ಮೈಸೂರು,ಡಿ.16(ಎಂಟಿವೈ)- ಮೈಸೂ ರಿನ ಲಲಿತಮಹಲ್ ಹೋಟೆಲ್ನಲ್ಲಿ ಇತ್ತೀಚೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಹೋದರಿ ಜಯತ್ಮಿಕಾ ಲಕ್ಷ್ಮೀ ಹಾಗೂ ಮಧ್ಯಪ್ರದೇಶದ ಜೋದ್ಪುರದ ಸೈಲಾನ ರಾಜಮನೆತನದ ಯುವರಾಜ ದಿವ್ಯಾರಾಜ್ ಸಿಂಗ್ ಅವರೊಂದಿಗೆ ವಿವಾಹ ವಿಜೃಂಭಣೆಯಿಂದ ನೆರವೇರಿದೆ. ಯದುವಂಶದ ರಾಜವಂಶಸ್ಥ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ತ್ರಿಪುರ ಸುಂದರಿ ದೇವಿ ಹಾಗೂ ಸ್ವರೂಪ್ ಆನಂದರಾಜೇ ಅರಸ್ ದಂಪತಿ ಪುತ್ರಿಯೂ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಹೋ ದರಿ ಜಯತ್ಮಿಕಾ ಲಕ್ಷ್ಮೀ…
ಮೈಸೂರು-ಯಲಹಂಕ ಮೆಮು ರೈಲು ಸೇವೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ
December 17, 2019ಮೈಸೂರು, ಡಿ.16(ಎಂಕೆ)-ಮೈಸೂರು-ಯಲಹಂಕ ನಡುವೆ ಸಂಚರಿಸುವ ನೂತನ ಮೆಮು ರೈಲು ಸೇವೆಗೆ ಸಂಸದ ಪ್ರತಾಪ್ ಸಿಂಹ ಸೋಮವಾರ ರಾತ್ರಿ ಚಾಲನೆ ನೀಡಿದರು. ಮೈಸೂರು-ಬೆಂಗಳೂರು ನಡುವೆ ಈಗಾಗಲೇ ಮೂರು ಮೆಮು ರೈಲುಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಇವುಗಳ ಪಟ್ಟಿಗೆ ಮತ್ತೊಂದು ಮೆಮು ರೈಲು ಸೆರ್ಪಡೆ ಯಾಗಿದೆ. ಪ್ರತಿದಿನ ರಾತ್ರಿ 10.20ಕ್ಕೆ ಮೈಸೂರಿನಿಂದ ಹೊರಡುವ ಈ ಮೆಮು ರೈಲು (ಗಾಡಿ ನಂ-06562) ಮಧ್ಯರಾತ್ರಿ 1.30ಕ್ಕೆ ಯಲಹಂಕ ರೈಲ್ವೆ ನಿಲ್ದಾಣ ತಲುಪಲಿದೆ. ಮತ್ತೆ ಯಲಹಂಕದಿಂದ ಮಧ್ಯರಾತ್ರಿ 2.30ಕ್ಕೆ (ಗಾಡಿ ನಂ-06561) ಹೊರಟು ಮುಂಜಾನೆ 5.30ಕ್ಕೆ…
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಳೆಗನ್ನಡ ಕೃತಿಗಳ ಡಿಜಿಟಲೀಕರಣ
December 17, 2019ಮೈಸೂರು, ಡಿ.16(ಪಿಎಂ)- ಕವಿರಾಜ ಮಾರ್ಗದಿಂದ ಮುದ್ದಣನವರೆಗೆ ಹಳೆ ಗನ್ನಡ ಕೃತಿಗಳ ಡಿಜಿಟಲೀಕರಣಗೊಳಿ ಸಲು ಕನ್ನಡ ಪುಸ್ತಕ ಪ್ರಾಧಿಕಾರ ಯೋಜನೆ ರೂಪಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ತಿಳಿಸಿದರು. ಮೈಸೂರಿನ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್ನಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಲೇಜಿನ 2018-19ನೇ ಸಾಲಿನ ವಾರ್ಷಿಕ ಸಂಚಿಕೆ `ಅನಂತಯಾತ್ರಿ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ಸಾಹಿತ್ಯವನ್ನು ಉಳಿಸಲು ಕಾಲಕ್ಕನುಗುಣವಾಗಿ ಬದ ಲಾದ ಮಾಧ್ಯಮಗಳ ಅಗತ್ಯವಿದ್ದು, ಈ ನಿಟ್ಟಿ ನಲ್ಲಿ ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ…
ಹಾವು ಕಡಿತದಿಂದ ಭಾರತದಲ್ಲಿ ವಾರ್ಷಿಕ 50,000 ಮಂದಿ ಸಾವು
