ಮೈಸೂರು,ಏ.15(ಎಂಟಿವೈ)- ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಸೂರು ಮೃಗಾಲಯದ ಬೇಸಿಗೆ ಶಿಬಿರ ಪುನರಾರಂಭವಾಗಿದ್ದು, ಇಂದಿನಿಂದ ಹತ್ತು ದಿನಗಳ ಮೊದಲ ತಂಡದ ಬೇಸಿಗೆ ನಡೆಯಲಿದೆ. 12ರಿಂದ 18 ವರ್ಷದ ವಿವಿಧ ಶಾಲೆಗಳ 60 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರು ಮೃಗಾಲಯ ವತಿಯಿಂದ ಪರಿಸರ ಶಿಕ್ಷಣ ಕುರಿತು ಪ್ರತಿವರ್ಷ ನಡೆಯುವ ಬೇಸಿಗೆ ಶಿಬಿರಕ್ಕೆ ಬಾರಿ ಬೇಡಿಕೆ ಇತ್ತು. ಆದರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಮೃಗಾಲಯದಲ್ಲಿ ಬೇಸಿಗೆ ಶಿಬಿರ ಸ್ಥಗಿತಗೊಳಿಸಲಾಗಿತ್ತು. ಕೋವಿಡ್ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣದಲ್ಲಿರುವುದರಿಂದ…
ಈಶ್ವರಪ್ಪರಾಜೀನಾಮೆ
April 16, 2022ಮುಖ್ಯಮಂತ್ರಿ ಬೊಮ್ಮಾಯಿಗೆರಾಜೀನಾಮೆ ಸಲ್ಲಿಕೆ ಉನ್ನತ ಮಟ್ಟದತನಿಖೆಗೆ ಸಿಎಂಗೆ ಮನವಿ ಇಂದಿನಿAದ ಹಿಂದುತ್ವದ ಪರ ಹೋರಾಟ ಬೆಂಗಳೂರು, ಏ.೧೫(ಕೆಎಂಶಿ)- ಬೆಳ ಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ಆತ್ಮಹತ್ಯೆ ಪ್ರಕರಣಕ್ಕೆ ಸಂಬA ಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವಕೆ.ಎಸ್. ಈಶ್ವರಪ್ಪಅವರುತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿವಮೊಗ್ಗದಿಂದ ನಗರಕ್ಕೆ ಮರಳು ತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಅವರ ಸರ್ಕಾರಿ ನಿವಾಸಕ್ಕೆ ತೆರಳಿ ತಮ್ಮರಾಜೀನಾಮೆ ಪತ್ರ ಸಲ್ಲಿಸಿ ದರು. ರಾಜೀನಾಮೆ ಪತ್ರ ನೀಡಿದ ನಂತರ ಮುಖ್ಯಮಂತ್ರಿಅವರೊAದಿಗೆ ಕೆಲಕಾಲ ಮುಖಾಮುಖಿ ಚರ್ಚೆ ನಡೆಸಿದರು. ರಾಜೀನಾಮೆ ನೀಡಿದ…
ಕಾರ್ಖಾನೆಗಳ ರಾಸಾಯನಿಕಯುಕ್ತ, ಕೊಳಚೆ ನೀರಿನಿಂದಾಗಿ ಮೀನುಗಳ ಮಾರಣಹೋಮ; ದುರ್ವಾಸನೆ ಬೀರುತ್ತಿರುವಕೆರೆ
April 16, 2022ಮತ್ತೆಕೊಚ್ಚೆಗುಂಡಿಯಾಗುತ್ತಿರುವ ಹೆಬ್ಬಾಳ ಕೆರೆ ಮೈಸೂರು,ಏ.೧೫-ಇನ್ಫೋಸಿಸ್ ಪ್ರತಿಷ್ಠಾನದಿಂದ ಪುನರುಜ್ಜೀವನಗೊಂಡ ಮೈಸೂರಿನ ಹೆಬ್ಬಾಳ ಕೆರೆಯನ್ನು ಮತ್ತೆ ಹಾಳು ಮಾಡಲಾಗಿದೆ. ಕೆರೆಕೊಚ್ಚೆಗುಂಡಿಯAತಾಗಿ ಲಕ್ಷಾಂತರ ಮೀನುಗಳ ಮಾರಣಹೋಮವೇ ನಡೆದಿದೆ. ಬರೋಬ್ಬರಿ ೧೦೮ ಕೋಟಿರೂ.