ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ
ಮೈಸೂರು

ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ

July 31, 2019

ಮೈಸೂರು,ಜು.30(ಆರ್‍ಕೆಬಿ)- `ವೀರಶೈವ-ಲಿಂಗಾಯತರು ಇಬ್ಬರೂ ಹಿಂದೂಗಳೇ. ಈ ವಿಚಾರಕ್ಕೆ ಸಂಬಂಧಿ ಸಿದಂತೆ ಮುಕ್ತ ಚರ್ಚೆಗೆ ನಾನು ಸಿದ್ಧ. ನೀವು ಸಿದ್ಧರಿದ್ದರೆ ಮೈಸೂರಿಗೆ ಬನ್ನಿ. ಇಲ್ಲಿಯೇ ಮುಕ್ತ ಚರ್ಚೆ ಮಾಡೋಣ…’
ಸರಸ್ವತಿಪುರಂ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮುಖಂಡರಾದ ಜಾಮದಾರ್, ಸಾಣೇ ಹಳ್ಳಿ ಸ್ವಾಮೀಜಿ, ಎಂ.ಬಿ.ಪಾಟೀಲರಿಗೆ ಬಹಿರಂಗ ಆಹ್ವಾನ ನೀಡಿದರು.

ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಹೇಳಿಕೆಯನ್ನು ಸಹೋದರ ಭಾವನೆಯಿಂದ ಹೇಳಿದ್ದೇನೆಯೇ ಹೊರತು ಬೇರೆ ಉದ್ದೇಶವಿಲ್ಲ. ಈ ಬಗ್ಗೆ ಮುಕ್ತ ವೇದಿಕೆಯಲ್ಲಿ ಚರ್ಚಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ನನ್ನ ಆಹ್ವಾನಕ್ಕೆ ಪ್ರತಿಯಾಗಿ ಜಾಮ ದಾರರು ನನ್ನ ಜೊತೆಗೆ ಸಂವಾದಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಅದು ಅವರಿಷ್ಟ, ನಾನೇನೂ ಆದೇಶ ನೀಡಿಲ್ಲ. ಅದನ್ನು ನೀಡಲು ನನಗೆ ಅಧಿ ಕಾರವಿಲ್ಲವೆಂದು ಗೊತ್ತಿದೆ. ನಾನು ಸಹೋದರ ಭಾವದಿಂದ ಆಹ್ವಾನ ನೀಡಿದೆ. ಅದೇ ಭಾವನೆಯಿಂದ ನನ್ನ ಅಭಿಪ್ರಾಯ ಸಲಹೆಯನ್ನೂ ನೀಡಿದೆ. ಅವರೇ ಹಿಂದೊಮ್ಮೆ, ವಿಧಾನಸಭೆಯ ಹಾಲ್‍ನಲ್ಲಿ ಚರ್ಚೆಗೆ ಸಿದ್ಧನಿದ್ದೇನೆಂದು ಘೋಷಿಸಿ ದ್ದರು. ಅದರಂತೆ ನಾನು ಸಂವಾದಕ್ಕೆ ಆಹ್ವಾನ ನೀಡಿದೆ. ಅವರಿಗೆ ನನ್ನ ಜೊತೆ ಸಂವಾದ ಮಾಡಲು ಧೈರ್ಯವಿಲ್ಲದಿದ್ದರೆ ಅವರು ಪ್ರಕಟಗೊಳಿಸಿದ ಪುಸ್ತಕವನ್ನು ಕಳುಹಿಸಲಿ. ನಾನು ಅದಕ್ಕೆ ಸರಿಯಾದ ಉತ್ತರವನ್ನು ನೀಡುತ್ತೇನೆ ಎಂದು ಸ್ವಾಮೀಜಿ ಹೇಳಿದರು.

ನಾನು ಲಿಂಗಾಯತರ ಸ್ನೇಹಿತನಾಗಿ ದ್ದೇನೆಯೇ ಹೊರತು ವಿರೋಧಿಯಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. 1955ರಿಂದಲೂ ನಾನು ಎಲ್ಲಾ ಲಿಂಗಾ ಯಿತ, ವೀರಶೈವ ಮಠಾಧೀಶರ ಸ್ನೇಹ ಸಂಪರ್ಕ ಹೊಂದಿದ್ದೇನೆ. ಆದರೆ, ಲಿಂಗಾ ಯತ ಧರ್ಮದ ಬಗ್ಗೆ ಮಾತನಾಡಲು ನಿಮಗೇನು ಅಧಿಕಾರವಿದೆ ಎಂದು ಜಾಮದಾರರನ್ನು ಒಳಗೊಂಡ ಅನೇಕರು ನನ್ನನ್ನು ಪ್ರಶ್ನಿಸಿದ್ದಾರೆ. ಸಹೋದರನು ತಾನು ಉಳಿದ ಸಹೋದರರ ಜೊತೆಗೆ ಇರುವುದಿಲ್ಲವೇ? ಬೇರೆ ಮನೆ ಮಾಡುತ್ತೇ ನೆಂದು ಆತ ಹೇಳಿದರೆ, ಉಳಿದವರು ಬೇರೆ ಮನೆಗೆ ಹೋಗುವುದು ಬೇಡ, ಜೊತೆಗೇ ಇರು ಎಂದು ಕೇಳಿಕೊಂಡರೆ ಅದು ತಪ್ಪಾಗು ತ್ತದೆಯೇ? ಎಂದು ಶ್ರೀಗಳು ಪ್ರಶ್ನಿಸಿದರು.

