ಅಧಿಕ ಬಡ್ಡಿ ಆಸೆಯಿಂದ ಲಕ್ಷಾಂತರ ರೂ. ಕಳೆದುಕೊಂಡರು!
ಮೈಸೂರು

ಅಧಿಕ ಬಡ್ಡಿ ಆಸೆಯಿಂದ ಲಕ್ಷಾಂತರ ರೂ. ಕಳೆದುಕೊಂಡರು!

May 25, 2019

ಮೈಸೂರು: ಅಧಿಕ ಬಡ್ಡಿ ಆಸೆಯಿಂದ ಮಹಿಳೆ ಸೇರಿದಂತೆ ಇಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ರಾಜೀವ್‍ನಗರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿಗಳಾದ ಅಸ್ಲಂ ಅಹಮದ್ ಮತ್ತು ಸೈಯಿದಾ ತಬಸುಮ್ ಹಣ ಕಳೆದು ಕೊಂಡವರು. ರಾಜೀವ್‍ನಗರದ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈ.ಲಿನ ಬ್ರಾಂಚ್ ಮ್ಯಾನೇಜರ್ ಖಿಜರ್, ನಮ್ಮ ಸಂಸ್ಥೆಯಲ್ಲಿ ಹಣ ಹೂಡಿದರೆ 1 ಲಕ್ಷಕ್ಕೆ ವಾರದಲ್ಲಿ 9ರಿಂದ 11 ಸಾವಿರ ರೂ. ಬಡ್ಡಿ ಗಳಿಸಬಹುದೆಂದು ಅಸ್ಲಂ ಎಂಬುವರನ್ನು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ಅಸ್ಲಂ, 2018ರ ಜನವರಿಯಲ್ಲಿ 37 ಲಕ್ಷ ರೂ. ಹೂಡಿಕೆ ಮಾಡಿದ್ದರು. ಕೆಲವು ದಿನಗಳ ನಂತರ ಖಿಜರ್‍ಗೆ ಕರೆ ಮಾಡಿದಾಗ ಸ್ಪಂದಿಸಿಲ್ಲ. ಕಚೇರಿಗೆ ಹೋದಾಗ ಬಾಗಿಲು ಹಾಕಿತ್ತು. ಇದರಿಂದ ತಾನು ಮೋಸ ಹೋಗಿರುವುದು ಗೊತ್ತಾಗಿದೆ.

ಮತ್ತೊಂದು ಪ್ರಕರಣದಲ್ಲೂ ಖಿಜರ್, ಸೈಯಿದಾ ತಬಸುಮ್ ಅವರನ್ನು ಇದೇ ರೀತಿ ನಂಬಿಸಿ, 28 ಲಕ್ಷ ರೂ. ಬಂಡವಾಳವನ್ನು ಹೂಡಿಸಿ ಮೋಸ ಮಾಡಿದ್ದಾರೆ. ಈ ಸಂಬಂಧ ಇಬ್ಬರೂ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Translate »