ಗಂಗೋತ್ರಿ ಪಬ್ಲಿಕ್ ಶಾಲೆ, ಕಾಲೇಜು ಮಂತ್ರಿಮಂಡಲ ಪದಗ್ರಹಣ
ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆ, ಕಾಲೇಜು ಮಂತ್ರಿಮಂಡಲ ಪದಗ್ರಹಣ

June 12, 2018

ಮೈಸೂರು: ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಮಂತ್ರಿಮಂಡಲದ ರಚನೆ ಹಾಗು ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಶಾಲಾ ಸಂಸ್ಥಾಪಕ ಟಿ.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಂತ್ರಿಮಂಡಲದಲ್ಲಿ ಮಂತ್ರಿಗಳು ಹಾಗೂ ನಾಯಕರುಗಳಿಗೆ ಗುರುತರವಾದ ಜವಾಬ್ದಾರಿ ಇರುತ್ತದೆ. ವಿದ್ಯಾರ್ಥಿಗಳು ಇದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲರಾದ ಶ್ರೀಧರ್‍ರವರು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜರೀನಾ ಬಾಬುಲ್ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಂದ ನೆರವೇರಿಸಿದರು. ಯು.ಮೌನ ಮುಖ್ಯಮಂತ್ರಿಯಾಗಿ, ಎಂ.ಎನ್. ಗುಣವತಿ ಉಪಮುಖ್ಯಮಂತ್ರಿಯಾಗಿ, ಪಿ.ಸಿಂಚನ ಮಂತ್ರಿಮಂಡಲದ ಕಾರ್ಯದರ್ಶಿಯಾಗಿ, ಎಸ್.ಗಿರೀಶ್ ಶಿಕ್ಷಣ ಸಚಿವರಾಗಿ, ಡಿ.ಎನ್.ಶ್ವೇತ ಗೃಹ ಸಚಿವರಾಗಿ, ಪಿ.ಮನ್ವಿತ್ ಸಾಂಸ್ಕೃತಿಕ ಸಚಿವರಾಗಿ, ಕೆ.ಆರ್.ಮೋನಿಕಾ ಹಣಕಾಸು ಸಚಿವರಾಗಿ, ಆರ್.ಎನ್.ಶರತ್ ಯುವಜನ ಸಚಿವರಾಗಿ, ಎಂ.ಮನೋಜ್ ಕುಮಾರ್ ಆರೋಗ್ಯ ಸಚಿವರಾಗಿ, ಸಿಮ್ರಾನ್ ಸಿಂಗ್ ಶಾಲಾ ಮುಖ್ಯಸ್ಥರಾಗಿ, ಪಿ.ತೇಜಸ್ ಹೆಡ್ ಬಾಯ್ ಆಗಿ, ಪಿ.ಎಂ.ಮೋನಿಕಾ ಹೆಡ್ ಗರ್ಲ್ ಆಗಿ, ಜೆ.ದೀಕ್ಷಿತ್ ಧ್ವಜಧಾರಕನಾಗಿ ನೇಮಕಗೊಂಡರು. ಉಪಹೆಡ್ ಬಾಯ್ ಆಗಿ ಎನ್.ಕಿರಣ್, ಉಪ ಹೆಡ್ ಗರ್ಲ್ ಆಗಿ ಎಸ್.ಅಮೃತ, ಕ್ರೀಡಾ ನಾಯಕನಾಗಿ ಕೆ.ತರುಣ್, ಶಿಸ್ತು ಪಾಲನಾ ನಾಯಕನಾಗಿ ಎಂ.ಕೆ.ಸಾಯಿದರ್ಶನ್, ಆಹಾರದ ನಿರೀಕ್ಷಣಾಧಿಕಾರಿಯಾಗಿ ಎಸ್.ಭೂಮಿಕಾ, ಆರೋಗ್ಯ ಹಾಗೂ ನೈರ್ಮಲ್ಯ ನಾಯಕನಾಗಿ ನಿತಿನ್ ಭಾಗವತ್, ನೇಮಕಗೊಂಡರು. ಇನ್ನಿತರ ಗುಂಪುಗಳಲ್ಲಿ ಭಗತ್ ಸಿಂಗ್ ಗುಂಪಿನ ಅಧ್ಯಕ್ಷರಾಗಿ ಎಂ.ಎನ್.ಸುಹಾಸ್, ಸ್ವಾಮಿ ವಿವೇಕಾನಂದ ಗುಂಪಿನ ಅಧ್ಯಕ್ಷರಾಗಿ ಎಸ್.ಅರ್ಚನ, ಸುಭಾಷ್ ಚಂದ್ರ ಗುಂಪಿನ ಅಧ್ಯಕ್ಷರಾಗಿ ಧನುಶ್ ವಿಶ್ವಕರ್ಮ ಹಾಗೂ ಬಾಲಗಂಗಾಧರ ತಿಲಕ್ ಗುಂಪಿನ ಅಧ್ಯಕ್ಷರಾಗಿ ಯು.ರುಚಿತ ನೇಮಕಗೊಂಡರು. ಇತರ ಪೈಲೆಟ್‍ಗಳಾಗಿ ಮೊಹಮ್ಮದ್ ಆಶಿಕ್, ಪಂಚಮಿ, ಕೆ.ಪಿ.ವರ್ಷಿತ, ವಿಘ್ನೇಶ್, ಭಾಗ್ಯಲಕ್ಷ್ಮಿ, ಶೃಂಗಾರ್ ನೇಮಕಗೊಂಡರು.

ಮೈಸೂರಿನ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಮಂತ್ರಿಮಂಡಲದ ರಚನೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಟಿ.ರಂಗಪ್ಪ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜರೀನಾ ಬಾಬುಲ್ ಮತ್ತಿತರರು ಹಾಜರಿದ್ದರು.

Translate »