ಎಷ್ಟೇ ಅಭಿಪ್ರಾಯ ಭೇದÀವಿದ್ದರೂ ಶಿವನನ್ನು ಆರಾಧಿಸುವ, ಶಿವ ಪಂಚಾಕ್ಷರಿ ಜಪ ಮಾಡುವ ಲಿಂಗಾಯತರು ಹಿಂದೂ ಗಳಾಗದಿರಲು ಸಾಧ್ಯವೇ? ಜಾತಿಭೇದವನ್ನು ಒಪ್ಪದಿದ್ದರೂ ಶಿವನ ಆರಾಧನೆಯನ್ನು ಮಾಡುತ್ತಿದ್ದ ಅವರೂ ಹಿಂದೂಗಳೇ. ಜಾತಿ ಭೇದÀವನ್ನು ಒಪ್ಪದ ಹಿಂದೂಗಳು ಬೇಕಾ ದಷ್ಟಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.

ನನ್ನ ವಿಚಾರಗಳಿಗೆ ಯಾವ ಲಿಂಗಾ ಯತ ಪ್ರಮುಖರಾಗಲೀ, ಮಠಾಧಿಪತಿ ಗಳಾಗಲೀ ಇಷ್ಟರವರೆಗೆ ಉತ್ತರ ಕೊಟ್ಟಿಲ್ಲ. ನಮ್ಮ ಅತ್ಯಂತ ಪ್ರೀತಿಪಾತ್ರರಾದ ಸಾಣೆ ಹಳ್ಳಿಯ ಸ್ವಾಮೀಜಿಯವರೂ ನನ್ನ ವಿಚಾ ರಕ್ಕೆ ವಿರುದ್ಧ ಅಭಿಪ್ರಾಯವನ್ನು ಸೌಜನ್ಯ ಪೂರ್ವಕವಾಗಿ ವ್ಯಕ್ತಪಡಿಸಿದ್ದಾರೆ. ಅವರ ಜೊತೆಗೂ ಸ್ನೇಹ ಸಂವಾದ ಮಾಡÀಲು ಸಿದ್ಧನಿದ್ದೇನೆ ಎಂದು ಹೇಳಿದರು.

ನಾನೀಗ ಮೈಸೂರಿನಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದು, ಸೆ.13ರವರೆಗೂ ಮೈಸೂರಿನಿಂದ ಹೊರ ಹೋಗುವಂತಿಲ್ಲ. ಹೀಗಾಗಿ ಮೈಸೂರಿನ ಒಂದು ಸಾರ್ವಜ ನಿಕ ಕಟ್ಟಡದಲ್ಲಿ, ಶಾಂತ ವಾತಾವರಣ ದಲ್ಲಿ ಕೆಲವೇ ಪ್ರಜ್ಞಾವಂತರು ಸೇರಿ ಸಂವಾದ ನಡೆಸಬಹುದು. ಜಾಮದಾ ರರು, ಸಾಣೇಹಳ್ಳಿ ಸ್ವಾಮೀಜಿ, ಎಂ.ಬಿ. ಪಾಟೀಲ್ ಇನ್ನಿತರರು ಪ್ರತ್ಯೇಕ ಲಿಂಗಾ ಯತ ಮತದ ಸಮರ್ಥಕರು ತಮ್ಮ ಅನು ಕೂಲಕರ ಸಮಯದಲ್ಲಿ ಮೈಸೂರಿಗೆ ಆಗ ಮಿಸಿ ನಮ್ಮೊಂದಿಗೆ ಸ್ನೇಹ ಸಂವಾದ ನಡೆಸಬಹುದು ಅಥವಾ ಅವರು ಸೂಚಿ ಸಿದ ಸ್ಥಳಕ್ಕೆ ನಾನೇ ತೆರಳಿ ಸಂವಾದಕ್ಕೆ ಸಿದ್ಧನಿದ್ದೇನೆ ಎಂದು ತಿಳಿಸಿದರು.

