ಮೈಸೂರು,ಜ.4(ವೈಡಿಎಸ್)-ಇಂದಿನ ಮಕ್ಕಳು ಮೊಬೈಲ್ ಬಳಕೆಯನ್ನು ಹವ್ಯಾಸ ವಾಗಿ ಮಾಡಿಕೊಳ್ಳುತ್ತಿರುವುದು ಆತಂಕ ಕಾರಿ ಬೆಳವಣಿಗೆ. ಮೊಬೈಲ್ ಅನ್ನು ಕೇವಲ ಗೇಮ್ ಆಡಲು ಬಳಸದೆ ಜ್ಞಾನ ವೃದ್ಧಿಗೆ ಬಳಸುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಮಂಡ್ಯ ಸರ್ಕಾರಿ ಕಾಲೇಜಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾ ಪಕಿ ಡಾ.ಪ್ರಿಯಾ ಉತ್ತಯ್ಯ ಇಟ್ಟಿರಾ ಪೋಷಕರಿಗೆ ಸಲಹೆ ನೀಡಿದರು. ಸಾತಗಳ್ಳಿ ವಿದ್ಯಾಶಂಕರ ಬಡಾವಣೆಯಲ್ಲಿ ರುವ ಕೊಡಗು ಮಾಡೆಲ್ ಸ್ಕೂಲ್ನ 11ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕೊಡಗು ಮಾಡೆಲ್ ಸ್ಕೂಲ್ ಕಳೆದ…
ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವಾದ ಮಂಡನೆ, ತೀರ್ಪು ಪ್ರಕಟಗೊಳ್ಳಲಿ: ಸಿಎಂ ಬಿಎಸ್ವೈ
January 5, 2020ಬೆಂಗಳೂರು, ಜ. 4- ಕನ್ನಡದಲ್ಲೇ ನ್ಯಾಯಾಲಯದ ತೀರ್ಪು ಹೊರಬಿದ್ದಾಗ ಕಕ್ಷಿದಾರರಿಗೂ ತಮ್ಮ ಪ್ರಕರಣದ ವಾಸ್ತವ ಸ್ಥಿತಿ ತಿಳಿಯಲು ಸಾಧ್ಯವಾಗುತ್ತದೆ. ಆದ್ದರಿಂದ ನ್ಯಾಯಾಂಗದ ಎಲ್ಲಾ ವಲಯಗಳಲ್ಲೂ ಕನ್ನಡವೇ ಅಧಿಕೃತ ಭಾಷೆಯಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶನಿವಾರ ಆಯೋಜಿಸಿದ್ದ ಕನ್ನಡದಲ್ಲೇ ತೀರ್ಪು ನೀಡಿದ ನ್ಯಾಯಾಧೀಶರು, ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು ಹಾಗೂ ವಕೀಲರಿಗೆ 2017-18 ಮತ್ತು 2018-19ನೇ ಸಾಲಿನ ನ್ಯಾಯಾಂಗ ದಲ್ಲಿ ಕನ್ನಡ ಪ್ರಶಸ್ತಿ ಯನ್ನು ಪ್ರದಾನ ಮಾಡಿ, ಅವರು…
ಧಾರ್ಮಿಕ ಅಲ್ಪಸಂಖ್ಯಾತರ ಹೆಸರಿನಲ್ಲಿ ನಿರಾಶ್ರಿತರಿಗೆ ಪೌರತ್ವ: ಕೇಂದ್ರದ ನಿಲುವಿಗೆ ಸುಪ್ರೀಂ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಆಕ್ಷೇಪ
