ಸೆ.24ರಂದು ಕೇಂದ್ರ ಸಚಿವ ರಾಂದಾಸ್ ಅಠವಳೆ ಮೈಸೂರಿಗೆ ಭೇಟಿ
ಮೈಸೂರು

ಸೆ.24ರಂದು ಕೇಂದ್ರ ಸಚಿವ ರಾಂದಾಸ್ ಅಠವಳೆ ಮೈಸೂರಿಗೆ ಭೇಟಿ

September 22, 2019

ಮೈಸೂರು,ಸೆ.21- ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಯೋ ಜಿಸಿರುವ `ಪೂನಾ ಒಪ್ಪಂದ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ವನ್ನು ಉದ್ಘಾಟಿಸುವ ಸಲುವಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ರಾಂದಾಸ್ ಅಠವಳೆ ಸೆಪ್ಟೆಂಬರ್ 24ರಂದು ಮಧ್ಯಾಹ್ನ 12.30ಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ಜಗನ್ಮೋಹನ ಅರಮನೆಯಲ್ಲಿ ನಡೆಯಲಿರುವ ಆರ್‍ಪಿಐ ಪದಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆರ್‍ಪಿಐ ಮತ್ತು ಎಸ್‍ಎಸ್‍ಡಿ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸುವರು.

Translate »