ಹೆಚ್ಚಿನ ಜನರ ಸೆಳೆಯಲು ಕರಪತ್ರ ವಿತರಣೆ
ಮೈಸೂರು

ಹೆಚ್ಚಿನ ಜನರ ಸೆಳೆಯಲು ಕರಪತ್ರ ವಿತರಣೆ

June 20, 2019

ಮೈಸೂರು: ಮೈಸೂರು ರೇಸ್ ಕೋರ್ಸ್‍ನಲ್ಲಿ ಶುಕ್ರ ವಾರ (ಜೂ.21) ನಡೆಯುವ ಅಂತಾ ರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ ಪಾಲ್ಗೊಳ್ಳುವಂತೆ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ನೇತೃತ್ವದಲ್ಲಿ ಕಾರ್ಯ ಕರ್ತರ ತಂಡ ಬುಧವಾರ ಮೈಸೂರಿನ ಹಲವೆಡೆ ಪಾದಯಾತ್ರೆ ನಡೆಸಿ ಯೋಗ ದಿನಾಚರಣೆಯ ಕರಪತ್ರ ವಿತರಿಸಿದರು.

ಯೋಗಕ್ಕೆ ಅತ್ಯಂತ ಮಹತ್ವ ನೀಡಿರುವ ಮೈಸೂರಿನಲ್ಲಿ ಯೋಗ ದಿನೋತ್ಸವವನ್ನು ಯಶಸ್ವಿಗೊಳಿಸಬೇಕಾಗಿರುವ ಹಿನ್ನೆಲೆ ಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಬೇಕೆನ್ನುವುದು ಇದರ ಉದ್ದೇಶ. ಹೀಗಾಗಿ ಮೈಸೂರಿನ ಎಲ್ಲಾ ಸಂಘ- ಸಂಸ್ಥೆಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳೂ, ಸಾರ್ವಜನಿಕರು ಯೋಗ ದಿನೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.

ಬಸ್ ನಿಲ್ದಾಣದ ಪ್ರಯಾಣಿಕರು, ಚಾಲ ಕರು, ನಿರ್ವಾಹಕರು, ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಕರಪತ್ರ ನೀಡಿ ಆಹ್ವಾನ ನೀಡಲಾಯಿತು.

ಅಂತಾರಾಷ್ಟ್ರೀಯ ಯೋಗ ದಿನೋ ತ್ಸವ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಬೇಕೆನ್ನುವ ಗುರಿ ಹೊಂದಿದ್ದು, ಹೀಗಾಗಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿ.ಎನ್.ಕೃಷ್ಣ, ಹೇಮಂತ್, ಗುರುರಾಜ್, ದೇವರಾಜೇಗೌಡ, ಶಾಸಕರ ಆಪ್ತ ಕಾರ್ಯ ದರ್ಶಿ ಕೃಷ್ಣ, ಗಿರೀಶ್, ಶಿವು, ಶಾಂತ, ಅನಿಲ್ ರಾಜ್, ಅದಿ, ಆದರ್ಶ್, ಮಧುಸೂದನ್, ರಾಜು, ಮಹೇಶ್ ಉಪಸ್ಥಿತರಿದ್ದರು.

Translate »