December 17, 2019ಮೈಸೂರು, ಡಿ.16(ಆರ್ಕೆಬಿ)- ಭಾರತ ದಲ್ಲಿ ಹಾವು ಕಡಿತದಿಂದ ವಾರ್ಷಿಕ 50,000 ಮಂದಿ ಸಾವಿಗೀಡಾಗಿ, 1.40 ಲಕ್ಷ ಮಂದಿಗೆ ಅಂಗವೈಕಲ್ಯತೆ ಸಂಭವಿಸುತ್ತಿದೆ. ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದ ಜನರು ಮತ್ತು ಕಾರ್ಮಿಕರಾಗಿದ್ದಾರೆ. ಅವರು ಕುಟುಂಬದ ಆಧಾರಸ್ತಂಭಗಳಾಗಿದ್ದಾರೆ. ಮೈಸೂರು ವಿವಿ ವಿಜ್ಞಾನ ಭವನದಲ್ಲಿ `ಹಾವು ಕಡಿತ ನಿರ್ವಹಣೆಯಲ್ಲಿ ಸವಾಲು ಗಳು’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಾವು ಕಡಿತ ಕುರಿತ ಕಿರುಚಿತ್ರ ಪ್ರದರ್ಶಿಸಿದ ಸಂದರ್ಭದಲ್ಲಿ ಇದು ಬಹಿರಂಗವಾಯಿತು. ಮೈಸೂರು ವಿವಿ ಜೀವರಸಾಯನ ಶಾಸ್ತ್ರ ಅಧ್ಯಯನ ವಿಭಾಗ ಮತ್ತು ಅಣುಜೀವ…
ಇನ್ನೂ ಪ್ರಕಟವಾಗದ ಮೇಯರ್, ಉಪ ಮೇಯರ್ ಮೀಸಲಾತಿ ಪಟ್ಟಿ
December 17, 2019ಕಾಂಗ್ರೆಸ್-ಜೆಡಿಎಸ್ಗೆ ಅವಕಾಶ ತಪ್ಪಿಸಿ ಈ ಬಾರಿ ಅಧಿಕಾರ ಹಿಡಿಯಲು ಬಿಜೆಪಿ ತೆರೆಮರೆ ಪ್ರಯತ್ನ ಮೈಸೂರು, ಡಿ.16(ಆರ್ಕೆಬಿ)- ಮೈಸೂರು ಮಹಾನಗರಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫೀ ಅಹಮದ್ ಅವರ ಒಂದು ವರ್ಷದ ಅಧಿಕಾರಾವಧಿ ಮುಗಿದಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಾಗಿದೆ. ಈ ಕುರಿತಂತೆ ಸರ್ಕಾರ ಮೀಸಲಾತಿ ನಿಗದಿಗೊ ಳಿಸಿ, ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದ್ದು, ಅದ ಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಸದಸ್ಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಮಧ್ಯೆ…
ಆಪರೇಷನ್ ಕಮಲ ಆಡಿಯೋ ಪ್ರಕರಣ ಸಿಎಂ ಬಿಎಸ್ವೈಗೆ ತಾತ್ಕಾಲಿಕ ರಿಲೀಫ್
December 17, 2019ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲ ಆಡಿಯೋ ಆರೋಪ ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆ ಯನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರ ನೇಮಕವಾಗದ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರ ಸರ್ಕಾರಿ ರಜಾ ದಿನಗಳ ನಂತರ ವಿಚಾರಣೆಯನ್ನು ಮುಂದೂಡಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಯಾದಗಿರಿ ಜಿಲ್ಲೆ…
ವೈದ್ಯರೇ ಆಡಳಿತದಲ್ಲಿದ್ದರೆ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ
December 17, 2019ಮೈಸೂರು, ಡಿ.16(ಎಂಕೆ)- ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ಡಾಕ್ಟರ್ಗಳು ಕಾರಣರಲ್ಲ. ಆಡಳಿತ ವ್ಯವಸ್ಥೆ ಉತ್ತಮವಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಬೆಂಗಳೂರು ಅಪರಾಧ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿ ಡಾ.ಎಸ್.ಪರಮ ಶಿವಮೂರ್ತಿ ಅಭಿಪ್ರಾಯಪಟ್ಟರು. ಇಲ್ಲಿನ ಜೆ.ಕೆ.ಮೈದಾನದಲ್ಲಿರುವ ಅಮೃತ ಮಹೋತ್ಸವ ಸಭಾಂ ಗಣದಲ್ಲಿ ಮೈಸೂರು ವೈದ್ಯಕೀಯ ಅಲುಮ್ನಿ ಅಸೋಸಿಯೇಷನ್ ಆಯೋಜಿಸಿದ್ದ ‘ಮಾ ಉತ್ಸವ-2019’ ಉದ್ಘಾಟಿಸಿ ಮಾತನಾಡಿದರು.ಎಲ್ಲಾ ದೇಶದಲ್ಲೂ ಬದಲಾವಣೆಯಾಗುತ್ತಿದೆ. ಆದರೆ ನಮ್ಮಲ್ಲಿ ಮಾತ್ರ ಬದಲಾವಣೆಯ ಗಾಳಿಯೂ ಬೀಸುತ್ತಿಲ್ಲ. ಆಯಾ ಕ್ಷೇತ್ರದ ಲ್ಲಿನ ಪರಿಣತರು ಆಡಳಿತ ನಡೆಸುವ ಸ್ಥಾನದಲ್ಲಿ ಕೂರುವಂತಾ ದಾಗ ಬದಲಾವಣೆ…
