ನೀರಿನಲ್ಲಿ ಮುಳುಗಿ ರೈತರು ಸಾವು
ಹಾಸನ

ನೀರಿನಲ್ಲಿ ಮುಳುಗಿ ರೈತರು ಸಾವು

November 19, 2018

ಹಾಸನ: ದನಗಳಿಗೆ ನೀರು ಕುಡಿಸಲು ಕೆರೆಗೆ ಇಳಿದ ಇಬ್ಬರು ರೈತರು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿ ಸಮೀಪದ ದಡದ ಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಸುರೇಶ್ ಬಿನ್ ಚೆನ್ನಯ್ಯ (45) ಹಾಗೂ ಪ್ರಸನ್ನ ಕುಮಾರ್ ಬಿನ್ ಜವರಯ್ಯ (25) ಮೃತಪಟ್ಟವರು.

ಘಟನೆಯ ವಿವರ: ಸುರೇಶ್ ಹಾಗೂ ಪ್ರಸನ್ನಕುಮಾರ್ ಭಾನುವಾರ ಮಧ್ಯಾಹ್ನ ಗ್ರಾಮದ ಹೊರವಲಯದ ಕೆರೆಯಲ್ಲಿ ದನಗಳಿಗೆ ನೀರು ಕುಡಿಸಲು ಕೆರೆಗೆ ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಈಜು ತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತೆರಳಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಪ್ರಸನ್ನಕುಮಾರ್ ಶವ ದೊರೆತಿದೆ. ಆದರೆ, ಸುರೇಶ್ ಶವ ಇನ್ನೂ ಸಿಕ್ಕಿಲ್ಲ. ಸಂಜೆಯಾದ್ದರಿಂದ ಕಾರ್ಯಾ ಚರಣೆ ಸ್ಥಗಿತಗೊಳಿಸಲಾಗಿದ್ದು, ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಮುಂದು ವರೆಸಲಾಗುವುದು ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ದೊಡ್ಡಮಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »