ಮೈಸೂರು, ಸೆ.21- ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಪೀಠಾಧಿಪತಿಗಳಾದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಗಳವರ ಜೀವನಾಧಾರಿತ ಕಥಾನಕ `ಕಾಯಕ ತಪಸ್ವಿ’ ದೃಶ್ಯ-ನಾಟ್ಯ-ಸಂಗಮ ಪ್ರದರ್ಶನವನ್ನು ಸೆ.23ರಂದು ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ. ಶ್ರೀಗಳ ವರ ಜೀವನ ದರ್ಶನವನ್ನು ಸಂಗೀತ, ನೃತ್ಯ ಹಾಗೂ ನಾಟಕದ ಮೂಲಕ ಧ್ವನಿ ಬೆಳಕಿನ ವಿಶಿಷ್ಟ ರಂಗವಿನ್ಯಾಸದೊಡನೆ ಬೆಂಗಳೂ ರಿನ ಅರ್ಥ ಅಕಾಡೆಮಿಯವರು ಪ್ರಸ್ತುತಪಡಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆ…
ಶಿಲ್ಪ ಕಲಾವಿದರ ಕಡೆಗಣನೆ
September 22, 2019ಮೈಸೂರು, ಸೆ. 21(ಆರ್ಕೆ)- ದಸರಾ ಮಹೋತ್ಸವದಲ್ಲಿ ಅರಮನೆ ಸೌಂದರ್ಯಕ್ಕೆ ಹಗಲಿರುಳು ದುಡಿದ ಚಿತ್ರ ಮತ್ತು ಶಿಲ್ಪ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ಮೈಸೂರು ಆರ್ಟ್ ಗ್ಯಾಲರಿಯ ಹಿರಿಯ ಶಿಲ್ಪ ಕಲಾವಿದ ಎಲ್. ಶಿವ ಲಿಂಗಪ್ಪ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಸರಾ ಸಂದರ್ಭದಲ್ಲಿ ಸರ್ಕಾರವು ಆಸ್ಥಾನ್ ವಿದ್ವಾನ್ ಪ್ರಶಸ್ತಿ ನೀಡುತ್ತಿದೆ. ಈ ವರ್ಷದಿಂದ ಲಾದರೂ ಚಿತ್ರ ಮತ್ತು ಶಿಲ್ಪ ಕಲಾವಿದರಿಗೂ ಈ ಪ್ರಶಸ್ತಿಯನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೆ.24ರಂದು ಕೇಂದ್ರ ಸಚಿವ ರಾಂದಾಸ್ ಅಠವಳೆ ಮೈಸೂರಿಗೆ ಭೇಟಿ
September 22, 2019ಮೈಸೂರು,ಸೆ.21- ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಯೋ ಜಿಸಿರುವ `ಪೂನಾ ಒಪ್ಪಂದ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ವನ್ನು ಉದ್ಘಾಟಿಸುವ ಸಲುವಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ರಾಂದಾಸ್ ಅಠವಳೆ ಸೆಪ್ಟೆಂಬರ್ 24ರಂದು ಮಧ್ಯಾಹ್ನ 12.30ಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ಜಗನ್ಮೋಹನ ಅರಮನೆಯಲ್ಲಿ ನಡೆಯಲಿರುವ ಆರ್ಪಿಐ ಪದಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆರ್ಪಿಐ ಮತ್ತು ಎಸ್ಎಸ್ಡಿ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸುವರು.
