ಮೈಸೂರು

ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿರುವಜನತಾ ಬಜಾರ್ ಹಿಂಭಾಗದ ಖಾಲಿ ನಿವೇಶನ
ಮೈಸೂರು

ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿರುವಜನತಾ ಬಜಾರ್ ಹಿಂಭಾಗದ ಖಾಲಿ ನಿವೇಶನ

August 29, 2019

ಮೈಸೂರು, ಆ.28(ಆರ್‍ಕೆಬಿ)-  ಮೈಸೂರಿನ ಇರ್ವಿನ್ ರಸ್ತೆ ಜನತಾ ಬಜಾರ್ ಹಿಂಭಾಗ 6ನೇ ಮುಖ್ಯ ರಸ್ತೆಯ ಖಾಸಗಿ ನಿವೇಶನವೊಂದು ಮೂತ್ರಾಲಯವಾಗಿ ಮಾರ್ಪಟ್ಟಿದ್ದು, ಇದರಿಂದ ಈ ಭಾಗದ ನಿವಾಸಿಗಳು, ಅಂಗಡಿಗಳವರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಈ ಪ್ರದೇಶದ ಜನರು ದೂರಿದ್ದಾರೆ. ಜನತಾ ಬಜಾರ್ ಹಿಂಭಾಗ, ಖಾಸಗಿ ಆಸ್ಪತ್ರೆಗಳೂ ಇವೆ. ಸುತ್ತಲೂ ವಾಸದ ಮನೆ ಗಳಿವೆ. ಆದರೆ ಸಾರ್ವಜನಿಕರು ಜನತಾ ಬಜಾರ್ ಹಿಂಭಾಗದ ಖಾಲಿ ನಿವೇಶನ ವನ್ನು ಮೂತ್ರಾಲಯವಾಗಿ ಬಳಕೆ ಮಾಡಿ ಕೊಂಡಿದ್ದು, ಅಲ್ಲದೆ ಇತರೆಡೆಗಳಿಂದ ಅಂಗಡಿ, ಮನೆಗಳ ಕಸ…

ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾವಣೆ ಆರೋಪ: ಪ್ರತಿಭಟನೆ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾವಣೆ ಆರೋಪ: ಪ್ರತಿಭಟನೆ

August 29, 2019

ಮೈಸೂರು,ಆ.28(ಆರ್‍ಕೆಬಿ)-ನಂಜನಗೂಡಿನ ಕತ್ವಾಡಿಪುರ ಗ್ರಾಮದ 97/2ಎ, 97/3 ಜಮೀನಿನ ನಕಲಿ ದಾಖಲಾತಿ ಸೃಷ್ಟಿಸಿ, ಖಾತೆ ಮಾಡಿಸಿಕೊಂಡಿರುವ ಗ್ರಾಮದ ಶ್ರೀನಿವಾಸ ಹಾಗೂ ಇದಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ನಕಲಿ ಖಾತೆಯನ್ನು ವಜಾ ಮಾಡಿ ನಮ್ಮ ಆಸ್ತಿ ನಮಗೆ ಸಿಗುವಂತೆ ಮಾಡಿಕೊಡಿ ಎಂದು ಕತ್ವಾಡಿಪುರ ಗ್ರಾಮದ ನಾಗಮ್ಮ, ಗೌರಮ್ಮ ಕುಟುಂಬದವರು ಗ್ರಾಮಸ್ಥರೊಂದಿಗೆ   ಬುಧವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ನಮ್ಮ ಅಸಲಿ ದಾಖಲೆಗಳನ್ನು ಪರಿಶೀಲಿಸಬೇಕು. ನಕಲಿ ದಾಖಲೆಗಳನ್ನು ವಜಾ ಮಾಡ ಬೇಕು. ನಕಲಿ ದಾಖಲೆ…

ಇತರರೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆಯನ್ನೆ ದೋಚಿದಳು!
ಮೈಸೂರು

ಇತರರೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆಯನ್ನೆ ದೋಚಿದಳು!

