ಮೈಸೂರು, ಸೆ. 20- ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ನೀಡುವ 2018ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಡಾ. ಸಿ.ಶಿವಕುಮಾರಸ್ವಾಮಿಯವರ ‘ವೇದಾಗ ಮಗಳು ಮತ್ತು ಚೆನ್ನಬಸವಣ್ಣ’ ಕೃತಿ ಆಯ್ಕೆಯಾಗಿದೆ. ಡಾ. ಸಿ.ಶಿವಕುಮಾರಸ್ವಾಮಿಯವರು ನಿವೃತ್ತ ಸಂಸ್ಕøತ ಪ್ರಾಧ್ಯಾಪಕರು, ವಿದ್ವಾಂಸರು, ಸಂಶೋ ಧಕರು ಹಾಗೂ ವಾಗ್ಮಿಗಳು. ಸಂಸ್ಕøತ ಸಾಹಿತ್ಯ, ಅಲಂಕಾರಶಾಸ್ತ್ರ, ವೀರಶೈವ ಧರ್ಮ-ದರ್ಶನ ಗಳನ್ನು ಕುರಿತು ಆಳವಾದ ಸಂಶೋಧನೆ ನಡೆಸಿದ್ದು, ಸಂಪಾದನೆ, ವಿಮರ್ಶೆ, ಅನುವಾದ, ನಿಘಂಟು ಕ್ಷೇತ್ರಗಳಲ್ಲಿ 45ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. 150ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು…
ದಸರಾ ಉತ್ಸವಕ್ಕೆ ಪ್ರಮೋದಾದೇವಿ ಒಡೆಯರ್, ಎಸ್.ಎಲ್.ಭೈರಪ್ಪ ಅವರಿಗೆ ಅಧಿಕೃತ ಆಹ್ವಾನ
September 20, 2019ಮೈಸೂರು, ಸೆ.19(ಎಸ್ಬಿಡಿ)-ನಾಡಹಬ್ಬ ದಸರಾ ಮಹೋ ತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಗುರುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು. ವಸತಿ ಸಚಿವರೂ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಅರಮನೆಗೆ ತೆರಳಿ ಪ್ರಮೋದಾದೇವಿ ಒಡೆಯರ್ ಅವರನ್ನು ಹಾಗೂ ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ಎಸ್.ಎಲ್.ಭೈರಪ್ಪ ಅವರನ್ನು ಭೇಟಿ ಮಾಡಿ, ಫಲ ತಾಂಬೂಲ ನೀಡಿ, ಅಭಿನಂದಿಸುವ ಮೂಲಕ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದ ಪರವಾಗಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ…
ತಿಹಾರ್ ಜೈಲು ಪಾಲಾದ ಡಿಕೆಶಿ
September 20, 2019ಬೆಂಗಳೂರು, ಸೆ.19(ಕೆಎಂಶಿ)- ಅಕ್ರಮ ಹಣದ ವಹಿವಾಟು ಆರೋಪದ ಮೇಲೆ ಕರ್ನಾಟಕದ ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್ ಕೊನೆಗೂ ತಿಹಾರ್ ಜೈಲು ಪಾಲಾಗಿದ್ದಾರೆ. ನವದೆಹಲಿಯ ತಿಹಾರ್ ಜೈಲ್ ಪಾಲಾದ ಕರ್ನಾಟಕದ ಮೊಟ್ಟಮೊದಲ ರಾಜ ಕಾರಣಿ ಡಿ.ಕೆ.ಶಿವಕುಮಾರ್ ಆಗಿದ್ದಾರೆ. ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಅನಾರೋಗ್ಯ ಸಮಸ್ಯೆಯಿಂದ ಕಳೆದೆರಡು ದಿನಗಳಿಂದ ನವದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿ.ಕೆ. ಶಿವಕುಮಾರ್ ಆರೋಗ್ಯ ಸ್ಥಿತಿ ಸ್ಥಿರವಾ ಗಿದೆ ಎಂದು ವೈದ್ಯರು ದೃಢಪಡಿಸಿದ್ದರಿಂದ ಅವರನ್ನು ಆಸ್ಪತ್ರೆಯಿಂದ…
ಚಿದಂಬರಂ ನ್ಯಾಯಾಂಗ ಬಂಧನ ಅವಧಿ ಅ.3ರವರೆಗೆ ವಿಸ್ತರಣೆ
