ಪ್ರಕೃತಿ ವಿಕೋಪದಿಂದ ನಲುಗಿದ ಕುಟುಂಬಗಳಿಗೆ ಹಾಕಿ ಪಂದ್ಯಾಟದ ಮೂಲಕ ರಂಜನೆ
ಕೊಡಗು

ಪ್ರಕೃತಿ ವಿಕೋಪದಿಂದ ನಲುಗಿದ ಕುಟುಂಬಗಳಿಗೆ ಹಾಕಿ ಪಂದ್ಯಾಟದ ಮೂಲಕ ರಂಜನೆ

April 24, 2019

ನಾಪೆÉÇೀಕ್ಲು: ಪ್ರಕೃತಿ ವಿಕೋ ಪದ ಹಿನ್ನೆಲೆಯಲ್ಲಿ 22 ವರ್ಷದಿಂದ ನಡೆಯುತ್ತಾ ಬಂದಿರುವ ಕೊಡವ ಕುಟುಂಬಗಳ ಕೌಟುಂಬಿಕ ಹಾಕಿ ಪಂದ್ಯಾ ಟವನ್ನು ಕೊಡವ ಹಾಕಿ ಅಕಾಡೆಮಿ ಕೈಬಿಟ್ಟಿ ರುವುದು ಉತ್ತಮ ಬೆಳವಣಿಗೆ ಅಲ್ಲ. ಇದರಿಂದಾಗಿ ಜನಾಂಗದ ಪಂದ್ಯಾಟ ತನ್ನ ದಾಖಲೆಯನ್ನು ಕಳೆದುಕೊಂಡಿದೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಡ ರಮೇಶ್ ಕುಟ್ಟಪ್ಪ ಹೇಳಿದರು.

ಅವರು ಪ್ರಕೃತಿ ವಿಕೋಪದಿಂದ ತತ್ತರಿ ಸಿದ ಪ್ರದೇಶದ 14 ಕುಟುಂಬಗಳಿಗೆ ಕಕ್ಕಬ್ಬೆಯ ಹೈಲ್ಯಾಂಡ್ ಕ್ಲಬ್‍ನವರು ನಾಪೆÉÇೀಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಆಹ್ವಾನಿತ ಹಾಕಿ ಪಂದ್ಯಾ ಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಪ್ರಕೃತಿ ವಿಕೋಪದಿಂದ ತಮ್ಮ ಆಸ್ತಿಯನ್ನು ಕಳೆದುಕೊಂಡವರಿಗೆ ಕೊಡಗಿನ ದಾನಿ ಗಳು ನೆರವು ನೀಡಿ ಅವರ ಬೆಂಬಲಕ್ಕೆ ನಿಂತಿದ್ದರು. ಇಂತಹ ಸಂದರ್ಭದಲ್ಲಿ ಕೊಡ ಗಿನಲ್ಲಿ 22 ವರ್ಷಗಳಿಂದ ವಿಜೃಂಭಣೆ ಯಿಂದ ನಡೆಯುತ್ತಾ ಬಂದಿರುವ ಹಾಕಿ ಹಬ್ಬವನ್ನು ನಡೆಸದೇ, ಕೊಡವ ಕುಟುಂ ಬಗಳು ಕೊಡಗು ಹಾಕಿ ಸಂಸ್ಥೆಯ ಹಾಕಿ ಹಬ್ಬದಲ್ಲಿ ಪಾಲ್ಗೊಂಡು ಕೊಡವ ಹಾಕಿ ಅಕಾಡೆಮಿ ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳಲು ಕಾರಣವಾಗಿದೆ ಎಂದರು. ಕಕ್ಕಬ್ಬೆ ಹೈಲ್ಯಾಂಡ್ ಕ್ಲಬ್‍ನವರು ಇಂತಹ ಸಂದರ್ಭ ನೊಂದ ಕುಟುಂಬಗಳಿಗೆ ಹಾಕಿ ಪಂದ್ಯಾ ಟವನ್ನು ಏರ್ಪಡಿಸಿರುವುದು ಸಂತೋ ಷಕರ ಎಂದರು.

ಸ್ಟಿಕ್ ಮೂಲಕ ಚೆಂಡನ್ನು ತಳ್ಳಿ ಪಂದ್ಯಾ ಟವನ್ನು ಉದ್ಘಾಟಿಸಿದ ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ನಾಣಯ್ಯ ಮಾತನಾಡಿ, ಕೊಡಗು ಹಾಕಿ ಹಬ್ಬದ ತವರೂರು. ಇಲ್ಲಿನ ಕ್ರೀಡಾಪಟು ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿ ಕೊಡಗಿಗೆ ಹೆಸರು ತಂದಿದ್ದಾರೆ. ನೊಂದ ಕುಟುಂಬಗಳಿಗೆ ಕ್ಲಬ್‍ನವರು ಇಂತಹ ಪಂದ್ಯಾಟವನ್ನು ಆಯೋಜಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಭಾಗಮಂಡಲ ಭಗಂಡೇಶ್ವರ ದೇವಳ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ನವರು ಮಾತನಾಡಿ, ಕೊಡಗಿನಲ್ಲಿ ಸುಸ ಜ್ಜಿತ ಮೈದಾನವನ್ನು ನಾವು ಅಭಿವೃದ್ಧಿಗೊಳಿ ಸಿದ್ದೇವೆ. ಇದನ್ನು ಉಳಿಸಿಕೊಳ್ಳುವ ಜವಾ ಬ್ದಾರಿ ಎಲ್ಲರದು. ಇಂತಹ ಕ್ರೀಡಾಂಗಣ ದಲ್ಲಿ ಕಕ್ಕಬ್ಬೆ ಹೈಲ್ಯಾಂಡ್ ಕ್ಲಬ್‍ನವರು ಹಾಕಿ ಪಂದ್ಯಾಟವನ್ನು ಅಯೋಜಿಸಿ ಸಂತ್ರಸ್ತ ಕುಟುಂಬದವರಿಗೆ ಸಮಾಧಾನ ತಂದಿದ್ದಾರೆ ಎಂದರು.

