ಮೈಸೂರು: ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮೇ 27ರಂದು ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ `ಮಧುರ ಗಾಯನ’ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಎಲ್.ಚಂದ್ರಶೇಖರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ರಿಂದ 9.30ರವರೆಗೆ ಗಾಯನ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತ. ಲೇಖಕ ಬಿ.ಬಿ.ಶಿವಣ್ಣ ಶೀತರ್, ವಿಜಯಧ್ವನಿ ಪ್ರತಿಷ್ಠಾನ ಸಾಂಸ್ಕøತಿಕ ಸಂಸ್ಥೆಯ ಆರ್.ಸಿ.ರಾಜ ಲಕ್ಷ್ಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಾನು ವೃತ್ತಿಯಲ್ಲಿ ವಕೀಲನಾಗಿದ್ದರೂ ಪ್ರವೃತ್ತಿಯಲ್ಲಿ ಸಂಗೀತದ ಆರಾಧಕ. ಹೀಗಾಗಿ ಬೆಂಬಲಿಗರ ನೆರವಿನೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ವೆಂಕಟೇಶ್, ರಾಜೇಶ್, ವೆಂಕಟೇಶ್ಬಾಬು ಗೋಷ್ಠಿಯಲ್ಲಿದ್ದರು.