August 29, 2019

ಮೈಸೂರು, ಆ.28(ಎಂಕೆ)- ಸ್ನೇಹಿತರೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆ ಯಲ್ಲಿಯೇ ಕಳವು ಮಾಡಿದ್ದ ಯುವತಿ ಸೇರಿದಂತೆ ಮೂವರು ಖದೀಮರನ್ನು ವಿಜಯನಗರ ಪೊಲೀಸರು ಬಂಧಿಸಿ, 60 ಸಾವಿರ ರೂ. ಮೌಲ್ಯದ 20 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬೂದನೂರು ನಿವಾಸಿ ಸುಷ್ಮಾ(21), ಮೈಸೂರು ಗಾಯತ್ರಿಪುರಂನ  ಮಂಜುನಾಥ್(22), ಚರಣ್(21) ಬಂಧಿತರು. ಸುಷ್ಮಾ ಎಂಬ ಯುವತಿ, ಹಿನಕಲ್‍ನ ತನ್ನ ಚಿಕ್ಕಪ್ಪÀ ಯೋಗಣ್ಣ ಅವರ ಮನೆಯಲ್ಲಿ ಕೆಲವು ತಿಂಗಳು ವಾಸವಿದ್ದಳು. ಈ ವೇಳೆ ಯೋಗಣ್ಣ ಅವರು ಮನೆಯಿಂದ ಹೋರಹೋಗುವಾಗ ಮನೆಯ…

ಅಂಬಾರಿ ಆನೆ ಅರ್ಜುನ ಬಲು ಭಾರ
ಮೈಸೂರು

ಅಂಬಾರಿ ಆನೆ ಅರ್ಜುನ ಬಲು ಭಾರ

August 28, 2019

ಮೈಸೂರು,ಆ.27(ಎಂಟಿವೈ)- ಮೈಸೂರು ಅರಮನೆಯ ಅಂಗಳ ದಲ್ಲಿ ಬೀಡುಬಿಟ್ಟಿರುವ ದಸರಾ ಮಹೋತ್ಸವದ ಮೊದಲ ಹಂತದ ಆರು ಆನೆಗಳಿಗೆ ಮಂಗಳವಾರ ತೂಕ ಮಾಡಿಸಲಾಯಿತು. ಗಜಪಡೆ ನಾಯಕ ಅರ್ಜುನ 5800 ಕೆಜಿ ತೂಗುವ ಮೂಲಕ ತನ್ನ ಭುಜಬಲವನ್ನು ಸಾಬೀತುಪಡಿಸಿದರೆ, ಹೆಣ್ಣಾನೆ ವಿಜಯ 2825 ಕೆಜಿ ತೂಕ ಹೊಂದಿ ಕಡಿಮೆ ತೂಕದ ಆನೆ ಎನಿಸಿತು. ವಿವಿಧ ಆನೆ ಶಿಬಿರಗಳಿಂದ ಅರಮನೆ ಆವರಣಕ್ಕೆ ಬಂದ ನಂತರ ಮೊದಲ ತಂಡದ ಆನೆಗಳನ್ನು ತೂಕ ಮಾಡಿಸುವ ಕ್ರಮವಿದೆ. ಅದರಂತೆ ಇಂದು ತಾಲೀಮಿಗೆ ಕರೆದೊಯ್ಯುವ ಮುನ್ನ ಮೈಸೂರಿನ ಧನ್ವಂತರಿ…

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ
ಮೈಸೂರು

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ

August 28, 2019

ಬೆಂಗಳೂರು, ಆ. 27(ಕೆಎಂಶಿ)-ದೆಹಲಿ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾ ಟಕದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದು, ಮತ್ತೆ ಅಧಿಕಾರಕ್ಕೆ ಬರಲು ಮೂರು ಉಪಮುಖ್ಯ ಮಂತ್ರಿಗಳ ಸ್ಥಾನ ಸೃಷ್ಟಿಸುವ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲೇ ಕರ್ನಾಟಕದಲ್ಲಿ ಚುನಾವಣೆ ನಡೆಸಿ ಪೂರ್ಣ ಪ್ರಮಾಣದ ಸರ್ಕಾರ ತಂದು ಬಿ.ಎಸ್. ಯಡಿಯೂ ರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ವರಿಷ್ಠರಿಗಿತ್ತು. ಆದರೆ ಯಡಿಯೂ ರಪ್ಪ ಅವರ ಒತ್ತಾಯಕ್ಕೆ ಮಣಿದು ಸರ್ಕಾರ ರಚನೆ ಮಾಡಿದ ನಂತರ…

ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಪದಗ್ರಹಣ
ಮೈಸೂರು

ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಪದಗ್ರಹಣ

August 28, 2019

ಬೆಂಗಳೂರು, ಆ. 27(ಕೆಎಂಶಿ)- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವಂತೆ ಮಾಡು ವುದೇ ಮುಂದಿನ ಗುರಿ ಎಂದು ಪಕ್ಷದ ನೂತನ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಇಂದಿಲ್ಲಿ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿದೆ, ಅದನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ತಮ್ಮ ಆದ್ಯತೆ ಎಂದರು. ಸಂಘದ ವಿಚಾರಧಾರೆಗಳನ್ನು ಅಳವಡಿಸಿ ಕೊಂಡು ಬೆಳೆದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲರ ಸಹಕಾರವೂ ಇದೆ. ಹಲವು ನಾಯಕರ ಪರಿಶ್ರಮದಿಂದ…

ಮೈಸೂರು ನಗರಪಾಲಿಕೆಗೆ ಮುಡಾದಿಂದ 12 ಖಾಸಗಿ ಬಡಾವಣೆ ಹಸ್ತಾಂತರ ಪ್ರಕ್ರಿಯೆ ರದ್ದು
ಮೈಸೂರು

ಮೈಸೂರು ನಗರಪಾಲಿಕೆಗೆ ಮುಡಾದಿಂದ 12 ಖಾಸಗಿ ಬಡಾವಣೆ ಹಸ್ತಾಂತರ ಪ್ರಕ್ರಿಯೆ ರದ್ದು

August 28, 2019

ಮೈಸೂರು, ಆ.27(ಎಸ್‍ಬಿಡಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಿಂದ ನಗರಪಾಲಿಕೆಗೆ ಇತ್ತೀಚೆಗೆ 12 ಖಾಸಗಿ ಬಡಾವಣೆಗಳನ್ನು ಹಸ್ತಾಂತರಿ ಸಿರುವ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಕೌನ್ಸಿಲ್ ನಿರ್ಣಯ ಕೈಗೊಳ್ಳಲಾಗಿದೆ. ಮುಡಾ ಆಯುಕ್ತ ಕಾಂತರಾಜು ಅವರು ನಗರಪಾಲಿಕೆ ಪ್ರಭಾರ ಆಯುಕ್ತರಾಗಿದ್ದ ಸಂದರ್ಭದಲ್ಲಿ 12 ಖಾಸಗಿ ಬಡಾವಣೆ ಗಳನ್ನು ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದು ನಮ್ಮ ಗಮನಕ್ಕೂ ಬಂದಿಲ್ಲ, ಕೌನ್ಸಿಲ್ ನಲ್ಲೂ ಮಂಡನೆಯಾಗಿಲ್ಲ. ಹಾಗಾಗಿ ಈ ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ ಎಂದು ಮಂಗಳ ವಾರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಕೌನ್ಸಿಲ್…

ಎ.ಕೆ.ಸುಬ್ಬಯ್ಯ ಇನ್ನಿಲ್ಲ
ಮೈಸೂರು

ಎ.ಕೆ.ಸುಬ್ಬಯ್ಯ ಇನ್ನಿಲ್ಲ

August 28, 2019

ಬೆಂಗಳೂರು, ಆ.27- ನಾಡಿನ ಹಿರಿಯ ರಾಜಕಾರಣಿ, ಪ್ರಗತಿಪರ ಹೋರಾಟಗಾರ, ಮಾಜಿ ಶಾಸಕ ಅಜ್ಜಿಕುಟೀರ ಕಾರ್ಯಪ್ಪ ಸುಬ್ಬಯ್ಯ (ಎ.ಕೆ. ಸುಬ್ಬಯ್ಯ) ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಕಳೆದ ಒಂದು ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲು ತ್ತಿದ್ದ ಸುಬ್ಬಯ್ಯ ಅವರನ್ನು ಇತ್ತೀಚೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅವರ ಆರೋಗ್ಯ ದಲ್ಲಿ ಚೇತರಿಕೆ ಕಂಡುಬಂದಿತ್ತಾದರೂ ಸೋಮವಾರ ಸಂಜೆ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು ಎನ್ನಲಾಗಿದೆ. ಮೃತರ ಅಂತ್ಯ ಕ್ರಿಯೆ…

