನೀರು ನೀಡುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ನಿರ್ದೇಶಕ ಗುರುಪ್ರಸಾದ್, ಸ್ಕಂದ,…
ಮನೆಯ ವೈದ್ಯಕೀಯ ತ್ಯಾಜ್ಯ ಪ್ರತ್ಯೇಕವಾಗಿಯೇ ಪೌರಕಾರ್ಮಿಕರಿಗೆ ನೀಡಿ
April 10, 2020ಮೈಸೂರು,ಏ.9(ಎಸ್ಬಿಡಿ)- ಸಾರ್ವಜನಿ ಕರು ಬಳಸುವ ಮುಖ ಕವಚ(ಮಾಸ್ಕ್) ಹಾಗೂ ಕೈಗವಸು(ಗ್ಲೌಸ್) ಮೊದಲಾದ ವೈದ್ಯಕೀಯ ತ್ಯಾಜ್ಯವನ್ನು ಪೌರಕಾರ್ಮಿ ಕರಿಗೆ ಪ್ರತ್ಯೇಕವಾಗಿಯೇ ನೀಡಬೇಕೆಂದು ಮೈಸೂರು ನಗರ ಪಾಲಿಕೆ ಆಯುಕ್ತರು ಗುರುವಾರ ಮನವಿ ಮಾಡಿದ್ದಾರೆ. ಕೆಲವರು ಬೇಜವಾಬ್ದಾರಿಯಿಂದ ಕಸದ ತೊಟ್ಟಿ, ರಸ್ತೆಬದಿ, ಚರಂಡಿ, ಹೀಗೆ ಎಲ್ಲೆಂ ದರಲ್ಲಿ ಬಿಸಾಡುತ್ತಿದ್ದಾರೆ. ಅಲ್ಲದೆ ಕೆಲವೆಡೆ ಸಾಮಾನ್ಯ ತ್ಯಾಜ್ಯದೊಂದಿಗೆ ಸೇರಿಸಿ, ಪೌರ ಕಾರ್ಮಿಕರಿಗೆ ನೀಡಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯವಾಗುವುದಲ್ಲದೆ, ಪೌರ ಕಾರ್ಮಿಕರು, ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ನಿರ್ಲಕ್ಷ್ಯದಿಂದ ಕೊರೊನಾ ಸೋಂಕು ಹರಡುವ…
ಲಾಕ್ಡೌನ್ನಿಂದ ಪ್ರವಾಸಿ ಮಾರ್ಗದರ್ಶಿಗಳ ಜೀವನ ಮಾರ್ಗವೇ ಬಂದ್
April 10, 2020ಮೈಸೂರು,ಏ.9(ವೈಡಿಎಸ್)- ಲಾಕ್ಡೌನ್ನಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಒಂದು ವೇಳೆ ಲಾಕ್ ಡೌನ್ ಮುಗಿದರೂ ಪ್ರವಾಸೋದ್ಯಮ ಮೊದ ಲಿನಂತೆ ಆಗಬೇಕಾದರೆ ವರ್ಷವಾದರೂ ಬೇಕು. ಇದನ್ನೇ ನಂಬಿದ್ದ ನಮ್ಮ ಕುಟುಂಬ ಗಳು ಆರ್ಥಿಕ ಸಂಕಷ್ಟ ಎದುರಿಸಬೇಕಿದೆ. ಜತೆಗೆ ಮಗಳ ವ್ಯಾಸಂಗವನ್ನು ಮೊಟಕುಗೊಳಿಸಬೇ ಕಾದ ದುಃಸ್ಥಿತಿ ಎದುರಾಗಿದೆ. ಹಾಗಾಗಿ ಪ್ರವಾ ಸೋದ್ಯಮ ಇಲಾಖೆ ಲಾಕ್ಡೌನ್ ಮುಗಿಯು ವವರೆಗಾದರೂ ಗೈಡ್ಗಳಿಗೆ ಮಾಸಿಕ ಮೂರು ಸಾವಿರ ರೂ. ಸಹಾಯಧನ ನೀಡಿದರೆ ಹೇಗೋ ಜೀವನ ಸಾಗಿಸುತ್ತೇವೆ… ಇದು ಪ್ರವಾಸಿ ತಾಣಗಳ ಪ್ರಸಿದ್ಧ ನಗರಿ ಮೈಸೂರಿನ ಟೂರಿಸ್ಟ್…
ರಾಜ್ಯದ 18 ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವರಿಕೆ ಅನಿವಾರ್ಯ
April 9, 2020ಮೈಸೂರು, ಏ.8(ಎಂಕೆ)- ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ 18 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರೆಸುವ ಅನಿವಾರ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಯಲ್ಲಿ ಕೊರೊನಾ (ಕೋವಿಡ್-19) ಸೋಂಕು ಕುರಿತು ಅಧಿಕಾರಿಗಳೊಂ ದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.14ರ ನಂತರ ಲಾಕ್ಡೌನ್ ಮುಂದುವರೆಸಬೇಕೋ ಅಥವಾ ಬೇಡವೇ ಎಂಬ ವಿಚಾರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಪಕ್ಷ ನಾಯಕರ…
ಉದಯಗಿರಿ, ರಾಜೀವನಗರಗಳಲ್ಲಿ ಪೊಲೀಸರಿಂದ ಜನ, ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ
April 9, 2020ಮೈಸೂರು,ಏ.8(ಆರ್ಕೆ)-ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಿರುವ ಲಾಕ್ಡೌನ್ ನಿರ್ಬಂಧ ನಿಯಮ ಪಾಲನೆಗಾಗಿ ಉದಯಗಿರಿ, ರಾಜೀವ ನಗರ, ಎನ್.ಆರ್.ಮೊಹಲ್ಲಾ ಹಾಗೂ ನಜರ್ಬಾದ್ ಭಾಗಗಳಲ್ಲಿ ಆಯಾ ಠಾಣಾ ಪೊಲೀಸರು ಇಂದು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ನಿಜಾಮುದ್ದೀನ್ನಿಂದ ಕೆಲವರು ಹಿಂದಿರುಗಿದ ನಂತರ ಮೈಸೂರಿನಲ್ಲಿ ಕೋವಿಡ್ ಸೋಂಕಿತರು ಮತ್ತು ಶಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಂಕು ಇತರರಿಗೆ ಹರಡದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿ ರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಿರ್ದೇಶನದಂತೆ ಉದಯಗಿರಿ, ಎನ್.ಆರ್., ಮಂಡಿ, ಲಷ್ಕರ್, ನಜರ್ಬಾದ್ ಠಾಣೆ ಹಾಗೂ ಸಿದ್ದಾರ್ಥನಗರ…