September 20, 2019ನವದೆಹಲಿ, ಸೆ.19- ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅ. 3ರವರೆಗೆ ವಿಸ್ತರಿಸಲಾಗಿದೆ. ಚಿದಂಬರಂ ನ್ಯಾಯಾಂಗ ಬಂಧನ ಅವಧಿ ಯನ್ನು ವಿಸ್ತರಿಸಬೇಕು ಎಂಬ ಸಿಬಿಐ ಮನವಿಯನ್ನು ಪುರಸ್ಕರಿಸಿದ ವಿಶೇಷ ಕೋರ್ಟ್ನ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು, ಆರೋಪಿಯ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 3ರ ವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ. ಅಲ್ಲದೆ ಚಿದಂಬರಂ ಅವರು ವೈದ್ಯಕೀಯ ತಪಾಸಣೆಗೆ ಒಳಪಡಲು…
ಸತತ 9 ಗಂಟೆಗಳ ಕಾಲ ಹೆಬ್ಬಾಳ್ಕರ್ಗೆ ಇಡಿ ಡ್ರಿಲ್
September 20, 2019ನವದೆಹಲಿ, ಸೆ.19- ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಅವ ರಿಗೆ ಜಾರಿ ನಿರ್ದೇಶನಾ ಲಯದ ಅಧಿಕಾರಿಗಳು ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇಂದು ಡಿ.ಕೆ. ಶಿವ ಕುಮಾರ್ ತಿಹಾರ್ ಜೈಲು ಸೇರುವ ಹೊತ್ತಲ್ಲೇ, ಇತ್ತ ದೆಹಲಿಯ ಇಡಿ ಕಚೇರಿಯಲ್ಲಿ ಡಿಕೆಶಿ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ಆರಂಭವಾಯಿತು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ನಡೆಯಿತು. ನಿಮಗೂ ಡಿಕೆಶಿಗೂ ಇರುವ ವ್ಯವಹಾರಿಕ ಸಂಬಂಧ ಏನು? ನಿಮ್ಮ ಹೆಸರಲ್ಲಿ ಡಿಕೆಶಿ ಆಸ್ತಿ ಮಾಡಿದ್ದಾರಾ?…
ಅ.2ಕ್ಕೆ ಬಾನೆತ್ತರದಲ್ಲಿ ಚಿತ್ತಾರ ಮೂಡಿಸುವ ದಸರಾ ಏರ್ಶೋ
September 20, 2019ಮೈಸೂರು, ಸೆ.19(ಪಿಎಂ)-ದಸರಾ ಮಹೋ ತ್ಸವದ ವಿಶಿಷ್ಟ ಆಕರ್ಷಣೆ ಬಾನೆತ್ತರದಲ್ಲಿ ನಡೆಯುವ ವಿಮಾನಗಳ ಕರಾಮತ್ತು. ಇಂತಹ ವೈಮಾನಿಕ ವೈಶಿಷ್ಟ್ಯ `ಏರ್ ಶೋ’ ಈ ಬಾರಿ ಅ.2ರಂದು ನಡೆ ಯುವುದು ಬಹುತೇಕ ಖಚಿತವಾಗಿದೆ. ಕಳೆದ ವರ್ಷದ `ಏರ್ ಶೋ’ ಅಂತಹ ವೈವಿಧ್ಯತೆ ಇಲ್ಲದೆ, ಬಹುಬೇಗನೆ ಅಂತ್ಯಗೊಂಡಿತು ಎಂಬ ಸಾರ್ವ ಜನಿಕರ ಬೇಸರವನ್ನು ಗಂಭೀರವಾಗಿ ಪರಿಗಣಿಸಿ, ಈ ಬಾರಿ ಪರಿಪೂರ್ಣ `ಏರ್ ಶೋ’ ನೀಡಬೇಕೆಂದು ರಕ್ಷಣಾ ಸಚಿವಾಲಯಕ್ಕೆ ಮನವಿ ಸಹ ಮಾಡಲಾಗಿದೆ. ಹೀಗಾಗಿ ಏರ್ ಶೋ ನಡೆಯುವ ಬನ್ನಿಮಂಟಪದ ಕವಾಯತು ಮೈದಾನದಲ್ಲಿ…
ಸೆ.29ರಿಂದ 15 ದಿನ ದಸರಾ ಫಲಪುಷ್ಪ ಪ್ರದರ್ಶನ
September 20, 2019ಮೈಸೂರು, ಸೆ.19(ಎಂಟಿವೈ)-ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಕುಪ್ಪಣ್ಣ ಪಾರ್ಕ್ನಲ್ಲಿ ಸೆ.29ರಿಂದ ಅ.13 ರವರೆಗೆ 15 ದಿನ ನಡೆಯಲಿರುವ ಫಲ ಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯುವ ಸಸ್ಯಕಾಶಿಯೊಂದಿಗೆ ಮಕ್ಕಳಿಗೆ ಅಮ್ಯೂಸ್ ಮೆಂಟ್ ಪಾರ್ಕ್ ಮುದ ನೀಡಲಿದೆ. ಬಾಂಬೆ ಮೂಲದ ಸಂಸ್ಥೆ ಸುರಕ್ಷತೆಗೆ ಆದ್ಯತೆ ನೀಡಿ ಆಟಿಕೆಗಳ ಜೋಡಣಾ ಕಾರ್ಯ ಈಗಾಗಲೇ ಆರಂಭಿಸಿದೆ. ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 9 ದಿನ ಮಾತ್ರ ಬಾಕಿ ಇರುವುದರಿಂದ ಈ ಬಾರಿ ನವರಾತ್ರಿ ವೇಳೆ ವಿವಿಧೆಡೆಯಿಂದ ಬರುವ ಪ್ರವಾಸಿಗರಿಗೆ ಆಟೋಟ, ಫಲಪುಷ್ಪ ಪ್ರದರ್ಶನದಲ್ಲಿ…
