ಅರ್ಹ ಫಲಾನುಭವಿಗಳು ನೀಡುವ ಅರ್ಜಿ ಸ್ವೀಕರಿಸಿ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಲಿಂಗೇಶ್ ಸೂಚನೆ
ಹಾಸನ

ಅರ್ಹ ಫಲಾನುಭವಿಗಳು ನೀಡುವ ಅರ್ಜಿ ಸ್ವೀಕರಿಸಿ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಲಿಂಗೇಶ್ ಸೂಚನೆ

June 30, 2019

ಬೇಲೂರು, ಜೂ.29- ಪಟ್ಟಣದ ಬಡ ಕುಟುಂಬಗಳಿಗೆ ನಿವೇಶನ ನೀಡಲು ಪುರ ಸಭೆ ವತಿಯಿಂದ ಅರ್ಜಿ ಆಹ್ವಾನಿಸಿದ್ದು, ಅರ್ಹ ಫಲಾನುಭವಿಗಳು ನೀಡುವ ಅರ್ಜಿಯನ್ನು ಮಾತ್ರ ಸ್ವೀಕರಿಸುವಂತೆ ಶಾಸಕ ಕೆ.ಎಸ್. ಲಿಂಗೇಶ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಕಚೇರಿಗೆ ಆಗಮಿಸಿ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಹಾಗೂ ದಾಖಲಾತಿ ಒದಗಿಸಲು ನೂರಾರು ಮಂದಿ ಸರತಿ ಸಾಲಿ ನಲ್ಲಿ ನಿಂತಿದ್ದನ್ನು ಕಂಡು ಅಧಿಕಾರಿಗಳೊಂ ದಿಗೆ ಮಾತನಾಡಿದ ಅವರು, ಪುರಸಭೆ ಪಟ್ಟಣದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಅರ್ಜಿ ಆಹ್ವಾನಿಸಿದ್ದು, ನಿತ್ಯ ಸಾವಿ ರಾರು ಜನರು ಮೂಲ ದಾಖಲಾತಿ ಒದಗಿ ಸಲು ತಾಲೂಕು ಕಚೆÉೀರಿ ಮತ್ತು ಪುರಸಭೆ ಮುಂದೆ ಜಮಾಯಿಸುವುದರಿಂದ ಸಾರ್ವ ಜನಿಕರು ತೊಂದರೆ ಅನುಭವಿಸುವಂತಾ ಗಿದೆ. ಆದ್ದರಿಂದ ಕೇವಲ ಅರ್ಜಿ ಮಾತ್ರ ಸಲ್ಲಿ ಸಲಿ ನಂತರ ಮೂಲ ದಾಖಲಾತಿ ಪಡೆಯು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿಯೊಬ್ಬ ನಿವೇಶನ ರಹಿತ ಫಲಾನು ಭವಿ ದಾಖಲೆ ಒದಗಿಸಲು ಗೊಂದಲಕ್ಕೆ ಒಳ ಗಾಗಬಾರದು. ದಾಖಲಾತಿ ಸರಿಯಿರುವ ಫಲಾನುಭವಿಗಳಿಗೆ ನಿವೇಶನ ದೊರೆಯ ಲಿದ್ದು ಈ ತಿಂಗಳ 30ರೊಳಗೆ ಪುರಸಭೆಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಮುಖ್ಯಾಧಿಕಾರಿ ಮಂಜುನಾಥ್ ಮಾತ ನಾಡಿ, ಶಾಸಕರ ಸೂಚನೆಯಂತೆ ಪುರಸಭೆ ಯಲ್ಲಿ ಕೇವಲ ಅರ್ಜಿ ಮಾತ್ರ ಪಡೆಯ ಲಿದ್ದು, ಫಲಾನುಭವಿಗಳು ಆತಂಕಕ್ಕೆ ಒಳಗಾಗಬಾರದು ಎಂದರು. ಈ ಸಂದರ್ಭ ದಲ್ಲಿ ತಹಸೀಲ್ದಾರ್ ಮೇಘನಾ ಇದ್ದರು.

Translate »