ಎರಡನೇ ದಿನವೂ ಲಕ್ಷ್ಮಿ ಹೆಬ್ಬಾಳ್ಕರ್ 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ
September 21, 2019ನವದೆಹಲಿ: ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಸಂಪಾದನೆ ಪ್ರಕ ರಣಕ್ಕೆ ಸಂಬಂಧಿ ಸಿದಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವ ರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿ ಗಳು ಶುಕ್ರವಾರ ಎರಡನೇ ದಿನವೂ ವಿಚಾರಣೆಗೊಳಪಡಿಸಿದರು. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿ ಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ನಿರಂತರ ವಿಚಾರಣೆ ನಡೆಸಲಾಯಿತು. ಗುರುವಾರ ಸುಮಾರು 7 ಗಂಟೆಗೂ ಹೆಚ್ಚು ಕಾಲ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಜಾರಿ ನಿರ್ದೇ ಶನಾಲಯದ ಅಧಿಕಾರಿಗಳು ವಿಚಾರ…
ಐಟಿ-ಬಿಟಿ ಕಂಪನಿಗಳಿಗೆ ಹೆಚ್ಚಿನ ಒತ್ತು: ಡಿಸಿಎಂ ಡಾ.ಅಶ್ವಥ್ನಾರಾಯಣ್
September 21, 2019ಮೈಸೂರು ಸೆ.20(ಆರ್ಕೆಬಿ)-ರಾಜ್ಯದಲ್ಲಿ ಐಟಿ-ಬಿಟಿ ಕಂಪನಿಗಳಿಗೆ ಹೆಚ್ಚಿನ ಒತ್ತು ನೀಡಿ, ಉನ್ನತ ಶಿಕ್ಷಣ ಪಡೆದವರಿಗೆ ಉದ್ಯೋಗ ದೊರಕುವಂತಾಗಲು ಅವಕಾಶ ಕಲ್ಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯ ಮಂತ್ರಿ ಡಾ.ಅಶ್ವಥ್ನಾರಾಯಣ್ ತಿಳಿಸಿದರು. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾ ಡಿದರು. ಐಟಿ-ಬಿಟಿ ಕಂಪನಿಗಳು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ನಿರ್ವ ಹಿಸಲು ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದರು. ಪ್ರವಾಹದಿಂದಾಗಿ ರಾಜ್ಯದಲ್ಲಿ ಹಲವಾರು ಮನೆ,…
ಭಾರವಾದ ಮನಸ್ಸಿಂದಲೇ ಮನೆಗೆ ಮರಳಿದ ‘ವರಲಕ್ಷ್ಮಿ’
September 21, 2019ಮೈಸೂರು,ಸೆ.20(ಎಂಟಿವೈ)- ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗಲು ಸಂತಸದಿಂದ ಬಂದಿದ್ದ `ವರಲಕ್ಷ್ಮೀ’ ಭಾರವಾದ ಮನಸ್ಸಿನಲ್ಲೇ ಶಿಬಿರಕ್ಕೆ ವಾಪಸ್ಸಾದಳು. ದಸರಾ ಗಜಪಡೆಯ ಮೊದಲ ತಂಡ ದಲ್ಲೇ ಮೈಸೂರಿಗೆ ಬಂದು, ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದ `ವರಲಕ್ಷ್ಮಿ’ ಗರ್ಭಿಣಿ ಆಗಿರುವ ಕಾರಣ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಅನಿವಾರ್ಯವಾಗಿ ಶಿಬಿರಕ್ಕೆ ವಾಪಸ್ಸಾಗ ಬೇಕಾಯಿತು. `ವರಲಕ್ಷ್ಮಿ’ಗೆ ಶುಕ್ರವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮತ್ತಿ ಗೋಡು ಶಿಬಿರಕ್ಕೆ ಬೀಳ್ಕೊಡಲಾಯಿತು. ಕರೆದೊಯ್ಯಲು ಲಾರಿ ಹತ್ತಿರ ಬಂದಾಗ ಅದು `ನನ್ನನ್ನೇ ಕರೆದೊಯ್ಯಲು ಬಂದಿದೆ’ ಎಂಬುದನ್ನು ಅರಿತಂತೆ ವರ್ತಿಸಿದ ವರ…
ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೇವಲ 8 ದಿನ ಬಾಕಿಆರಂಭವಾಗಿದೆ ವಿಶೇಷ ಸ್ವಚ್ಛತಾ ಅಭಿಯಾನ
