ಮೈಸೂರು, ಜೂ.20(ಪಿಎಂ)- ರೈತರ ಸಮಸ್ಯೆಗಳು ಹಾಗೂ ಗ್ರೀನ್ಬಡ್ಸ್ ಆಗ್ರೋ ಫಾರಂನ ಠೇವಣಿದಾರರಿಗೆ ಪರಿಹಾರ ದೊರಕಿಸಿಕೊಡುವ ಸಂಬಂಧ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಕಂದಾಯ ಸಚಿವರು ಸಭೆ ನಡೆಸುತ್ತಿದ್ದ ಮೈಸೂರು ಜಿಪಂ ಸಭಾಂ ಗಣದ ಮುಖ್ಯ ದ್ವಾರದಲ್ಲಿ ರೈತರು ಹಾಗೂ ಠೇವಣಿದಾರರು ದಿಢೀರ್ ಪ್ರತಿಭಟನಾ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಕಂದಾಯ ಸಚಿವರು ಜಿಪಂ ಸಭಾಂಗಣದೊಳಗೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರೆ ಇತ್ತ ಸಭಾಂಗಣದ ಮುಖ್ಯ ದ್ವಾರದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರ ಹಾಗೂ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ರೈತರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ಹೊಸ ಸಾಲ ದೊರೆ ಯದ ಹಿನ್ನೆಲೆಯಲ್ಲಿ ಮುಂಗಾರು ಕೃಷಿ ಚಟು ವಟಿಕೆ ಮಾಡಲಾಗದೇ ರೈತ ಸಮುದಾಯ ಪರಿತಪಿಸುತ್ತಿದೆ. ಬೆಳೆ ಹಾನಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ದೊರೆಯಬೇಕು. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ತಿದ್ದುಪಡಿ ಮಾಡಿ ಎಲ್ಲಾ ಬೆಳೆಗಳಿಗೂ ಹಾಗೂ ಎಲ್ಲಾ ಪ್ರದೇಶಕ್ಕೂ ಅನ್ವಯವಾಗುವಂತೆ ಜಾರಿ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಗಳ ಸಂಬಂಧ ಸಚಿವರಿಗೆ ಮನವಿ ಸಲ್ಲಿಸ ಬೇಕು. ಇದಕ್ಕಾಗಿ ಬೆಳಿಗ್ಗೆಯಿಂದ ಕಾದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷದ ಎಪ್ಪತ್ತು ಸಾವಿರ ಠೇವಣಿ ದಾರರು ಗ್ರೀನ್ ಬಡ್ಸ್ ಆಗ್ರೋ ಫಾರಂ ಕಂಪನಿಗೆ ಹಣ ಹೂಡಿಕೆ ಮಾಡಿ ವಂಚ ನೆಗೆ ಒಳಗಾಗಿದ್ದಾರೆ. ಈ ಸಂಬಂಧ ನ್ಯಾಯಾ ಲಯವು ಸದರಿ ಸಂಸ್ಥೆ ಆಸ್ತಿಪಾಸ್ತಿ ಹರಾಜು ಮಾಡಿ ಠೇವಣಿದಾರರಿಗೆ ಹಣ ವಾಪಸು ಕೊಡಲು ಬೇಕಾಗಿರುವ ವರದಿಯನ್ನು ಕೇಳಿತು. ಅದರಂತೆ ಠೇವಣಿದಾರರಿಂದ ಸಂಬಂಧಿ ಸಿದ ಬಾಂಡ್ ಮತ್ತು ರಶೀದಿ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಕಳೆದ ವರ್ಷ ನವೆಂಬರ್ನಲ್ಲೇ ಉಪವಿಭಾಗಾಧಿಕಾರಿ ಶಾಖೆಗೆ ಸಲ್ಲಿಸಿದರೂ ಪ್ರಯೋಜನವಾ ಗಿಲ್ಲ. ಅಧಿಕಾರಿ ವರ್ಗ ಈ ಸಂಬಂಧ ಪರಿ ಹಾರ ಕೊಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಸಿಬ್ಬಂದಿ ಕೊರತೆ ಸೇರಿ ದಂತೆ ಅನೇಕ ನೆಪ ಹೇಳುತ್ತಿದ್ದಾರೆ. ಈ ಬಗ್ಗೆಯೂ ಸಚಿವರಲ್ಲಿ ಮನವಿ ಸಲ್ಲಿಸ ಬೇಕಿದ್ದು, ಇದಕ್ಕಾಗಿ ಸಚಿವರ ಭೇಟಿಗೆ ಕಾದು ಕಾದು ಸಾಕಾಗಿದೆ ಎಂದು ಕಿಡಿಕಾರಿದರು.
ಸುಮಾರು 2 ಗಂಟೆ ಕಾಲ ಸಚಿವರ ಭೇಟಿ ಗಾಗಿ ಕಾದು ಕುಳಿತಿದ್ದೇವೆ. ಸಚಿವರು ಸ್ಥಳಕ್ಕೆ ಬಂದು ಅಹವಾಲು ಸ್ವೀಕರಿಸಬೇಕು ಇಲ್ಲವೇ ನಮ್ಮನ್ನು ಸಭಾಂಗಣದೊಳಗೆ ಬಿಡಬೇ ಕೆಂದು ಪ್ರತಿಭಟನಾಕಾರರು ಪೊಲೀಸರೊಂ ದಿಗೆ ಆಗಾಗ್ಗೆ ಮಾತಿನ ಚಕಮಕಿ ಸಹ ನಡೆಸಿ ದರು. ಸಮಿತಿಯ ಮೈಸೂರು ತಾಲೂಕು ಘಟಕದ ಅಧ್ಯಕ್ಷೆ ಜಿ.ವಿ.ಲಕ್ಷ್ಮೀದೇವಿ, ರೈತ ಮುಖಂಡ ಅತ್ತಹಳ್ಳಿ ದೇವರಾಜ್ ಸೇರಿ ದಂತೆ ನೂರಾರು ಮಂದಿ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.