ಸೆ.24ಕ್ಕೆ ಚಿನ್ನದ ಸಿಂಹಾಸನ ಜೋಡಣೆ
September 20, 2019ಮೈಸೂರು, ಸೆ.19(ಎಂಟಿವೈ)- ದಸರಾ ಮಹೋತ್ಸವದ ವೇಳೆ ಅರಮನೆಯಲ್ಲಿ ನಡೆಯುವ ಸಾಂಪ್ರದಾಯಿಕ ಕಾರ್ಯಕ್ರಮ ದಲ್ಲಿ ಖಾಸಗಿ ದರ್ಬಾರ್ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಸೆ.24ರಂದು ಸ್ಟ್ರಾಂಗ್ ರೂಮ್ನಿಂದ ತಂದು ದರ್ಬಾರ್ ಹಾಲ್ ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ಜರುಗಲಿದೆ. ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯ ವಾಗಿದ್ದು, ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್ ಅವರು ಆಸೀನರಾಗಿ ದರ್ಬಾರ್ ನಡೆಸಲಿದ್ದಾರೆ. ಸೆ.29ರಿಂದ ಅ.7ರವರೆಗೆ ಅರಮನೆಯಲ್ಲಿ ವಿವಿಧ…
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
September 20, 2019ಮೈಸೂರು, ಸೆ.19(ಆರ್ಕೆ)- 2019-20ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು ಮೈಸೂರಿನಲ್ಲಿ ಇಂದಿ ನಿಂದ ಆರಂಭವಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭವಾದ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಕ್ರೀಡಾಪಟುಗಳನ್ನು ಪರಿಚಯ ಮಾಡಿ ಕೊಂಡು ಮಾತನಾಡಿದ ಸಚಿವರು, ನಗರ ಹಾಗೂ ಗ್ರಾಮೀಣ ಭಾಗದ ಆಸಕ್ತ ಕ್ರೀಡಾ…
`ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಕ್ಕಿ-ಪುಕ್ಕ’ ಕಾರ್ಯಕ್ರಮಕ್ಕೆ ಚಾಲನೆ
September 20, 2019ಗಮನ ಸೆಳೆದ `ತೇಜಸ್ವಿ ಕಂಡ ಕೀಟ ಪ್ರಪಂಚ’ ಕೀಟಗಳ ಪ್ರದರ್ಶನ ಮೈಸೂರು, ಸೆ.8(ಆರ್ಕೆಬಿ)- ನಾನು ಉನ್ನತ ಶಿಕ್ಷಣ ಪಡೆದದ್ದು ಸಾಹಿತ್ಯದಲ್ಲಿ. ಆದರೆ ಹಳ್ಳಿಗೆ ಬಂದ ಮೇಲೆ ಸುತ್ತಮುತ್ತಲ ಅನೇಕ ಕೌತುಕಮಯ ವಿದ್ಯಮಾನ ಗಳನ್ನು ನೋಡುತ್ತಾ, ಪಶು, ಪಕ್ಷಿ, ಕ್ರಿಮಿ, ಕೀಟಗಳ ವ್ಯಕ್ತಿತ್ವ ವನ್ನು ತಿಳಿದುಕೊಳ್ಳಲಷ್ಟೇ ನಾನು ಅವುಗಳ ಬಗ್ಗೆ ಅಧ್ಯಯನ ಮಾಡಿದವನು. ಏರೋಪ್ಲೇನ್ ಚಿಟ್ಟೆ ಮತ್ತು ಇತರೆ ಕತೆಗಳಿಂದ ಆಯ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯವರ ಈ ವಾಕ್ಯಗಳೊಂದಿಗೆ ಭಾನುವಾರ ಮೈಸೂರಿ ನಲ್ಲಿ ಎರಡು ದಿನಗಳ ಕೆ.ಪಿ.ಪೂರ್ಣಚಂದ್ರ ತೇಜಸ್ವಿ…










