ಮಂಡ್ಯ, ಏ.1(ನಾಗಯ್ಯ)- ರೈತರು ಬೆಳೆದ ಬೆಳೆಗಳು ಸಣ್ಣ ಪ್ರಮಾಣದಲ್ಲಿದ್ದರೆ ಮಾರಾಟ ಮಾಡಲು ಸ್ಥಳೀಯ ಮಾರು ಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೇಲುಕೋಟೆ ಶಾಸಕರಾದ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ಅವರು ಮೇಲುಕೋಟೆಯಲ್ಲಿ ಹೋಬಳಿಯ ಪಿ.ಡಿ.ಒಗಳಿಗೆ ಕೊರೊನಾ ಜಾಗೃತಿ ಸಂಬಂಧ ಕೈಗೊಳ್ಳಬೇಕಾದ ಮುನ್ನೆ ಚ್ಚರಿಕೆ ಕ್ರಮದ ಮಾಹಿತಿ ನೀಡಿ ಮಾತ ನಾಡಿದರು. ರೈತರು ಬೆಳೆದ ಬೆಳೆಯನ್ನು ತಾವೆ ಕೈಯಾರೆ ನಾಶಪಡಿಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ರೈತರು ಎದೆಗುಂದಬಾರದು. ಹೆಚ್ಚಿನ ಪ್ರಮಾಣ ದಲ್ಲಿ ಬೆಳೆ ಇದ್ದರೆ ತಾಲ್ಲೂಕು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ…
ಲಾಕ್ಡೌನ್: ಮೈಸೂರಿನ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತ ಸಂಗ್ರಹ ಇಳಿಮುಖ
April 1, 2020ಮೈಸೂರು, ಮಾ.31- ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರ ಪರಿಣಾಮ ಮೈಸೂರಿನ ಬ್ಲಡ್ ಬ್ಯಾಂಕ್ಗಳಲ್ಲಿ (ರಕ್ತನಿಧಿ ಕೇಂದ್ರಗಳಲ್ಲಿ) ರಕ್ತದ ಸಂಗ್ರಹ ಕಡಿಮೆಯಾಗುತ್ತಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಜೀವಧಾರಾ ರಕ್ತನಿಧಿ ಬ್ಯಾಂಕ್ ಸೇರಿದಂತೆ ಮೈಸೂರಿನ ಬಹು ತೇಕ ಬ್ಲಡ್ ಬ್ಯಾಂಕ್ಗಳಲ್ಲಿದ್ದ ರಕ್ತದ ಸಂಗ್ರಹ ಖಾಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಲಾಕ್ಡೌನ್ ಜಾರಿಯಲ್ಲಿರುವುದರಿಂದ `ಮನೆಯಲ್ಲೇ ಇರಿ’ ಎಂಬ ಕಟ್ಟುನಿಟ್ಟಿನ ಸೂಚನೆಯಿಂದಾಗಿ ಜನರು ಮನೆಯೊ ಳಗೇ ಉಳಿದಿದ್ದಾರೆ. ಹೀಗಾಗಿ ರಕ್ತದಾನಿ ಗಳು ಬ್ಲಡ್ ಬ್ಯಾಂಕ್ಗೆ ತೆರಳಿ ರಕ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ….
