ಮೈಸೂರು

ಸಿದ್ದರಾಮಯ್ಯ ಬಗ್ಗೆ ಎಲ್ಲಾ ಹೇಳ್ತೇನೆ: ಬಾಂಬ್ ಸಿಡಿಸಿದ ಒಖಿಃ ನಾಗರಾಜ್
ಮೈಸೂರು

ಸಿದ್ದರಾಮಯ್ಯ ಬಗ್ಗೆ ಎಲ್ಲಾ ಹೇಳ್ತೇನೆ: ಬಾಂಬ್ ಸಿಡಿಸಿದ ಒಖಿಃ ನಾಗರಾಜ್

August 30, 2019

ಕೋಲಾರ, ಆ.29- ಜೆಡಿಎಸ್‍ನಲ್ಲಿ ಅಧಿಕಾರ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬಂದವರು. ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಕಟ್ಟಿಲ್ಲ. ಕಾಂಗ್ರೆಸ್ ಕಟ್ಟಿದ್ದು ನಾವು ಎಂದು ಸಿದ್ದರಾಮಯ್ಯ ವಿರುದ್ಧವೇ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದರು. ಕೋಲಾದರಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾ ಡಿದ ಎಂ.ಟಿ.ಬಿ, ಆಡಳಿತ ಅಧಿಕಾರ ವೈಫಲ್ಯಗಳಿಂದ ಬೇಸತ್ತು ಹೊರಗೆ ಬಂದಿದ್ದೇವೆ. ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಏನು ಮಾಡಲಾಗುತ್ತಿಲ್ಲ. ಉಪಚುನಾವಣೆಯಲ್ಲಿ ಡಿ.ಕೆ.ಶಿವ ಕುಮಾರ್ ಬಂದು ನನ್ನ ಕ್ಷೇತ್ರದಲ್ಲಿ ತಟ್ಟಲಿ ತೊಡೆ. ಇಂತಹ ತೊಡೆ ತಟ್ಟುವರನ್ನು ನಾನು ನೋಡಿದ್ದೇನೆ….

ಇಂದು, ನಾಳೆ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರವಾಸ
ಮೈಸೂರು

ಇಂದು, ನಾಳೆ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರವಾಸ

August 30, 2019

ಮೈಸೂರು, ಆ.29- ವಸತಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಆಗಸ್ಟ್ 30, 31ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಆ.30ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ಭೇಟಿ ಹಾಗೂ ತುರ್ತು ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ. ಬೆಳಿಗ್ಗೆ 8-30ಕ್ಕೆ ನಜûರ್‍ಬಾದ್‍ನ ಸರ್ಕಾರಿ ಅತಿಥಿಗೃಹದಲ್ಲಿ ಮೈಸೂರು ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಭೆ ಹಾಗೂ ಉಪಹಾರ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ದಸರಾ ಸಿದ್ಧತೆ ಕುರಿತಂತೆ ಮೈಸೂರಿನ ಮುಡಾ ಸಭಾಂಗಣದಲ್ಲಿ ಇಲಾಖಾವಾರು…

ಮಕ್ಕಳಿಗೆ ರೋಟಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಮಕ್ಕಳಿಗೆ ರೋಟಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ

August 30, 2019

ಮೈಸೂರು,ಆ.29(ಆರ್‍ಕೆಬಿ)- ಮಕ್ಕಳನ್ನು ಕಾಡುವ ರೋಟಾ ವೈರಸ್ ಸೋಂಕನ್ನು ನಿಯಂತ್ರಿಸಲು ರೋಟಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ. ರಾಮದಾಸ್ ಗುರುವಾರ ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶಿಶುಗಳಿಗೆ ಲಸಿಕೆ ನೀಡುವ ಮೂಲಕ ಚಾಲನೆ ನೀಡಿದರು. ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‍ಸಿಹೆಚ್ ವಿಭಾಗ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಶಿಶುಗಳಿಗೆ ರೋಟಾ ವೈರಸ್ ಲಸಿಕೆಯನ್ನು ಓಪಿವಿ (2 ಹನಿ ಬಾಯಿಯ ಮೂಲಕ), ಆರ್‍ವಿವಿ (2.5 ಮಿ.ಲೀ. ಬಾಯಿಯ ಮೂಲಕ)…

