ನಿವೃತ್ತ ಪೊಲೀಸರ ‘ಆರೋಗ್ಯ ಭಾಗ್ಯ’ಕ್ಕೆ ಅನುಮೋದನೆ
ಕೊಡಗು

ನಿವೃತ್ತ ಪೊಲೀಸರ ‘ಆರೋಗ್ಯ ಭಾಗ್ಯ’ಕ್ಕೆ ಅನುಮೋದನೆ

June 5, 2018

ಮಡಿಕೇರಿ: ನಿವೃತ್ತ ಪೊಲೀಸ್ ಸಿಬ್ಬಂದಿಗಳ ಬಹುದಿನಗಳ ಬೇಡಿಕೆಯಾಗಿ ರುವ ಆರೋಗ್ಯ ಭಾಗ್ಯ ಯೋಜನೆಗೆ ಸರಕಾರ ಅನುಮೋದನೆ ನೀಡಿದ್ದು, ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿರುವವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹು ದಾಗಿದೆ ಎಂದು ಕೊಡಗು ಜಿಲ್ಲಾ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎ.ಅಪ್ಪಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಯೋಜನೆಗೆ ಸರಕಾರದಿಂದ 50ಕೋಟಿ ರೂ.ಗಳನ್ನು ಮೀಸಲಿಡುವಂತೆ ಬೇಡಿಕೆ ಸಲ್ಲಿಸಲಾಗಿತ್ತಾ ದರೂ, ಸರಕಾರ 20 ಕೋಟಿ ರೂ. ನೀಡುವ ಭರವಸೆ ನೀಡಿತ್ತು. ಆದರೆ ಇದೀಗ 10 ಕೋಟಿ ರೂ.ಗಳನ್ನು ಒದಗಿಸಿರುವ ಸರಕಾರ, ರಾಜ್ಯದ ವಿವಿಧ ಘಟಕಗಳಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಯಲ್ಲಿ ರುವ 9 ಕೋಟಿ ರೂ.ಗಳನ್ನು ಬಳಸಿಕೊಳ್ಳು ವಂತೆ ಮತ್ತು ಯೋಜನೆಯ ಫಲಾನುಭವಿ ಗಳಿಂದ ಮಾಸಿಕ ವಂತಿಗೆ ಸಂಗ್ರಹದ ಮೂಲಕ ಅನುದಾನ ಕ್ರೂಢೀಕರಿಸುವಂತೆ ತೀರ್ಮಾನಿಸಿದೆ ಎಂದು ಹೇಳಿದರು.

ನಿವೃತ್ತ ಡಿವೈಎಸ್‍ಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳು ಮಾಸಿಕ ರೂ.250, ನಿವೃತ್ತ ಪಿಐ ಮತ್ತು ಪಿಎಸ್‍ಐಗಳು ಮಾಸಿಕ 200, ನಿವೃತ್ತ ಎಎಸ್‍ಐ ಮತ್ತು ಹೆಚ್‍ಸಿಗಳು ಮಾಸಿಕ 150 ಮತ್ತು ನಿವೃತ್ತ ಪಿಸಿಗಳು ಮಾಸಿಕ 100ರೂ. ವಂತಿಗೆ ನೀಡಬೇಕಿದ್ದು, ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಮೂರು ತಿಂಗಳ ವಂತಿಗೆಯನ್ನು ಏಕಕಾಲದಲ್ಲಿ ಪಾವತಿಸಿ ಸದಸ್ಯರಾಗುವವರಿಗೆ ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ಯೋಜನೆ ಅನು ಷ್ಠಾನಗೊಳ್ಳಲಿದೆ ಎಂದು ಹೇಳಿದರು.

ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿರುವವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುವ ನಿವೃತ್ತ ಪೊಲೀಸರ ಪತಿ ಅಥವಾ ಪತ್ನಿಗೆ ಮಾತ್ರ ಯೋಜನೆಯ ಸವಲತ್ತುಗಳು ದೊರಕಲಿವೆ. ಯೋಜನೆಯಡಿ ಸದಸ್ಯರಾದವರಿಗೆ ವಾರ್ಷಿಕ ಗರಿಷ್ಠ ಒಂದು ಲಕ್ಷ ಮತ್ತು ವಿಶೇಷ ಹಾಗೂ ಸಂಕೀರ್ಣ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗು ವವರಿಗೆ ವಾರ್ಷಿಕ ಗರಿಷ್ಠ ಮಿತಿ 2 ಲಕ್ಷ ರೂ.ಗಳವರೆಗೆ ನಿಗದಿಪಡಿಸಲಾಗಿದ್ದು, ಆಯಾ ಜಿಲ್ಲೆಗಳಲ್ಲಿ ತಾಲೂಕು ಮಟ್ಟದಲ್ಲಿ ಆಸ್ಪತ್ರೆಗಳನ್ನು ಗುರುತಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಧಿಕಾರ ನೀಡಲಾಗಿದೆ ಎಂದರು. ಯೋಜನೆಯ ಸದಸ್ಯರಾಗುವವರು ಮೂರು ತಿಂಗಳ ವಂತಿಗೆಯನ್ನು ಬೆಂಗ ಳೂರಿನ ಲ್ಯಾವೆಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಿದ್ದು, ಸದಸ್ಯರಿಗೆ ಬೇಕಾದ ಅರ್ಜಿ ಫಾರಂ ಗಳನ್ನು ಹಾಗೂ ಇತರ ಮಾಹಿತಿಯನ್ನು ಸಂಘದ ಜಿಲ್ಲಾ ಕಚೇರಿಯಿಂದ ಪಡೆಯ ಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9448503890 ಸಂಪ ರ್ಕಿಸಬಹುದೆಂದು ಅಪ್ಪಯ್ಯ ಹೇಳಿದರು.

ರಾಜ್ಯದಲ್ಲಿ ಸುಮಾರು 50 ಸಾವಿರ ಮಂದಿ ನಿವೃತ್ತ ಪೊಲೀಸರು ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದು, ಕೊಡಗು ಜಿಲ್ಲೆ ಯಲ್ಲಿ ಸುಮಾರು 786 ಮಂದಿ ಸದಸ್ಯರಿ ದ್ದಾರೆ. ಇವರೆಲ್ಲರೂ ಈ ಯೋಜನೆಯ ಸದಸ್ಯತ್ವ ಪಡೆಯಲು ಅರ್ಹರಾಗಿದ್ದು, ಯೋಜನೆ ಪ್ರಾರಂಭವಾದ ನಂತರ ನಿವೃತ್ತರಾದವರು ಕೂಡಾ ಮೂರು ತಿಂಗಳ ವಂತಿಗೆಯನ್ನು ಪಾವತಿಸಿ ಸದಸ್ಯರಾಗ ಬಹುದಾಗಿದ್ದು, ಯಾರಾದರೂ ಮೂರು ತಿಂಗಳ ವಂತಿಗೆಯನ್ನು ಪಾವತಿಸಲು ತಪ್ಪಿದಲ್ಲಿ ಅಂತಹವರ ಸದಸ್ಯತ್ವ ರದ್ದಾಗುವುದು ಮಾತ್ರವಲ್ಲದೆ, ಒಮ್ಮೆ ರದ್ದಾದ ಸದಸ್ಯತ್ವನ್ನು ಮತ್ತೊಮ್ಮೆ ಪಡೆಯಲು ಅವಕಾಶ ವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗ ನಿಗದಿಪಡಿಸಿರುವ ಮಾಸಿಕ ವಂತಿಗೆ ಪಾವತಿಸಲು ಕೆಲವರಿಗೆ ಅನಾನು ಕೂಲವಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಟ್ರಸ್ಟ್‍ನೊಂದಿಗೆ ಪತ್ರ ವ್ಯವಹಾರ ನಡೆಸುವುದರೊಂದಿಗೆ ಶುಲ್ಕವನ್ನು ಕಡಿಮೆ ಮಾಡುವಂತೆ ಕೋರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಪ್ಪಯ್ಯ ಅವರು, ವಂತಿಗೆಯನ್ನು ಬೆಂಗಳೂರಿನ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಕೂಡಾ ಕೆಲವರಿಗೆ ಸಮಸ್ಯೆಯಾಗಲಿದೆ. ಅದಕ್ಕಾಗಿ ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಗಳ ಮೂಲಕ ಹಣ ಪಾವತಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಪಿ.ಪರಶಿವ, ಕಾರ್ಯ ದರ್ಶಿ ಅಚ್ಚುತನ್ ನಾಯರ್, ಖಜಾಂಚಿ ಬಿ.ಎಂ. ಭೀಮಯ್ಯ, ನಿರ್ದೇಶಕ ಎಂ.ಕೆ. ಮಾದಯ್ಯ ಹಾಜರಿದ್ದರು.

Translate »