September 21, 2019ಮೈಸೂರು, ಸೆ.20(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಸ್ವಚ್ಛತಾ ವಿಶೇಷ ಅಭಿಯಾನ ಆರಂಭಿಸಿರುವ ನಗರ ಪಾಲಿಕೆ, ಗುತ್ತಿಗೆದಾರರ ಸಹಕಾರ ಪಡೆದು ನೂರಾರು ವಾಹನಗಳೊಂದಿಗೆ ಸೆ.25ವರೆಗೆ ಎಲ್ಲಾ ವಲಯ ಗಳಲ್ಲೂ ಸ್ವಚ್ಛತಾ ಕಾರ್ಯ ನಡೆಸಲಿದೆ. ಪ್ರತಿ ವರ್ಷದಂತೆ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಪಾಲಿಕೆ, ಮುಡಾ, ನೀರಾವರಿ, ಒಳಚರಂಡಿ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆ ಗಳ ಗುತ್ತಿಗೆದಾರರ ಸಂಘ ಈ ಬಾರಿಯೂ ತಮ್ಮಲ್ಲಿರುವ 33 ಜೆಸಿಬಿ, 34 ಟ್ರಾಕ್ಟರ್, 2 ಹಿಟಾಚಿ, 5 ಡೋಜóರ್,…
ಜಿಟಿಡಿಗೆ ಆಹ್ವಾನ ನೀಡಿದ್ದೇವೆ: ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ
September 21, 2019ಮೈಸೂರು, ಸೆ.20(ಎಸ್ಬಿಡಿ)- ಸಿದ್ದ ರಾಮಯ್ಯರನ್ನು ಸೋಲಿಸಿದರೆಂದು ಜಿಟಿಡಿ ಅವರನ್ನು ಸಿಎಂ ಮಾಡಬೇಕಿತ್ತಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ಶುಕ್ರವಾರ ಮೈಸೂರಿನಲ್ಲಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರನ್ನು ಸೋಲಿಸಿ ಬಿಟ್ಟರು ಎಂದು ಜಿ.ಟಿ.ದೇವೇಗೌಡರನ್ನು ಮುಖ್ಯ ಮಂತ್ರಿ ಮಾಡಬೇಕಿತ್ತೇ?. ಅವರನ್ನು ಮಂತ್ರಿ ಮಾಡಿದ್ದು ಮುಗಿಸಿದಂತಾಗುತ್ತದೆಯೇ?. ನಾನು ಮೈಸೂರನ್ನೇ ನೋಡಿರಲಿಲ್ಲ. ನನಗೆ ಮೈಸೂರು ತೋರಿಸಿದ್ದೇ ಜಿಟಿಡಿಯವರ ಲ್ಲವೇ?. ಅವರು ದೊಡ್ಡ ನಾಯಕರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಶನಿವಾರ ಮೈಸೂರು…
ಡಿಸಿಎಂ ಡಾ.ಅಶ್ವಥ್ನಾರಾಯಣ್ ಭೇಟಿ, ಮೈಸೂರಲ್ಲಿ ಕಾರ್ಯಕರ್ತರ ಸಂಭ್ರಮ
September 21, 2019ಮೈಸೂರು, ಸೆ.20(ಆರ್ಕೆಬಿ)- ಮೈಸೂ ರಿಗೆ ಭೇಟಿ ನೀಡಿದ್ದ ಐಟಿ-ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಅಶ್ವಥ್ನಾರಾಯಣ್ ಅವರಿಗೆ ಶುಕ್ರವಾರ ಮೈಸೂರು-ಬೆಂಗ ಳೂರು ರಸ್ತೆ ಕೊಲಂಬಿಯಾ ಏಷಿಯಾ ವೃತ್ತದ ಬಳಿ ಅದ್ಧೂರಿ ಸ್ವಾಗತ ದೊರೆಯಿತು. ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆ ಯಲ್ಲಿ ಸೇರಿದ್ದರಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಉಪಮುಖ್ಯಮಂತ್ರಿ ಗಳು ಆಗಮಿಸುತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಕಾರ್ಯಕರ್ತರು ಹೂ ಗುಚ್ಛ ನೀಡಲು ಮುಂಗಿಬಿದ್ದರು. ಈ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀ…
ನಾಲ್ವರು ಮಹಿಳೆಯರ ವಿವಾಹವಾಗಿ ವಂಚಿಸಿದ ಮೈಸೂರಿನ ವ್ಯಕ್ತಿ ಬಂಧನ
September 21, 2019ಬೆಂಗಳೂರು: ಹಲವು ಹೆಸರುಗಳನ್ನು ಇಟ್ಟುಕೊಂಡು ಒಬ್ಬರ ವಿಷಯ ಮತ್ತೊಬ್ಬರಿಗೆ ಗೊತ್ತಾಗದಂತೆ ನಾಲ್ವರು ಮಹಿಳೆಯರನ್ನು ವಿವಾಹವಾಗಿ, ಎಲ್ಲ ರಿಗೂ ಮೋಸ ಮಾಡಿರುವ ಮೈಸೂರು ಆಸಾಮಿ ಇದೀಗ ಪೆÇಲೀ ಸರ ಅತಿಥಿಯಾಗಿದ್ದಾನೆ. ಮೈಸೂರಿನ ಸರಸ್ವತಿಪುರ ನಿವಾಸಿ ಎನ್.ಆರ್. ಗಣೇಶ್ ಅಲಿಯಾಸ್ ವಿಕ್ರಂ ಅಲಿಯಾಸ್ ಕಾರ್ತಿಕ್ ಅಲಿಯಾಸ್ ಹರೀಶ್ಕುಮಾರ್ (45) ಬಂಧಿತ ಆರೋಪಿ. ಮೂರನೇ ವಿಚ್ಛೇದಿತ ಪತ್ನಿಯ ತಾಯಿ ಕೊಟ್ಟ ದೂರಿನ ಮೇರೆಗೆ ಆರೋಪಿಯ ಬಣ್ಣ ಬಯ ಲಾಗಿದೆ. ವಿಧವೆಯರು, ಅಸಹಾಯಕ ಹೆಣ್ಣುಮಕ್ಕಳು, ವಯೋವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಬ್ಯಾಂಕಿನಲ್ಲಿ ಸಾಲ ಕೊಡಿಸುವ,…