ಕೊರೊನಾ ವೈರಸ್ನಿಂದ ರಕ್ಷಣೆಗಾಗಿ ಮೈಸೂರು ರಾಮಕೃಷ್ಣ ಆಶ್ರಮದಿಂದ ‘ರಕ್ಷಣಾ ಕಿಟ್’ ರೆಡಿ
April 1, 2020ಪೊಲೀಸರು, ನಿರ್ಗತಿಕರು, ಪೌರಕಾರ್ಮಿಕರಿಗೆ ವಿತರಿಸುವ ಉದ್ದೇಶ ಮೈಸೂರು, ಮಾ.31(ಎಂಕೆ)- ಮಾರಕ ಕೊರೊನಾ(ಕೋವಿಡ್-19) ವೈರಸ್ ನಿಂದ ರಕ್ಷಿಸಿಕೊಳ್ಳಲು ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ‘ಕೊರೊನಾ ರಕ್ಷಣಾ ಕಿಟ್’ ತಯಾರಿ ನಡೆಯುತ್ತಿದ್ದು, 2000ಕ್ಕೂ ಹೆಚ್ಚು ಕಿಟ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ಕರ್ತವ್ಯನಿರತ ಪೊಲೀಸರು, ವೈದ್ಯ ಕೀಯ ಸಿಬ್ಬಂದಿ, ಪೌರಕಾರ್ಮಿಕರು, ಬಡ ವರು, ಹಣ್ಣು ತರಕಾರಿ ವ್ಯಾಪಾರಿಗಳು, ನಿರ್ಗತಿಕರ ಆರೋಗ್ಯ ದೃಷ್ಟಿಯಿಂದ ಉಚಿತ ವಾಗಿ ವಿತರಣೆ ಮಾಡಲು ಕಳೆದ ಮೂರ್ನಾಲ್ಕು ದಿನಗಳಿಂದ ಕೊರೊನಾ ರಕ್ಷಣಾ ಕಿಟ್ ಗಳನ್ನು ತಯಾರಿಸಲಾಗುತ್ತಿದ್ದು, ಈಗಾಗಲೇ 500 ಕಿಟ್ಗಳನ್ನು ನಗರದ ಕೆಲವು…
ಲಾಕ್ಡೌನ್: ಮೈಸೂರಲ್ಲಿ ಮನೆ ಬಾಗಿಲಿಗೇ ಹಣ್ಣು-ತರಕಾರಿ
April 1, 2020ಮೈಸೂರು, ಮಾ.31(ಪಿಎಂ)- ಕೊರೊನಾ ತಡೆಯಲು ಲಾಕ್ಡೌನ್ ಜಾರಿಯಲ್ಲಿರು ವುದರಿಂದ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಮನೆ ಬಾಗಿಲಿಗೆ ಹಣ್ಣು ಹಾಗೂ ತರಕಾರಿ ಪೂರೈಸುವ ಕಾರ್ಯ ಮಂಗಳವಾರ ಚಾಲನೆ ಪಡೆಯಿತು. ಮೈಸೂರು ಮಹಾನಗರ ಪಾಲಿಕೆ, ತೋಟಗಾರಿಕೆ ಇಲಾಖೆ ಹಾಗೂ ಹಾಪ್ಕಾಮ್ಸ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, 5 (ಹಾಪ್ಕಾಮ್ಸ್ನ 1, ಪಾಲಿಕೆಯ 4) ವಾಹನಗಳು ಜನರ ಮನೆ ಬಾಗಿಲಿಗೇ ಹಣ್ಣು-ತರಕಾರಿ ಪೂರೈಸಲಿವೆ. ಪ್ರತಿ ವಾಹನದಲ್ಲಿ 1.5 ಟನ್ ಹಣ್ಣು-ತರಕಾರಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಮಾರುಕಟ್ಟೆಯಲ್ಲಿ ಜನದಟ್ಟಣೆ ಕಡಿಮೆಗೊಳಿಸುವಲ್ಲಿಯೂ…
ನಿರ್ಗತಿಕರಿಗೆ ಮತ್ತಷ್ಟು ಸಾಂತ್ವನ ಕೇಂದ್ರ ತೆರೆಯಿರಿ ಪಾಲಿಕೆ ಅಧಿಕಾರಿಗಳಿಗೆ ಶಾಸಕ ನಾಗೇಂದ್ರ ಸೂಚನೆ
