ಖಜಾನೆ ಖಾಲಿಯಾದರೂ ಆವಿಷ್ಕಾರಗಳು ನಿಲ್ಲಬಾರದು: ಮೋದಿ
ಮೈಸೂರು

ಖಜಾನೆ ಖಾಲಿಯಾದರೂ ಆವಿಷ್ಕಾರಗಳು ನಿಲ್ಲಬಾರದು: ಮೋದಿ

January 3, 2020

ಬೆಂಗಳೂರು,ಜ.2-ದೇಶದ ಸಂಪೂರ್ಣ ಬಜೆಟ್ ಖಾಲಿಯಾದರೂ ಸರಿ, ವೈಜ್ಞಾ ನಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವು ದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು.

ಬೆಂಗಳೂರಿನ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ (ಡಿಆರ್ ಡಿಒ)ದಲ್ಲಿ ಐದು ಯುವ ಪ್ರಯೋಗಾ ಲಯಗಳನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು. ಓರ್ವ ವಿಜ್ಞಾನಿ ತನ್ನ ಸಂಪೂರ್ಣ ಜೀವನವನ್ನು ಮುಡಿ ಪಾಗಿಟ್ಟು ದೇಶಕ್ಕೆ ಕೊಡುಗೆ ನೀಡುತ್ತಾನೆ. ಅಂತಹದರಲ್ಲಿ ದೇಶದ ಖಜಾನೆ ಯಾವ ಲೆಕ್ಕ. ಯುವ ವಿಜ್ಞಾನಿಗಳು ಪ್ರಯೋಗಾಲ ಯಗಳಲ್ಲಿ ನಿರಂತರವಾಗಿ ತಪ್ಪುಗಳನ್ನು ಮಾಡಲಿ. ಅದಕ್ಕಾಗಿ ಸಂಪೂರ್ಣ ಬೊಕ್ಕಸ ಖಾಲಿಯಾಗಲಿ. ಆದರೆ, ಪ್ರಯತ್ನ ಬಿಡಬಾರದು. ಹೊಸ ಆವಿಷ್ಕಾರಗಳಿಗೆ ನಾವು ಸದಾ ಸಿದ್ಧವಾಗಿರಬೇಕು ಎಂದರು.

ಸುಧಾರಿತ ತಂತ್ರಜ್ಞಾನ ಕ್ಷೇತ್ರದಲ್ಲಿ 5 ಬೆಂಗಳೂರು, ಕೋಲ್ಕತಾ, ಚೆನ್ನೈ, ಹೈದ ರಾಬಾದ್ ಹಾಗೂ ಮುಂಬೈನಲ್ಲಿ ಪ್ರಯೋಗಾಲಯಗಳು. ಯುವ ವಿಜ್ಞಾನಿಗಳ ವಿಚಾರಗಳಿಗೆ ಹೊಸ ರೆಕ್ಕೆ ನೀಡುತ್ತದೆ. ಸಕಾರಾತ್ಮಕತೆ ಮತ್ತು ಉದ್ದೇಶ ವಿಜ್ಞಾನಿ ಗಳಿಗೆ ಪ್ರೇರಣೆಯಾಗಿದೆ. ಜನರ ಜೀವನ ವನ್ನು ಸುರಕ್ಷಿತವಾಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದನ್ನು ಮರೆಯ ಬಾರದು ಎಂದು ಸಲಹೆ ನೀಡಿದರು. ಸರ್ಕಾರ ವಿಜ್ಞಾನಿಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ. ಹೊಸ ಅವಿಷ್ಕಾರಗಳಿಗೆ ಎಂದಿಗೂ ಸರ್ಕಾರದ ಸಹಯೋಗವಿರು ತ್ತದೆ. ಮುಂದಿನ ವರ್ಷಗಳಲ್ಲಿ ವಾಯು, ನೀರು ಮಾತ್ರವಲ್ಲದೆ, ಬಾಹ್ಯಾಕಾಶ ಮತ್ತು ಆವಿಷ್ಕಾರಗಳು ಜಗತ್ತಿನ ತಂತ್ರಗಾರಿಕೆ ಯನ್ನು ನಿರ್ಧರಿಸುತ್ತದೆ. ಬುದ್ಧಿಮತ್ತೆಯ ಯಂತ್ರಗಳು ಪ್ರಮುಖ ಪಾತ್ರ ವಹಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶ ಹಿಂದೆ ಉಳಿಯಲಾಗದು ಎಂದರು.

