ಮೈಸೂರು

ಮೈಸೂರು ಮೃಗಾಲಯಕ್ಕೆ ಶೀಘ್ರವೇ 5 ಸಿಂಹಗಳ ಆಗಮನ
ಮೈಸೂರು

ಮೈಸೂರು ಮೃಗಾಲಯಕ್ಕೆ ಶೀಘ್ರವೇ 5 ಸಿಂಹಗಳ ಆಗಮನ

June 18, 2019

ಮೈಸೂರು: ವಿಶ್ವದ ಮುಂಚೂಣಿ ಮೃಗಾಲಯಗಳಲ್ಲಿ ಒಂದಾಗಿರುವ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಶೀಘ್ರವೇ ಗುಜರಾತ್‍ನ ಸಕ್ಕರ್ ಬರ್ಗ್ ಮೃಗಾಲಯದಿಂದ ಎರಡು ಸಿಂಹ (ಗಂಡು), ಮೂರು ಸಿಂಹಿಣಿ(ಹೆಣ್ಣು) ಆಗಮಿಸ ಲಿದ್ದು, ಪ್ರವಾಸಿಗರಿಗೆ ಮುದ ನೀಡಲಿವೆ. ಪ್ರಾಣಿ ವಿನಿಮಯ ಯೋಜನೆಯಡಿ ಸಕ್ಕರ್ ಬರ್ಗ್ ಮೃಗಾಲಯದೊಂದಿಗೆ ಕಳೆದ ಮೂರು ತಿಂಗಳಿಂದ ಮಾತುಕತೆ ನಡೆದಿದ್ದು, ಇದೀಗ ಸಿಂಹ ನೀಡಲು ಗುಜರಾತ್ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮೈಸೂರು ಮೃಗಾಲಯದಲ್ಲಿ ಪ್ರಸ್ತುತ ನಾಲ್ಕು ಸಿಂಹಗಳಿದ್ದು, ಅವುಗಳಲ್ಲಿ ಒಂದು ಸಿಂಹಿಣಿಯ ಆರೋಗ್ಯದಲ್ಲಿ ಏರುಪೇರಾ ಗಿದೆ. ಏಷ್ಯಾಟಿಕ್ ಸಿಂಹಗಳು…

ನಕಲಿ ಉತ್ಪನ್ನ, ಕಳ್ಳಸಾಗಣೆ, ಪೈರಸಿ ನಿರ್ಮೂಲನೆ ಕುರಿತು ಪೊಲೀಸ್ ಅಧಿಕಾರಿಗಳಿಗೆ ತರಬೇತಿ
ಮೈಸೂರು

ನಕಲಿ ಉತ್ಪನ್ನ, ಕಳ್ಳಸಾಗಣೆ, ಪೈರಸಿ ನಿರ್ಮೂಲನೆ ಕುರಿತು ಪೊಲೀಸ್ ಅಧಿಕಾರಿಗಳಿಗೆ ತರಬೇತಿ

June 18, 2019

ಮೈಸೂರು: ಎಫ್‍ಐಸಿಸಿಐನ ಕ್ಯಾಸ್ಕೇಡ್ (ಕಮಿಟಿ ಎಗೆನೆಸ್ಟ್ ಸ್ಮಗ್ಲಿಂಗ್ ಅಂಡ್ ಕೌಂಟರ್‍ಫೈಲಿಂಗ್ ಆ್ಯಕ್ಟಿವಿಟೀಸ್ ಡೆಸ್ಟ್ರಾಯಿಂಗ್ ದಿ ಎಕಾನಮಿ-ಆರ್ಥಿಕತೆ ಯನ್ನು ನಾಶ ಮಾಡುವಂತಹ ಕಳ್ಳಸಾಗಣೆ ಮತ್ತು ನಕಲಿ ತಯಾರಿಕೆ ಚಟುವಟಿಕೆಗಳ ನಿಗ್ರಹ ಸಮಿತಿ) ತನ್ನ ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮಗಳಡಿ ಜಾರಿ ಅಧಿಕಾರಿಗಳಿಗೆ ಜಾಗೃತಿ ಮೂಡಿಸುವುದು ಮತ್ತು ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಪೊಲೀಸ್ ಅಕಾಡೆಮಿಯ ನಕಲಿ, ಕಳ್ಳಸಾಗಣೆ ಮತ್ತು ಪೈರಸಿ ತಡೆಗಟ್ಟುವ ಪೊಲೀಸ್ ಅಧಿಕಾರಿ ಗಳಿಗೆ ಹಮ್ಮಿಕೊಳ್ಳಲಾಗಿತ್ತು. ಮೈಸೂರು ಪೊಲೀಸ್ ಅಕಾಡೆಮಿಯ ನಿರ್ದೇಶಕ ವಿಪುಲ್‍ಕುಮಾರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೊಲೀಸ್…