ಮೈಸೂರಲ್ಲಿ `ಫಿಟ್ ಇಂಡಿಯಾ’ ಟ್ರಯಥ್ಲಾನ್: ನೂರಾರು ಮಂದಿ ಸಾಹಸಯಾತ್ರೆ
ಮೈಸೂರು

ಮೈಸೂರಲ್ಲಿ `ಫಿಟ್ ಇಂಡಿಯಾ’ ಟ್ರಯಥ್ಲಾನ್: ನೂರಾರು ಮಂದಿ ಸಾಹಸಯಾತ್ರೆ

August 30, 2019

ಮೈಸೂರು, ಆ.29(ಎಂಟಿವೈ)- ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಗುರುವಾರ ಬೆಳಿಗ್ಗೆ ಮೈಸೂರಿನಲ್ಲಿ ನೆಹರು ಯುವ ಕೇಂದ್ರ ಆಯೋಜಿಸಿದ್ದ `ಫಿಟ್ ಇಂಡಿಯಾ’ ಟ್ರಯಥ್ಲಾನ್‍ನಲ್ಲಿ ನೂರಾರು ಮಂದಿ ಪಾಲ್ಗೊಂಡು ಗಮನ ಸೆಳೆದರು. ಅರಮನೆಯ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಗುರುವಾರ ಬೆಳಿಗ್ಗೆ ನೆಹರು ಯುವ ಕೇಂದ್ರ, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆ, ರೋಟರಿ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಟ್ರಯಥ್ಲಾನ್‍ಗೆ ಚಾಲನೆ ದೊರೆಯಿತು. ಬಳಿಕ ಯುವಕ-ಯುವತಿಯರು ಸೈಕಲ್ ಏರಿ ಚಾಮುಂಡಿಬೆಟ್ಟದ ತಪ್ಪಲವರೆಗೂ ತೆರಳಿದರು….

ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಮೈಸೂರು

ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

August 30, 2019

ಮೈಸೂರು, ಆ.29(ಪಿಎಂ)- ತಮಿಳು ನಾಡಿನ ವೇದಾರಣ್ಯಂ ಪಟ್ಟಣದಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸ ಗೊಳಿಸಿದ ದುಷ್ಕರ್ಮಿಗಳನ್ನು ಗಡಿಪಾರು ಮಾಡಿ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರು ವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ತಮಿಳು ನಾಡಿನ ನಾಗಪಟ್ಟಣಂ ಜಿಲ್ಲೆಯ ವೇದಾ ರಣ್ಯಂ ಪಟ್ಟಣದಲ್ಲಿ ಕಿಡಿಗೇಡಿಗಳು ಹಾಡ ಹಗಲೇ ಸಾರ್ವಜನಿಕರ ಎದುರಿನಲ್ಲೇ ಉದ್ದೇಶ ಪೂರ್ವಕವಾಗಿ ಡಾ.ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಪ್ರತಿಮೆ ಭಗ್ನಗೊಳಿಸಿದ ವಿಡಿಯೋ ಚಿತ್ರೀಕರಿಸಿ…

ಸೆ.22ರಂದು ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್
ಮೈಸೂರು

ಸೆ.22ರಂದು ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್

August 30, 2019

ಮೈಸೂರು, ಆ.29(ಆರ್‍ಕೆಬಿ)- ಲೈಫ್ ಈಸ್ ಕಾಲಿಂಗ್ ಸಂಸ್ಥೆಯು ಸೆ.22 ರಂದು ಸೆಲೆಬ್ರೇಷನ್ ಮೈಸೂರು ಮ್ಯಾರ ಥಾನ್ 9ನೇ ಆವೃತ್ತಿಯನ್ನು ಹಮ್ಮಿ ಕೊಂಡಿದೆ. ಅಂದು ಮುಂಜಾನೆ 4.45 ಗಂಟೆಗೆ ಮೈಸೂರು ಅರಮನೆಯ ಬಲ ರಾಮ ಗೇಟ್ ಬಳಿ ಮ್ಯಾರಥಾನ್‍ಗೆ ಚಾಲನೆ ದೊರೆಯಲಿದೆ. 42 ಕಿ.ಮೀನ ಪೂರ್ಣ ಮ್ಯಾರಥಾನ್, 30 ಕಿ.ಮೀ. ಓಟ, 21 ಕಿ.ಮೀ. ಅರ್ಧ ಮ್ಯಾರಥಾನ್ ಹಾಗೂ 16 ಮತ್ತು ಅದ ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 10 ಕಿ.ಮೀ. ಓಟವಿದ್ದು, 11 ವಯಸ್ಸಿನ ಮೇಲ್ಪಟ್ಟ ಓಟ ಗಾರರಿಗೆ…

ಸರೋದ್ ವಾದಕ ಪಂ.ರಾಜೀವ್ ತಾರಾನಾಥ ಅವರಿಗೆ ಸೆ.1ರಂದು ಅಭಿನಂದನಾ ಕಾರ್ಯಕ್ರಮ
ಮೈಸೂರು

ಸರೋದ್ ವಾದಕ ಪಂ.ರಾಜೀವ್ ತಾರಾನಾಥ ಅವರಿಗೆ ಸೆ.1ರಂದು ಅಭಿನಂದನಾ ಕಾರ್ಯಕ್ರಮ

August 30, 2019

ಮೈಸೂರು, ಆ.29(ಆರ್‍ಕೆಬಿ)- ಪದ್ಮಶ್ರೀ ಪುರಸ್ಕøತ ಅಂತಾ ರಾಷ್ಟ್ರೀಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಸೆ.1ರಂದು ಸಂಜೆ 5.30 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗ ಣದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಂ.ರಾಜೀವ್ ತಾರಾನಾಥ್ ಅಭಿನಂದನಾ ಸಮಿತಿಯ ಟ್ರಸ್ಟಿ ಪ್ರೊ.ವಿ.ಕೆ.ನಟರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‍ರಿಂದ ಅಭಿನಂದನಾ ನುಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರೂ ಆಗಿರುವ ಕೇಂದ್ರ…

