ನವದೆಹಲಿ: ನಾನು ಮೈಸೂರು-ಕೊಡಗು ಸಂಸದನಾಗಿದ್ದು, ವಿಶಿಷ್ಟ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಗಳನ್ನು ಹೊಂದಿರುವ ಕೊಡಗು ಸಂಸ್ಕೃತಿಯನ್ನು ಸಂಸತ್ನಲ್ಲಿ ಪ್ರಚುರಪಡಿಸಬೇಕಾಗಿರುವುದು ನನ್ನ ಕರ್ತವ್ಯವೆಂದು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಬಂದಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಾನು ಈ ಉಡುಗೆ ತೊಟ್ಟು ಬರಲು ನನ್ನ ಪತ್ನಿ ಅರ್ಪಿತಾ ಕಾರಣ ಎಂದು ಹೇಳಿದ ಅವರು, ಈ ಬಾರಿ ಸಂಸತ್ ಪ್ರವೇಶಿಸುವಾಗ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಉಡುಗೆ ತೊಡಬೇಕು. ಅದರಲ್ಲೂ ಕೊಡವರ ಉಡುಗೆ ತೊಡಬೇಕು ಎಂದು ಪತ್ನಿ ಅರ್ಪಿತ ಹೇಳಿದ್ದರೆಂದು ಪ್ರತಾಪ್…
ಮೈಸೂರಲ್ಲಿ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್
June 18, 2019ಮೈಸೂರು: ಕರ್ತವ್ಯ ನಿರತ ವೈದ್ಯರಿಗೆ ಸೂಕ್ಷ ರಕ್ಷಣೆ ನೀಡುವು ದರೊಂದಿಗೆ ಕೊಲ್ಕತ್ತಾದ ಎನ್ಆರ್ಎಸ್ ವೈದ್ಯ ಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಮಾಡಿ ಬೆಂಬಲ ಘೋಷಿಸಿತು. ಇದ ರಿಂದ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ವೈದ್ಯಕೀಯ ಸೇವೆ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ರಾಷ್ಟ್ರ ವ್ಯಾಪಿ ನಡೆದ ವೈದ್ಯರ ಮುಷ್ಕರಕ್ಕೆ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ…
`ಕೆರೆ ತುಂಬಿಸಿ, ರೈತರಿಗೆ ಸಹಾಯ ಮಾಡಿ’ ಸಿಎಂಗೆ ಸೆಲ್ಫಿ ವೀಡಿಯೋದಲ್ಲಿ ಮನವಿ ಮಾಡಿ ರೈತ ಆತ್ಮಹತ್ಯೆ
June 18, 2019ಕೆ.ಆರ್.ಪೇಟೆ: ಸಾಲ ಬಾಧೆ ತಾಳಲಾರದೇ ರೈತನೋರ್ವ ಸೆಲ್ಫಿ ವಿಡಿಯೋ ಮಾಡಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತನ್ನ ಕೊನೆ ಆಸೆ ನೆರವೇರಿ ಸುವಂತೆ ಮನವಿ ಮಾಡಿಕೊಂಡು ತಮ್ಮ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ತಾಲೂಕಿನ ಅಘಲಯ ಗ್ರಾಮದಲ್ಲಿ ನಡೆದಿದೆ.ಅಘಲಯ ಗ್ರಾಮದ ನಂಜಪ್ಪನ ಮಗ ಸುರೇಶ್(50) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಘಟನೆ ವಿವರ: ಅಘಲಯ ಗ್ರಾಮದಲ್ಲಿ ಸುಮಾರು ಎರಡೂವರೆ ಎಕರೆ ಜಮೀನು ಮತ್ತು ತೋಟ ಹೊಂದಿರುವ ಸುರೇಶ್, ತೋಟದ ಅಭಿವೃದ್ಧಿ ಹಾಗೂ ಬೆಳೆಗಾಗಿ…
ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಿ
June 18, 2019ಮೈಸೂರು: ಮುಖ್ಯ ಮಂತ್ರಿಗಳೇ ಗ್ರಾಮ ವಾಸ್ತವ್ಯ ನಿಲ್ಲಿಸಿ, ರಾಜ್ಯದಲ್ಲಿ ಭೀಕರವಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ ಕೈಗೊಳ್ಳಿ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಇಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರಿಗೆ ಸಲಹೆ ನೀಡಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.80 ರಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮೈಸೂರು, ಚಾಮರಾಜ ನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ರಾಜ್ಯದಲ್ಲಿ ಬರ ಗಾಲ ತಾಂಡವವಾಡುತ್ತಿದೆ. ಹೀಗಿದ್ದೂ ಮುಖ್ಯಮಂತ್ರಿ ಕುಮಾರಸ್ವಾಮಿ…
ಕಾಮಾಕ್ಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ
June 18, 2019ಮೈಸೂರು: ಮೈಸೂರಿನ ಜೆ.ಪಿ.ನಗರದಲ್ಲಿ ನಿರ್ಮಿಸಿರುವ ನೂತನ ಕಾಮಾಕ್ಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೋಮ ವಾರ ಲೋಕಾರ್ಪಣೆಗೊಂಡಿತು. ಮೈಸೂರಿನ ಶ್ರೀದ್ವಯರಾದ ಅವದೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುಸಜ್ಜಿತ ಆಸ್ಪತ್ರೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುತ್ತೂರು ಶ್ರೀಗಳು, ಕಾಮಾಕ್ಷಿ ಆಸ್ಪತ್ರೆ ಶ್ರೀಮಂತರ ಆಸ್ಪತ್ರೆಯಂತೂ ಅಲ್ಲ. ಇದು ಸಾಮಾನ್ಯರ ಆಸ್ಪತ್ರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಸರಸ್ವತಿ ಪುರಂನಲ್ಲಿ 4 ದಶಕಗಳಿಂದ…
ಮೈಸೂರಲ್ಲಿ ಇ-ವಾಹನ ಚಾರ್ಜಿಂಗ್ ಘಟಕ ತೆರೆಯಲು ಚೆಸ್ಕಾಂ ಸಿದ್ಧತೆ
June 18, 2019ಮೈಸೂರು: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಇ-ವಾಹನಗಳ ಚಾರ್ಜಿಂಗ್ ಘಟಕಗಳನ್ನು ತೆರೆಯಲು ಚೆಸ್ಕಾಂ ಸಿದ್ಧತೆ ನಡೆಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಉಳಿ ತಾಯ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಣಗೊಳಿಸುವ ಜತೆಗೆ ಇ-ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೈಸೂರು-ಬೆಂಗ ಳೂರು ಹೆದ್ದಾರಿಯಲ್ಲಿನ 6 ಸ್ಥಳಗಳಲ್ಲಿ ಚಾರ್ಜಿಂಗ್ ಘಟಕ ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಮೈಸೂರು ಪಶ್ಚಿಮ (ಲಕ್ಷ್ಮಿ ಪುರಂ) ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸುಮಾರು 110 ಇ-ವಾಹನಗಳು ನೋಂದಣಿಯಾಗಿವೆ. ಇವುಗಳಲ್ಲಿ 7 ಇ-ರಿಕ್ಷಾ, 5…
ಮೈಸೂರಲ್ಲಿ ಮಹಿಳಾ ಜೈಲು ವೀಕ್ಷಕರ ನಿರ್ಗಮನ ಪಥಸಂಚಲನ
June 18, 2019ಮೈಸೂರು: ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ 9 ತಿಂಗಳ ಬುನಾದಿ ತರಬೇತಿ ಪಡೆದ 170 ಮಹಿಳಾ ಜೈಲು ವೀಕ್ಷಕರ ಆಕರ್ಷಕ ನಿರ್ಗಮನ ಪಥ ಸಂಚಲನ ಸೋಮವಾರ ನಡೆಯಿತು. ಅಶೋಕ ರಸ್ತೆಯಲ್ಲಿರುವ ಫೌಂಟನ್ ಸರ್ಕಲ್ ಬಳಿಯ ಕೇಂದ್ರ ಕಾರಾಗೃಹದ ಆವರಣದಲ್ಲಿ ನಡೆದ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ 52ನೇ ಪ್ರಶಿಕ್ಷಣಾ ರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು. ನಂತರ ಮಹಿಳಾ ಜೈಲು ವೀಕ್ಷಕ ಪ್ರಶಿಕ್ಷ ಣಾರ್ಥಿಗಳನ್ನುದ್ದೇಶಿಸಿ…
