ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿರುವ ರೈತರು
ಮೈಸೂರು

ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿರುವ ರೈತರು

December 9, 2020

ಬೆಂಗಳೂರು, ಡಿ.8-ಇಂದು ಕೇಂದ್ರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಬೆಂಬಲ ವ್ಯಕ್ತವಾ ಯಿತು. ಬೆಂಗಳೂರಿನಲ್ಲಿ ರೈತ ಮತ್ತು ಕನ್ನಡಪರ ಸಂಘಟನೆ ಗಳು ಸೇರಿದಂತೆ ಇತರೆ ಸಂಘಟನೆಗಳು ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಿದವು. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ ಇನ್ನೂ ಮೊದಲಾದವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆದವು. ಬೆಳಗ್ಗೆಯಿಂದ
ಶುರುವಾದ ಪ್ರತಿಭಟನೆ ಮಧ್ಯಾಹ್ನದ ವೇಳೆಗೆ ಮುಕ್ತಾಯವಾಯಿತು. ನಾಳೆ ವಿಧಾನ ಸೌಧಕ್ಕೆ ರೈತರು ಮುತ್ತಿಗೆ ಹಾಕಲಿದ್ದಾರೆ. ಈ ಕುರಿತು ಮಾತನಾಡಿರುವ ಕೋಡಿಹಳ್ಳಿ ಚಂದ್ರಶೇಖರ್, ಇಂದು ರೈತರ ಪ್ರತಿಭಟನೆ ಅಂತ್ಯವಾಗಿದೆ. ಆದರೆ ನಾಳೆಯೂ ಅನ್ನದಾತರ ಧರಣಿ ಇರುತ್ತದೆ. ರೈತರು ನಾಳೆ ಬೆಳಗ್ಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಇಂದು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಾಳೆ ವಿಧಾನಸೌಧ ಬಾರ್ ಕೋಲ್ ಚಳುವಳಿ ಇರುತ್ತದೆ ಎಂದು ಹೇಳಿದರು. ಇನ್ನು, ಬೆಳಗ್ಗೆಯಿಂದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯೂ ಮುಕ್ತಾಯವಾಗಿದೆ. ಬಳಿಕ ಪೆÇಲೀಸರು, ಬ್ಯಾರಿಕೇಡ್ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಬ್ಯಾರಿಕೇಡ್ ತೆರವುಗೊಳಿಸಲಾಯಿತು. ಬೆಳಗ್ಗೆಯಿಂದ ಸುಮಾರು 7 ತಾಸುಗಳಿಂದ ಬ್ಲಾಕ್ ಆಗಿದ್ದ ಈ ರಸ್ತೆ ಸಂಚಾರಕ್ಕೆ ಓಪನ್ ಆಯಿತು. ಇದೇ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಇಂದು ನಮ್ಮ ಬಂದ್ ಯಶಸ್ವಿಯಾಗಿದೆ. ಇದಕ್ಕೆ ಸರ್ಕಾರ ಮಣಿದಿಲ್ಲ ಎಂದರೆ ಇದಕ್ಕಿಂತ ಉಗ್ರ ರೂಪದ ಹೋರಾಟ ನಡೆಸಲಿದ್ದೇವೆ. ಜೈಲ್ ಬರೋ ಚಳುವಳಿ, ಅಹೋರಾತ್ರಿ ಧರಣಿ ಮುಂತಾದ ಮಾದರಿಯ ಹೋರಾಟಕ್ಕೆ ಇಳಿಯಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Translate »