ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಲು ಸಿದ್ದರಾಮಯ್ಯ ಚಿಂತನೆ
ಮೈಸೂರು

ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಲು ಸಿದ್ದರಾಮಯ್ಯ ಚಿಂತನೆ

May 30, 2019

ಬೆಂಗಳೂರು: ಇತ್ತೀಚಿನ ರಾಷ್ಟ್ರ ಮಟ್ಟದ ರಾಜಕೀಯ ವಿದ್ಯಮಾನದಲ್ಲಿ ರಾಜಕಾರಣ ಮಾಡುವುದು ಕಷ್ಟ ಎಂಬ ನಿಲುವಿಗೆ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಲು ಚಿಂತನೆ ನಡೆಸಿದ್ದಾರೆ. ರಾಜ್ಯ ವಿಧಾನಸಭೆಗೆ ನಾಲ್ಕು ವರ್ಷಗಳ ನಂತರ ಚುನಾವಣೆ ಬಂದರೂ ಒಂದೇ, ಮಧ್ಯಂತರ ಚುನಾವಣೆ ಬಂದರೂ ಒಂದೇ, ಚುನಾವಣಾ ರಾಜಕೀಯದಲ್ಲಿ ನನಗೆ ಆಸಕ್ತಿ ಉಳಿದಿಲ್ಲ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ.

ಪ್ರಸಕ್ತ ವಿಧಾನಸಭೆಯ ಅವಧಿ ಮುಗಿದ ಕೂಡಲೇ ಚುನಾ ವಣಾ ರಾಜಕೀಯದಿಂದ ಹಿಂದೆ ಸರಿಯು ತ್ತೇನೆ, ಸೈದ್ಧಾಂತಿಕ ರಾಜಕಾರಣದ ಸಮಯ ಮುಗಿಯಿತು, ಯಾವ ಕಾರಣಕ್ಕೂ ಇನ್ನು ಮುಂದೆ ಚುನಾವಣೆ ಗಳಲ್ಲಿ ಸ್ಪರ್ಧಿಸುವುದಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಂಸದರಾದ ಮಲ್ಲಿ ಕಾರ್ಜುನ ಖರ್ಗೆ, ಧ್ರುವನಾರಾಯಣ, ಕೆ.ಹೆಚ್.ಮುನಿಯಪ್ಪ ಇದುವರೆಗೆ ಪಟ್ಟ ಶ್ರಮವೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಅಲೆಯಲ್ಲಿ ಕೊಚ್ಚಿ ಹೋಯಿತು. ಮೋದಿ ಪರ ಅಲೆ ತಡೆಯಲು ನಮ್ಮಲ್ಲಿ ಯಾವ ಗುರಾಣಿಯೂ ಇಲ್ಲ, ಸಾಮಾಜಿಕ ನ್ಯಾಯದ ಕತೆ ಹೇಳಿಕೊಂಡು ಯಶಸ್ವಿ ರಾಜಕಾರಣ ಮಾಡಲಾಗದು ಎಂದಿದ್ದಾರೆ.

Translate »