ಅಧ್ಯಯನ, ಕಠಿಣ ಪರಿಶ್ರಮವಿದ್ದರೆ ಯಶಸ್ಸು ಸಾಧ್ಯ
ಮೈಸೂರು

ಅಧ್ಯಯನ, ಕಠಿಣ ಪರಿಶ್ರಮವಿದ್ದರೆ ಯಶಸ್ಸು ಸಾಧ್ಯ

June 18, 2019

ಮೈಸೂರು: ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮವಿದ್ದರೆ ವಿದ್ಯಾರ್ಥಿಗಳು ಸ್ಪರ್ಧಾ ಜಗತ್ತಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಅಭಿಪ್ರಾಯಪಟ್ಟರು. ಮೈಸೂರಿನ ಶೇಷಾದ್ರಿಪುರಂ ರಸ್ತೆ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಜೊತೆಗೆ ಎಲ್ಲಾ ವಿಭಾಗದ ತರಬೇತಿ, ನಿರಂತರ ಪರಿಶ್ರಮ, ಸತತ ಅಧ್ಯಯನ, ಶ್ರದ್ಧೆ, ಲಭ್ಯವಿರುವ ತಂತ್ರಜ್ಞಾನಗಳನ್ನು…

ಪಪ್ಪಾಯ ವೈರಸ್ ರೋಗಕ್ಕೆ ಪರಿಹಾರೋಪಾಯದ ಸಂಶೋಧನೆ
ಮೈಸೂರು

ಪಪ್ಪಾಯ ವೈರಸ್ ರೋಗಕ್ಕೆ ಪರಿಹಾರೋಪಾಯದ ಸಂಶೋಧನೆ

June 18, 2019

ಉಷ್ಣವಲಯದ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಪಪ್ಪಾಯ(ಪರಂಗಿ) ಕೂಡ ಒಂದು. ಈ ಹಣ್ಣು ವಿಟಮಿನ್ ‘ಎ’ ಮತ್ತು ‘ಸಿ’ ಗಳ ಆಗರ.ಮಧುಮೇಹಿಗಳೂ ತಿನ್ನಬಹುದಾದ ಅಪರೂಪದ ರುಚಿಕರ ವಾದ, ಆರೋಗ್ಯಪೂರ್ಣವಾದ, ವರ್ಷ ಪೂರ್ತಿ ದೊರೆಯುವ ಹಣ್ಣು. ಆದರೆ ಈ ಬೆಳೆಗೆ ತಗಲುವ ವೈರಸ್ ರೋಗ ಇದಕ್ಕೆ ಅತ್ಯಂತ ಮಾರಕವಾಗಿದ್ದು, ಬೆಳೆಯನ್ನು ಎಲ್ಲೇ ಬೆಳೆದರೂ ಆಕ್ರಮಣ ಮಾಡಿ ರೈತರಿಗೆ ಅಪಾರ ನಷ್ಟವನ್ನುಂಟು ಮಾಡಬಲ್ಲದಾಗಿದೆ. ಏಫಿಡ್ಸ್ ಹೇನುಗಳೆಂಬ ಕೀಟವು ಗಿಡದಿಂದ ಗಿಡಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಅತಿ ಶೀಘ್ರವಾಗಿ ಹರಡಬಲ್ಲ ಈ ರೋಗವು ಒಮ್ಮೆ…

