ಮೈಸೂರೂ: ರಾಜ್ಯದ 19 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರಿನ ದಕ್ಷಿಣ ವಲಯ ಐಜಿಪಿ ಯಾಗಿ ರಾಜಸ್ಥಾನ ಕೇಡರ್ನ 2000ನೇ ತಂಡದ ಐಪಿಎಸ್ ಅಧಿಕಾರಿ ಹೆಚ್.ಜಿ. ರಾಘವೇಂದ್ರ ಸುಹಾಸ್ರನ್ನು ವರ್ಗಾವಣೆ ಮಾಡಲಾಗಿದೆ. ಐಜಿಪಿಯಾಗಿದ್ದ ಉಮೇಶ ಕುಮಾರ್ರನ್ನು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಕಮೀಷ್ನರ್(ಪಶ್ಚಿಮ) ಆಗಿ ವರ್ಗಾವಣೆಗೊಂಡಿದ್ದಾರೆ.
2013ನೇ ತಂಡದ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಸಿ.ಬಿ. ರಿಶ್ಯಂತ್ರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಯನ್ನಾಗಿ ವರ್ಗ ಮಾಡಿದ್ದು, ಆ ಹುದ್ದೆಯಲ್ಲಿದ್ದ ಅಮಿತ್ಸಿಂಗ್ರನ್ನು ಸಿವಿಲ್ ಡಿಫೆನ್ಸ್ ಮತ್ತು ಹೋಮ್ಗಾರ್ಡ್ ವಿಭಾಗದ ಕಮಾಂಡೆÀÀಂಟ್ ಆಗಿ ನಿಯೋಜಿಸಲಾಗಿದೆ.
ಎಸ್ಐಟಿ ಮುಖ್ಯಸ್ಥರಾಗಿ ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ಬಿ.ಆರ್.ರವಿಕಾಂತೇ ಗೌಡ ರನ್ನು ಬೆಂಗಳೂರು ನಗರ ಅಪರಾಧ ವಿಭಾಗದ ಡಿಐಜಿಪಿಯನ್ನಾಗಿ ವರ್ಗಾ ವಣೆ ಮಾಡಲಾಗಿದೆ. ಬೆಂಗಳೂರು ನಗರದ ಪೊಲೀಸ್ ಕಮೀಷ್ನರ್ ಆಗಿ ಅಲೋಕ್ಕುಮಾರ್, ಗೃಹ ಇಲಾಖೆ ಕಾರ್ಯದರ್ಶಿಯಾಗಿ ಬಿ.ಕೆ.ಸಿಂಗ್, ಸಿಐಡಿ ಎಸ್ಪಿಯಾಗಿ ರವಿ. ಡಿ. ಚನ್ನಣ್ಣನವರ್, ಕಲಾ ಕೃಷ್ಣಸ್ವಾಮಿರನ್ನು ಎಫ್ಎಸ್ಎಲ್ ನಿರ್ದೇಶಕರಾಗಿ, ಎನ್.ವಿಷ್ಣುವರ್ಧನ್ ರನ್ನು ಬೆಂಗಳೂರಿನ ಡಿಸಿಪಿ(ಆಡಳಿತ)ಯ ನ್ನಾಗಿ ವರ್ಗಾವಣೆ ಮಾಡಲಾಗಿದೆ.