ವೆಚ್ಚದಲ್ಲಿಅಭಿವೃದ್ಧಿಯಾಗಿ, ಅಂದದಿAದ ಕಂಗೊಳಿಸುತ್ತಿರುವ ಹೆಬ್ಬಾಳ ಕೆರೆಯ ಸುಂದರ ವಾತಾವರಣ ಈಗ ಸತ್ತ ಮೀನುಗಳ ದುರ್ವಾ ಸನೆಯತಾಣವಾಗಿ ಬದಲಾಗಿದೆ. ಕೆರೆಯಲ್ಲಿದ್ದ ಕಸ-ಕಡ್ಡಿ, ಪಾಚಿತಿಂದು ನೀರನ್ನು ಶುಚಿಯಾಗಿಡಬೇಕಾಗಿದ್ದ ಹಲವು ಬಗೆಯ ಮೀನುಗಳು, ಒಳಚರಂಡಿ ಹಾಗೂ ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ನೀರು ಸೇವಿಸಿ ಸತ್ತುತೇಲಾಡುತ್ತಿವೆ. ಸುಮಾರು ೫೧ ಎಕರೆ ವಿಸ್ತೀರ್ಣದ ಹೆಬ್ಬಾಳ ಕೆರೆಯು ೩೬…
ನಂಜನಗೂಡು: ಮಹಿಳೆ ಮೇಲೆ ಅತ್ಯಾಚಾರ
April 16, 2022ನಂಜನಗೂಡು, ಏ.೧೫- ಜಮೀನಿನಲ್ಲಿಕುರಿ ಮೇಯಿಸುತ್ತಿದ್ದ ಮಹಿಳೆ ಮೇಲೆ ವ್ಯಕ್ತಿಯೋರ್ವಅತ್ಯಾಚಾರವೆಸಗಿದಘಟನೆ ನಂಜನಗೂಡುತಾಲೂಕಿನತಗಡೂರುಗ್ರಾಮದಲ್ಲಿ ನಡೆದಿರುವುದಾಗಿತಡವಾಗಿ ವರದಿಯಾಗಿದೆ. ಈ ಘಟನೆಯು ಏ.೧೧ರಂದು ನಡೆಯಿತುಎಂದು ಹೇಳಲಾಗಿದ್ದು, ಮೈಸೂರಿನಕೆ.ಆರ್.ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಇAದು ನೀಡಿದ ಹೇಳಿಕೆಯಂತೆ ದೊಡ್ಡಕವಲಂದೆಠಾಣೆ ಪೊಲೀಸರುತಗಡೂರುಗ್ರಾಮದವನೇಆದರಾಜುಎಂಬಾತನ ವಿರುದ್ಧಅತ್ಯಾಚಾರ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ವಿವರ:ತಗಡೂರುಗ್ರಾಮದ ೪೫ ವರ್ಷ ವಯಸ್ಸಿನ ಮಹಿಳೆ ಏ.೧೧ರಂದು ಜಮೀನಿನಲ್ಲಿಕುರಿ ಮೇಯಿಸುತ್ತಿದ್ದ ವೇಳೆ ಅಲ್ಲಿಗೆ ತೆರಳಿದ ಅದೇಗ್ರಾಮದರಾಜು(೫೫) ಎಂಬಾತ ಮಹಿಳೆ ಮೇಲೆ ಅತ್ಯಾಚಾರ ವೆಸಗಿದನೆಂದುದೂರಿನಲ್ಲಿ ಹೇಳಲಾಗಿದೆ. ಸಂಜೆ ಕುರಿಗಳು ಮಾತ್ರ ಮನೆಗೆ ವಾಪಸ್ಸಾಗಿದ್ದು, ಮಹಿಳೆ…
ಮೈಸೂರಲ್ಲಿ ಗುಡ್ಫ್ರೈಡೇ ಆಚರಣೆ
April 16, 2022ಮೈಸೂರು, ಏ.೧೫(ಆರ್ಕೆ)- ಶುಭ ಶುಕ್ರವಾರ (ಗುಡ್ಫ್ರೆöÊಡೇ)ದ (ಏ.೧೫) ಪ್ರಯುಕ್ತ ಮೈಸೂರಿನಎಲ್ಲಾಚರ್ಚ್ ಗಳಲ್ಲಿ ಕ್ರೆöÊಸ್ತ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಮೈಸೂರು ಪ್ರಾಂತದ ಬಿಷಪ್ರೆವರೆಂಡ್ ಫಾದರ್ ಕೆ.ಎ.ವಿಲಿಯಂ ನೇತೃತ್ವದಲ್ಲಿ ಸೆಂಟ್ ಫಿಲೋಮಿನಾಸ್ಚರ್ಚ್ನಲ್ಲಿ ಮುಂಜಾನೆ ೫ ಗಂಟೆಯಿAದಲೇಕನ್ನಡ, ಇಂಗ್ಲಿಷ್, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಯೇಸುಕ್ರಿಸ್ತನ ಮುಂಭಾಗಕ್ಯಾAಡಲ್ ಹಚ್ಚಿ ನಾಡಿನ ಸಮಸ್ತ ಜನರಿಗೆ ಒಳಿತಾಗಲಿ, ಸರ್ವರಲ್ಲಿ ಸೋದರತ್ವ, ಸಹ ಬಾಳ್ವೆ ನೆಲೆಸಲಿ ಎಂದು ಪ್ರಾರ್ಥಿಸಿದರು. ಇಂದು ಉಪವಾಸ ವ್ರತ ಆಚರಿಸಿದ ಕೆಲ ಕ್ರೆöÊಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಮುಗಿಸಿದ ಬಳಿಕ…
