ಮೈಸೂರು ನಗರಪಾಲಿಕೆ ಆಯುಕ್ತ ಜಗದೀಶ್ ವರ್ಗಾವಣೆ: ಶಿಲ್ಪಾನಾಗ್ ನೂತನ ಆಯುಕ್ತೆ
ಮೈಸೂರು

ಮೈಸೂರು ನಗರಪಾಲಿಕೆ ಆಯುಕ್ತ ಜಗದೀಶ್ ವರ್ಗಾವಣೆ: ಶಿಲ್ಪಾನಾಗ್ ನೂತನ ಆಯುಕ್ತೆ

February 17, 2019

ಮೈಸೂರು: ಚುನಾವಣಾ ಆಯೋಗದ ಸೂಚನಾ ಅನ್ವಯ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಸೇರಿದಂತೆ 10 ಮಂದಿ ಕೆಎಎಸ್ (ಹಿರಿಯ/ ಕಿರಿಯ ಶ್ರೇಣಿ) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಅವರನ್ನು ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಯಾಗಿ ವರ್ಗಾ ಯಿಸಿದ್ದು, ಈ ಸ್ಥಾನಕ್ಕೆ ಶಿಲ್ಪಾನಾಗ್‍ರನ್ನು ನಿಯೋಜಿ ಸಲಾಗಿದೆ. ಮೈಸೂರು ಜಿಲ್ಲೆ ಅಪರ ಜಿಲ್ಲಾ ದಂಡಾಧಿ ಕಾರಿಯಾಗಿ ವರ್ಗಾವಣೆಗೊಂಡಿದ್ದ ಬಿ.ಆರ್. ಪೂರ್ಣಿಮ ಅವರ ಜಾಗಕ್ಕೆ ಶಿವಮೊಗ್ಗ ಎಡಿಸಿ ಜಿ.ಅನು ರಾಧ, ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿದ್ದ ಎಂ.ಜೆ.ರೂಪ ಅವರನ್ನು ಮಂಡ್ಯ ಜಿಲ್ಲೆ ಎಡಿಸಿಯಾಗಿ ವರ್ಗಾಹಿಸಲಾಗಿದೆ.

Translate »