ಮೈಸೂರು: ಗುರುವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಬಿರುಮಳೆಗೆ ನಗರದಲ್ಲಿ ವ್ಯಾಪಕವಾಗಿ ಧರೆಗುರುಳಿದ ಮರ, ರೆಂಬೆ -ಕೊಂಬೆಗಳನ್ನು ನಗರಪಾಲಿಕೆಯ ತೋಟ ಗಾರಿಕಾ ವಿಭಾಗದ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ತೆರವು ಕಾರ್ಯ ಆರಂಭಿಸಿದರು. ಆದರೆ ಇನ್ನು ಹಲವು ಕಡೆ ಮರದ ರೆಂಬೆ ಗಳ ತುಂಡರಿಸಿ ಗುಡ್ಡೆ ಹಾಕಲಾಗಿದ್ದು, ಅದನ್ನು ಯಾವಾಗ ಸಾಗಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಆಲಿಕಲ್ಲು ಸಹಿತ ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ಮೈಸೂರಿನ ಹಲವು ಕಡೆಗಳಲ್ಲಿ ದೊಡ್ಡ ಮರಗಳು, ಅಲ್ಲದೆ ವಿವಿಧ ರಸ್ತೆ, ವೃತ್ತಗಳಲ್ಲಿ…
ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಪುಡಿ ಪುಡಿಯಾದ ಇಟ್ಟಿಗೆಗೂಡಿನ ಪಶು ಆಸ್ಪತ್ರೆಯ ಶೀಟುಗಳು
May 25, 2019ಮೈಸೂರು: ಗುರುವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಭಾರೀ ಬಿರುಗಾಳಿ ಮಳೆಗೆ ಮೈಸೂರಿನ ಇಟ್ಟಿಗೆಗೂಡಿನ ಸರ್ಕಾರಿ ಪಶು ಚಿಕಿತ್ಸಾಲಯದ ಕಲ್ನಾರ್ ಶೀಟು ಗಳು ಒಡೆದು ಪುಡಿ ಪುಡಿಯಾಗಿವೆ. ಗಾಳಿಯ ರಭಸಕ್ಕೆ ಮೇಲೆದ್ದ ಶೀಟುಗಳು ಆಸ್ಪತ್ರೆಯ ಒಳಗೆ ಬಿದ್ದು ಪುಡಿಯಾದವು. ಮಳೆಯ ನೀರಿನಿಂದ ಆಸ್ಪತ್ರೆಯೊಳಗಿನ ಕುರ್ಚಿ, ಮೇಜು, ಬೀರು ತೋಯ್ದು ಹೋಗಿವೆ. ಟೇಬಲ್ ಮೇಲಿನ ಹಾಸು ಗಾಜು ಒಡೆದಿದೆ. ಮಳೆಯಿಂದ ತೊಯ್ದು ಔಷಧಿಗಳು ಹಾಳಾಗಿವೆ. ಈ ವೇಳೆ ಆಸ್ಪತ್ರೆ ಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಪ್ರಾಣಾಪಾಯವಾಗಿಲ್ಲ. ಒಟ್ಟಾರೆ 50,000ಕ್ಕೂ ಹೆಚ್ಚಿನ…
ಒಣರೆಂಬೆ ತೆರವುಗೊಳಿಸದಿದ್ದರೆ ಅನಾಹುತಕ್ಕೆ ಆಹ್ವಾನ ನೀಡಿದಂತೆ…!