January 5, 2020ಮೈಸೂರು,ಜ.4(ಎಸ್ಪಿಎನ್)- `ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಪ ಸಂಖ್ಯಾತ’ರ ಹೆಸರಿನಲ್ಲಿ ಹೊರ ದೇಶದ ನಿರಾಶ್ರಿತರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬೆಳ್ಳೂರು ನಾರಾಯಣ ಸ್ವಾಮಿ ಶ್ರೀಕೃಷ್ಣ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್ಬಿ ರಸ್ತೆಯ ಐಡಿ ಯಲ್ ಜಾವಾ ರೋಟರಿ ಸಭಾಂಗಣದಲ್ಲಿ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್)ದ ಮೈಸೂರು ವಿಭಾಗದ ವತಿಯಿಂದ ಆಯೋಜಿಸಿದ್ದ `ಮಾನವ ಹಕ್ಕು ಬ್ರಿಟಿಷರ ಕೊಡುಗೆಯೇ?’ ವಿಷಯ ಕುರಿತು ಮಾತನಾಡಿದರು. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿ ರುವ…
ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸುವ ಅಗತ್ಯ ಈಗ ಹೆಚ್ಚಾಗಿದೆ
January 5, 2020ಮೈಸೂರು, ಜ.4(ಎಂಟಿವೈ)- ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯಿಂದಾಗಿ ಹವಾಮಾನ ವೈಪರೀತ್ಯ ಹೆಚ್ಚಾಗಿದ್ದು, ಜನಜೀವನದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಗಟ್ಟಲು ಎಲ್ಲರೂ ಪರಿಸರ ಸಂರಕ್ಷಣೆಗೆ ಕೈಜೋಡಿಸುವ ಅಗತ್ಯವಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಆರ್.ಟಿ.ನಗರದ ಯುಎಸ್ಎ ಫಾರಂ ನಲ್ಲಿ ಶನಿವಾರÀ ರೋಟರಿ ಜಿಲ್ಲೆ 3181 ಸಂಸ್ಥೆ ಆಯೋಜಿ ಸಿದ್ದ ಸಂಕಲ್ಪ-2020ರ `4ನೇ ಜಿಲ್ಲಾ ಸಮಾವೇಶ’ ದಲ್ಲಿ ಮಾತನಾಡಿದ ಅವರು, ಹಲವು ಕಾರಣದಿಂದ ಈಗಾಗಲೇ ಹವಾಮಾನದಲ್ಲಿ ತೀವ್ರ ಪ್ರಮಾಣದಲ್ಲಿ ವ್ಯತ್ಯಾಸಗಳಾಗುತ್ತಿವೆ. ಇದರಿಂದ ಋತುಗಳಲ್ಲಿ ವ್ಯತ್ಯಾಸ…
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಹಿರಿಯ ಪುರುಷರ ವಿಭಾಗದ ಡಿಸ್ಕಸ್, ಗುಂಡು ಎಸೆತದಲ್ಲಿ ತಿ.ನರಸೀಪುರದ ಕೆ.ಬಿ.ಅಯ್ಯಪ್ಪ ಪರಾಕ್ರಮ
January 5, 2020ಮೈಸೂರು,ಜ.4(ವೈಡಿಎಸ್)-ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 50-60 ವರ್ಷ ಮೇಲ್ಪಟ್ಟ ಪುರು ಷರ ವಿಭಾಗದ ಡಿಸ್ಕಸ್ ಥ್ರೋ ಮತ್ತು ಗುಂಡು ಎಸೆತದಲ್ಲಿ ತಿ.ನರಸೀಪುರ ಶಿಕ್ಷಣ ಇಲಾಖೆಯ ಕೆ.ಬಿ.ಅಯ್ಯಪ್ಪ ಪ್ರಥಮ ಸ್ಥಾನ ಪಡೆದಿದ್ದಾರೆ. ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದ 50-60 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಡಿಸ್ಕಸ್ ಥ್ರೋ(1.5ಕೆಜಿ)ನಲ್ಲಿ ತಿ.ನರಸೀಪುರ ಶಿಕ್ಷಣ ಇಲಾಖೆಯ ಕೆ.ಬಿ.ಅಯ್ಯಪ್ಪ(ಪ್ರ), ಎನ್.ಕೆ. ಮಂಜುನಾಥ್(ದ್ವಿ),…
