ಮೈಸೂರಿನ ಶ್ರೀ ಕೃಷ್ಣಧಾಮ ರಜತ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ವರ್ಣನೆ
ಮೈಸೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳನ್ನು ನಾವು ನಡೆದಾಡುವ ದೇವರು ಎನ್ನುತ್ತಿದ್ದೆವು. ಈಗ ಸಮಾಜದ ಒಳಿತಿಗೆ ಶ್ರಮಿಸುತ್ತಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಓಡಾಡುವ ದೇವ ರಂತೆ ಆಶೀರ್ವದಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಶನಿವಾರ ನಡೆದ ಕೃಷ್ಣಧಾಮ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಹಿಂದೆಯಷ್ಟೇ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಎರ ಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಹಾಗೂ ಆದಿಚುಂಚನಗಿರಿ ಮಠದ ಶ್ರಿ ನಿರ್ಮ ಲಾನಂದನಾಥ ಸ್ವಾಮೀಜಿ ಉಪಸ್ಥಿತರಿ ದ್ದರು. ಮೋದಿ ಅವರಿಗೆ ಉತ್ತಮ ಕೆಲಸ ಮಾಡಿ, ನಿಮಗೆ ನಮ್ಮ ಆಶೀರ್ವಾದವಿದೆ ಎಂದು ಹೇಳುವಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬದುಕು ಶಾಶ್ವತವಲ್ಲ. ಭಕ್ತಿ, ನೆಮ್ಮದಿಯಿಂದ ಸಾರ್ಥಕ ಜೀವನ ಸಾಗಿಸುವಂತೆ ಸಂದೇಶ ಸಾರುವ ನಿಟ್ಟಿ ನಲ್ಲಿ ಪೇಜಾವರ ಶ್ರೀಗಳು 25 ವರ್ಷಗಳ ಹಿಂದೆ ಕೃಷ್ಣಧಾಮ ಸ್ಥಾಪಿಸಿದ್ದಾರೆ. ಸಂಸ್ಥೆ ಯಲ್ಲಿ ಶ್ರೀ ಕೃಷ್ಣ ಹಾಗೂ ಗುರುರಾಘವೇಂದ್ರರ ಸಂದೇಶ ಸಾರುವ ಮೂಲಕ ಭಕ್ತರನ್ನು ಸನ್ಮಾರ್ಗದತ್ತ ಕೊಂಡೊ ಯ್ಯುತ್ತಿದ್ದಾರೆ ಎಂದು ಬಣ್ಣಿಸಿದರು.
ಅಧಿಕಾರ ಶಾಶ್ವತವಲ್ಲ. ಇಂದು ಇರು ತ್ತದೆ, ನಾಳೆ ಹೋಗುತ್ತೆ. ಸಿಕ್ಕಿರುವ ಅವಕಾಶ ಸುದುಪಯೋಗಪಡಿಸಿಕೊಂಡು ಒಳ್ಳೆ ಕೆಲಸ ಮಾಡಬೇಕು. ಅದಷ್ಟೇ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ನೆಲೆಸುತ್ತವೆ. ಕೃಷ್ಣಧಾಮ ಸಂಸ್ಥೆಯ ಪಿಯು ಕಾಲೇಜಿಗೆ ಅನುಮತಿ ಸಿಕ್ಕಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ. ಅನು ಮತಿ ದೊರಕಿಸಿಕೊಡುವುದಕ್ಕೆ ಕ್ರ್ರಮ ಕೈಗೊಳ್ಳು ತ್ತೇನೆ ಎಂದು ಭರವಸೆ ನೀಡಿದರು.
ಬೆಂಗಳೂರು ಸೇರಿದಂತೆ ಯಾವುದೇ ನಗರದಲ್ಲಿರದ ಕುಡಿಯುವ ನೀರಿನ ಸಮಸ್ಯೆ ಮೈಸೂರಿನಲ್ಲಿ ತಲೆದೋರಿದೆ. ಕೆಲ ವರ್ಷಗಳಿಂದ ಸರಿಯಾಗಿ ಮಳೆ ಯಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಕಾವೇರಿ ನದಿ ಸಮೀಪದಲ್ಲಿದೆ. ಮೈಸೂರಿಗೆ ನೀರಿನ ಸಮಸ್ಯೆಯಿಲ್ಲ ಎಂಬ ಭಾವನೆ ಹಲವ ರಲ್ಲಿದೆ. ಆದರೆ ನೀರಿನ ಅಭಾವವಿದೆ. ಇದನ್ನು ಮನಗಂಡು ಉಂಡುವಾಡಿ ಯೋಜನೆ ಅನುಷ್ಠಾನಕ್ಕೆ ಹೋರಾಡುತ್ತಿ ದ್ದೇನೆ. ಯೋಜನೆ ಜಾರಿಗೆ ಬಂದರೆ ಮುಂದಿನ 