May 25, 2019ಮೈಸೂರು: ಗಾಳಿ-ಮಳೆ ವೇಳೆ ಮರಗಳ ಒಣ ಕೊಂಬೆಗಳು ಧರೆಗುರುಳುವುದು ಸಾಮಾನ್ಯ. ಹಾಗೆಂದು ತಿಳಿದೂ ತಿಳಿದೂ ಎಚ್ಚರ ವಹಿಸದಿದ್ದರೆ, ಅನಾಹುತಕ್ಕೆ ಎಡೆ ಮಾಡಿದಂತೆಯೇ ಸರಿ. ಮಳೆ-ಗಾಳಿ ವೇಳೆ ಮರಗಳ ಒಣ ಕೊಂಬೆಗಳು ಬೀಳುವುದಿರಲಿ, ಬುಡ ಭದ್ರ ಇಲ್ಲವಾದರೆ ಮರಗಳೇ ನೆಲಕ್ಕುರುಳುತ್ತವೆ. ಮೈಸೂರಿನ ವಾಲ್ಮೀಕಿ ರಸ್ತೆಯ ಉದ್ದಕ್ಕೂ ಸೊಂಪಾಗಿ ಮರಗಳು ಬೆಳೆದು ನಿಂತಿವೆ. ಆ ಮೂಲಕ ಪ್ರಾಕೃತಿಕ ಸೌಂದರ್ಯ ಈ ರಸ್ತೆಗೆ ಒಲಿದು ಬಂದಿದೆ. ಉರಿಯುವ ಬಿಸಿಲಿನಲ್ಲೂ ಈ ರಸ್ತೆಯಲ್ಲಿ ತಂಪಾದ ವಾತಾವರಣ ಇರುತ್ತದೆ. ಹೌದು, ಇದು ನಿಜಕ್ಕೂ ಖುಷಿಯಾಗುವ…
ರಾಜ್ಯ ಮಟ್ಟದ `ಶಂಕರ ಕಪ್’ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
May 25, 2019ಮೈಸೂರು: ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ವಿಪ್ರ ಯುವ ಕರ ಸಂಘಟನೆಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ಬ್ರಾಹ್ಮಣ ಸಮುದಾಯದ `ಶಂಕರ ಕಪ್’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ದೊರೆಯಿತು. ಮೈಸೂರಿನ ಬೋಗಾದಿ ರಸ್ತೆಯಲ್ಲಿ ರುವ ಮಾನಸ ಗಂಗೋತ್ರಿಯ ಕಾಫಿ ಬೋರ್ಡ್ ಮೈದಾನದಲ್ಲಿ ಏರ್ಪಡಿಸಿರುವ ಪಂದ್ಯಾವಳಿಗೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಬ್ಯಾಟ್ ಮಾಡುವ ಮೂಲಕ…
ಎಸ್ಎಸ್ಎಲ್ಸಿವರೆಗಿನ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಸ್ಯಾಂಡಲ್ ಖರೀದಿಗೆ ಅನುಮತಿ
May 25, 2019ಮೈಸೂರು: 2019-20ನೇ ಸಾಲಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸಾಕ್ಸ್, ಶೂ ಹಾಗೂ ಸ್ಯಾಂಡಲ್ಗಳನ್ನು ಖರೀದಿಗೆ ಕೆಲವು ಷರತ್ತುಗಳನ್ನು ವಿಧಿಸಿ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಶೂ ಮತ್ತು ಸಾಕ್ಸ್ಗಳನ್ನು ಖರೀದಿಸಲು ವಿದ್ಯಾರ್ಥಿಗಳ ಹಾಜರಾತಿಯನ್ನು ಗಮನಿಸಿ, ಅದಕ್ಕೆ ತಕ್ಕಂತೆ ಎಸ್ಡಿಎಂಸಿ ಸದಸ್ಯರ ಅನುಮತಿ ಯೊಂದಿಗೆ ಸ್ಥಳೀಯವಾಗಿ(ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ) ಖರೀದಿಸುವುದು ಕಡ್ಡಾಯ. ಆದರೆ, ವಲಯ/ಕ್ಲಸ್ಟರ್ ಅಥವಾ ಜಿಲ್ಲಾ ಮಟ್ಟದ ಕೇಂದ್ರಿಕೃತ ವ್ಯವಸ್ಥೆಯಡಿ ಖರೀದಿ ಪ್ರಕ್ರಿಯೆ ನಡೆಸುವುದನ್ನು ನಿರ್ದಿಷ್ಟವಾಗಿ…
ಅಧಿಕ ಬಡ್ಡಿ ಆಸೆಯಿಂದ ಲಕ್ಷಾಂತರ ರೂ. ಕಳೆದುಕೊಂಡರು!
