ತಗಡೂರು 31 ಲಕ್ಷ ವೆಚ್ಚದ ಮುಖ್ಯ ರಸ್ತೆಯ ಕಾಮಗಾರಿ ಕಳಪೆ
ಮೈಸೂರು

ತಗಡೂರು 31 ಲಕ್ಷ ವೆಚ್ಚದ ಮುಖ್ಯ ರಸ್ತೆಯ ಕಾಮಗಾರಿ ಕಳಪೆ

December 14, 2018

ಜಿಪಂ ಸದಸ್ಯ, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ
ನಂಜನಗೂಡು:  ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಚಿನ್ನಂಬಳ್ಳಿಯಿಂದ ತಗಡೂರು ಜನತಾ ಪ್ರೌಢಶಾಲೆಗೆ ಸಂಪರ್ಕ ರಸ್ತೆಯ ಕಾಮಗಾರಿ ಅತ್ಯಂತ ಕಳಪೆ ಕಾಮಗಾರಿಯಾಗಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಜಿಪಂ ಸದಸ್ಯ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಒತ್ತಾಯಿಸಿದ್ದಾರೆ.

ಗ್ರಾಮಸ್ಥರ ಮನವಿಗೆ ದಾವಿಸಿದ ಬಿ.ಸದಾನಂದರವರು ಪರಿಶೀಲನೆ ನಡೆಸಿ ಈ ರಸ್ತೆಗೆ 31 ಲಕ್ಷ ವೆಚ್ಚವಾಗಿದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸಿದ ನಂತರ ಗುತ್ತಿಗೆದಾರರರಿಗೆ ಬಿಲ್ ಮಾಡುವಂತೆ ಸೂಚಿಸಿದ್ದಾರೆ.

ಈ ರಸ್ತೆಯ ಉಸ್ತುವಾರಿಯನ್ನು ಜೂನಿಯರ್ ಇಂಜಿನಿಯರ್ ಮಹದೇವ ಎನ್ನುವವರು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಗ್ರಾಮಸ್ಥರು ಈ ರಸ್ತೆಯನ್ನು ಸರಿಪಡಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಪ್ರಜ್ವಲ್ ಶಶಿ, ಮಾದಪ್ಪ, ಮಲ್ಲೇಶ್, ದೊರೆಸ್ವಾಮಿ, ರವಿ, ಮಹದೇವು ಮತ್ತಿತರರು ಹಾಜರಿದ್ದರು.

Translate »