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಸಚಿವ ಸ್ಥಾನಕ್ಕೆ ಇಂದು ಈಶ್ವರಪ್ಪ ರಾಜೀನಾಮೆ
April 15, 2022ಸ್ವತಃ ಸಚಿವ ಈಶ್ವರಪ್ಪನವರೇ ಶಿವಮೊಗ್ಗದಲ್ಲಿ ಘೋಷಣೆ ಪಕ್ಷಕ್ಕೆ ಮುಜುಗರ ಆಗುವುದನ್ನು ತಪ್ಪಿಸಲು ಈ ನಿರ್ಧಾರ ಇಂದು ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಕೆಗೆ ತೀರ್ಮಾನ ಶಿವಮೊಗ್ಗ, ಏ.೧೪-ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಗ್ರಾಮೀ ಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ನಾಳೆ (ಏ.೧೫) ಸಂಜೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ನಿನ್ನೆ ಮಧ್ಯಾಹ್ನ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿದ ನಂತರ ಇನ್ನು ಮೂರು ದಿನ…
ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟ
April 15, 2022ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು, ಸ್ವಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಾಧ್ಯಮದವರೊಂ ದಿಗೆ ಮಾತನಾಡುತ್ತಾ, ಕೆ.ಎಸ್.ಈಶ್ವರಪ್ಪ ಅವರು ನನ್ನ ಬಳಿ ಮಾತನಾಡಿದರು. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಹಾಗೂ ತಪ್ಪಿಲ್ಲ ಎನ್ನುವ ಸಂಪೂರ್ಣ ವಿಶ್ವಾಸವಿದೆ. ಹೀಗಾಗಿ ನನಗೆ ನೈತಿಕತೆ ಇದೆ. ಈಗ ಅದನ್ನಿಟ್ಟುಕೊಂಡು ಮಾತ ನಾಡಿದರೆ ಬಹಳಷ್ಟು ಜನರಿಗೆ ಇರಿಸುಮುರುಸಾಗುತ್ತದೆ. ಅದಾಗು ವುದು ಬೇಡ. ಇದರ ತನಿಖೆ ಮುಗಿಸಿ, ಸತ್ಯ ಹೊರ…
ಪರಿಶಿಷ್ಟರ ಭೂ ಪರಭಾರೆ ನಿಷೇಧ ತಿದ್ದುಪಡಿ ಕಾಯ್ದೆ ಜಾರಿಗೆ ಸರ್ಕಾರ ಬದ್ಧ