ಆವಿಷ್ಕಾರಗಳು, ಸಂಶೋಧನೆಗಳು ಅತಿ ಅಗತ್ಯ. ಜಗತ್ತಿಗೆ, ಮಾನವೀಯತೆಗೆ ಸಾಕಷ್ಟು ಕೊಡುಗೆ ನೀಡಬಹುದು. ಜಗತ್ತಿನ ಸುರಕ್ಷತೆಗೆ ನೀವು ಕೆಲಸ ಮಾಡ ಬೇಕು. ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಯನ್ನು ಬಲಗೊಳಿಸಲು ಡಿಆರ್‍ಡಿಒ ನೆರವು ಅಗತ್ಯ. ಭಾರತ ಹಿಂದಿನ ತಂತ್ರ ಜ್ಞಾನವನ್ನು ಅವಲಂಬಿಸಿ ಮುಂದುವರಿಯ ಲಾಗದು ಎಂದು ಅಭಿಪ್ರಾಯಪಟ್ಟರು. ಜಗತ್ತಿನಲ್ಲಿ ಈಗ ಸಂಪೂರ್ಣ ಸುರಕ್ಷಿತವಾ ಗಿರುವ ದೇಶಗಳು ಕೂಡ ಒಂದೊಮ್ಮೆ ಭಯೋತ್ಪಾದನೆಯ ವಿರುದ್ಧ ಸಮರ ಸಾರಬೇಕಾಗಬಹುದು. ಅಂತಹವರಿಗೆ ಸುರಕ್ಷತೆ ಯನ್ನು ಒದಗಿಸಬೇಕಿದೆ ಎಂದರು.

ಈ ದಶಕ ನವ ಭಾರತಕ್ಕೆ ಸಂಬಂಧಿಸಿ ದಂತೆ ಪ್ರಮುಖವಾಗಿದೆ. ಈ ದಶಕ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಏನಿರಲಿದೆ, ಭಾರತದ ತಾಕತ್ತು ಏನಿರಲಿದೆ ಎಂಬುದನ್ನು ನಿರ್ಧರಿಸುತ್ತದೆ. ಈ ದಶಕ 21ನೇ ಶತಮಾನದಲ್ಲಿ ಜನಿಸಿದ ಇಲ್ಲವೇ ಯುವಕರಾದವರ ಯುವ ಕನಸುಗಳು, ಯುವ ಆವಿಷ್ಕಾರಿಗಳದ್ದಾಗಿದೆ. ಹೊಸ ವರ್ಷ ನನಗೆ ಕರ್ನಾಟಕದ ಈ ಪ್ರವಾಸ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಮಾದರಿಯಲ್ಲಿದೆ ಎಂದರು. 21ನೇ ಶತಮಾನದ ಸವಾಲುಗಳನ್ನು ಎದುರಿಸಲು, ಹೊಸ ಯೋಜನೆಯೊಂದಿಗೆ ಕಾರ್ಯನಿರ್ವಹಿ ಸಲು ಡಿಆರ್ ಡಿಓಗೆ ಹೊಸ ಯೋಚನೆ ಮತ್ತು ಹೊಸ ರೂಪ ನೀಡಬೇಕು ಎಂದು ಸಲಹೆ ನೀಡಿದ್ದೆ. ಹಿರಿಯ ವಿಜ್ಞಾನಿಗಳ ಅನುಭವ ಮತ್ತು ಹೊಸಬರ ಉತ್ಸಾಹದ ಮಿಶ್ರಣ ದಿಂದ ಜಗತ್ತಿಗೆ ಹೊಸ ಭಾರತದ ದರ್ಶನ ವಾಗುತ್ತದೆ. ಹಿರಿಯ ವಿಜ್ಞಾನಿಗಳ ಶಕ್ತಿಯಿಲ್ಲದೆ ಯುವಕರು ಮೇಲೆಕ್ಕೇರಲು ಸಾಧ್ಯವಿಲ್ಲ.

Translate »