ಮೈಸೂರು: ಲಾರಿ ಹರಿದ ಪರಿಣಾಮ ರಸ್ತೆ ದಾಟುತ್ತಿದ್ದ ಅಪರಿ ಚಿತ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮೈಸೂ ರಿನ ಹಳೇ ಆರ್ಎಂಸಿ ಸರ್ಕಲ್ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.
ಸುಮಾರು 55 ವರ್ಷದ ವ್ಯಕ್ತಿಯು ಧರಿಸಿದ್ದ ಶರ್ಟ್ ಜೇಬಿನಲ್ಲಿ ಗೌರಿಬಿ ದನೂರಿನಿಂದ ಭಾನುವಾರ ಮೈಸೂರಿಗೆ ಪ್ರಯಾಣಿಸಿದ ಬಗ್ಗೆ ಕೆಎಸ್ಆರ್ಟಿಸಿ ಬಸ್ ಟಿಕೆಟ್ ಪತ್ತೆಯಾಗಿದೆ. ಶರ್ಟ್ ಮತ್ತು ಪಂಚೆ ಧರಿಸಿರುವುದರಿಂದ ಮೃತ ವ್ಯಕ್ತಿ ಅಡುಗೆ ಭಟ್ಟ ಅಥವಾ ಆರ್ಎಂಸಿಯಲ್ಲಿ ವಹಿವಾಟು ನಡೆಸುತ್ತಿದ್ದವರಿರಬಹುದೆಂದು ಶಂಕಿಸಲಾಗಿದೆ. ತಿಲಕ್ನಗರದ ದೇವಸ್ಥಾನದ ಕಮಾನು ಕಡೆಯಿಂದ ಆರ್ಎಂಸಿ ಕಡೆಗೆ ರಸ್ತೆ ದಾಟುತ್ತಿದ್ದಾಗ ಕಿವುಡ ಮಕ್ಕಳ ಶಾಲೆ ಕಡೆಯಿಂದ ಬಂಬೂಬಜಾರ್ ರಸ್ತೆಯಲ್ಲಿ ಬಂದ ರಸಗೊಬ್ಬರದ ಬ್ಯಾಗ್ಗಳನ್ನು ತುಂಬಿಕೊಂಡು ಬಂದ ಲಾರಿ(ಕೆಎ 16, ಎ0008 ಬೆಳಿಗ್ಗೆ ಸುಮಾರು 10.30ಗಂಟೆ ವೇಳೆ ಆತನ ಮೇಲೆ ಹರಿಯಿತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಎನ್.ಆರ್ ಸಂಚಾರ ಠಾಣೆ ಇನ್ಸ್ಪೆಕ್ಟರ್ ಯೋಗೇಶ್ ಹಾಗೂ ಸಿಬ್ಬಂದಿ ಮಹಜರು ನಡೆಸಿ, ಮೃತದೇಹವನ್ನು ಜೆಎಸ್ಎಸ್ ಮೆಡಿಕಲ್ ಕಾಲೇಜು ಶವಾಗಾರಕ್ಕೆ ಸ್ಥಳಾಂತರಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಾರಿ ವಶಪಡಿಸಿಕೊಂಡು ಪರಾರಿಯಾಗಿ ರುವ ಚಾಲಕನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ನಗರ ಪೊಲೀಸ್ ಕಂಟ್ರೋಲ್ ರೂಂ(0821-2418339) ಅಥವಾ ಎನ್.ಆರ್.ಸಂಚಾರ ಠಾಣೆ ಇನ್ಸ್ಪೆಕ್ಟರ್ರನ್ನು ಸಂಪರ್ಕಿಸುವಂತೆ ಕೋರಲಾಗಿದೆ.