ರಾಜಮಾರ್ಗದ ಕಲ್ಲಿನ ಬ್ಯಾರಿಕೇಡ್ ಕಳಚಿಬಿದ್ದು ವ್ಯಕ್ತಿಗೆ ಗಾಯ: ಅಂದಗೆಟ್ಟು ಅನಾಹುತಕ್ಕೆ ಆಸ್ಪದ ಮಾಡಿಕೊಡುತ್ತಿದೆ ರಾಜಬೀದಿ
December 17, 2019ಮೈಸೂರು, ಡಿ.16(ಎಸ್ಬಿಡಿ)- ಮೈಸೂರಿನ ರಾಜಮಾರ್ಗದ ಕಲ್ಲಿನ ಬ್ಯಾರಿಕೇಡ್ ಕಳಚಿ ಬಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ಸೋಮ ವಾರ ಸಂಜೆ ನಡೆದಿದೆ. ಗುಂಡ್ಲುಪೇಟೆ ನಿವಾಸಿ ಮಹದೇವು ಗಾಯಗೊಂಡವರು. ಪಾನಿಪುರಿ ವ್ಯಾಪಾರಿ ಯಾಗಿರುವ ಇವರು, ಅಗತ್ಯ ವಸ್ತುಗಳ ಕೊಳ್ಳಲು ಸೋಮವಾರ ಮೈಸೂರಿಗೆ ಬಂದಿ ದ್ದರು. ಕೆ.ಆರ್.ವೃತ್ತದ ಸಮೀಪ ತಾತಯ್ಯ ಉದ್ಯಾನದ ಬಳಿ ವ್ಯಕ್ತಿಯೊಬ್ಬರು ಕಲ್ಲಿನ ಬ್ಯಾರಿಕೇಡ್ ಹಿಡಿದುಕೊಳ್ಳುತ್ತಿದ್ದಂತೆ ಅಲಂಕಾರಿಕ ಕಂಬಗಳು ಕಳಚಿ ಬಿದ್ದು, ತುಂಡಾಗಿವೆ. ಈ ವೇಳೆ ಕಳಚಿದ ಕಂಬ ವೊಂದು ಪಕ್ಕದಲ್ಲೇ ನಡೆದು ಹೋಗುತ್ತಿದ್ದ ಮಹದೇವು ಅವರ ಕೈಗೆ…
ತುರ್ತು ಸರ್ವ ಸದಸ್ಯರ ಸಭೆ ಕರೆಯಲು ವಕೀಲರ ಆಗ್ರಹ
December 17, 2019ಮೈಸೂರು,ಡಿ.16-ಜಿಲ್ಲಾ ವಕೀಲರ ಸಂಘದ ಗೌರವ ಮಣ್ಣುಪಾಲು ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ತುರ್ತಾಗಿ ಸರ್ವ ಸದಸ್ಯರ ಸಭೆ ಕರೆಯಬೇಕೆಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್ ಅವರಿಗೆ ಕೆಲ ವಕೀಲರು ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಇಂದು ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ವಕೀಲರು, ತುರ್ತಾಗಿ ಸರ್ವ ಸದಸ್ಯರ ಸಭೆ ಕರೆಯದಿದ್ದರೆ, ಪಟ್ಟಭದ್ರ ಹಿತಾಶಕ್ತಿಗಳು ಸಂಘವನ್ನು ಇಬ್ಭಾಗ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಅಖಿಲ ಭಾರತೀಯ ವಕೀಲರ ಒಕ್ಕೂಟದ ಹೆಸರಿನಲ್ಲಿ…
ಪೌರತ್ವ ತಿದ್ದು ಪಡಿ ಮಸೂದೆ: ಮೈಸೂರಿನ ಪುರಭವನ ಆವರಣದಲ್ಲಿ ಭಾರೀ ಪ್ರತಿಭಟನೆ
December 17, 2019ಮೈಸೂರು,ಡಿ.16(ಆರ್ಕೆ)-ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದು ಪಡಿ ಮಸೂದೆ(Citizenship Amend ment bill 2019) ವಿರೋಧಿಸಿ ಎಸ್ಡಿ ಪಿಐ ಸೇರಿದಂತೆ ವಿವಿಧ ಸಂಘಟನೆಗಳು ಮೈಸೂರಿನ ಪುರಭವನದ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಬೃಹತ್ ಪ್ರತಿ ಭಟನಾ ಸಭೆ ನಡೆಸಿದವು. ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ಮಜೀದ್, ಪದಾಧಿಕಾರಿ ಗಳಾದ ಅಜಂ ಪಾಷಾ, ಅಮ್ಜದ್ಖಾನ್ ಅವರ ನೇತೃತ್ವದಲ್ಲಿ ಮಧ್ಯಾಹ್ನ 2.15 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಸಮಾವೇಶ ಗೊಂಡು, ಸಿಎಬಿ ಮತ್ತು ಎನ್ಆರ್ಸಿ ಬೇಡವೇ ಬೇಡ’, ‘ಪೌರತ್ವ…