ಜೂ.29ರಂದು ಅಂಬಿ ಕಾವ್ಯ ನಮನ ಕವಿಗೋಷ್ಠಿ
ಮೈಸೂರು

ಜೂ.29ರಂದು ಅಂಬಿ ಕಾವ್ಯ ನಮನ ಕವಿಗೋಷ್ಠಿ

June 18, 2019

ಮೈಸೂರು: ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ಸಂಯುಕ್ತ ಆಶ್ರಯದಲ್ಲಿ ಜೂ. 29 ರಂದು ಸಂಜೆ 4.30ಕ್ಕೆ 74ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಸಾಹಿತಿ, ಅಂಕಣಕಾರ ಪ್ರೊ. ಕೆ. ಭೈರವಮೂರ್ತಿ ಅವರಿಗೆ ಶುಭ ಹಾರೈಕೆ, ಹಿರಿಯ ಲೇಖಕ ಬಿ.ಪಿ. ಅಶ್ವತ್ಥನಾರಾಯಣ, ಅವರ `ಸಾಹಿತ್ಯ ಸಂಗಮ’, ಪತ್ರಕರ್ತ ರಂಗ ನಾಥ್ ಮೈಸೂರು ಅವರ `ಕನ್ನಡ ಗಾಂಧಿ’ ಕೃತಿಗಳ ಲೋಕಾರ್ಪಣೆ ಹಾಗೂ ದಿ. ಅಂಬ ರೀಶ್ ನೆನಪಿನ `ಅಂಬಿ ಕಾವ್ಯನಮನ’ ಕವಿ ಗೋಷ್ಠಿ ಆಯೋಜಿಸಲಾಗಿದೆ. ಮೇಲುಕೋಟೆ ವಂಗೀಪುರ…

ಬದಲಾಗುತ್ತಿರುವ ವ್ಯವಸ್ಥೆಗೆ ತಕ್ಕಂತೆನಾವೂ ನವೀಕೃತಗೊಳ್ಳುವುದು ಅಗತ್ಯ
ಮೈಸೂರು

ಬದಲಾಗುತ್ತಿರುವ ವ್ಯವಸ್ಥೆಗೆ ತಕ್ಕಂತೆನಾವೂ ನವೀಕೃತಗೊಳ್ಳುವುದು ಅಗತ್ಯ

June 18, 2019

ಮೈಸೂರು: ಬದ ಲಾಗುತ್ತಿರುವ ವ್ಯವಸ್ಥೆಗೆ ತಕ್ಕಂತೆ ನಾವೂ ಬದಲಾಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಹೆಚ್.ವಿ. ರಾಜೀವ್ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್‍ಬಿ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಸೌಹಾರ್ದ ಸಹಕಾರಿಗಳ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ಸಂಘಟಿತವಾಗಬೇಕು. ಚಳವಳಿ ಬಲಿಷ್ಠ ಗೊಳಿಸಿ, ಸರ್ಕಾರದ ವಿಮುಖ ನೀತಿಯನ್ನು ಸಂಘಟಿತ ಹೋರಾಟದ ಮೂಲಕ ಎದು ರಿಸಿ, ಈ ಕ್ಷೇತ್ರದಲ್ಲಿ ವಿಶ್ವಾಸ ಮೂಡಿಸು ವುದು ಅಗತ್ಯ. ಹೆಚ್ಚು ಠೇವಣಿ ತರುವುದು, ಹೆಚ್ಚು…

ಪಾಕಿಸ್ತಾನ ಮಣಿಸಿದ ಭಾರತ
ಮೈಸೂರು

ಪಾಕಿಸ್ತಾನ ಮಣಿಸಿದ ಭಾರತ

June 17, 2019

ಮ್ಯಾಂಚೆಸ್ಟರ್:  ಇಂಡೋ-ಪಾಕ್ ಹೈವೋಲ್ಟೆಜ್ ಪಂದ್ಯದಲ್ಲಿ ಭಾರತ ಡಕ್ವರ್ಥ್ ಲೂಯಿಸ್ ನಿಯಮದಡಿ 89 ರನ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದ ಭಾರತ ಅಂಕ ಪಟ್ಟಿಯಲ್ಲಿ 3 ಜಯ, ಒಂದು ಡ್ರಾ ನೊಂ ದಿಗೆ 7 ಅಂಕ ಗಳಿಸಿ 3ನೇ ಸ್ಥಾನದಲ್ಲಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಿಡಿಲಬ್ಬರದ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿ ಸ್ತಾನ ವಿರುದ್ಧ ಭಾರತ…

