ದೇಶ ಸುರಕ್ಷಿತ ಕೈಗಳಲ್ಲಿದೆ…
ಮೈಸೂರು

ದೇಶ ಸುರಕ್ಷಿತ ಕೈಗಳಲ್ಲಿದೆ…

February 27, 2019

ಚುರು(ರಾಜಸ್ಥಾನ): ಭಾರತ ಸುರಕ್ಷಿತ ಕೈಗಳಲ್ಲಿದೆ. ದೇಶ ಕ್ಕಿಂತ ದೊಡ್ಡದು ಯಾವುದೂ ಇಲ್ಲ. ಭಾರತವನ್ನು ಎಂದಿಗೂ ತಲೆಬಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜಸ್ಥಾನದ ಚುರುವಿನಲ್ಲಿ ಮಂಗಳ ವಾರ ಮಧ್ಯಾಹ್ನ ನಡೆದ ಬಿಜೆಪಿ ಸಮಾ ವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಾಕ್ ನೆಲಕ್ಕೇ ನುಗ್ಗಿ ಉಗ್ರರ ನೆಲೆಗಳನ್ನು ದಮನ ಮಾಡಿದ ವಾಯು ಪಡೆ ಯೋಧರ ಶೌರ್ಯವನ್ನು ಶ್ಲಾಘಿಸಿದರು. ಬಳಿಕ ಪುಲ್ವಾಮಾ ದಾಳಿ ಯನ್ನು ಪ್ರಸ್ತಾಪಿಸಿದ ಅವರು, ನಮ ಗಾಗಿ ಪ್ರಾಣತೆತ್ತ ಯೋಧರನ್ನು ಸ್ಮರಿ ಸೋಣ. ಅವರ ಬಲಿದಾನ, ತ್ಯಾಗ ಅಮೂಲ್ಯವಾದದ್ದು ಎಂದರು.

ಸಭಿಕ ರಿಂದ ಮೋದಿ ಮೋದಿ.. ಘೋಷಣೆ ಜೋರಾಗುತ್ತಿದ್ದಂತೆಯೇ, `ನೀವೆಲ್ಲರೂ ಎಂದಿನಂತಿಲ್ಲ. ಭಾರೀ ಸಂತಸದಲ್ಲಿ ದ್ದೀರಿ. ನಿಮ್ಮ ಜೋಶ್ ನನಗೆ ಅರ್ಥವಾಗುತ್ತದೆ’ ಎಂದು ಪ್ರಧಾನಿ ನಗೆ ಬೀರಿದರು. ನಮ್ಮ ಸೈನ್ಯ ನಮ್ಮ ಹೆಮ್ಮೆ. ದೇಶದ ಮೇಲೆ ನಡೆಯುವ ಯಾವುದೇ ದಾಳಿ ಯತ್ನವನ್ನು ಸಮರ್ಥ ವಾಗಿ ಎದುರಿಸಲು ನಾವು ಸಿದ್ದರಿದ್ದೇವೆ ಎಂದು ಸಭಿಕರ ಉತ್ಸಾಹ ಇನ್ನಷ್ಟು ಹೆಚ್ಚುವಂತೆ ಮಾಡಿದರು. 2014ರಲ್ಲಿ ನಾನು ಮಾತು ಕೊಟ್ಟಿದ್ದಂತೆಯೇ ನಡೆದುಕೊಂಡಿದ್ದೇನೆ. ದೇಶಕ್ಕಾಗಿ, ದೇಶದ ಜನತೆಗಾಗಿ ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಮೊದಲು ದೇಶ, ಆ ಬಳಿಕವೇ ಉಳಿದದ್ದು ಎಂದು ನುಡಿದರು.

Translate »