ಜೈನ, ಬೌದ್ಧರೂ ಹಿಂದೂಗಳೇ ಆಗಿದ್ದಾರೆ: ಭಾರತದಲ್ಲಿರುವ ಬೌದ್ಧ, ಜೈನ, ಸಿಖ್ ಧರ್ಮಗಳು ಸಹ ಹಿಂದೂ ಧರ್ಮಕ್ಕೆ ಸೇರಿದವೇ ಆಗಿವೆ. ಬ್ರಿಟಿಷರ ಕಾರಣ ದಿಂದಾಗಿ ಪ್ರತ್ಯೇಕಗೊಂಡಿವೆ. ಇಂದಿನ ಜಾತಿ ಹಾಗೂ ಧರ್ಮ ಭೇದಕ್ಕೆ ರಾಜಕಾ ರಣಿಗಳೇ ಕಾರಣ. ನಾನು ಹಿಂದೂ ಧರ್ಮ ವನ್ನು ಬಲಿಷ್ಠ ಗೊಳಿಸಲು ಪ್ರಯತ್ನ ಮುಂದುವರೆಸುತ್ತೇನೆ ಎಂದು ಘೋಷಿಸಿದರು.

ಬೆಂಗಳೂರಲ್ಲಿ ಉಡುಪಿ ಶ್ರೀಕೃಷ್ಣ ಮಠದಿಂದ ಬೃಹತ್ ಆಸ್ಪತ್ರೆ ನಿರ್ಮಾಣ
ಮೈಸೂರು,ಜು.30(ಆರ್‍ಕೆಬಿ)-ಬೆಂಗ ಳೂರಿನಲ್ಲಿ ಉಡುಪಿಯ ಶ್ರೀಮಠದ ವತಿಯಿಂದ 25 ಕೋಟಿ ರೂ. ಅಂದಾಜು ವೆಚ್ಚದ ಬೃಹತ್ ಆಸ್ಪತ್ರೆ ನಿರ್ಮಿಸ ಲಾಗುತ್ತಿದ್ದು, ಆದಷ್ಟು ಶೀಘ್ರ ಅದನ್ನು ಉದ್ಘಾಟಿಸಲಾಗುವುದು. ಈಗಾಗಲೇ 15 ಕೋಟಿ ರೂ. ವೆಚ್ಚವಾಗಿದೆ. ಇನ್ನೂ 10 ಕೋಟಿ ಬೇಕಿದೆ. ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಳ್ಳಲಿದೆ ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.

ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಮೈಸೂರಿನ ನಮ್ಮ ಮಠದ ಆಶ್ರಯದಲ್ಲಿ ಬಡ ಮಕ್ಕಳಿಗಾಗಿ ಹಾಸ್ಟೆಲ್, ವೃದ್ಧಾಶ್ರಮ, ವಿದ್ಯಾಸಂಸ್ಥೆ ನಿರ್ಮಿಸ ಲಾಗುತ್ತಿದ್ದು, ಅದನ್ನೂ ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.

ಪ್ರಾಥಮಿಕ ಹಂತದಿಂದ ಕಾಲೇಜಿನ ವರೆಗೆ ಆಸಕ್ತ ಬಡ ವಿದ್ಯಾರ್ಥಿಗಳಿಗೆ ಆನಂತ ತೀರ್ಥ ವಿದ್ಯಾಲಯ ತೆರೆದು ಧಾರ್ಮಿಕ ಶಿಕ್ಷಣದ ಜೊತೆಗೆ ಕಾಲೇಜು ಶಿಕ್ಷಣವನ್ನು ನೀಡುತ್ತೇವೆ. ಹಿಂದೂ ಧರ್ಮ, ಸಂಸ್ಕøತಿ, ತಂತ್ರಜ್ಞಾನ ಇತ್ಯಾದಿಗಳನ್ನು ಹೇಳಿಕೊಡಲಾಗುವುದು. ಇಂಗ್ಲಿಷ್ ಮಾಧ್ಯಮ ಕಾಲೇಜು ಶಿಕ್ಷಣ ನೀಡಲಾಗುವುದು. ಇಲ್ಲಿಗೆ ಕರ್ನಾಟಕ, ತಮಿಳುನಾಡಿನ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವುದು ಎಂದು ಹೇಳಿದರು.

ತಮ್ಮ ಚಾತುರ್ಮಾಸ್ಯ ವ್ರತದ ಹಿನ್ನೆಲೆಯಲ್ಲಿ ಸೆ.14ರವರೆಗೆ ಶ್ರೀಕೃಷ್ಣಧಾಮದಲ್ಲಿ ಪ್ರತಿನಿತ್ಯ ವಿಶೇಷ ಪ್ರವಚನ, ಸಾಂಸ್ಕøತಿಕ ಕಾರ್ಯಕ್ರಮ, ಸಂಗೀತ, ಭಜನೆ, ಉಚಿತ ವೈದ್ಯಕೀಯ ಶಿಬಿರ ಇತ್ಯಾದಿಗಳನ್ನು ಆಯೋಜಿಸಿ ದ್ದಾರೆ. ಪ್ರತಿದಿನವೂ ಉಚಿತ ವೈದ್ಯ ಕೀಯ, ದಂತ ಚಿಕಿತ್ಸಾ ಶಿಬಿರಗಳು ನಡೆಯಲಿವೆ ಎಂದು ಹೇಳಿದರು.

Translate »