ಸಿದ್ಧಾರ್ಥನಗರ ಸಂಕೀರ್ಣಕ್ಕೆ ಕಚೇರಿಗಳ ಶೀಘ್ರ ಸ್ಥಳಾಂತರಕ್ಕೆ ಸಚಿವರ ಸೂಚನೆ
January 5, 2020ಮೈಸೂರು, ಜ.4(ಎಸ್ಬಿಡಿ)- ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ಎಲ್ಲಾ ಕಚೇರಿ ಗಳನ್ನು ಶೀಘ್ರ ಸ್ಥಳಾಂತರ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಶನಿವಾರ ಸಭೆ ನಡೆಸಿದ ಅವರು, ತ್ವರಿತ ವಾಗಿ ಸ್ಥಳಾಂತರ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನೂತನ ಕಟ್ಟಡದಲ್ಲಿ ಇನ್ನೂ ಕೆಲ ಕೆಲಸಗಳು ಆಗಬೇಕಿದೆ. ಕಂದಾಯ ಇಲಾಖೆ ಸೇರಿದಂತೆ…
ಕೌಟಿಲ್ಯ ವಿದ್ಯಾಲಯದಲ್ಲಿ `ವಾಣಿಜ್ಯ ವಿಹಾರ’ ಮಕ್ಕಳ ಬಹುಮುಖ ಪ್ರತಿಭೆ ಅನಾವರಣ
January 5, 2020ಮೈಸೂರು,ಜ.4(ಪಿಎಂ)-ವೇದಿಕೆ ಒಂದು, ಆದರೆ ಚಿಂತನೆ ಹಾಗೂ ವಿಸ್ತಾರ ಜಾಗತಿಕ ವಾದದ್ದು. ಅಲ್ಲಿ ದೇಶದ ಸಂಸ್ಕøತಿಯ ಪರಿ ಚಯವೂ ಇತ್ತು. ಆಹಾರ-ಆಟೋಟದ ಆಲಾಪವೂ ಇತ್ತು. ಒಂದು ರೀತಿಯಲ್ಲಿ ಜಗತ್ತಿನ ವೈಶಿಷ್ಟ್ಯಗಳ ತಾಣವಾಗಿತ್ತು. ಮೈಸೂರಿನ ಕೌಟಿಲ್ಯ ವಿದ್ಯಾಲಯದ ವಾರ್ಷಿಕ ಉತ್ಸವ `ವಾಣಿಜ್ಯ ವಿಹಾರ’ದ ಚಿತ್ರಣವಿದು. ಈ ಬಾರಿ `ಜಾಗತಿಕ ಹಬ್ಬ’ ಶೀರ್ಷಿಕೆಯಲ್ಲಿ ಶಾಲಾ ಆವರಣದಲ್ಲಿ ನಡೆದ ವಾಣಿಜ್ಯ ವಿಹಾರದಲ್ಲಿ ಮಕ್ಕಳಿಗೆ ನಮ್ಮ ರಾಜ್ಯ ಮಾತ್ರವಲ್ಲದೆ, ದೇಶ-ವಿದೇಶ ಗಳ ಹಬ್ಬಗಳ ಪರಿಚಯವೂ ಆಯಿತು. ಜೊತೆಗೆ ವ್ಯವಹಾರ ಜ್ಞಾನವೂ ಬೆಳೆಯಿತು. ಸಾರ್ವ ಜನಿಕರು…
ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸಿ
January 5, 2020ಮೈಸೂರು, ಜ.4(ಪಿಎಂ)- ವಿದ್ಯಾರ್ಥಿ ಗಳು ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ರೋಟರಿ ಐವರಿ ಸಿಟಿ ಅಧ್ಯಕ್ಷ ಎಸ್.ಬಾಲಚಂದರ್ ತಿಳಿಸಿದರು. ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ : ಒಂದು ನೆನಪು’ ಮತ್ತು ಕಾಲೇಜಿನ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘದ ಸಮಾರೋಪ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು. ಛಲವಿದ್ದಾಗ ಉತ್ಸಾಹದಿಂದ ಓದಿ ಬದು ಕನ್ನು ಕಟ್ಟಿಕೊಳ್ಳಬಹುದು. ಉತ್ಸಾಹವಿಲ್ಲ ದಿದ್ದರೆ ಜೀವನ ವ್ಯರ್ಥ. ಬದುಕಿನಲ್ಲಿ ಏನಾದರೊಂದು…