ಇಂದು ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ ಬಂದ್
ಮೈಸೂರು

ಇಂದು ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ ಬಂದ್

June 17, 2019

ಬೆಂಗಳೂರು:  ಕಾರ್ಯನಿರತ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾಳೆ(ಜೂ.17) ದೇಶಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ ಸೇವೆ ಸ್ಥಗಿತಗೊಳ್ಳಲಿದೆ. ಪಶ್ಚಿಮಬಂಗಾಳದ ಕೊಲ್ಕತ್ತಾ ಎನ್ ಆರ್‍ಎಸ್ ವೈದ್ಯಕೀಯ ಮಹಾವಿದ್ಯಾ ಲಯದ ಕರ್ತವ್ಯನಿರತ ವೈದ್ಯರ ಮೇಲೆ ಗುಂಪೆÇಂದು ಹಲ್ಲೆ ನಡೆಸಿರುವುದನ್ನು ಖಂಡಿಸಿ ಸೋಮವಾರ(ಜೂ.17) ಬೆಳಿಗ್ಗೆ 6ರಿಂದ ಜೂ.18ರ ಬೆಳಿಗ್ಗೆ 6ರವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗ(ಓಪಿಡಿ), ಕ್ಲಿನಿಕ್‍ಗಳು ಹಾಗೂ ವೈದ್ಯಕೀಯ…

ಮೈಸೂರಲ್ಲಿ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ: ಹೆಚ್ಚುವರಿ ಬಸ್ ವ್ಯವಸ್ಥೆ
ಮೈಸೂರು

ಮೈಸೂರಲ್ಲಿ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ: ಹೆಚ್ಚುವರಿ ಬಸ್ ವ್ಯವಸ್ಥೆ

June 17, 2019

ಮೈಸೂರು: ನಾನ್ ಇಂಟರ್ ಲಾಕಿಂಗ್ ವ್ಯವಸ್ಥೆಯೂ ಸೇರಿದಂತೆ ವಿವಿಧ ಆಧು ನೀಕರಣ ಕಾಮಗಾರಿ ನಗರದ ಕೇಂದ್ರ ರೈಲ್ವೆ ನಿಲ್ದಾಣ ದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿ ನಿಂದ ಬೆಂಗಳೂರು, ಶಿವಮೊಗ್ಗ, ಹಾಸನ ಹಾಗೂ ಚಾಮರಾಜನಗರಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಹಳಿಗಳಲ್ಲಿ ನಾನ್ ಇಂಟರ್ ಲಾಕಿಂಗ್ ಆಧುನಿಕ ವ್ಯವಸ್ಥೆ ಅಳವಡಿಸುತ್ತಿರುವುದ ರಿಂದ ಇಂದಿನಿಂದ (ಜೂ.16) ಜೂ.23ರವರೆಗೆ ಮೈಸೂರಿ ನಿಂದ ವಿವಿಧೆಡೆಗೆ ಪ್ರಯಾಣಿಸುತ್ತಿದ್ದ 30 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ….

ದಿಢೀರ್ ದೇವರಾಜ ಮಾರುಕಟ್ಟೆಗೆ ಬಂದ ಯದುವೀರ್ ದಂಪತಿ
ಮೈಸೂರು

ದಿಢೀರ್ ದೇವರಾಜ ಮಾರುಕಟ್ಟೆಗೆ ಬಂದ ಯದುವೀರ್ ದಂಪತಿ

June 17, 2019

ಮೈಸೂರು: ಮೈಸೂರಿನ ದೇವ ರಾಜ ಮಾರುಕಟ್ಟೆಗೆ ಭಾನುವಾರ ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ದಂಪತಿ ಅನಿರೀಕ್ಷಿತವಾಗಿ ಭೇಟಿ ನೀಡಿ, ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಅಚ್ಚರಿಯನ್ನುಂಟು ಮಾಡಿದರು. ಇಂದು ಬೆಳಿಗ್ಗೆ ಪತ್ನಿಯೊಂದಿಗೆ ಯದುವೀರ್, ಯಾವ ಮುನ್ಸೂಚನೆಯೂ ಇಲ್ಲದೆ ಭದ್ರತಾ ಸಿಬ್ಬಂದಿಯೂ ಇಲ್ಲದೆ ಮಾರುಕಟ್ಟೆಗೆ ಭೇಟಿ ನೀಡಿ, ಮಳಿಗೆ ಗಳನ್ನು ವೀಕ್ಷಿಸಿದರು. ಇದೇ ವೇಳೆ ತ್ರಿಷಿಕಾ ಕುಮಾರಿ ಅವರು ಮಾರುಕಟ್ಟೆಯಲ್ಲಿ ತಾಜಾ ಸೊಪ್ಪು, ತರಕಾರಿ ಖರೀದಿಸಿದರು. ಈ ವೇಳೆ ವ್ಯಾಪಾರಿಗಳು ಹಣ…

1 934 935 936 937 938 1,611
Translate »