ಆಹಾರ ಮೇಳದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಮೈಸೂರು

ಆಹಾರ ಮೇಳದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

August 30, 2019

ಮೈಸೂರು, ಆ.29- ದಸರಾ ಮಹೋತ್ಸವ ಅಂಗವಾಗಿ ಆಹಾರ ಮೇಳವನ್ನು ಸೆ.29ರಿಂದ ಅ.16ರವರೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಮತ್ತು ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದ ಮುಡಾ ಮೈದಾನಗಳಲ್ಲಿ ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ಸಾರ್ವಜನಿಕರ ಮನರಂಜನೆಗಾಗಿ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲು ಸ್ಥಳೀಯ ಮತ್ತು ವಿವಿಧ ಜಿಲ್ಲೆಗಳ ವಿವಿಧ ವರ್ಗಗಳ ನುರಿತ ಕಲಾವಿದ ರಿಂದ ಅರ್ಜಿ ಆಹ್ವಾನಿಸಿದೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10 ಗಂಟೆವರೆಗೆ ಕಾರ್ಯ ಕ್ರಮ ನಡೆಯಲಿದ್ದು, ಭಾಗವಹಿಸಲು ಇಚ್ಛಿಸುವ ಕಲಾವಿದರು ಪೂರ್ಣ ವಿಳಾಸ,…

ಅತೃಪ್ತರಿಗೆ ಬಿಜೆಪಿ ವರಿಷ್ಠರ ಖಡಕ್ ವಾರ್ನಿಂಗ್
ಮೈಸೂರು

ಅತೃಪ್ತರಿಗೆ ಬಿಜೆಪಿ ವರಿಷ್ಠರ ಖಡಕ್ ವಾರ್ನಿಂಗ್

August 29, 2019

ಬೆಂಗಳೂರು, ಆ.28(ಕೆಎಂಶಿ)-ಮಂತ್ರಿ ಸ್ಥಾನ ದೊರೆಯಲಿಲ್ಲ ಎಂದು ಅಸಮಾಧಾನಗೊಂಡು ಹಾದಿ-ಬೀದಿಯಲ್ಲಿ ಸರ್ಕಾರ, ಪಕ್ಷ ಮತ್ತು ಮುಖಂಡರನ್ನು ಟೀಕಿಸುವವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ದೆಹಲಿ ವರಿಷ್ಠರು ಖಡಕ್ಕಾಗಿ ಸೂಚಿಸಿದ್ದಾರೆ. ಅಸಮಾಧಾನವಿದ್ದಲ್ಲಿ ಪಕ್ಷದ ವೇದಿಕೆ ಅಥವಾ ಮುಖಂಡರ ಬಳಿ ಹೇಳಿಕೊಳ್ಳಲಿ, ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುವವರು ನಮಗೆ ಬೇಕಾಗಿಲ್ಲ. ಅಧಿಕಾರದ ಲಾಲಸೆಯಿಂದ ಸರ್ಕಾರಕ್ಕೆ ಕುತ್ತು ತಂದರೆ ಮುಂಬರುವ ಚುನಾವಣೆಗಳಲ್ಲಿ ಟಿಕೆಟ್ ಅನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಇಂತಹ ವ್ಯಕ್ತಿ…

ಇಂದು ಕೆಆರ್‍ಎಸ್‍ನಲ್ಲಿ ಕಾವೇರಿಗೆ ಯಡಿಯೂರಪ್ಪ ಬಾಗಿನ ಅರ್ಪಣೆ
ಮೈಸೂರು

ಇಂದು ಕೆಆರ್‍ಎಸ್‍ನಲ್ಲಿ ಕಾವೇರಿಗೆ ಯಡಿಯೂರಪ್ಪ ಬಾಗಿನ ಅರ್ಪಣೆ

August 29, 2019

ಮೈಸೂರು, ಆ.28- ತುಂಬಿ ತುಳುಕುತ್ತಿರುವ ಕೃಷ್ಣರಾಜಸಾಗರ ಜಲಾಶಯದಲ್ಲಿ ನಾಳೆ (ಗುರುವಾರ) ಮಧ್ಯಾಹ್ನ 12.30 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಗೋವಿಂದ ಮಕ್ತಪ್ಪ ಕಾರಜೋಳ, ಡಾ|| ಸಿ.ಎಸ್. ಅಶ್ವತ್ಥ ನಾರಾಯಣ, ಲಕ್ಷ್ಮಣ ಸಂಗಪ್ಪ ಸವದಿ ಹಾಗೂ ವಸತಿ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಭಾಗವಹಿಸುವರು. ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸುವರು. ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಎಸ್. ನಾಗರತ್ನಸ್ವಾಮಿ, ಮೈಸೂರು…

1 843 844 845 846 847 1,611
Translate »