ಫೆಬ್ರವರಿ ಅಂತ್ಯಕ್ಕೆ ಬಯೋಮೆಟ್ರಿಕ್ ನೀಡದಿದ್ದರೆ ಮಾರ್ಚ್ನಿಂದ ಪಡಿತರ ಬಂದ್
January 5, 2020ಮೈಸೂರು, ಜ.4(ಎಸ್ಬಿಡಿ)- ಪಡಿ ತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರೂ ಫೆಬ್ರವರಿ ಅಂತ್ಯದೊಳಗೆ ಬಯೋಮೆಟ್ರಿಕ್ (ಹೆಬ್ಬೆಟ್ಟು ಗುರುತು) ನೀಡದಿದ್ದರೆ, ಮಾರ್ಚ್ ನಿಂದ ಪಡಿತರ ಕಡಿತಗೊಳ್ಳಲಿದೆ. ಪಡಿತರ ಚೀಟಿಯಲ್ಲಿರುವ ಮಾಹಿತಿ ಖಚಿತಪಡಿಸಿಕೊಳ್ಳಲು ಕಾರ್ಡ್ನಲ್ಲಿ ನಮೂ ದಾಗಿರುವ ಎಲ್ಲಾ ಸದಸ್ಯರು ಡಿಸೆಂಬರ್ ತಿಂಗಳೊಳಗೆ ಬಯೋಮೆಟ್ರಿಕ್ ನೀಡಬೇ ಕೆಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಇಲಾಖೆ ವೆಬ್ಸೈಟ್ನಲ್ಲಿ ಲೋಪಗಳ ಸರಿಪಡಿಸುವ ಉದ್ದೇಶದಿಂದ ಅಂತಿಮ ದಿನಾಂಕವನ್ನು ಫೆಬ್ರವರಿ ಅಂತ್ಯಕ್ಕೆ ಮುಂದೂಡಲಾಗಿದ್ದು, ನಂತರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳದ ಪಡಿತರದಾರರಿಗೆ ಸೌಲಭ್ಯ ಕಡಿತಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ…
ಮೂಲಸೌಕರ್ಯಕ್ಕಾಗಿ 200 ಕೋಟಿಗೆ ಪ್ರಸ್ತಾವನೆ ಸಲ್ಲಿಸಿ
January 4, 2020ಮೈಸೂರು, ಜ.3(ಎಸ್ಬಿಡಿ)-ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ 200 ಕೋಟಿ ರೂ. ಯೋಜನೆ ರೂಪಿಸಿ, ವಾರದೊಳಗೆ ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಗರಪಾಲಿಕೆ ಆಯುಕ್ತ ರಿಗೆ ನಿರ್ದೇಶನ ನೀಡಿದ್ದಾರೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಯಡಿ ಮಂಜೂರಾಗಿರುವ ಅನುದಾನ ಬಳಕೆ ಸಂಬಂಧ ಶುಕ್ರವಾರ ಜಿಲ್ಲಾ ಪಂಚಾಯ್ತಿಯ ಡಿ. ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಹೀಗೆ ನಿರ್ದೇಶಿಸಿದ ಸೋಮಣ್ಣ, ಕುಡಿ ಯುವ ನೀರು, ಒಳಚರಂಡಿ, ರಸ್ತೆ, ಉದ್ಯಾನ ಹಾಗೂ ಬೀದಿ ದೀಪ…