April 1, 2020ಮೈಸೂರು, ಮಾ. 31(ಆರ್ಕೆ)- ಮೈಸೂರು ನಗರದಲ್ಲಿ ನಿರ್ಗತಿಕರಿರುವೆಡೆ ಮತ್ತಷ್ಟು ಸಾಂತ್ವನ ಕೇಂದ್ರಗಳನ್ನು ತೆರೆದು ಊಟ-ವಸತಿ ಸೌಲಭ್ಯ ಒದಗಿಸಿ ಎಂದು ಚಾಮ ರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಪಾಲಿಕೆ ಅಧಿಕಾರಿಗಳಿಗೆ ಇಂದು ಸೂಚನೆ ನೀಡಿದರು. ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ತಲೆದೋರಿರುವ ಕಷ್ಟ ಪರಿಸ್ಥಿತಿ ನಿಭಾಯಿಸುವ ಸಂಬಂಧ ಮೈಸೂರು ಮಹಾ ನಗರಪಾಲಿಕೆ ಕಚೇರಿ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂ ದಿಗೆ ತುರ್ತು ಸಭೆ ನಡೆಸಿದ ಶಾಸಕರು, ಬಿಗಡಾಯಿಸುತ್ತಿರುವ…
ಮೈಸೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆ: ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
March 31, 2020* ಕ್ವಾರಂಟೇನ್ ನಲ್ಲಿರುವವರಿ ಮನೆಯಿಂದ ಹೊರಗೆ ಬಂದರೆ ಕ್ರಿಮಿನಲ್ ಪ್ರಕರಣ ದಾಖಲು * ಸಚಿವ ವಿ.ಸೋಮಣ್ಣ ಎಚ್ಚರಿಕೆ ಮೈಸೂರು,ಮಾ.30( MTY ) – ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಮತ್ತೆ ನಾಲ್ವರು ನೌಕರರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ, ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗಿದ್ದು ನಿಯಮ ಉಲ್ಲಂಘಿಸಿ ಕ್ವಾರಂಟೇನ್ ನಲ್ಲಿರುವವರು ಹೊರಗೆ ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಎಚ್ಚರಿಸಿದ್ದಾರೆ. ಮೈಸೂರು ಜಿ.ಪಂ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ…
ಲಾಕ್ ಡೌನ್ ನಡುವೆಯೂ ಪ್ರಾಣಿಗಳ ಹಿತಕಾಯುತ್ತಿರುವ ಮೃಗಾಲಯದ ಸಿಬ್ಬಂದಿ
March 30, 2020*ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನಿಂದ ಕೈ ತೊಳೆದರೆ ಮಾತ್ರ ಪ್ರವೇಶ * ಪ್ರತಿದಿನ 200ಕ್ಕೂ ಹೆಚ್ಚು ಸಿಬ್ಬಂದಿಯಿಂದ ಪ್ರಾಣಿ-ಪಕ್ಷಿಗಳ ಪಾಲನೆ ಮೈಸೂರು,ಮಾ.30( MTY) – ನೊವೆಲ್ ಕೊರೊನಾ ಸೋಂಕು ಹರಡುವಿಕೆ ತಡೆಯಲು ಏ.14ರವರೆಗೂ ಇಡೀ ದೇಶವೇ ಲಾಕ್ ಡೌನ್ ಆಗಿ ಸ್ತಬ್ದವಾಗಿದ್ದರೂ, ಮೈಸೂರು ಮೃಗಾಲಯದಲ್ಲಿ ಅಗತ್ಯ ಮುನ್ನಚ್ಚರಿಕೆಯೊಂದಿಗೆ ಪ್ರಾಣಿ-ಪಕ್ಷಿಗಳ ಹಿತಕಾಯುವ ಸೇವೆಯನ್ನು 200ಕ್ಕೂ ಹೆಚ್ಚು ಸಿಬ್ಬಂದಿ ಮಾಡುತ್ತಿದ್ದಾರೆ. ಕೊರೊನಾ ವೈರಸ್ ವ್ಯಾಪಿಸಿದ ಪರಿಣಾಮ ಮೊದಲ ಹಂತದಲ್ಲಿ ಮಾ.15ರಿಂದ 23ರವರೆಗೆ ಮೈಸೂರು ಮೃಗಾಲಯವನ್ನು ಬಂದ್ ಮಾಡಲಾಗಿತ್ತು. ಅದರೂ ಎಲ್ಲೆಡೆ…
ಜನತಾನಗರದಲ್ಲಿ ತರಕಾರಿ ವಿತರಿಸಿದ ಎಪಿಎಂಸಿ ದಲ್ಲಾಳಿ ಸಂಘ