50 ವರ್ಷಗಳವರೆಗೂ ಕುಡಿ ಯುವ ನೀರಿನ ಸಮಸ್ಯೆ ಇರದು ಎಂದು ಹೇಳಿದ ಸಚಿವರು, ಪೇಜಾವರ ಶ್ರೀಗಳು ಮೈಸೂರಿಗೆ ಕಾಲಿಡುತ್ತಿದ್ದಂತೆ ಉತ್ತಮ ಮಳೆ ಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀ ರ್ವಚನ ನೀಡಿ, ಭಕ್ತಿ ಹಾಗೂ ಜ್ಞಾನ ಕೇಂದ್ರವಾಗಿ ಕೃಷ್ಣಧಾಮ ಬೆಳೆಯುತ್ತಿದೆ. ಯಾರು ಭಕ್ತಿಯಿಂದ ಕೃಷ್ಣನನ್ನು ಆರಾಧಿ ಸುತ್ತಾರೋ, ಅವರ ಸಂಕಷ್ಟವನ್ನೆಲ್ಲಾ ಕೃಷ್ಣ ಪರಮಾತ್ಮ ದೂರ ಮಾಡುತ್ತಾನೆ. ಬೀಸುವ ಕಲ್ಲಿಗೆ ಸಿಲುಕುವ ಎಲ್ಲಾ ಧಾನ್ಯಗಳು ಪುಡಿ ಪುಡಿಯಾಗುತ್ತವೆ. ಆದರೆ ಬೀಸುವ ಕಲ್ಲಿನ ಮೇಲಿರುವ ಗೂಟಕ್ಕೆ ಅಂಟಿಕೊಳ್ಳುವ ಧಾನ್ಯಗಳು ಎಷ್ಟೇ ಸುತ್ತಿದರೂ ಏನೂ ಆಗದೆ ಸುರಕ್ಷಿತವಾಗಿರುತ್ತವೆ. ಸಂಸಾರವೂ ಬೀಸುವ ಕಲ್ಲಿದ್ದಂತೆ. ಭಕ್ತಿಯಿಂದ ಆರಾ ಧಿಸಿ ದೇವರನ್ನು ಅಂಟಿಕೊಂಡರೆ ಸಂಸಾರ ದಲ್ಲಿ ಏನೇ ಜಂಜಾಟ ಬಂದರೂ ಪಾರಾಗ ಬಹುದು ಎಂದು ಮಾರ್ಗದರ್ಶನ ನೀಡಿದರು.
ಬರೀ ಪೂಜೆ ಮಾಡಿದರೆ ಸಾಲದು. ಮಾಡುವ ಕೆಲಸವನ್ನೂ ಭಕ್ತಿ, ಶ್ರದ್ಧೆಯಿಂದ ನಿರ್ವಹಿಸಬೇಕು. ಆಗ ಮಾತ್ರ ದೇವರನ್ನು ಪೂಜೆ ಮಾಡಿದಂತಾಗುತ್ತದೆ. ಲೋಕ ಕಲ್ಯಾಣಕ್ಕೆ ಕೆಲಸ ಮಾಡುವ ಮನೋ ಭಾವ ಬೇಕು. ಆದರೆ ಇತ್ತೀಚಿನ ದಿನ ಗಳಲ್ಲಿ ಕರ್ತವ್ಯ ಬೇಡ, ಭೋಗ ಮಾತ್ರ ಬೇಕು ಎನ್ನುವ ಮನೋಭಾವದವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಶೇ.75ರಷ್ಟು ಭ್ರಷ್ಟಾಚಾರಿಗಳೇ ಇದ್ದಾರೆ. ಶ್ರೀ ಕೃಷ್ಣನ ಸಂದೇಶ ಪಾಲಿಸಿದರೆ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡಬಹುದು. ಇದರಿಂದಾಗಿ ಕೃಷ್ಣನ ಸಂದೇಶ ದೇಶದಾ ದ್ಯಂತ ಪಸರಿಸಬೇಕು ಎಂದು ಬೋಧಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ಮಿತೃತ್ವಕ್ಕೆ ಬಹುದೊಡ್ಡ ಉದಾಹರಣೆಯಾಗಿರುವ ಕೃಷ್ಣ ಪರಮಾತ್ಮರ ಸಂದೇಶ ಪಾಲಿಸು ವುದು ಅಗತ್ಯ. ಪೇಜಾವರ ಶ್ರೀಗಳು ಸಂದೇಶ ರವಾನಿಸಿದ್ದಾರೆ. ಕಳೆದ ವರ್ಷ ಮೈಸೂರಿನಲ್ಲಿ ಚಾತುರ್ಮಾಸ ಕೈಗೊಂ ಡಿದ್ದ ಶ್ರೀಗಳು ಪೌರಕಾರ್ಮಿಕರ ಕಾಲೋ ನಿಗೆ ತೆರಳಿದ್ದರು. ಮಹಿಳೆಯೊಬ್ಬರ ಕೋರಿಕೆ ಮೇರೆಗೆ ಅವರ ಮನೆಯ ದೇವರ ಕೋಣೆಗೆ ಹೋಗಿ ಪೂಜೆ ಸಲ್ಲಿಸಿ, ಅಲ್ಲಿದ್ದ ವರಿಗೆ ಮಂಗಳಾರತಿ ನೀಡಿದ್ದರು. ಈ ಬಾರಿಯೂ ಮೈಸೂರಿನಲ್ಲೇ ಚಾತು ರ್ಮಾಸ ಕೈಗೊಳ್ಳಲು ಇಚ್ಛಿಸಿರುವುದು ನಮ್ಮೆಲ್ಲರ ಭಾಗ್ಯ ಎಂದರು.
ಪೇಜಾವರ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಶ್ರೀ ಕೃಷ್ಣ ಟ್ರಸ್ಟ್ ಪದಾಧಿಕಾರಿಗಳಾದ ಪಿ.ಜಯರಾಮ್ ಭಟ್, ಎಂ.ಕೆ.ಪುರಾಣಿಕ್, ರವಿಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.