ನಡಿಕೇರಿಯಂಡ ತೇಜ್ ಪೂವಯ್ಯ ಮಾತನಾಡಿ, ಕೊಡಗಿನ ಅಭಿವೃದ್ಧಿ, ಕಾಫಿ, ಕರಿ ಮೆಣಸು ಬೆಳೆಗಳ ವಿಷಯ ಪ್ರಸ್ತಾಪಿಸಿ ಮಾತನಾಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈಲ್ಯಾಂಡ್ ಕ್ಲಬ್ ಅಧ್ಯಕ್ಷ ಅಪ್ಪಾರಂಡ ಸಾಗರ್ ಗಣಪತಿ ವಹಿಸಿದ್ದು. ವೇದಿಕೆಯಲ್ಲಿ ಪ್ರಮುಖರಾದ ಕುಲ್ಲೇಟಿರ ಶಂಭು ಮಂದಪ್ಪ, ಕೆಟೋಳಿರ ಹರೀಶ್ ಪೂವಯ್ಯ, ಕಾಡ್ಯಮಡ ಮನು ಸೋಮಯ್ಯ, ಕುಲ್ಲೇಟಿರ ಅರುಣ ಬೇಬಿ, ಡಾ.ಪೂವಯ್ಯ, ಅದೇಂಗಡ ತೇಜ, ರಘು ಸೋಮಯ್ಯ, ನಟೋಳಂಡ ಶಂಭು, ಕಲಿಯಂಡ ನವೀನ್, ಚಕ್ಕೇರ ಸಚೀನ್, ಚೋಟ್ಟೇರ ಅಯ್ಯಪ್ಪ, ಅಪ್ಪಾರಂಡ ಅಪ್ಪಯ್ಯ, ಕೆಟೋಳಿರ ಕುಟ್ಟಪ್ಪ, ಚಕ್ಕೇರ ಸಚಿನ್ ಉಪಸ್ಥಿತರಿದ್ದರು.

ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡೀರ ಕಾರ್ಯಪ್ಪ, ಮೂಡೇರ ಕಾಳಯ್ಯ, ಅರೆಯಡ ಬಬಿತಾ ದೇವಯ್ಯ, ಇದ್ದರು.

ಉದ್ಘಾಟನಾ ಪಂದ್ಯಾಟವು ಪಾಸೂರ ಮತ್ತು ಮುದ್ದಂಡ ತಂಡಗಳ ನಡುವೆ ನಡೆದು ಪಾಸೂರ ತಂಡವು ಮುತ್ತ ಮ್ಮನವರ ಎರಡು ಗೋಲು ಸೇರಿ 3-0 ರಿಂದ ಜಯ ಸಾಧಿಸಿತು. ನಂತರದ ಪಂದ್ಯಾಟದಲ್ಲಿ ಮುಕ್ಕಾಟೀರ ತಂಡವು ಚೊಟ್ಟೇರ ತಂಡವನ್ನು 4-0 ಗೋಲು ಗಳಿಂದ ಸೋಲಿಸಿತು.

ನಂತರ ವಾರಿಯರ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡೀರ ಮತ್ತು ಅಂಜಪರುವಂಡ ತಂಡಗಳ ನಡುವೆ ನಡೆದು ಉಭಯ ತಂಡಗಳು 2-2 ಸಮ ಬಲ ಸಾಧಿಸಿದವು. ನಂತರ ಪಂದ್ಯದಲ್ಲಿ ಕಲಿಯಂಡ ತಂಡವು ಕನ್ನಂಡ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು.

ಇಂದಿನ ಪಂದ್ಯಾಟ
ಬೆ.9.20ಕ್ಕೆ ಮಂಡೀರ-ಚೆನ್ನಪಂಡ
ಬೆ.10.30ಕ್ಕೆ ಕಳ್ಳಿಚಂಡ-ತಂಬುಕ್ಕುತ್ತೀರ

ಅಂಡರ್ 14
ಮ.1ಕ್ಕೆ ಮಂಡೇಪಂಡ-ಕಲಿಯಂಡ
ಮ.1.45ಕ್ಕೆ ಅರೆಯಂಡ-ಚೆಪ್ಪುಡೀರ

Translate »