March 30, 2020* ಮೂರು ಗೂಡ್ಸ್ ಆಟೋ ರಿಕ್ಷಾಗಳಲ್ಲಿ ತರಕಾರಿ ತಂದು ಹಂಚಿದರು ಮೈಸೂರು,ಮಾ.30( MTY ) – ಲಾಕ್ ಡೌನ್ ನಿಂದಾಗಿ ತತ್ತರಿಸಿದ್ದ ಮೈಸೂರಿನ ಜನತಾನಗರದ ಕೆಲ ರಸ್ತೆಗಳಲ್ಲಿ ಸೋಮವಾರ ಎಪಿಎಂಸಿ ದಲ್ಲಾಳಿ ಸಂಘದ ವತಿಯಿಂದ ಉಚಿತವಾಗಿ ನಾಲ್ಕು ಬಗೆಯ ತರಕಾರಿಯನ್ನು ವಿತರಿಸಲಾಯಿತು. ಇಂದು ಮಧ್ಯಾಹ್ನ 2ರಿಂದ 3 ವರೆಗೆ ಜನತಾನಗರದ ಕೆಲವು ರಸ್ತೆಗಳಲ್ಲಿ ತರಕಾರಿ ವಿತರಿಸಲು ಮೂರು ಆಟೋಗಳಲ್ಲಿ ಸಿಹಿಗುಂಬಳ, ಹಲಸಂದೆ, ಟೊಮೆಟೊ, ಕ್ಯಾಬೇಜ್ ಹಾಗೂ ಇನ್ನಿತರ ತರಕಾರಿ ತಂದ ಎಪಿಎಂಸಿ ಮಾರುಕಟ್ಟೆಯ ದಲ್ಲಾಳಿಗಳು ಮನೆ ಮನೆಗೂ…
21ದಿನಗಳ ಹೆಲ್ತ್ ಕರ್ಪೂನಿಂದಾಗಿ ರಾಜ್ಯಾದ್ಯಂತ ರೈತರಿಗೆ ಹಲವು ಸಮಸ್ಯೆ
March 30, 2020ಮೈಸೂರು, ಮಾ.30-(SPN)-21ದಿನಗಳ ಹೆಲ್ತ್ ಕರ್ಪೂನಿಂದಾಗಿ ರಾಜ್ಯಾದ್ಯಂತ ರೈತರಿಗೆ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಚ ಕುರುಬೂರು ಶಾಂತಕುಮಾರ್ ತಿಳಿದ್ದಾರೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಖರೀದಿದಾರರು ಇಲ್ಲದೆ ಉತ್ಪನ್ನಗಳನ್ನು ಬೀದಿ ಬದಿಗಳಲ್ಲಿ ದಾಸ್ತಾನು ಮಾಡಿರುವುದು, ಮೆಕ್ಕೆಜೋಳ ಭತ್ತ , ಬಿಳಿಜೋಳ ಕಡಲೆ, ಕಬ್ಬು, ಈರುಳ್ಳಿ ಗಳಲ್ಲದೆ ಟೊಮೊಟೊ ಕಲ್ಲಂಗಡಿ ಹಣ್ಣು, ಕಾಯಿಪಲ್ಯಗಳನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಅಲ್ಲದೆ ರೇಷ್ಮೆ ಬೆಲೆ ಕುಸಿತವಾಗಿ ಕಂಗಲಾ ಗಿರುವುದು ಕೈಗನ್ನಡಿಯಾಗಿದೆ, ಬೆಂಗಳೂರು ನಗರದಿಂದ ಹಳ್ಳಿಗಳಿಗೆ 10ಲಕ್ಷ ಜನರು…
ರಾಜ್ಯದ ಶಾಲಾ ಶಿಕ್ಷಕರ ರಜೆಯನ್ನು ಏಪ್ರಿಲ್ 11ರ ವರೆಗೆ ವಿಸ್ತರಣೆ: ಸಚಿವ ಸುರೇಶ್ ಕುಮಾರ್
March 30, 2020ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿದೆ. ಮಾರ್ಚ್ 31ರ ವರೆಗೆ ಮಾತ್ರವೇ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು. ಆದ್ರೇ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಕಾಲ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಿದ್ದರ ಹಿನ್ನಲೆಯಲ್ಲಿ, ರಾಜ್ಯದ ಶಾಲಾ ಶಿಕ್ಷಕರ ರಜೆಯನ್ನು ಏಪ್ರಿಲ್ 11ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ….