ರಾಘವೇಂದ್ರ ಸುಹಾಸ್ ದಕ್ಷಿಣ ವಲಯ ಐಜಿಪಿ
June 18, 2019ಮೈಸೂರೂ: ರಾಜ್ಯದ 19 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರಿನ ದಕ್ಷಿಣ ವಲಯ ಐಜಿಪಿ ಯಾಗಿ ರಾಜಸ್ಥಾನ ಕೇಡರ್ನ 2000ನೇ ತಂಡದ ಐಪಿಎಸ್ ಅಧಿಕಾರಿ ಹೆಚ್.ಜಿ. ರಾಘವೇಂದ್ರ ಸುಹಾಸ್ರನ್ನು ವರ್ಗಾವಣೆ ಮಾಡಲಾಗಿದೆ. ಐಜಿಪಿಯಾಗಿದ್ದ ಉಮೇಶ ಕುಮಾರ್ರನ್ನು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಕಮೀಷ್ನರ್(ಪಶ್ಚಿಮ) ಆಗಿ ವರ್ಗಾವಣೆಗೊಂಡಿದ್ದಾರೆ. 2013ನೇ ತಂಡದ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಸಿ.ಬಿ. ರಿಶ್ಯಂತ್ರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಯನ್ನಾಗಿ ವರ್ಗ ಮಾಡಿದ್ದು, ಆ ಹುದ್ದೆಯಲ್ಲಿದ್ದ ಅಮಿತ್ಸಿಂಗ್ರನ್ನು ಸಿವಿಲ್ ಡಿಫೆನ್ಸ್…
ಸಾರ್ವಜನಿಕರಿಂದ ದೂರಿನ ಸುರಿಮಳೆ, ನೀರಿನದ್ದೇ ಹೆಚ್ಚು ದೂರು
June 18, 201947ನೇ ವಾರ್ಡ್ನಲ್ಲಿ ಶಾಸಕ ರಾಮದಾಸ್ `ಜನಸ್ಪಂದನಾ ಯಾತ್ರೆ’ ತಕ್ಷಣದಿಂದ ನೀರು ಪೂರೈಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ ಮೈಸೂರು: ಕೃಷ್ಣ ರಾಜ ಶಾಸಕ ಎಸ್.ಎ.ರಾಮದಾಸ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ 47ನೇ ವಾರ್ಡ್ ನಲ್ಲಿ ಸೋಮವಾರ ಕೈಗೊಂಡ ಜನಸ್ಪಂದನಾ ಯಾತ್ರೆಯಲ್ಲಿ ಕುಡಿಯುವ ನೀರಿನದ್ದೇ ಹೆಚ್ಚು ದೂರುಗಳು ಕೇಳಿಬಂದವು. ಹುಡ್ಕೋ, ಅನಿಕೇತನ ರಸ್ತೆ, ಸರಸ್ವತಿ ಪುರಂ 12 ಕ್ರಾಸ್, ಸಿಎನ್ಡಿ ಬ್ಲಾಕ್, ದಿನೇಶ್ ಕೋಚಿಂಗ್ ಸೆಂಟರ್ ರಸ್ತೆ, ಕುವೆಂಪುನಗರ ಜೋಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಸಕ ರಾಮದಾಸ್ ಅವರು…
ಆರ್ಎಂಸಿ ಸರ್ಕಲ್ ಬಳಿ ಲಾರಿ ಹರಿದು ಪಾದಚಾರಿ ಸಾವು
June 18, 2019ಮೈಸೂರು: ಲಾರಿ ಹರಿದ ಪರಿಣಾಮ ರಸ್ತೆ ದಾಟುತ್ತಿದ್ದ ಅಪರಿ ಚಿತ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮೈಸೂ ರಿನ ಹಳೇ ಆರ್ಎಂಸಿ ಸರ್ಕಲ್ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಸುಮಾರು 55 ವರ್ಷದ ವ್ಯಕ್ತಿಯು ಧರಿಸಿದ್ದ ಶರ್ಟ್ ಜೇಬಿನಲ್ಲಿ ಗೌರಿಬಿ ದನೂರಿನಿಂದ ಭಾನುವಾರ ಮೈಸೂರಿಗೆ ಪ್ರಯಾಣಿಸಿದ ಬಗ್ಗೆ ಕೆಎಸ್ಆರ್ಟಿಸಿ ಬಸ್ ಟಿಕೆಟ್ ಪತ್ತೆಯಾಗಿದೆ. ಶರ್ಟ್ ಮತ್ತು ಪಂಚೆ ಧರಿಸಿರುವುದರಿಂದ ಮೃತ ವ್ಯಕ್ತಿ ಅಡುಗೆ ಭಟ್ಟ ಅಥವಾ ಆರ್ಎಂಸಿಯಲ್ಲಿ ವಹಿವಾಟು ನಡೆಸುತ್ತಿದ್ದವರಿರಬಹುದೆಂದು ಶಂಕಿಸಲಾಗಿದೆ. ತಿಲಕ್ನಗರದ ದೇವಸ್ಥಾನದ ಕಮಾನು ಕಡೆಯಿಂದ ಆರ್ಎಂಸಿ…