ಇತ್ತೀಚೆಗೆ ಭಾರತದಲ್ಲಿ ಹಿಂದೂ ಪ್ರಜ್ಞೆ ಪ್ರಜ್ವಲಿಸುತ್ತಿದೆ
ಮೈಸೂರು

ಇತ್ತೀಚೆಗೆ ಭಾರತದಲ್ಲಿ ಹಿಂದೂ ಪ್ರಜ್ಞೆ ಪ್ರಜ್ವಲಿಸುತ್ತಿದೆ

August 27, 2019

ಮೈಸೂರು,ಆ.26(ಎಸ್‍ಪಿಎನ್)-ಇತ್ತೀಚಿನ ಭಾರತದಲ್ಲಿ ಹಿಂದೂ ಧರ್ಮ ಪ್ರಜ್ಞೆ ಎಲ್ಲರಲ್ಲೂ ಮೊಳಕೆಯೊಡೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕಳೆದೆರಡು ವರ್ಷ ಗಳಿಂದ ಸಮಾಜದಲ್ಲಿ ಕೃಷ್ಣ ವೇಷಧಾರಿ ಹಾಗೂ ಮಡಿಕೆ ಹೊಡೆಯುವ ಸ್ಪರ್ಧೆ ಮಕ್ಕಳಲ್ಲಿ ಹೆಚ್ಚುತ್ತಿರುವುದೇ ಸಾಕ್ಷಿ ಎಂದು ಸಂಸ್ಕೃತಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಸನಾತನ ಸಭಾ ವತಿಯಿಂದ ಆಯೋಜಿಸಿದ್ದ 4 ದಿನಗಳ `ಪ್ರಾಚೀನ ಋಷಿ-ಮುನಿಗಳು ಅಂತರಂಗ -ಬಹಿರಂಗ’ ಉಪನ್ಯಾಸ ಮಾಲಿಕೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 5 ಸಾವಿರ ವರ್ಷಗಳ ಇತಿಹಾಸ ಹೊಂದಿ ರುವ…

ಮೈಸೂರು ವಾರಿಯರ್ಸ್‍ಗೆ ದಾಖಲೆಯ ಜಯ
ಮೈಸೂರು

ಮೈಸೂರು ವಾರಿಯರ್ಸ್‍ಗೆ ದಾಖಲೆಯ ಜಯ

August 27, 2019

ಮೈಸೂರು,ಆ.26- ಕೆಪಿಎಲ್ ಇತಿಹಾಸ ದಲ್ಲಿಯೇ ವೇಗದ ಶತಕ ಸಿಡಿಸಿದ ಅನಿರುದ್ಧ ಜೋಷಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೈಸೂರು ವಾರಿಯರ್ಸ್ 241ರನ್‍ಗಳ ಬೃಹತ್ ಮೊತ್ತ ಬೆನ್ನತ್ತುವ ಮೂಲಕ ದಾಖಲೆಯ ಜಯ ಸಾಧಿಸಿದೆ. ಬಳ್ಳಾರಿ ಟಸ್ಕರ್ಸ್ ನೀಡಿದ 240ರನ್‍ಗಳ ಗುರಿ ಬೆನ್ನ ತ್ತಿದ್ದ ಮೈಸೂರು ವಾರಿಯರ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 241ರನ್‍ಗಳಿಸಿ 3 ವಿಕೆಟ್‍ಗಳ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮೈಸೂರು ಪರ ಇನ್ನಿಂಗ್ಸ್ ಆರಂಭಿಸಿದ ವಿನಯ್…

1 845 846 847 848 849 1,611
Translate »