April 15, 2022ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ಪರಿಶಿಷ್ಟರ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲಾ ಕ್ರಮ ಬೆಂಗಳೂರು, ಏ.೧೪(ಕೆಎಂಶಿ)- ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿ ಸಿಎಲ್ ಕಾಯ್ದೆ)ಗೆ ತಿದ್ದುಪಡಿ ತರಲು ಸುಪ್ರೀಂಕೋರ್ಟ್ ಆದೇಶವಾಗಿದ್ದು, ರಾಜ್ಯದಲ್ಲಿ ಕಾಯ್ದೆಯನ್ನು ಅನುಷ್ಠಾನ ಗೊಳಿಸಲು ಸರ್ಕಾರ ಸದಾ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಡಾ. ಬಿ.ಆರ್.ಅಂಬೇಡ್ಕರ್ ರವರ ೧೩೧ನೇ ಜನ್ಮ ದಿನಾಚರಣೆ ಅಂಗ ವಾಗಿ ವಿಧಾನಸೌಧದಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ|| ಬಿ.ಆರ್. ಅಂಬೇಡ್ಕರ್…
ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಅಹೋರಾತ್ರಿ ಧರಣ
April 15, 2022ಬೆಂಗಳೂರು,ಏ.೧೪(ಕೆಎAಶಿ)-ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ವಜಾಗೊಳಿಸಿ ಬಂಧಿಸುವAತೆ ಆಗ್ರಹಿಸಿ, ಕಾಂಗ್ರೆಸ್ ಅಹೋರಾತ್ರಿ ಧರಣ ಆರಂ ಭಿಸಿದೆ. ವಿಧಾನಸೌಧ ಹಾಗೂ ಹೈಕೋರ್ಟ್ನ ಮುಂಭಾ ಗದ ಕೇಂದ್ರದಲ್ಲಿ ಕಾಂಗ್ರೆಸ್ ನಾಯಕರು ಧರಣ ಆರಂಭಿಸಿ, ವಿನೂತನ ಪ್ರತಿಭಟನೆ ಆರಂಭಿಸಿದ್ದಾರೆ. ಈಶ್ವರಪ್ಪ ಅವರನ್ನು ಸಂಪುಟದಿAದ ತಕ್ಷಣ ವಜಾ ಗೊಳಿಸಿ, ತಕ್ಷಣವೇ ಬಂಧಿಸಬೇಕೆAದು ಆಗ್ರಹಿಸಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿ ಷತ್ತಿನ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಚುನಾವಣಾ ಪ್ರಚಾರ ಸಮಿತಿ…
ಮೈಸೂರಿನ ದೇವರಾಜ ಮಾರುಕಟ್ಟೆ, ಲ್ಯಾನ್ಸ್ಡೌನ್ ಬಿಲ್ಡಿಂಗ್ ನೆಲಸಮಕ್ಕೆ ಪಾರಂಪರಿಕ ಸಮಿತಿ ನಿರ್ಣಯ
April 15, 2022ಮೈಸೂರು,ಏ.೧೪(ಆರ್ಕೆ)-ಮೈಸೂರಿನ ಹೃದಯ ಭಾಗದಲ್ಲಿರುವ ದೇವ ರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಬಿಲ್ಡಿಂಗ್ ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸಿ, ಮೂಲ ವಿನ್ಯಾಸ ಉಳಿಸಿಕೊಂಡು ಹೊಸದಾಗಿ ಹಾಲಿ ಮಾದರಿ ಕಟ್ಟಡ ನಿರ್ಮಿಸಲು ಜಿಲ್ಲಾ ಪಾರಂಪರಿಕ ಸಮಿತಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ಮೈಸೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಈ ಎರಡೂ ಹಳೇ ಕಟ್ಟಡಗಳನ್ನು ನೆಲಸಮಗೊಳಿಸಿ ಪಾರಂಪರಿಕ ವಿನ್ಯಾಸ ಮತ್ತು ಶೈಲಿ ಉಳಿಸಿಕೊಂಡು ಯಥಾವತ್ತಾಗಿ ಹೊಸ ಕಟ್ಟಡಗಳ ನಿರ್ಮಿಸಲು…










