ಲಿಂಗಾಂಬುದಿ ಕೆರೆ ಅಭಿವೃದ್ಧಿಗೊಳಿಸಿ
ಮೈಸೂರು

ಲಿಂಗಾಂಬುದಿ ಕೆರೆ ಅಭಿವೃದ್ಧಿಗೊಳಿಸಿ

May 7, 2019

ಮೈಸೂರು: ಹೂಳೆತ್ತಿಸಿ, ಸಾಕಷ್ಟು ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ಮೈಸೂರಿನ ಲಿಂಗಾಂಬುದಿ ಕೆರೆಯನ್ನು ಅಭಿವೃದ್ಧಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆರೆ ಅಭಿವೃದ್ಧಿಗೊಳಿಸುವಂತೆ ಮೈಸೂರು ವಿಶ್ವವಿದ್ಯಾನಿಲಯ ಬಡಾ ವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಣಯ್ಯ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಚಿವರು, ಸಾವಿರಾರು ಜೀವರಾಶಿಗಳ ಆಶ್ರಯ ತಾಣವಾಗಿರುವ ಕೆರೆಯ ಸುತ್ತಲ ಪ್ರದೇಶದ ನೈಸರ್ಗಿಕ ಸಮ ತೋಲನ ಕಾಪಾಡಲು ಅಂತರ್ಜಲ ವೃದ್ಧಿಸಬೇಕಾಗಿರುವುದರಿಂದ ಕೆರೆಯ ಹೂಳೆತ್ತಿಸಿ, ಅಭಿವೃದ್ಧಿಪಡಿಸಿ ಎಂದು ತಿಳಿಸಿದ್ದಾರೆ.

ಈ ಕುರಿತು ಕ್ರಮ ವಹಿಸಿ, ತಮ್ಮ ಕಚೇರಿ ಹಾಗೂ ಅರ್ಜಿ ದಾರರಿಗೆ ಮಾಹಿತಿ ನೀಡುವಂತೆಯೂ ಜಿ.ಟಿ. ದೇವೇಗೌಡರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Translate »