May 25, 2019ಮೈಸೂರು: ಅಧಿಕ ಬಡ್ಡಿ ಆಸೆಯಿಂದ ಮಹಿಳೆ ಸೇರಿದಂತೆ ಇಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ರಾಜೀವ್ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಗಳಾದ ಅಸ್ಲಂ ಅಹಮದ್ ಮತ್ತು ಸೈಯಿದಾ ತಬಸುಮ್ ಹಣ ಕಳೆದು ಕೊಂಡವರು. ರಾಜೀವ್ನಗರದ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈ.ಲಿನ ಬ್ರಾಂಚ್ ಮ್ಯಾನೇಜರ್ ಖಿಜರ್, ನಮ್ಮ ಸಂಸ್ಥೆಯಲ್ಲಿ ಹಣ ಹೂಡಿದರೆ 1 ಲಕ್ಷಕ್ಕೆ ವಾರದಲ್ಲಿ 9ರಿಂದ 11 ಸಾವಿರ ರೂ. ಬಡ್ಡಿ ಗಳಿಸಬಹುದೆಂದು ಅಸ್ಲಂ ಎಂಬುವರನ್ನು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ಅಸ್ಲಂ, 2018ರ ಜನವರಿಯಲ್ಲಿ 37 ಲಕ್ಷ…
On May 27, the ‘melody vocal’
May 25, 2019ಮೈಸೂರು: ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮೇ 27ರಂದು ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ `ಮಧುರ ಗಾಯನ’ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಎಲ್.ಚಂದ್ರಶೇಖರ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ರಿಂದ 9.30ರವರೆಗೆ ಗಾಯನ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತ. ಲೇಖಕ ಬಿ.ಬಿ.ಶಿವಣ್ಣ ಶೀತರ್, ವಿಜಯಧ್ವನಿ ಪ್ರತಿಷ್ಠಾನ ಸಾಂಸ್ಕøತಿಕ ಸಂಸ್ಥೆಯ ಆರ್.ಸಿ.ರಾಜ ಲಕ್ಷ್ಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಾನು ವೃತ್ತಿಯಲ್ಲಿ ವಕೀಲನಾಗಿದ್ದರೂ ಪ್ರವೃತ್ತಿಯಲ್ಲಿ ಸಂಗೀತದ ಆರಾಧಕ. ಹೀಗಾಗಿ…
ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ
May 25, 2019ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2019ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳು ಮೇ 25 ಮತ್ತು 26ರಂದು ವಿ.ವಿ. ಮೊಹಲ್ಲಾ ದಲ್ಲಿರುವ ನಿರ್ಮಲಾ ಕಾನ್ವೆಂಟ್ ಪ್ರೌಢ ಶಾಲೆ, ಜಯಲಕ್ಷ್ಮಿಪುರಂನಲ್ಲಿರುವ ಚಿನ್ಮಯಿ ಪದವಿ ಪೂರ್ವ ಕಾಲೇಜು, ಸೀತಾ ವಿಲಾಸ ರಸ್ತೆಯ ಮರಿಮಲ್ಲಪ್ಪ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ದೇವರಾಜ ಮೊಹಲ್ಲಾದ ಅವಿಲಾ ಕಾನ್ವೆಂಟ್, ಸರಸ್ವತಿ ಪುರಂನಲ್ಲಿರುವ ವಿಜಯ ವಿಠಲ ಪ್ರೌಢ ಶಾಲೆ, ಕುವೆಂಪುನಗರದಲ್ಲಿರುವ ಕಾವೇರಿ ಶಿಕ್ಷಣ ಸಂಸ್ಥೆ, ಚಾಮುಂಡಿ ಪುರಂ ಸೇಂಟ್…
ಮೋದಿ ಸುನಾಮಿ ಪ್ರತಿಪಕ್ಷಗಳು ಧೂಳೀಪಟ
May 24, 2019ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಮೇ 29ಕ್ಕೆ ಪ್ರಮಾಣ ವಚನ ಸಾಧ್ಯತೆ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೂ 5 ವರ್ಷಗಳ ಕಾಲ ದೇಶದ ಆಡಳಿತ ನಡೆಸ ಬೇಕೆಂಬ ಜನಾದೇಶ ವನ್ನು ಯಾರೂ ಊಹಿಸಲಾಗದಷ್ಟು ಬೃಹತ್ ಪ್ರಮಾಣದಲ್ಲಿ ಹಾಗೂ ಸ್ಪಟಿಕ ಸದೃಶದಷ್ಟು ಸ್ಪಷ್ಟ ರೀತಿಯಲ್ಲಿ ದೇಶದ ಜನತೆ ನೀಡಿದೆ. ನಿರೀಕ್ಷೆಗೂ ಮೀರಿ ಬಂದಿರುವ ಜನಾದೇಶ ದಿಂದ ಉಲ್ಲಸಿತರಾಗಿರುವ ನರೇಂದ್ರ ದಾಮೋದರದಾಸ್ ಮೋದಿ ಅವರು ಇದೇ ಮೇ 29ರಂದು ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಬರಿಯ…
ಮೋದಿ ಅಲೆಗೆ ರಾಜ್ಯದಲ್ಲಿ ಕೊಚ್ಚಿ ಹೋದ ಕಾಂಗ್ರೆಸ್, ಜೆಡಿಎಸ್
May 24, 2019ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿಗೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಧೂಳೀಪಟವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ತಲಾ ಒಂದು ಸ್ಥಾನದಲ್ಲಿ ಗೆಲುವು ಹೊರತುಪಡಿಸಿದರೆ, ಉಳಿದ 25 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಮೋದಿ ಸುನಾಮಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇ ಗೌಡ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಸಂಸದ ಕೆ.ಎಚ್. ಮುನಿ ಯಪ್ಪ,…










